Horoscope Today 11 April, 2025 : ಈ ರಾಶಿಯವರು ನಂಬಿಕೆ ಬರಿಸಲು ಸತತ ಯತ್ನ, ಅಂತಿಮ ಸೋಲು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ಚತುರ್ದಶೀ ತಿಥಿ, ಶುಕ್ರವಾರ ತಂತ್ರಗಾರಿಕೆಯ ಪ್ರಯೋಗ, ಸಿಟ್ಟಿನಿಂದ ಅಪಕೀರ್ತಿ, ಮಕ್ಕಳಿಂದ ದುಃಖ ಇವೆಲ್ಲ ಇರುವುದು.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಶುಕ್ರ ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ವೃದ್ಧಿ, ಕರಣ : ಬವ, ಸೂರ್ಯೋದಯ – 06 – 22 am, ಸೂರ್ಯಾಸ್ತ – 06 – 44 pm, ಇಂದಿನ ಶುಭಾಶುಭಕಾಲ : ರಾಹು ಕಾಲ 11:01 – 12:34, ಯಮಘಂಡ ಕಾಲ 15:39 – 17:12, ಗುಳಿಕ ಕಾಲ 07:55 – 09:28
ಮೇಷ ರಾಶಿ: ಸಮಾರಂಭಕ್ಕೆ ಅತಿಥಿಯಾಗಿ ಆಹ್ವಾನ. ಮಕ್ಕಳ ಸಾಧನೆಯಿಂದ ಮನಸ್ಸಿಗೆ ತೃಪ್ತಿ. ಇಂದು ನಿಮಗೆ ನಿಮ್ಮದೇ ಆದ ಪ್ರತಿಭೆ, ಸಾಮರ್ಥ್ಯಗಳು ಇವೆ ಎಂದು ನಿಮಗೆ ಅನ್ನಿಸದೇಹೋಗಬಹುದು. ಎಲ್ಲವೂ ಏಕಕಾಲಕ್ಕೆ ಪ್ರಕಟವಾಗದು. ಕಾಲಕ್ಕಾಗಿ ತಾಳ್ಮೆಯಿಂದ ಕುಳಿತುಕೊಳ್ಳಬೇಕು. ನೂತನ ಕಾಮಗಾರಿಗಳಿಗೆ ನಿಮ್ಮಿಂದ ಚಾಲನೆ. ದುಡುಕಿ ಏನನ್ನಾದರೂ ಮಾಡಿಕೊಳ್ಳುವಿರಿ. ಪತ್ನಿಯ ಜೊತೆ ಸುಖದಿಂದ ಕಾಲವನ್ನು ಕಳೆಯುವಿರಿ. ಸಂಬಂಧಿಕರ ಆಗಮನವಾಗಲಿದೆ. ಕೃಷಿಯ ಚಟುವಟಿಕೆಯಲ್ಲಿ ಅಸಕ್ತಿಯಿಂದ ಪಾಲ್ಗೊಳ್ಳುವಿರಿ. ಅಪರಿಚಿತರ ಜೊತೆ ಅಧಿಕ ಒಡನಾಟ. ಬೇಸರದಲ್ಲಿ ದಿನದ ಮುಕ್ತಾಯ. ಸಮಾರಂಭಗಳಿಗೆ ಹೋಗಿ ಒಂದಿಷ್ಟು ಹರಟೆ ಹೊಡೆದು ಬರುವ ಎಂಬ ಮನಸ್ಸಿರುತ್ತದೆ. ಉದಾಸೀನತೆಯು ನಿಮ್ಮನ್ನು ಮುತ್ತಲಿದೆ. ಸಮಯೋಚಿತ ಮಾತುಗಳಿಂದ ಪ್ರಶಂಸೆಯು ಸಿಗಬಹುದು. ಬೆಂಕಿಯ ಸ್ಥಳದಲ್ಲಿ ಎಚ್ಚರಿಕೆಯಿಂದ ಕೆಲಸವನ್ನು ಮಾಡಿ. ಇಂದಿನ ನಿಮ್ಮ ಸಮಯದ ವ್ಯತ್ಯಾಸದಿಂದ ಕೆಲವು ಕಾರ್ಯಗಳು ಬದಲಾವಣೆ ಆಗಬಹುದು.
ವೃಷಭ ರಾಶಿ: ಕೆಲವರ ಮಾತುಗಳು ನಿಮಗೆ ಹಿಡಿಸದು. ಸತತ ಪ್ರಯತ್ನಕ್ಕೆ ಕೊನೆಗೂ ಸಿಕ್ಕ ಜಯ. ಕುಟುಂಬದಲ್ಲಿ ನಿಮ್ಮ ಬಗ್ಗೆ ಗರ್ವ. ಇಂದು ವ್ಯಾವಹಾರಿಕವಾಗಿ ಮನಶ್ಚಾಂಚಲ್ಯ ನಿಮ್ಮನ್ನು ಅನೇಕ ವಿಧವಾಗಿ ಕಾಡಬಹುದು. ನಿರಂತರ ಶ್ರಮಕ್ಕೆ ಫಲವಿರುತ್ತದೆ. ಕರ್ತವ್ಯದ ದೃಷ್ಟಯಿಂದ ಮಾಡಿ. ಫಲಾಪೇಕ್ಷೆಯು ಇದ್ದರೆ ಹತಾಶೆಯು ಖಂಡಿತಾ ಇರುವುದು. ಅಧಿಕಾರಿಗಳಿಂದ ನಿಮ್ಮ ಕಾರ್ಯದ ಪ್ರಗತಿ ಪರಿಶೀಲನೆ. ಮನೋರಂಜನೆಯ ಕಾರ್ಯಕ್ರಮವನ್ನು ವೀಕ್ಷಿಸುವಿರಿ. ಇಂದು ನಿಮಗೆ ಪುಣ್ಯಸ್ಥಳಕ್ಕೆ ಹೋಗುವ ಆಸೆ ಇದ್ದರೂ ಅದನ್ನು ಪೂರೈಸಿಕೊಳ್ಳಲಾಗದು. ವಾಹನವನ್ನು ಚಲಾಯಿಸುವಾಗ ಸಾವಧಾನತೆ ಇರಲಿ. ನ್ಯಾಯವನ್ನು ಪಡೆಯಲು ಎಲ್ಲ ಕಡೆಯಿಂದ ಒತ್ತಡ. ಇನ್ನೊಬ್ಬರ ಬಗ್ಗೆ ಮಾಡುವ ತಮಾಷೆಯು ನಿಮ್ಮ ತಲೆನೋವಾದೀತು. ಸಮಯದ ಹೊಂದಾಣಿಕೆಯಲ್ಲಿ ನೀವು ಸೋಲಬಹುದು. ನೀವು ಮೊದಲೇ ನಿರ್ಧರಿಸಿರುವ ಕೆಲಸಗಳನ್ನು ಪೂರ್ಣ ಮಾಡಲು ಸಮಯವು ಸಿಗದೇ ಹೋದೀತು. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇದೆ.
ಮಿಥುನ ರಾಶಿ: ವ್ಯಾವಹಾರಿಕ ಪ್ರಜ್ಞೆಯ ಕೊರತೆ, ಎಲ್ಲರಿಂದ ಆಕ್ಷೇಪ. ತಂದೆ ಹಾಗು ತಾಯಿಯರ ಸೇವೆಯನ್ನು ಮಾಡುವ ಮನಸ್ಸಾಗುವುದು. ಮನೆಯಿಂದ ದೂರ ಹೋಗುವಾಗ, ಕಛೇರಿಗೆ ಹೋಗುವಾಗ ದೇವರಿಗೆ ನಮಸ್ಕರಿಸಿ ಮುನ್ನಡೆಯಿರಿ. ಅನ್ಯರ ಕಾರಣದಿಂದ ವಿಮಾನ ಸಂಚಾರ ಯೋಗ. ಹಿರಿಯರಿಗೆ ನಿಮ್ಮ ಕೈಲಾದ ಮತ್ತು ಅವರಿಗೆ ಅವಶ್ಯಕವಾದ ಕಾರ್ಯಗಳನ್ನು ಮಾಡಿಕೊಡಿ. ಸಂಗಾತಿಯೊಂದಿಗೆ ಸುತ್ತಾಟ ನಡೆಸುವಿರಿ. ನಿಮ್ಮ ವಿವಾಹದ ಮಾತುಕತೆಗಳು ನಿಮಗೆ ಖುಷಿ ಕೊಡಬಹುದು. ಆಯುಧದಿಂದ ಗಾಯವನ್ನು ಮಾಡಿಕೊಂಡು ನೋವಾಗುವುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿ, ದುಃಖ ದೂರಾಗುವುದು. ಪ್ರೀತಿಯಿಂದ ಹೇಳಿದರೂ ನಿಮ್ಮ ಕಾರ್ಯವು ಸಫಲವಾಗುವುದು. ಅಂತರ್ಜಾಲದಲ್ಲಿ ಅಧಿಕ ಸಮಯ ಕಳೆಯುವಿರಿ. ಇಂದು ನಿಮಗೆ ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಇರಲಿದ್ದು ಅದಕ್ಕೆ ಸಮಯವು ಹೆಚ್ಚು ಹೋಗುವುದು. ನಿಮ್ಮ ಏಕಾಗ್ರತೆಯ ಕಾರ್ಯಕ್ಕೆ ಭಂಗವಾಗುವ ಸಾಧ್ಯತೆ ಇದೆ.
ಕರ್ಕಾಟಕ ರಾಶಿ: :ನಿಮ್ಮ ವಸ್ತುಗಳು ಕಳ್ಳತನವಾಗಬಹುದು. ಕೆಲವರ ಮೇಲೆ ಅನುಮಾನದಿಂದ ದೂರನ್ನು ಕೊಡುವಿರಿ. ಯಾರನ್ನೂ ಲಘುವಾಗಿ ಕಾಣುವುದು ಬೇಡ. ನೀರೀಕ್ಷಿಸಿದ ವಸ್ತುಗಳು ಕೆಲವು ಸಿಗಲಿವೆ. ಮನಸ್ಸು ಸ್ವಲ್ಪ ಎಲ್ಲವನ್ನೂ ಮರೆತು ಹಗುರಾಗಬಹುದು. ಅನಾರೋಗ್ಯದಿಂದಲೂ ಚೇತರಿಕಯನ್ನು ಕಂಡುಕೊಳ್ಳಬಹುದಾಗಿದೆ. ದೈವಾನುಗ್ರಹವಿಲ್ಲವೆಂದು ದೇವಾಲಯಕ್ಕೆ ಹೋಗುವುದನ್ನು ನಿಲ್ಲಿಸುವುದು ಬೇಡ. ಇಂದಿನ ಸತ್ಕಾರ್ಯವೆಡ ನಿಮಗೆ ಉತ್ತಮವಾದ ಫಲವನ್ನು ಕೊಡುವುದು. ಲೋಕಕಲ್ಯಾಣದ ಕಾರ್ಯದಲ್ಲಿ ತೊಡಗುವಿರಿ. ನಿರಾಶರಾಗದೇ ಒಳ್ಳೆಯ ಮನಸ್ಸಿನಿಂದ ಮುನ್ನಡೆಯಿರಿ. ನಿಮ್ಮ ವಿವಾಹದ ವಿಚಾರದಲ್ಲಿ ಯಾರಾದರೂ ಅಪಸ್ವರ ತರಬಹುದು. ಜವಾಬ್ದಾರಿಯಿಂದ ತಲೆ ಭಾರವಾಗುವುದು. ನಿಮ್ಮ ನಾಟಕೀಯ ವರ್ತನೆಗಳು ಗೊತ್ತಾಗುವುದು. ಸಂಗಾತಿಯ ಪ್ರೀತಿಯು ನಿಮಗೆ ಬೇಸರವನ್ನು ಕೊಡಬಹುದು. ಕಳೆದುಕೊಂಡದ್ದನ್ನು ಪಡೆಯಬೇಕು ಎಂಬ ಛಲವು ನಿಮ್ಮಲ್ಲಿ ಇರುವುದು. ಮನಸ್ತಾಪವನ್ನು ಮನಸ್ಸಿನೊಳಗೇ ಇಟ್ಟುಕೊಳ್ಳುವಿರಿ. ಆಸ್ತಿಯ ವಿಚಾರಕ್ಕೆ ನೆರೆಹೊರೆಯ ನಡುವೆ ಕಲಹವಾದೀತು.
ಸಿಂಹ ರಾಶಿ: ಕೃಷಿ ಉತ್ಪನ್ನದಲ್ಲಿ ಆಸಕ್ತಿ. ಮಾರಾಟದಿಂದ ಅಧಿಕ ಲಾಭ ಹಾಗೂ ಹೊಸ ಯೋಜನೆಗೆ ಸಿದ್ಧತೆ ಮಾಡುವಿರಿ. ನೀವು ಹೊಸತನವನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುವಿರಿ. ವಿದೇಶಕ್ಕೆ ಹೋಗಲು ಆಲೋಚನೆ ಮಾಡಿದ್ದರೆ ಹೊರಡಬಹುದು. ಆನಾರೋಗ್ಯದಿಂದ ಮುಕ್ತಿಸಿಗಲಿದೆ. ಸಹೋದರನ ಹಾಗೂ ತಂದೆಯ ಸಹಾಯ ನಿಮಗೆ ಸಿಗಲಿದೆ. ಪ್ರತಿಭೆಯ ಅನಾವರಣಕ್ಕೆ ಸುಕಾಲ. ಸಂಪತ್ತು ಉಳಿಸಿಕೊಳ್ಳಲು ಯತ್ನಿಸಿದಷ್ಟೂ ಅಪ್ರಯಾಸವಾಗಿ ಖರ್ಚಾಗುವುದು. ನಿಮ್ಮ ಆರಾಮದ ದಿನಚರಿಯಲ್ಲಿಯೂ ನಿಮಗೆ ಇಂದು ಕಿರಿಕಿರಿ ಆಗುವುದು. ಇನ್ನೊಬ್ಬರ ಮಾತುಗಳನ್ನು ಕೇಳುವ ಸಹನೆಯು ಬೇಕು. ಮನೋರಂಜನೆಗಾಗಿಯೇ ಸಮಯವನ್ನು ಮೀಸಲಿಟ್ಟರೂ ಅದನ್ನು ಯಾರಾದರೂ ಹಾಳುಮಾಡಿಯಾರು. ಆದರ್ಶ ವ್ಯಕ್ತತ್ವದ ಕಡೆಗೆ ಗಮನ ನೀಡುವಿರಿ. ಯಾರನ್ನೋ ಮೀರಿಸುವ ಧೈರ್ಯ ಮಾಡಲಾರಿರಿ. ದೈಹಿಕ ಶ್ರಮವು ಇಂದು ಹೆಚ್ಚಿರುವುದು. ನಿಮ್ಮ ಶಿಷ್ಯರಿಂದ ನಿಮಗೆ ಉಡುಗೊರೆ ಸಿಗುವ ಸಾಧ್ಯತೆ ಇದೆ. ಭೂಮಿಯನ್ನು ಮಾರಾಟಮಾಡುವ ಸ್ಥಿತಿಯು ಬರಬಹುದು. ಉತ್ಸಾಹದಿಂದ ನೀವು ಇಂದಿನ ಕಾರ್ಯವನ್ನು ಮಾಡುತ್ತಿದ್ದರೂ ದಿನದ ಕೊನೆಗೆ ಸಲ್ಲದ ಮಾತುಗಳನ್ನು ಕೇಳುವಿರಿ.
ಕನ್ಯಾ ರಾಶಿ: ಉತ್ತಮ ಶಿಕ್ಷಣದ ಕಡೆಗೆ ಮನೆಯವರ ಒತ್ತಾಯ. ಇಂದು ನಿಮ್ಮ ಕಳೆದು ಹೋದ ಕಾರ್ಯಗಳನ್ನೇ ನೆನಪಿಸಿ ನಿಮ್ಮನ್ನು ಹತಾಶಗೊಳಿಸಬಹುದು. ಬಹಳ ದಿನಗಳಿಂದ ಕಾರ್ಮಿಕರ ವಿಚಾರದಲ್ಲಿ ನಿಮಗೆ ಅಸಮಾಧಾನವಿದ್ದು ಅದನ್ನು ತೋರ್ಪಡಿಸುವಿರಿ. ಬೇಡದ ವಸ್ತುಗಳಿಗೆ ಹೊಸ ರೂಪವನ್ನು ಕೊಡುವಿರಿ. ಉದ್ಯಮದಲ್ಲಿ ಏನಾದರೂ ಏರಿಳಿತಗಳು ಆಗಬಹುದು. ಒಂಟಿಯಾಗಿರುವುದನ್ನು ಯಾರಾದರೂ ತಪ್ಪಿಸಬಹುದು. ಆಪ್ತರ ಜೊತೆ ಮನಸ್ಸು ಬಿಚ್ಚಿ ಮಾತನಾಡಿ. ಇಷ್ಟವಾಗುವ ಸ್ಥಳಗಳಿಗೆ ಇಷ್ಟವಾದವರನ್ನು ಕರೆದುಕೊಂಡು ಹೋಗಿ. ಕೆಲಸದ ಸ್ಥಳದಲ್ಲಿ ಒತ್ತಡದ ವಾತಾವರಣವಿರಬಹುದು. ಮಾಡುವ ಕಾರ್ಯದಲ್ಲಿ ಶ್ರದ್ಧೆಯು ನಿಮ್ಮ ದೃಷ್ಟಿಯನ್ನು ಬದಲಿಸುವುದು. ವಿದ್ಯಾರ್ಥಿಗಳು ಶ್ರಮವಹಿಸಿ ಮುಂಬರುವ ಪರೀಕ್ಷೆಗಳಿಗೆ ಸಿದ್ಧತೆಯನ್ನು ನಡೆಸಬಹುದು. ಇಂದು ಬಿಟ್ಟು ಹೋದ ಆಪ್ತರ ಬಗ್ಗೆ ಹೆಚ್ಚು ಆಲೋಚನೆ ಬರಬಹುದು. ಬರುವ ಒತ್ತಡವನ್ನು ನೀವು ಯಾವುದಾದರೂ ವಿಧಾನದ ಮೂಲಕ ಸರಿ ಮಾಡಿಕೊಳ್ಳುವಿರಿ.
ತುಲಾ ರಾಶಿ: ನಿಮ್ಮ ಅರ್ಹತೆಗೆ ತಕ್ಕ ಸ್ಥಾನ ಮಾನ. ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನ. ನಿಮ್ಮ ವಿವಾಹದ ಪ್ರಸ್ತಾಪಗಳು ಬರಬಹುದು. ನೀವು ನಿಮ್ಮ ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ. ಮನೆಯವರ ಜೊತೆ ಖುಷಿಯಿಂದ ಕಾಲಕಳೆಯುವಿರಿ. ಎತ್ತರದ ಪ್ರದೇಶಗಳನ್ನು ಏರುವ ಸಾಹಸಕ್ಕೆ ಹೋಗಬೇಡಿ. ಯಾರಿಗಾದರೂ ಯಾವ ಕೆಲಸಕ್ಕಾದರೂ ನಿಮ್ಮ ಕಡೆಯಿಂದ ಅದಕ್ಕೆ ನ್ಯಾಯ ಸಿಗುವಂತೆ ಇರಲಿ. ಅನ್ಯ ಮನಸ್ಕರಾಗಿ ಇರುವುದು ಬೇಡ. ಧರ್ಮದ ಕಾರ್ಯಗಳ ಆಸಕ್ತಿಯು ಕಡಿಮೆಯಾಗಬಹುದು. ಮಕ್ಕಳಿಂದ ಯಾವುದಾದರೂ ರೀತಿಯಲ್ಲಿ ನೋವನ್ನು ಪಡೆಯಬೇಕಾದೀತು. ಕುಟುಂಬಕ್ಕೋಸ್ಕರ ಧನವನ್ನು ತ್ಯಾಗಮಾಡುವಿರಿ. ಸಣ್ಣ ಉಳಿತಾಯಕ್ಕೆ ಇಂದು ಬೆಲೆಯು ಬಂದಂತಾಗುವುದು. ಜೀವನದ ಲಕ್ಷ್ಯವು ಬೇರೆ ಕಡೆಗೆ ಯಾರಾದರೂ ಬದಲಿಸಬಹುದು. ತಪ್ಪು ಮಾಡದೇ ಇದ್ದರೂ ಶಿಕ್ಷೆ, ಬೇಸರ. ನೀವು ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳದೇ ಅವರ ಜೊತೆ ಜಗಳವಾಡುವಿರಿ. ಆದಾಯದ ಗುಟ್ಟನ್ನು ಎಷ್ಟೇ ಒತ್ತಾಯ ಮಾಡಿದರೂ ಹೇಳಲಾರಿರಿ. ಹಿರಿಯರ ಪ್ರೀತಿಯು ನಿಮಗೆ ಖುಷಿಕೊಡುವುದು.
ವೃಶ್ಚಿಕ ರಾಶಿ: ಇಂದು ನಿಮ್ಮ ಗೌರವಕ್ಕೆ ಯಾರಿಂದಲಾದರೂ ಚ್ಯುತಿಯಾಗಬಹುದು. ನಡೆ, ನುಡಿಗಳಲ್ಲಿ ಬಹಳ ಜಾಗರೂಕರಾಗಿರಿ. ಧನವು ಕೈಗೆಟುಕದ ದ್ರಾಕ್ಷಿಯಂತೆ ಅನ್ನಿಸಬಹುದು. ಕೆಟ್ಟ ಆಲೋಚನೆಗಳು ನಿಮ್ಮ ಮನಸ್ಸನ್ನು ಹಾಳು ಮಾಡಬಹುದು. ವ್ಯವಹಾರದಲ್ಲಿ ಬರುವ ಸಮಸ್ಯೆಯನ್ನು ಮೊದಲೇ ಯೋಚಿಸಿ ಅದಕ್ಕೆ ಬೇಕಾದ ಸಿದ್ಧತೆಯಲ್ಲಿ ಮಾಡಿ. ನಿರೋದ್ಯೋಗ ಸಮಸ್ಯೆಯಿಂದ ಮಾನಸಿಕ ಹಿಂಸೆಯಾಗಬಹುದು. ಭೂವ್ಯವಹಾರದಲ್ಲಿ ಲಾಭವನ್ನು ಪಡೆಯಲು ಅನ್ಯ ಮಾರ್ಗವನ್ನು ಆಶ್ರಯಿಸುವಿರಿ. ಸಂತಾನದವಿಲ್ಲದ ನೋವು ಇಂದು ನಿಮ್ಮನ್ನು ಅಧಿಕವಾಗಿ ಬಾಧಿಸಬಹುದು. ಉದ್ಯಮದ ಕಾರ್ಯಕ್ಕೆ ನೀವು ಪ್ರಯಾಣ ಮಾಡುವ ಸಾಧ್ಯತೆ ಇದೆ. ಮಕ್ಕಳಿಂದ ನಿಮಗೆ ಸಂತೋಷವು ಸಿಗಲಿದೆ. ನಿಮ್ಮ ವಿರುದ್ಧ ವ್ಯಂಗ್ಯದ ಮಾತುಗಳು ಕೇಳಿಬರುವುದು. ಇಂದು ಕಛೇರಿಯನ್ನು ಮಹಿಳೆಯರು ನಿರ್ವಹಣೆ ಮಾಡಬೇಕಾಗುವುದು. ನೂತನ ವಸ್ತುಗಳನ್ನು ಖರೀದಿಸಲಿದ್ಸೀರಿ. ಮಾಡದ ಕಾರ್ಯಕ್ಕೆ ಅಪವಾದ ಬರುವುದು. ಇಂದು ವೃತ್ತಿಯಲ್ಲಿ ಆತಂಕವು ಬರಬಹುದು.
ಧನು ರಾಶಿ: :ಉನ್ನತ ಸ್ಥಾನದ ಆಕಾಂಕ್ಷೆಯನ್ನು ಪ್ರಕಟಿಸುವಿರಿ. ನೀವು ಪ್ರಯಾಣವನ್ನು ಅನಿವಾರ್ಯ ಕಾರಣಕ್ಕೆ ಮಾಡಬೇಕಾಗಬಹುದು. ಅನಿರೀಕ್ಷಿತ ಎದುರಾದ ಖರ್ಚಿನಿಂದಾಗಿ ಸ್ನೇಹಿತರಲ್ಲಿ ಹಣವನ್ನು ಕೇಳುವಿರಿ. ಹಠದ ಸ್ವಭಾವವೇ ನಿಮಗೆ ಮುಳುವಾಗಬಹುದು. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿ ವಿವಾದಗಳೂ ತಾರಕಕ್ಕೆ ಹೋಗಬಹುದು. ಮುಂದಿನ ಕಾರ್ಯದಲ್ಲಿ ಆಗುವ ಖರ್ಚುಗಳ ಬಗ್ಗೆ ತಲೆಕೆಡಿಕೊಳ್ಳಬಹುದು. ಎಲ್ಲರ ಮೇಲೂ ನಂಬಿಕೆ ಇಟ್ಟುಕೊಳ್ಳುವುದು ಸಾಧ್ಯವಾಗದು. ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ವಿಘ್ನ ಬರಬಹುದು. ಅದೃಷ್ಟವು ನಿಮ್ಮನ್ನು ಕಾಪಾಡಬಹುದು. ಇಂದು ನಿಮಗೆ ಅನಗತ್ಯ ಎನಿಸದರೂ ಕೆಲವು ಖರ್ಚನ್ನು ನಿಮ್ಮ ಸಂತೋಷ, ಪ್ರತಿಷ್ಠೆಗಾಗಿ ಮಾಡುವಿರಿ. ಇಂದು ಯಾವುದೋ ಆಲೋಚನೆಯಲ್ಲಿ ಮಗ್ನರಾದಂತೆ ತೋರುತ್ತದೆ. ಯಾರಾದರೂ ನಿಮ್ಮನ್ನು ಚೇಡಿಸಬಹುದು. ಸ್ನೇಹಿತರಿಗೆ ನಿಮ್ಮದಾದ ಕೆಲವು ಆಯ್ಕೆಗಳನ್ನು ಹೇಳಿ. ಧಾರ್ಮಿಕ ಆಚರಣೆಯು ನಿಮ್ಮ ಮನಸ್ಸಿಗೆ ಹಿತವೆನಿಸುವುದು. ಉದ್ಯೋಗದಲ್ಲಿ ಒತ್ತಡವು ಅಧಿಕವಾಗಿ ಇರಲಿದೆ.
ಮಕರ ರಾಶಿ: ನೀವು ಹಿರಿಯರ ಜೊತೆ ಗೌರವಯುತವಾಗಿ ವರ್ತಿಸುವ ಅವಶ್ಯಕತೆ ಇರುವುದು. ಕಾರ್ಯಗಳು ಶೀಘ್ರವಾಗಿ ಫಲಿಸದೇ ಇರುವುದು ನಿಮಗೆ ಬೇಸರ ತಂದೀತು. ನಿಮ್ಮ ವೇಗಕ್ಕೆ ಸಕಾಲದಲ್ಲಿ ಆಗುವ ಕಾರ್ಯಗಳೂ ತುಂಬ ದೀರ್ಘವೆನಿಸುತ್ತದೆ. ವ್ಯವಹಾರದಲ್ಲಿ ಎಚ್ಚರವಿರಲಿ. ಒಮ್ಮುಖ ನಿರ್ಧಾರಗಳನ್ನು ಮಾಡುವುದನ್ನು ಬಿಡಿ. ಹೊಸ ಶತ್ರುಗಳನ್ನು ನಿರ್ಮಿಸಿಕೊಳ್ಳಬೇಡಿ. ಆರಕ್ಕೇರದ ಮೂರಕ್ಕಿಳಿಯದ ಉದ್ಯಮದ ದಿನವಿಂದು ನಿಮಗೆ. ಪ್ರಾಣಿಗಳಿಂದ ಭೀತರಾಗುವ ಸಾಧ್ಯತೆ ಇದೆ. ಸಂಗಾತಿಯು ನಿಮ್ಮ ಗುಟ್ಟನ್ನು ಹೊರಹಾಕಬಹುದು. ಎದುರಿನವರ ಇಂಗಿತವನ್ನು ತಿಳಿದುಕೊಳ್ಳದೇ ಮಾತನಾಡುವಿರಿ. ವೈದ್ಯಕೀಯ ಕ್ಷೇತ್ರದಲ್ಲಿ ಒತ್ತಡವು ಅಧಿಕಾಗಿರುವುದು. ನಿಮ್ಮ ಸ್ವಭಾವವನ್ನು ತಿದ್ದಿಕೊಳ್ಳಬೇಕಾಗುವುದು. ಯಾರೇ ನಿಮ್ಮನ್ನು ನೆಚ್ಚಿವದರೂ ಅದು ಸ್ವಲ್ಪ ಕಾಲ ಮಾತ್ರ. ದುಸ್ಸ್ವಭಾವವನ್ನು ಹೆಚ್ಚಿಸಿಕೊಳ್ಳುವಿರಿ. ಹಿತಶತ್ರುಗಳು ಲಾಭವನ್ನು ತಪ್ಪಿಸುವರು. ಯಾರದ್ದಾದರೂ ಜೊತೆ ನೀವು ನಿಮ್ಮನ್ನು ಹೋಲಿಸಿಕೊಳ್ಳುವಿರಿ. ಸಮಾಜದಿಂದ ಸಿಗುವ ಗೌರವವನ್ನು ಸ್ವೀಕರಿಸುವುದು ಕಷ್ಟ.
ಕುಂಭ ರಾಶಿ: ಇಂದು ನಿಮಗೆ ಅಧಿಕ ಸಂಪತ್ತಿನ ವ್ಯಯವು ಇರಲಿದೆ. ಕಾರ್ಯ ಮಾಡುವ ಧೈರ್ಯವಿದ್ದರೂ ಕಾರ್ಯದಲ್ಲಿ ನಿರಾಸಕ್ತಿಯೂ ಕಾಣಿಸಬಹುದು. ದೂರದಲ್ಲಿರುವ ನಿಮಗೆ ಸಂಗಾತಿಯ ಸಂಗ ಸಿಗುವ ಸಾಧ್ಯತೆ ಇದೆ. ನಟನೆಯಲ್ಲಿ ಆಸಕ್ತಿಯಿರುವವರಿಗೆ ಅವಕಾಶಗಳು ಲಭ್ಯವಾಗುತ್ತವೆ. ಆಲಸ್ಯದಿಂದ ಸಿಗುವ ಸಂಪತ್ತು ವ್ಯರ್ಥವಾಗುತ್ತದೆ. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನಹರಿಸಬೇಕು. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು. ಭೂಮಿಯ ವ್ಯವಹಾರದಲ್ಲಿ ಮಾತುಕತೆಗಳು ಆಗಲಿವೆ. ಮಾತಿನಿಂದ ಹಲವರಿಗೆ ಖುಷಿಯಾಗಲಿದೆ. ಸ್ತ್ರೀಯರಿಗೆ ಹೊಸತನ್ನು ಏನಾದರೂ ಮಾಡುವ ಬಗ್ಗೆ ಆಸಕ್ತಿ ಬರಬಹುದು. ಸಂಗಾತಿಯ ಮನೋಭಾವವನ್ನು ಅರಿತುಕೊಳ್ಳಲು ಕಷ್ಟವಾದೀತು. ಆಪ್ತರೇ ನಿಮ್ಮ ಬಗ್ಗೆ ಹಗುರಾಗಿ ಮಾತನಾಡಬಹುದು. ಧನಲಾಭವಾದರೂ ಮನಸ್ಸಿನಲ್ಲಿ ನೆಮ್ಮದಿ ಕೊರತೆ ಕಾಣುವುದು. ಭೂಮಿಯ ವ್ಯವಹಾರವನ್ನು ಮಾಡಲು ನಿಮಗೆ ಒತ್ತಡ ಬರಬಹುದು. ಇಂದಿನ ಆದಾಯದಿಂದ ನಿಮ್ಮ ಪಡೆಯಬೇಕಾದುದನ್ನು ಪಡೆಯುವಿರಿ.
ಮೀನ ರಾಶಿ: ಇಂದು ನೀವು ಮನಸ್ಸಿನ ಕಿರಿಕಿರಿಯನ್ನು ಅನುಭವಿದೇ ಅನ್ಯ ಮಾರ್ಗವಿರದು. ಸ್ವಬುದ್ಧಿಯಿಂದ ಕಾರ್ಯಗಳನ್ನು ಮಾಡುವಿರಿ. ನಿಮ್ಮಲ್ಲಿ ಪ್ರೇಮವು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗುವುದಿಲ್ಲ. ಸಂಗಾತಿಯೊಂದಿಗೆ ಕಲಹವಾಗಲಿದೆ. ಜಾಗರೂಕರಾಗಿ ಕಾಲಿಡಿ. ಭೋಗವಸ್ತುಗಳನ್ನು ಅನವಶ್ಯಕವಾಗಿ ಖರೀದಿಸುವಿರಿ. ನಿಮ್ಮ ಇಷ್ಟದವರು ನಿಮ್ಮ ಭೇಟಿಯಾಗಬಹುದು. ಕಲಾವಿದರಿಗೆ ಹೆಚ್ಚಿನ ಸ್ಥಾನಗಳು ಸಿಗಬಹುದು. ನಂಬಿಕೆಯನ್ನು ಕಳೆದುಕೊಳ್ಳಬೇಕಾದ ದಿನವೂ ಇದಾಗಿರುತ್ತದೆ. ದುಡುಕಿ ಯಾವದೋ ಅಪರಿಹಾರ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಏಕಾಂತವನ್ನು ಹೆಚ್ಚು ಇಷ್ಟಪಡುವಿರಿ. ನಿಮ್ಮದಾದ ಸ್ವತಂತ್ರ ಆದಾಯವನ್ನು ಬೆಳೆಸಿಕೊಳ್ಳುವ ಬಗ್ಗೆ ಸೂಕ್ತ ನಿರ್ಧಾರವನ್ನು ಮಾಡುವಿರಿ. ಶತ್ರುಗಳು ನಿಮಗೆ ಹೆಚ್ಚು ತೊಂದರೆಯನ್ನು ಕೊಡಬಹುದು. ಬಂಧುಗಳ ಜೊತೆ ವಿವಾದವು ಏರ್ಪಡಲಿದ್ದು ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯವೂ ಬರಬಹುದು. ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಲು ಬಹಳ ಪ್ರಯತ್ನಶೀಲರಾಗುವರು.
-ಲೋಹಿತ ಹೆಬ್ಬಾರ್ – 8762924271 (what’s app only)