Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಸ್ತು ದೋಷವನ್ನು ಪರಿಹರಿಸಲು ಮನೆಯಲ್ಲಿ ಯಾವ ಜಾಗದಲ್ಲಿ ಪೊರಕೆ ಇಡಬೇಕು ಎಂದು ತಿಳಿಯಿರಿ

ಪೊರಕೆಯನ್ನು ಈ ರೀತಿ ಇಡಬೇಡಿ, ಪೊರಕೆಯನ್ನು ದಾಟಬೇಡಿ, ಪೊರಕೆ ಇಲ್ಲಿ ಏಕೆ ಬಿದ್ದಿದೆ? ಕತ್ತಲು ಆದ ನಂತರ ಮನೆಯಲ್ಲಿ ಪೊರಕೆಯನ್ನು ಬಳಸಬಾರದು! ಇಂತಹ ಮಾತುಗಳನ್ನು ನಮ್ಮ ಹಿರಿಯರಿಂದ ನಾವು ಕೇಳಿರುತ್ತೇವೆ. ಏಕೆ ಎಂದು ಎಂದಾದರೂ ಯೋಚಿಸಿದ್ದೀರಾ?

ವಾಸ್ತು ದೋಷವನ್ನು ಪರಿಹರಿಸಲು ಮನೆಯಲ್ಲಿ ಯಾವ ಜಾಗದಲ್ಲಿ ಪೊರಕೆ ಇಡಬೇಕು ಎಂದು ತಿಳಿಯಿರಿ
ಪೊರಕೆ
Follow us
ನಯನಾ ಎಸ್​ಪಿ
|

Updated on:Aug 27, 2023 | 1:01 PM

ಪೊರಕೆಯನ್ನು ಈ ರೀತಿ ಇಡಬೇಡಿ, ಪೊರಕೆಯನ್ನು ದಾಟಬೇಡಿ, ಪೊರಕೆ ಇಲ್ಲಿ ಏಕೆ ಬಿದ್ದಿದೆ? ಕತ್ತಲು ಆದ ನಂತರ ಮನೆಯಲ್ಲಿ ಪೊರಕೆಯನ್ನು ಬಳಸಬಾರದು! ಇಂತಹ ಮಾತುಗಳನ್ನು ನಮ್ಮ ಹಿರಿಯರಿಂದ ನಾವು ಕೇಳಿರುತ್ತೇವೆ. ಏಕೆ ಎಂದು ಎಂದಾದರೂ ಯೋಚಿಸಿದ್ದೀರಾ? ಏಕೆಂದರೆ ಪೊರಕೆಗಳು ನಮ್ಮ ಮನೆಯ ಪರಿಸ್ಥಿತಿಯನ್ನು ನಿರ್ಧರಿಸುವ ಸಾಮರ್ಥ್ಯವನ್ನು ಹೊಂದಿವೆ ಎಂಬ ಸತ್ಯ ನಮ್ಮ ಹಿರಿಯರಿಗೆ ತಿಳಿದಿದೆ. ಇದರ ಹಿಂದೆ ಅನೇಕ ನಂಬಿಕೆಗಳಿವೆ ಮತ್ತು ಇದು ನಮ್ಮ ಮನೆಯ ವಾಸ್ತು ಮೇಲೆ ಕೆಟ್ಟ ಮತ್ತು ಒಳ್ಳೆಯ ಎರಡೂ ಪ್ರಭಾವವನ್ನು ಬೀರುತ್ತದೆ.

ವಾಸ್ತು ಶಾಸ್ತ್ರವು ಜ್ಯೋತಿಷ್ಯದ ಮತ್ತೊಂದು ಆಯಾಮವಾಗಿದ್ದು ಅದು ಮನೆಗೆ ಪ್ರವೇಶಿಸುವ ನಕಾರಾತ್ಮಕ ಮತ್ತು ಧನಾತ್ಮಕ ಶಕ್ತಿಗಳನ್ನು ನಿಯಂತ್ರಿಸುತ್ತದೆ. ಸರಿಯಾದ ವಾಸ್ತುವನ್ನು ಹೊಂದಿರುವುದು ಒಬ್ಬ ವ್ಯಕ್ತಿಯ ಜೀವನದಲ್ಲಿ ಸಕಾರಾತ್ಮಕತೆ, ಸಂತೋಷ, ಸಂಪತ್ತು, ಅಭಿವೃದ್ಧಿ, ಮಾನಸಿಕ ಶಾಂತಿ, ದೈಹಿಕ ಅರೋಗ್ಯ, ಆರ್ಥಿಕ ಸುಧಾರಣೆ ಇತ್ಯಾದಿಯನ್ನು ತರುತ್ತದೆ. ಆದ್ದರಿಂದ ಮನೆಯ ವಸ್ತುವಿನ ಮೇಲೆ ಪರಿಣಾಮ ಬೀರುವಂತಹ ಅನೇಕ ಇತರ ವಿಷಯಗಳಲ್ಲಿ ಪೊರಕೆ ಅತ್ಯಂತ ಮುಖ್ಯವಾದದ್ದು.

ಪೊರಕೆಗಳನ್ನು ಸರಿಯಾದ ಸ್ಥಳದಲ್ಲಿ ಅಥವಾ ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗಬಹುದು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಮತ್ತು ನಿಮ್ಮ ಮನೆಯಲ್ಲಿ ವಾಸ್ತು ದೋಷವಿದ್ದಲ್ಲಿ, ಅದು ಸಂಪತ್ತು, ಆರೋಗ್ಯ, ಮದುವೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಹೆಚ್ಚಿನವುಗಳ ದುರುದ್ವೇಷಪೂರಿತ ಸ್ಥಿತಿಗಳಿಗೆ ಕಾರಣವಾಗಬಹುದು. ನಮ್ಮ ಜ್ಯೋತಿಷಿಗಳೊಂದಿಗೆ ಮಾತನಾಡುವ ಮೂಲಕ ವಾಸ್ತು ದೋಷವನ್ನು ನಿಭಾಯಿಸಬಹುದು, ಆದರೆ ನೀವು ಕೆಲವು ಸರಳ ಪರಿಹಾರ ಕ್ರಮಗಳನ್ನು ಅಳವಡಿಸಿಕೊಂಡರೆ ಇದು ನಿಮ್ಮನ್ನು ವಾಸ್ತು ದೋಷದಿಂದ ರಕ್ಷಿಸುತ್ತದೆ.

ಪೊರಕೆ ಮಹತ್ವ

ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ. ಅದ್ದಕ್ಕಾಗಿಯೇ ಪೊರಕೆಯನ್ನು ಯಾವ ದಿನ ಖರೀದಿಸಬೇಕು ಮತ್ತು ಯಾವ ದಿನ ಖರೀದಿಸಬಾರದು ಎಂಬುದರ ಬಗ್ಗೆಯೂ ವಿವರಿಸಲಾಗುತ್ತದೆ. ಪುರಾಣಗಳ ಪ್ರಕಾರ, ಶ್ರೀ ಲಕ್ಷ್ಮಿ ದೇವಿಯು ವಿಷ್ಣು ಲೋಕಕ್ಕೆ ಹೋದಾಗ, ಆ ಸ್ಥಳವನ್ನು ಸ್ವಚ್ಛಗೊಳಿಸಲು ಪೊರಕೆಯನ್ನು ಬಳಸಿದರು. ಇದರಿಂದಾಗಿ ಅದನ್ನು ಸರಿಯಾಗಿ ಬಳಸುವುದರಿಂದ ಮತ್ತು ಸರಿಯಾದ ಸ್ಥಳದಲ್ಲಿ ಇಡುವುದರಿಂದ ನೀವು ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಬಹುದು ಎಂಬ ನಂಬಿಕೆಯಿದೆ. ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಇಡಲು ಮನೆಯ ನೈಋತ್ಯ ದಿಕ್ಕು ಅಂದರೆ ದಕ್ಷಿಣಪಶ್ಚಿಮ ದಿಕ್ಕು ಅತ್ಯುತ್ತಮ. ಆದಾಗ್ಯೂ ಪೊರಕೆಯನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು.

ಪೊರಕೆಯನ್ನು ಮರೆಮಾಡಿ ಇಡಬೇಕು

ನಮ್ಮಲ್ಲಿ ಹೆಚ್ಚಿನವರು ತಮ್ಮ ಸಂಪತ್ತನ್ನು ಮರೆಮಾಡಿ ಇಡುತ್ತಾರೆ, ಅದರ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಏಕೆಂದರೆ ಇದಕ್ಕೆ ಕಾರಣ ಲಕ್ಷ್ಮಿ ಹೊರಟುಹೋಗುತ್ತಾಳೆ ಎಂಬ ನಂಬಿಕೆ. ಅದರಂತೆಯೇ ಪೊರಕೆಯನ್ನು ಸಹ ಯಾರಿಗೂ ಕಾಣದಂತೆ ಮರೆಯಲ್ಲಿಡಬೇಕು ಎಂದು ಸೂಚಿಸಲಾಗುತ್ತದೆ. ಇದಲ್ಲದೆ ಪೊರಕೆಯನ್ನು ನೇರವಾಗಿ ನಿಂತಿರುವಂತೆ ಕೂಡ ಇಡಬಾರದು. ಇದನ್ನು ಯಾವಾಗಲೂ ಕೆಳಗೆ ವಿಶ್ರಾಂತಿ ಸ್ಥಿಯಲ್ಲಿಡಬೇಕು.

ಪೊರಕೆಯನ್ನು ಮೆಟ್ಟಲು, ಮಹಡಿ ಅಥವಾ ಬಾಲ್ಕನಿಯಲ್ಲಿ ಸಹ ಇಡಬಾರದು. ಇದಲ್ಲದೆ ಪೊರಕೆಯನ್ನು ಮರೆಮಾಚುವಾಗ ಅದು ಯಾರ ಕಾಲುಕೆಳಗೆಯೂ ಬರಬಾರದು ಅಥವಾ ಅದರ ಮೇಲೆ ಕಾಲು ಇಡಬಾರದು ಎಂದು ಸಹ ಖಚಿತಪಡಿಸಿಕೊಳ್ಳಿ. ಏಕೆಂದರೆ ಹಾಗೆ ಮಾಡುವುದರಿಂದ ನೀವು ಲಕ್ಷ್ಮಿ ದೇವಿಯನ್ನು ಅಗೌರವಿಸುತ್ತಿದ್ದೀರಿ ಎಂದು ನಂಬಲಾಗಿದೆ.

ರಾತ್ರಿಯಲ್ಲಿ ಪೊರಕೆಯನ್ನು ಎಲ್ಲಿ ಇಡಬೇಕು?

ಪೊರಕೆಯನ್ನು ಮನೆಯ ಹೊರಗೆ, ಮುಖ್ಯವಾಗಿ ರಾತ್ರಿಯ ಪ್ರವೇಶದ್ವಾರದಲ್ಲಿ ಇರಿಸುವುದನ್ನು ಪರಿಗಣಿಸಬಹುದು ಎಂದು ಸೂಚಿಸುತ್ತಾರೆ. ಮುಖ್ಯ ದ್ವಾರದ ಹೊರಗೆ ಪೊರಕೆಯನ್ನು ಇರಿಸುವ ಸಂಪೂರ್ಣ ಉದ್ದೇಶವೆಂದರೆ ಅದು ನಿಮ್ಮನ್ನು ನಕಾರಾತ್ಮಕ ಶಕ್ತಿಯಿಂದ ರಕ್ಷಿಸುತ್ತದೆ. ಆದಾಗ್ಯೂ, ಸೂರ್ಯೋದಯಕ್ಕೆ ಮುಂಚಿತವಾಗಿ ಪೊರಕೆಯನ್ನು ಮನೆಯೊಳಗೆ ತೆಗೆದುಕೊಂಡು ಹೋಗುವುದನ್ನು ಖಚಿತಪಡಿಸಿಕೊಳ್ಳಬೇಕು.

ನೀವು ಯಾವುದೇ ಕಾರಣಕ್ಕಾಗಿ ಹೊಸ ಪೊರಕೆ ಖರೀದಿಸಲು ಬಯಸಿದರೆ, ವಾಸ್ತು ಶಾಸ್ತ್ರವನ್ನು ಅನುಸರಿಸುವುದು ಉತ್ತಮ. ವಾಸ್ತುಶಾಸ್ತ್ರದ ಪ್ರಕಾರ, ಶನಿವಾರದಂದು ಪೊರಕೆಗಳನ್ನು ಖರೀದಿಸಲು ಅಥವಾ ಬದಲಾಯಿಸಲು ಮಂಗಳಕರವೆಂದು ಪರಿಗಣಿಸಲಾಗಿದೆ. ಇದಲ್ಲದೆ ಕೃಷ್ಣ ಪಕ್ಷದಂದು ನೀವು ಹೊಸ ಪೊರಕೆಯನ್ನು ಖರೀದಿಸುವುದು ಉತ್ತಮ, ಇದಕ್ಕೆ ವಿರುದ್ಧವಾಗಿ ಶುಕ್ಲ ಪಕ್ಷದಂದು ಅದನ್ನು ಖರೀದಿಸುವುದು ಒಳ್ಳೆಯದಲ್ಲ.

ಇದರ ಹೊರತಾಗಿ ಸಂಜೆಯ ವೇಳೆ ಪೊರಕೆಯನ್ನು ಬಳಸಬಹುದೇ ಎಂಬುದು ಸಹ ಒಂದು ಪ್ರಶ್ನೆ

ದಿನದ ಮೊದಲ ನಾಲ್ಕು ಗಂಟೆಗಳು ಮನೆಯನ್ನು ಸ್ವಚ್ಛಗೊಳಿಸಲು ಉತ್ತಮವಾಗಿರುತ್ತವೆ ಅಂದರೆ ಸೂರ್ಯೋದಯದ ಸಮಯ. ಮತ್ತೊಂದೆಡೆ, ದಿನದ ಕೊನೆಯ ನಾಲ್ಕು ಗಂಟೆಗಳಲ್ಲಿ ನೀವು ಮನೆಯನ್ನು ಸ್ವಚ್ಛಗೊಳಿಸಲು ಪೊರಕೆಯನ್ನು ಬಳಸಬಾರದು ಅಂದರೆ ಸೂರ್ಯಾಸ್ತದ ಸಮಯ.

ಸಾಮಾನ್ಯವಾಗಿ ಯಾವುದೇ ಕೆಲಸದಲ್ಲಿ ತೊಡಗಿರುವ ಜನರು ಬೆಳಿಗ್ಗೆ ಅಥವಾ ದಿನದ ಸಮಯದಲ್ಲಿ ಮನೆಯನ್ನು ಸ್ವಚ್ಛಗೊಳಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅವರು ಸಾಯಂಕಾಲ ಮನೆಗೆ ಬಂದ ನಂತರ ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಅಂತಹ ಸಂದರ್ಭದಲ್ಲಿ ಪೊರಕೆಯ ಬದಲು ನೀವು ಒದ್ದೆಯಾದ ಬಟ್ಟೆಯನ್ನು ಬಳಸುವ ಮೂಲಕ ಮನೆಯನ್ನು ಸ್ವಚ್ಛಗೊಳಿಸಬಹುದು. ಇದರ ಹೊರತಾಗಿ ಪೊರಕೆಯನ್ನು ಬಳಸಲೇ ಬೇಕೆಂಬ ಸನ್ನಿವೇಶದಲ್ಲಿ ಮನೆಯ ಕಸವನ್ನು ಮನೆಯಿಂದ ಹೊರಗೆ ಎಸೆಯಬಾರದು ಎಂದು ಸಲಹೆ ನೀಡಲಾಗುತ್ತದೆ. ಬೆಳಿಗ್ಗೆ ಅದನ್ನು ಎಸೆಯಬಹುದು.

ಇದನ್ನೂ ಓದಿ: ಪೂಜೆಗೆ ಕರ್ಪೂರ ಏಕೆ ಮುಖ್ಯ? ಕರ್ಪೂರ ಬಳಸುವುದರಿಂದ ಆಗುವ ಲಾಭಗಳು

ಇತರ ಸಲಹೆಗಳು

  • ಯಾರಾದರೂ ಮನೆಯಿಂದ ಹೊರಹೋದ ತಕ್ಷಣವೇ ಮನೆಯಲ್ಲಿ ಕಸ ಗುಡಿಸಬಾರದು. ಏಕೆಂದರೆ ಇದು ಅಪಘಾತಕ್ಕೆ ಕಾರಣವಾಗುತ್ತದೆ ಎಂದು ಪರಿಗಣಿಸಲಾಗಿದೆ.
  • ನೀವು ಮನೆಯನ್ನು ಬದಲಾಯಿಸಿದರೆ, ಹೊಸ ಮನೆಯನ್ನು ಸ್ವಚ್ಛಗೊಳಿಸಲು ಹೊಸ ಪೊರಕೆಯನ್ನು ಬಳಸಲು ಸೂಚಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಹಾಗೆ ಮಾಡುವುದು ಉತ್ತಮ ಹೆಜ್ಜೆ.
  • ಮನೆಯಲ್ಲಿ ಕಸ ಗುಡಿಸುವಾಗ ಪೊರಕೆಯಿಂದ ನಿಮ್ಮ ಕಾಲುಗಳ ಧೂಳನ್ನು ಒರಸುವುದನ್ನು ತಪ್ಪಿಸಿ.
  • ಏಕೆಂದರೆ ವಾಸ್ತು ಶಾಸ್ತ್ರದ ಪ್ರಕಾರ ಹಾಗೆ ಮಾಡುವುದರಿಂದ ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾರೆ ಎಂದು ನಂಬಲಾಗುತ್ತದೆ.
  • ವಾಸ್ತುಶಾಸ್ತ್ರದ ಪ್ರಕಾರ ದೀಪಾವಳಿ ಪರ್ವದಲ್ಲಿ ಪೊರಕೆಯನ್ನು ಖರೀದಿಸುವ ನಂಬಿಕೆಯೂ ಇದೆ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:52 pm, Sun, 27 August 23

ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್