AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope 16 June: ಈ ರಾಶಿಯವರು ಪಡೆದುದನ್ನು ಪರೀಕ್ಷಿಸಲು ಮುಂದಾಗುವರು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸ ಕೃಷ್ಣ ಪಕ್ಷದ ಷಷ್ಠೀ ತಿಥಿ ಸೋಮವಾರ ವ್ಯವಸ್ಥೆಯಿಂದ ಬೇಸರ, ಸ್ಪರ್ಧೆಯಲ್ಲಿ ವಿಜಯ, ದೂರಪ್ರಯಾಣ, ಕುಟುಂಬದ ಜೊತೆ ಮಿಲನ ಇವೆಲ್ಲ ಈ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

Horoscope 16 June: ಈ ರಾಶಿಯವರು ಪಡೆದುದನ್ನು ಪರೀಕ್ಷಿಸಲು ಮುಂದಾಗುವರು
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jun 16, 2025 | 6:30 AM

Share

ಬೆಂಗಳೂರು, ಜೂನ್​ 16, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಮೃಗಶಿರಾ, ಮಾಸ : ಜ್ಯೇಷ್ಠ, ಪಕ್ಷ : ಕೃಷ್ಣ, ವಾರ : ಸೋಮ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಸಾಧ್ಯ, ಕರಣ : ಕೌಲವ, ಸೂರ್ಯೋದಯ – 06 – 05 am, ಸೂರ್ಯಾಸ್ತ – 07 – 00 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:42 – 09:19, ಯಮಘಂಡ ಕಾಲ 10:56 – 12:33, ಗುಳಿಕ ಕಾಲ 14:11 – 15:48

ಮೇಷ ರಾಶಿ: ನಿಮ್ಮ ಸಣ್ಣ ಕರೆ ಬಹುದೊಡ್ಡ ಪ್ರಯೋಜನವನ್ನು ಮಾಡಲಿದೆ. ಇಂದು ಸಿಗುವ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ. ಅದನ್ನು ಮತ್ತೇನೋ ಮಾಡಲು ಹೋಗಿ ವಿಶ್ವಾಸವನ್ನು ಕಳೆದುಕೊಳ್ಳಬೇಕಾಗುವುದು. ಕಛೇರಿಯ ಇಂದಿನ ವ್ಯವಹಾರವನ್ನು ಮುಕ್ತಾಯ ಮಾಡಿಯೇ ಹೊರಗೆ ಬರುವಿರಿ. ನಿಮ್ಮ ಉನ್ನತಸ್ಥಾನಕ್ಕೆ ಕಾರಣರಾದ ಎಲ್ಲರನ್ನೂ ಇಂದು ಸ್ಮರಿಸಿಕೊಳ್ಳುವಿರಿ. ಸಂತಾನದ ವಾರ್ತೆ ನಿಮಗೆ ಒಂದಿನ ಶುಭವಾರ್ತೆಯಾಗಲಿದೆ. ನಿರುದ್ಯೋಗದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ. ಉದ್ಯೋಗದ ವಿಷಯದಲ್ಲಿ ಇಲ್ಲಿಯವರೆಗೆ ಎದುರಿಸಿದ ಕೆಲವು ಸಮಸ್ಯೆಗಳಿಂದ ಮುಕ್ತಿ ಸಿಗುವ ಸಮಯ. ಕೆಲಸದಲ್ಲಿ ಬರುವ ಯಾವುದೇ ಸಮಸ್ಯೆಯನ್ನು ಸರಿಯಾದ ಕ್ರಮದಿಂದ ಬಗೆಹರಿಸಿಕೊಳ್ಳುವಿರಿ. ಇಂದು ತಕ್ಕಮಟ್ಟಿನ ನೆಮ್ಮದಿ ಇರುತ್ತದೆ. ಆರೋಗ್ಯ ಮತ್ತು ಆದಾಯದ ವಿಚಾರದಲ್ಲಿ ಕೊರತೆಯಾಗದು. ಸಣ್ಣ ಮಟ್ಟಿನ ಗೌರವಕ್ಕೆ ಪಾತ್ರರಾಗುವಿರಿ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಾಗುವುದು.

ವೃಷಭ ರಾಶಿ: ಬಲವಂತವಾಗಿ ಸೆಳೆಯುವ ಪ್ರಯತ್ನ ಮಾಡಿದರೆ, ಮುರಿದುಹೋಗಬಹುದು. ಇಂದು ಸ್ಪರ್ಧಾತ್ಮಕ ವಿಷಯಗಳಲ್ಲಿ ಸೋಲಾಗುವುದು. ಶತ್ರುಗಳು ನಿಮ್ಮ ಹಿಂದೇ ಇದ್ದು ನಿಮ್ಮನ್ನು ಎಲ್ಲ ಕೆಲಸಗಳಿಗೆ ಪ್ರೋತ್ಸಾಹಿಸಿ ಕೈ ಬಿಡವರು.‌ ಗೊತ್ತಿಲ್ಲದ ಕೆಲಸವನ್ನು ಮಾಡಲು ಸ್ವಲ್ಪ ಒತ್ತಡ ಇರುತ್ತದೆ. ಉದ್ಯೋಗದಲ್ಲಿ ನಿಮ್ಮ ಮೇಲೆ ಒತ್ತಡವನ್ನು ತರುವ ವ್ಯವಸ್ಥೆಯು ತಯಾರಾಗಿದೆ. ನಿಮ್ಮ ಅಜಾಗರೂಕತೆಯಿಂದ ಅಪಘಾತ ನಡೆಯುವುದು. ಆದಾಯ ಮತ್ತು ಆರೋಗ್ಯದಲ್ಲಿ ಚಿಂತೆ ಇರುವುದಿಲ್ಲ. ಆದರೆ ವೆಚ್ಚಗಳು ಹಂತವಾಗಿ ಹೆಚ್ಚಾಗುತ್ತವೆ. ಬಾಕಿ ಉಳಿದಿರುವ ಬಹುತೇಕ ಕಾಮಗಾರಿಗಳು ಪೂರ್ಣಮಾಡಿಕೊಳ್ಳಿ. ಸಣ್ಣ ವ್ಯಾಪಾರಿಗಳಿಗೆ ಲಾಭ ಸಿಗುತ್ತದೆ. ಏನೋ ಮಾತನಾಡಿ ಸಿಕ್ಕಿಬೀಳುವಿರಿ. ಸತ್ಯವಿದ್ದಾಗ ಮಾತ್ರ ಯಾರ ಜೊತೆಯಾದರೂ ಚರ್ಚಿಸಿ. ಸಹೋದರರ ನಡುವೆ ಕಲಹಗಳು ಆಗುವ ಸಾಧ್ಯತೆ ಇದೆ, ಎಚ್ಚರ. ಹೊಸದನ್ನು ಕಲಿಯಲು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಏನನ್ನಾದರೂ ಮಾಡುವುದು ಉತ್ತಮ. ಉದ್ಯಮವು ಸಕ್ರಿಯವಾಗಿದ್ದು ಇದನ್ನು ವಿಸ್ತರಿಸುವಿರಿ.

ಮಿಥುನ ರಾಶಿ: ನಿಮ್ಮ ನಿಖರತೆ ವ್ಯತ್ಯಾಸವಾಗಲಿದೆ. ಇಂದು ಹಣಕಾಸಿನ ಉದ್ಯೋಗಿಗಳಿಗೆ ಒತ್ತಡದ ದಿನವಗಲಿದೆ. ಕಾಲಕ್ಕೆ ಕಾಯಬೇಕಾಗಿರುವುದರಿಂದ ನಿಮ್ಮ ಪ್ರಯತ್ನಗಳು ಸದಾ ನಡೆಯಲಿ. ದೈವಾನುಕೂಲ ಬಂದಾಗ ಅದಕ್ಕೆ ಹೊಳಪು ಬರಲಿದೆ. ಸ್ನೇಹಿತರ ಜೊತೆ ಸಂಭ್ರಮಿಸುವಿರಿ. ಸಂಗಾತಿಯೊಡನೆ ಸಮಾರಂಭಕ್ಕೆ ಹೋಗಲಿದ್ದೀರಿ. ನಿಮ್ಮ ಮಾತುಗಳು ಸಭೆಯನ್ನು ಮೂಕವಿಸ್ಮಿತಗೊಳಿಸಲಿದೆ. ಆರ್ಥಿಕಲಾಭ, ಸಾಲದಿಂದ ಮುಕ್ತರಾಗಿ ನಿಮಗೆ ನೆಮ್ಮಸಿಯು ಸಿಗಲಿದೆ. ಅಪೂರ್ಣತೆಯನ್ನು ರೂಢಿಸಿಕೊಳ್ಳುವಿರಿ. ಆದಾಯ ಬರುವ ಕೆಲವು ಬಾಕಿ ಕೆಲಸಗಳನ್ನು ಪೂರ್ಣಮಾಡಿಕೊಳ್ಳುವಿರಿ. ಇಂದು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ಮಾಡಲೇಬೇಕು. ಕಛೇರಿಯಲ್ಲಿ ನಿಮ್ಮ ಮೇಲೆ ಒತ್ತಡ ಹೆಚ್ಚಾಗುವುದು.‌ ಯಾವುದೇ ಕಾರ್ಯವಾದರೂ ನಿರಂತರತೆ ಇರಲಿ. ತಿಳಿವಳಿಕೆ ಇಲ್ಲದೇ ಕಾರ್ಯವನ್ನು ಮಾಡಿ ಕೈ ಸುಟ್ಟುಕೊಳ್ಳಬೇಡಿ. ದೂರದ ಪ್ರಯಾಣಕ್ಕೆ ನೀವು ಮೊದಲು ಮಾನಸಿಕ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ಇಂದಿನ ದಿನವನ್ನು ಆನಂದಿಸಲು, ಜವಾಬ್ದಾರಿಯ ಕೆಲಸಗಳನ್ನು ಪೂರೈಸುವತ್ತ ಗಮನವಿರಲಿ.

ಕರ್ಕಾಟಕ ರಾಶಿ: ಸ್ವಭಾವ ಸಿದ್ಧವಾದುದನ್ನು ಸ್ವೀಕರಿಸುವುವಿರಿ. ನಿಮ್ಮ ಮೇಲೆ ಬಿದ್ದ ಕಲ್ಲನ್ನು ತಪ್ಪಿಸಿಕೊಳ್ಳುವ ಸಮಯದಲ್ಲಿ ಮತ್ತೊಂದು ಬಂದು ಬೀಳಬಹುದು. ಅತಿಯಾದ ಬುದ್ಧಿಯನ್ನು ಬಳಸಲು ಹೋಗಿ ಹಳ್ಳಕ್ಕೆ ಬೀಳುವ ಅವಕಾಶವನ್ನು ಇಟ್ಟುಕೊಳ್ಳುವುದು ಬೇಡ. ಕೆಲಸವನ್ನು ಚೆನ್ನಾಗಿ ಅನುಭವಿಸುವಿರಿ. ಮಾಡಲು ಏನೂ ಕೆಲಸವಿಲ್ಲವೆಂದು ಹೇಳಿ ನಿಮ್ಮವರ ಬಾಯಿಗೆ ಸಿಗಬೇಡಿ. ನಿಮ್ಮ‌ಇಂದಿನ ಸಹಾನುಭೂತಿ ಮತ್ತು ತಿಳುವಳಿಕೆಗೆ ಪ್ರತಿಫಲ ದೊರಕುವುದು. ನಿಮ್ಮನ್ನೇ ನೀವು ಪ್ರಶಂಸಿಸುವುದು ಕೇಳುಗರಿಗೆ ಸರಿ ಎನಿಸದು. ಆದಾಯವು ಸ್ಥಿರವಾಗಿದ್ದರೂ ಖರ್ಚುಗಳು ತುಂಬಾ ಅಧಿಕವಾಗಲಿದೆ. ವ್ಯಾಪಾರದಲ್ಲಿ ಲಾಭವಾಗಲು ಹೆಚ್ಚು ಪ್ರಯತ್ನವನ್ನು ಮಾಡಲೇಬೇಕಾಗಿದೆ. ಆತುರದ ತೀರ್ಮಾನ ಒತ್ತಡ ಉಂಟುಮಾಡಬಹುದಾದ್ದರಿಂದ ಎಚ್ಚರಿಕೆಯಿಂದ ತೀರ್ಮಾನ ಮಾಡಿ. ವಿಭಿನ್ನ ರೀತಿಯಲ್ಲಿ ಪ್ರೇಮವನ್ನು ಅನುಭವಿಸುವಿರಿ‌. ಆರ್ಥಿಕವಾದ ಬಲಿಷ್ಠತೆ ಬೇಕಾಗುವುದು. ವಾಸದ ಸ್ಥಳವನ್ನು ನೀವು ಬದಲಿಸಬೇಕಾಗಬಹುದು.

ಸಿಂಹ ರಾಶಿ: ಸಂಗಾತಿಯಿಂದ ದೂರಾಗುವ ಸಂದರ್ಭ ಬರಲಿದೆ. ಭೂಮಿಯನ್ನು ಮಾರಾಟ ಮಾಡಲು ಕಸರತ್ತು ಮಾಡಬೇಕಾಗುವುದು. ಉತ್ಸಾಹದ ದಿನವನ್ನಾಗಿ ನೀವು ಮಾಡಿಕೊಳ್ಳುವಿರಿ. ಮಕ್ಕಳು ಎಲ್ಲಿಗೆ ಹೋಗುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಗಮನವಿರಲಿ. ವ್ಯವಹಾರವು ನಿಮ್ಮಿಂದ ಸುಳ್ಳಾಡಿಸುವುದು. ಅನಿರೀಕ್ಷಿತ ಹಣದ ವ್ಯಯದಿಂದ ಚಂಚಲರಾಗುವಿರಿ. ನೀವು ಮನೆಯ ಯಜಮಾನನಾಗಿದ್ದು ತಾಳ್ಮೆಯನ್ನು ಇಟ್ಟುಕೊಳ್ಳಿ. ಮಾರ್ಗ ನಿಮ್ಮ ಗುರಿಯನ್ನೇ ಬದಲಿಸುವುದು. ನೀವು ಹಣಕಾಸಿನ ವ್ಯವಹಾರಗಳಲ್ಲಿ ಎಷ್ಟೇ ಜಾಗರೂಕರಾಗಿದ್ಸರೂ ಪ್ರಯೋಜನವಾಗದು. ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಏನೇ ಇರಲಿ, ಅವರ ಪ್ರಭಾವದ ಕ್ಷೇತ್ರವು ಹೆಚ್ಚುತ್ತಿರುವಂತೆ ತೋರುತ್ತಿದೆ ಮತ್ತು ಅವರ ಕಾರ್ಯಗಳನ್ನು ಸಹ ವಿವರಿಸಲಾಗುವುದು. ವಿದೇಶದ ಸಂಸ್ಥೆಗಳಿಂದ ಕರೆ ಬರುವ ಸಾಧ್ಯತೆ ಇದೆ. ನಿಮ್ಮ ತಂದೆಯ ಮಾರ್ಗದರ್ಶನದಲ್ಲಿ ಕುಟುಂಬ ವ್ಯವಹಾರವು ಮತ್ತೆ ಬೆಳೆಯುತ್ತದೆ. ಇಂದು ನೀವು ಒತ್ತಡದ ಕೆಲಸದಿಂದ ವಿರಾಮ ಪಡೆದುಕೊಳ್ಳಲು ಬಯಸುವಿರಿ.

ಕನ್ಯಾ ರಾಶಿ: ಬೆಳೆಯುವ ಆಸೆ ಇದ್ದವರು ನೆಪಗಳನ್ನು ಹೇಳುತ್ತಾ ಸುಮ್ಮನಿರಲಾರರು. ಇಂದು ನಿಮ್ಮ ಬಂಧುಗಳ ಅನಿರೀಕ್ಷಿತ ಭೇಟಿ ನಿಮ್ಮ ಯೋಜನೆಯನ್ನು ತಲೆಕೆಳಗೆ ಮಾಡಲಿದೆ. ನಿಮ್ಮ ಆಸೆಯನ್ನು ಮಕ್ಕಳು ಪೂರೈಸುವರು. ಬಂಡಾವಾಳ ಹೂಡಿಕೆ ಮಾಡಲು ಭಯವಾಗುವುದು. ಯಾರದ್ದೋ ವಿಷಯಕ್ಕೆ ನೀವು ಮೂಗು ತೂರಿಸಿ ಅಪಮಾನ‌ ಮಾಡಿಸಿಕೊಳ್ಳುವಿರಿ. ಇಂದು ನೀವು ಕಷ್ಟಪಟ್ಟರೂ ಸಿಗದೇ ಇರುವ ಸಂಪತ್ತಿಗೋಸ್ಕರ ವ್ಯಥೆಪಡುವ ಅವಶ್ಯಕತೆಯಿಲ್ಲ. ನೀವು ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡು ಅವುಗಳನ್ನು ಕಾರ್ಯರೂಪಕ್ಕೆ ತರದೇಹೋದರೆ ಕಷ್ಟವಾದೀತು. ದೇವರ ಕಾರ್ಯಗಳು ನಡೆಯಲಿದ್ದು ಉತ್ಸಾಹದಿಂದ ಭಾಗವಹಿಸುವಿರಿ. ನಿಮ್ಮ ಸ್ನೇಹಿತರಿಗೆ ಕೊಡಲು ಸಮಯವಿಲ್ಲ. ಇಂದು ಸಹ ನಿಮ್ಮ ಮನಃಸ್ಥಿತಿಯು ಹಾಗೆಯೇ ಉಳಿದಿರಬಹುದು. ಅದನ್ನು ಬದಲಿಸಿಕೊಂಡು ಮುಂದುವರಿಯಿರಿ. ಹೂಡಿಕೆಯಲ್ಲಿ ಅಜ್ಞಾನದ ಕಾರಣದಿಂದ ನಷ್ಟವಾಗುವುದು. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ಸಂಗಾತಿಯು ನಿಮಗೆ ಬೇಸರವಾಗುವಂತೆ ಮಾತನಾಡಬಹುದು.

ತುಲಾ ರಾಶಿ: ಹೊಸ ಅವಕಾಶದ ಆಮಿಷ ತೋರಿಸಿ ಬಂದಿರುವುದನ್ನು ತಪ್ಪಿಸುವರು. ಇಂದು ನಿಮ್ಮ ಬಳಿ ಯಾರದರೂ ವಿವಾಹದ ಬಗ್ಗೆಯೂ ಮಾತನಾಡಬಹುದು. ಸ್ತ್ರೀಯರು ಇಂದು ತಾಳ್ಮೆಯನ್ನು ಕಳೆದುಕೊಂಡು ದುಃಖಿಸಬೇಕಾದ ಸ್ಥಿತಿ ಬಂದೀತು. ಎಲ್ಲದಕ್ಕೂ ಮಿತಿಯಿದೆ ಎಂದು ನಿಮಗೆ ನೀವೇ ಅಂದುಕೊಂಡು ಸಮಾಧಾನವನ್ನು ಪಡೆಯುವಿರಿ. ಅಪಘಾತದಿಂದ ಕಾಲಿಗೆ ಹೆಚ್ಚು ಗಾಯವಾಗಲಿದೆ. ಪ್ರತಿಯೊಂದು ಕೆಲಸವೂ ನಿಧಾನವಾಗುವುದಿದ್ದರೂ ಪರಿಶ್ರಮದಿಂದ ಕೆಲವು ಕೆಲಸಗಳು ಪೂರ್ಣಗೊಳ್ಳುತ್ತದೆ. ಗುಂಪಿನಲ್ಲಿದ್ದಾಗ ನೀವೇನು ಹೇಳುತ್ತೀರೆಂದು ಎಚ್ಚರ ವಹಿಸಿ. ನಿಮ್ಮ ಟೀಕೆಗಳಿಗೆ ನೀವು ತೀವ್ರವಾಗಿ ಎದುರುತ್ತರ ಕೊಡುವಿರಿ. ಎಲ್ಲ ಸಂದರ್ಭವೂ ಒಂದೇ ರೀತಿಯಲ್ಲಿ ಇರದು. ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಮರಳಿ ಪಡೆಯುವ ಒಂದು ಆನಂದಮಯ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಸಂತೋಷಕೂಟದಲ್ಲಿ ಭಾಗಿಯಾಗುವಿರಿ. ಮಕ್ಕಳ ವಿಚಾರದಲ್ಲಿ ನೀವು ಬಹಳ ಮೃದು ಸ್ವಭಾವವಿರುವುದು. ನಿಮ್ಮ ಮನಃಸ್ಥಿತಿಯನ್ನು ಯಾರಾದರೂ ದುರುಪಯೋಗ ಮಾಡಿಕೊಳ್ಳಬಹುದು.

ವೃಶ್ಚಿಕ ರಾಶಿ: ಹೇಳಿಕೊಂಡಷ್ಟು ಸುಲಭವಾಗಿ ಮಾಡಲಾಗದು. ನೀವು ಇಂದು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಬೇಕಾಗುವುದು. ಸಂಗಾತಿಯ ಜೊತೆ ಇಂದು ಹಣದ ವಿಚಾರದಲ್ಲಿ ವೈಮನಸ್ಯ ಉಂಟಾಗಲಿದೆ. ವಾಗ್ವಾದದಲ್ಲಿ ಸೋಲು ನಿಶ್ಚಿತ. ನಿಮ್ಮ ಪ್ರಭಾವವು ಅಷ್ಟಾಗಿ‌ ನಡೆಯದು. ಉದ್ಯೋಗಗಳನ್ನು ಬದಲಾಯಿಸುವ ಬಗ್ಗೆ ಯೋಚಿಸಬೇಡಿ. ಇಂದು ಅಸಾಧ್ಯವಾಗಬಹುದು. ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಎಲ್ಲಿಗಾದರೂ ಅಪರಿಚಿತ ಸ್ಥಳಗಳಿಗೆ ಹೋಗುವಿರಿ. ಬಂಧುಗಳ ಜೊತೆ ಭಿನ್ನಾಭಿಪ್ರಾಯಗಳು ಉದ್ಭವಿಸುವ ಸಾಧ್ಯತೆ ಇದೆ. ಇಂದು ಸಹ ನಿಮ್ಮ ಮನಃಸ್ಥಿತಿ ಹಾಗೆಯೇ ಉಳಿದಿರಬಹುದು. ನಿಮ್ಮ ಸುತ್ತಲಿರುವ ಜನರು ಏನಾದರೂ ಮಾಡಿ ನಿಮ್ಮ ಜೀವನವು ಸಂಗಾತಿ ಮತ್ತೆ ನಿಮ್ಮ ಜೊತೆ ಪ್ರೇಮದಲ್ಲಿ ಬೀಳುವಂತೆ ಮಾಡಬಹುದು. ಇಂದು ನಿಮ್ಮ ಬಾಳಸಂಗಾತಿಯಾಗುವವನು ನಿಮ್ಮ ಬಗ್ಗೆ ಅತಿಯಾದ ಕಾಳಜಿ ಉಳ್ಳವನು. ನಿಮ್ಮ ವಿಷಯಕ್ಕೆ ಸ್ನೇಹಿತರು ನಗುವರು‌. ನೀವು ಉದ್ಯೋಗವನ್ನು ಪಡೆಯಲು ಮಾಡಿದ ಪ್ರಯತ್ನಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ.

ಧನು ರಾಶಿ: ಸುಖ ದುಃಖಗಳನ್ನು ಸಮವಾಗಿ ತೆಗೆದುಕೊಳ್ಳುವುದು ಅವಶ್ಯಕ. ಇಂದು ಸಮಾರಂಭಗಳಿಗೆ ಅತಿಥಿಯಾಗುವ ಅವಕಾಶ ಸಿಗುವುದು. ಮನೆಯಲ್ಲಿ ನಡೆಯುವ ಮಂಗಲಕಾರ್ಯಗಳಿಗೆ ಧನಸಹಾಯ ಮಾಡುವಿರಿ. ನಿಮ್ಮ ವಸ್ತುವನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಮೆತ್ತನೆಯ ಹಾಸಿಗೆಯೂ ನಿಮಗೆ ಚುಚ್ಚಿದ ಅನುಭವವಾಗಲಿದೆ. ಸ್ವಂತ ನಿರ್ಧಾರ ಮತ್ತು ಆಲೋಚನೆಗಳಿಗಿಂತ ಕುಟುಂಬದ ಸದಸ್ಯರ ಸಲಹೆಯನ್ನು ತೆಗೆದುಕೊಂಡರೆ ಒಳ್ಳೆಯದು. ಆದಾಯ ಸ್ಥಿರವಾಗಿದ್ದರೂ ಖರ್ಚು ಹೆಚ್ಚಾಗುತ್ತದೆ. ಏನನ್ನಾದರೂ ದಾನ ಮಾಡುವ ಮನಸ್ಸಾಗುವುದು. ನಿಮ್ಮ ಚೈತನ್ಯವನ್ನು ಹೆಚ್ಚಿಸಲು ನಿಮ್ಮ ಮನಸ್ಸಿನಲ್ಲಿ ಒಂದು ಪ್ರಕಾಶಮಾನವಾದ ಸುಂದರವಾದ ಮತ್ತು ಅದ್ಭುತವಾದ ಚಿತ್ರವನ್ನು ಕಲ್ಪಿಸಿಕೊಳ್ಳಿ. ನಿಮ್ಮ ಕಚೇರಿಯ ಸಹೋದ್ಯೋಗಿ ನಿಮ್ಮ ಅಮೂಲ್ಯವಾದ ವಸ್ತುವು ಕಳ್ಳತನವಾಗುವ ಸಾಧ್ಯತೆ ಇದೆ. ವ್ಯಾಪಾರಿಗಳು ಹೆಚ್ಚಿನ ಲಾಭವನ್ನು ಕಾಣಬಹುದು. ನಿಮ್ಮ ಹಾರಿಕೆಯ ಮಾತುಗಳು ನಿಮ್ಮ ಬಗ್ಗೆ ನಂಬಿಕೆಯು ಇರದಂತೆ ಮಾಡುವುದು. ವ್ಯಾಪಾರದ ಉದ್ದೇಶಕ್ಕೆ ಹೊರ ನಿಮ್ಮ ವಿದೇಶ ಪ್ರವಾಸವು ಶುಭವನ್ನು ತರಲಿದೆ.

ಮಕರ ರಾಶಿ: ನಿಮ್ಮ ವಿರುದ್ಧದ ಪಿತೂರಿಗಳಿಗೆ ಪ್ರತಿ ತಂತ್ರ ಮಾಡುವಿರಿ. ಸುಮ್ಮನೆ ಹಾರಿಕೆಯ ಉತ್ತರ ಕೊಟ್ಟ ಆರೋಗ್ಯವನ್ನು ಕೆಡಿಸುವುದು ಬೇಡ. ಗೊತ್ತಿಲ್ಲದಿದ್ದರೆ ಗೊತ್ತಿಲ್ಲವೆನ್ನಿ. ಗೃಹಬಳಕೆಯ ವಸ್ತುಗಳನ್ನು ಖರೀದಿಸಲು ಹೋಗುವಿರಿ. ಸ್ಥಾನಕ್ಕೆ ಗೌರವ ಕೊಡುವಂತೆ ಇರಲಿ. ಕಬ್ಬಿಣದ ವ್ಯಾಪಾರಗಳು ನಷ್ಟವನ್ನು ಅನುಭವಿಸುವಿರಿ. ಅದು ನಿಮ್ಮ ನಡುವಿನ ಸಂಬಂಧವನ್ನು ಬಲವಾಗಿಸುತ್ತದೆ. ಇಂದು ನೀವು ಸಾಲದಿಂದ ಮುಕ್ತರಾಗುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿಯೂ ಚೆನ್ನಾಗಿರಲಿದೆ. ನಿಮ್ಮ ಮಕ್ಕಳು ಪ್ರಗತಿಯತ್ತ ಸಾಗುವುದು ಖುಷಿಯ ವಿಚಾರ. ಇಂದು ನೆರೆ-ಹೊರೆಯವರ ಜೊತೆ ಭಿನ್ನಾಭಿಪ್ರಾಯ ಉಂಟಾಗಬಹುದು. ಹಿರಿಯ ಅಧಿಕಾರಿಗಳ ಸಹಾಯದಿಂದ ನಿಮ್ಮ ಸಂಕೀರ್ಣ ಕಾರ್ಯಗಳು ಸಹ ಇಂದು ಪೂರ್ಣವಾಗಲಿದೆ. ಹಿರಿಯರಿಂದ ಆಶೀರ್ವಾದ ಸಿಗಲಿದೆ. ಪ್ರೇಯಸಿಯನ್ನು ದೂರಮಾಡಿಕೊಂಡು ದುಃಖಿಸುವ ಸಾಧ್ಯತೆ ಇದೆ. ನಿಮ್ಮ ಸಾಮರ್ಥ್ಯವನ್ನು ಸುಧಾರಿಸಲು ಒಂದು ಅವಕಾಶ ಸಿಗಲಿದೆ.

ಕುಂಭ ರಾಶಿ: ಕಾನೂನಾತ್ಮಕ ಹೋರಾಟದಲ್ಲಿ ತಿರುವ ಬರಲಿದೆ. ಇಂದು ಒತ್ತಡದಿಂದ ಉದ್ವೇಗಗೊಳ್ಳುವ ಸಾಧ್ಯತೆ ಇದೆ. ಅದಕ್ಕಾಗಿ ಯಾರಾದರೂ ನಿಮ್ಮ ಜೊತೆ ಮಾತನಾಡಲು ಬಂದರೆ ಸಿಟ್ಟಗುವಿರಿ. ಎಲ್ಲರ ಮಾತೂ ಕಿರಿಕಿರಿ ಎನಿಸಿವುದು. ಸಣ್ಣ ಉದ್ಯಮಕ್ಕೆ ಉತ್ತಮ ಆದಾಯ ಲಭಿಸುವುದು. ಸ್ನೇಹಿತರ ಭೇಟಿಯಿಂದ ಸಂತಸವಾಗಲಿದೆ. ನಕಾರಾತ್ಮಕ ಅಂಶಗಳೇ ಇಷ್ಟವಾಗುವುದು. ಇದಕ್ಕೆ ಕುಟುಂಬದಿಂದ ನಿಮಗೆ ಅನೇಕ ಮೆಚ್ಚುಗೆಯಾಗಲಿದೆ. ನಿಮ್ಮ ಸಹಾಯಕ್ಕೆಂದೂ ಹಿಂಜರಿಯದ ಸ್ನೇಹಿತರ ಸಮೂಹವು ನಿಮ್ಮದಾಗಿದೆ. ನಿಮ್ಮವರಿಂದ ನಿಮಗೆ ಪ್ರಶಂಸೆಯು ಸಿಗಲಿದೆ. ನೀವು ಸ್ನೇಹಿತರ ಜೊತೆ ಸಾಕಷ್ಟು ಮೋಜಿನ ಸಮಯವನ್ನು ಕಳೆಯಬಹುದು. ಹೊಸ ಜನರು ಭೇಟಿ ನೀಡುವಂತಹ ಸ್ಥಳಗಳಿಗೆ ಹೋಗುವಂತಹ ಸಾಧ್ಯತೆಯೂ ಇದೆ. ಆರೋಪ ಪ್ರತ್ಯಾರೋಪಗಳಿಂದ ಸಮಯ ವ್ಯರ್ಥವಾಗಲಿದೆ. ಪ್ರಯತ್ನಪಟ್ಟು ಮಾಡುವ ಕೆಲಸವು ನಿಮಗೆ ಅನುಕೂಲವನ್ನು ಮಾಡುವುದು. ಉದ್ವಿಗ್ನತೆಯು ಉಂಟಾಗ ಏನನ್ನಾದರೂ ಮಾಡಿಕೊಳ್ಳುವಿರಿ.

ಮೀನ ರಾಶಿ: ಒಪ್ಪಿಕೊಂಡಿದ್ದನ್ನು ಬಿಡುವುದು ಬೇಡ. ನೀವು ಯಾರನ್ನಾದರೂ ದ್ವೇಷಿಸುತ್ತಿದ್ದರೆ ತೋರಿಸಿಕೊಳ್ಳಬೇಡಿ. ಸಹಜವಾಗಿ ಅವರ ಜೊತೆ ವರ್ತಿಸಿ. ಕೆಲವು ನಿರ್ಧಾರಗಳಿಂದ ಆರ್ಥಿಕವಾಗಿ ನಷ್ಟವಾಗುವುದು. ಸಿಟ್ಟಿನ ಕೈಗೆ ಬುದ್ಧಿಯನ್ನು ಕೆಲಸವನ್ನು ಕೆಡಿಸಿಕೊಳ್ಳುವ ಅಗತ್ಯವು ಬರಬಹುದು. ಅನಿವಾರ್ಯತೆಯ ಸಂಕಟದಲ್ಲಿ ಸಿಲುಕುವಿರಿ. ನಿಮ್ಮನ್ನು ನಡತೆಯನ್ನು ಪ್ರಶ್ನಿಸಬಹುದು. ಇಂದಿನ ನಿಮ್ಮ ಕೆಲಸದ ಸುಲಭ ವೇಳಾಪಟ್ಟಿ ವಿಶ್ರಾಂತಿಗೆ ಸಾಕಷ್ಟು ಸಮಯ ಸಿಗಲಿದೆ. ಅವಿವಾಹಿತರಿಗೆ ಪತ್ನಿಯು ಸಿಗಲುದ್ದಾಳೆ. ನಿಮ್ಮ ಸ್ವಂತ ನಿರ್ಧಾರಗಳನ್ನು ಕೈಗೊಳ್ಳಿ. ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸಿ. ಸುಂದರವಾದ ಪ್ರದೇಶಕ್ಕೆ ಹೋಗಲಿದ್ದೀರಿ. ಒಬ್ಬ ಅಪರಿಚಿತ ವ್ಯಕ್ತಿಯ ಜೊತೆ ನಿಮ್ಮ ವಿವಾದವಾಗುವ ಸಾಧ್ಯತೆ ಇದೆ. ಒಳ್ಳೆಯದೆಂದು ತಿಳಿದು ಮೋಸಹೋಗಲಿದ್ದೀರಿ. ಇಂದು ನೀವು ಹೊಸ ಹೂಡಿಕೆಗೆ ಮನಸ್ಸು ಮಾಡುವಿರಿ. ಅತಿಯಾದ ಆಸೆಯಿಂದ ನಿಮಗೆ ಕೆಲವು ತೊಂದರೆಗಳು ಬರಬಹುದು.

ಲೋಹಿತ ಹೆಬ್ಬಾರ್ – 8762924271 (what’s app only)

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ