AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India- Pakistan Tensions: ಸಂಘರ್ಷದ ಹಾದಿಯಲ್ಲಿರುವ ಭಾರತ- ಪಾಕಿಸ್ತಾನದ ಬಗ್ಗೆ ಖ್ಯಾತ ಜ್ಯೋತಿಷಿ ಭವಿಷ್ಯ ವಿಶ್ಲೇಷಣೆ

Pahalgam terror attack: ಭಾರತ- ಪಾಕಿಸ್ತಾನದ ಮಧ್ಯೆ ಸಂಬಂಧ ಹದಗೆಟ್ಟಿದ್ದು, ಇದರ ಪರಿಣಾಮ ಬಹಳ ಕೆಟ್ಟದಾಗಿ ಇರಲಿದೆ ಎಂಬುದು ಸದ್ಯದ ವಿಶ್ಲೇಷಣೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕಾಪು ಮೂಲದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಜ್ಯೋತಿಷ್ಯ ಶಾಸ್ತ್ರದ ಆಧಾರದ ಮೇಲೆ ಸದ್ಯದ ಪರಿಸ್ಥಿತಿ ಹಾಗೂ ಭವಿಷ್ಯದಲ್ಲಿ ಏನಾಗಬಹುದು ಎಂಬ ವಿಶ್ಲೇಷಣೆ ಮಾಡಿದ್ದಾರೆ.

India- Pakistan Tensions: ಸಂಘರ್ಷದ ಹಾದಿಯಲ್ಲಿರುವ ಭಾರತ- ಪಾಕಿಸ್ತಾನದ ಬಗ್ಗೆ ಖ್ಯಾತ ಜ್ಯೋತಿಷಿ ಭವಿಷ್ಯ ವಿಶ್ಲೇಷಣೆ
India Pakistan
Follow us
ಸ್ವಾತಿ ಎನ್​ಕೆ
| Updated By: ರಮೇಶ್ ಬಿ. ಜವಳಗೇರಾ

Updated on: Apr 27, 2025 | 1:57 PM

ಸದ್ಯದ ಗ್ರಹಸ್ಥಿತಿಯ ಪ್ರಕಾರ ಕರ್ಕಾಟಕ ರಾಶಿಯಲ್ಲಿ ಇರುವಂಥ ಕುಜ ಗ್ರಹವು ರವಿ ಗ್ರಹದಿಂದ ಎಂಬತ್ತು ಡಿಗ್ರಿ ಅಂತರದಲ್ಲಿದೆ. ಹೀಗೆ ಬಂದಾಗೆಲ್ಲ ಅದನ್ನು ಭೂಕಂಪ ಲಗ್ನ ಎಂಬ ಎಚ್ಚರಿಕೆಯನ್ನೂ ಇದರಿಂದಾಗಿ ಪ್ರಾಕೃತಿಕ ವಿಕೋಪ, ಉಗ್ರಗಾಮಿಗಳ ದಾಳಿ (terror attack)– ಬಾಂಬ್ ಸ್ಫೋಟ (Bomb Blast) ಇಂಥವು ಸಂಭವಿಸುವುದರ ಬಗ್ಗೆ ಸೂಚನೆ ತಿಳಿಸಲಾಗುತ್ತದೆ. ಭೂಕಂಪನಗಳ ಬಗ್ಗೆಯಂತೂ ನಿತ್ಯವೂ ಸುದ್ದಿ ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ. ಇದರ ಜೊತೆಗೆ ಮನುಷ್ಯ ಮಾತ್ರರು ಆಲೋಚಿಸುವುದಕ್ಕೂ ಹೇಸಿಗೆ ಪಡುವಂಥ ಉಗ್ರ ದಾಳಿಯೂ ಪೆಹಲ್ಗಾಂನಲ್ಲಿ ನಡೆಯಿತು. ಬೇಸರದ ಸಂಗತಿ ಏನೆಂದರೆ, ಇದು ಆರಂಭ ಬಿಂದು ಮಾತ್ರ. ಇದರ ಮುಂದುವರಿದ ಭಾಗಗಳನ್ನು ನೋಡುವಂತೆ ಆಗಲಿದೆ. ಇನ್ನು ಇವತ್ತಿನ ಸನ್ನಿವೇಶದಲ್ಲಿ ಹೇಳಬೇಕು ಅಂದರೆ, ಪಾಕಿಸ್ತಾನದ ವಿರುದ್ಧ ಈ ಬಾರಿ ಭಾರತ ಕೈಗೊಳ್ಳುವ ಕ್ರಮ ಅಂದಾಜಿಗೆ ಸಿಕ್ಕುವಂಥದ್ದಾಗಿ ಇರುವುದಿಲ್ಲ. ಅದಕ್ಕೆ ಕಾರಣ ಏನು ಅಂದರೆ, ಭಾರತ ಸ್ವಾತಂತ್ರ್ಯ ಪಡೆದ ಕಾಲದಲ್ಲಿ ಶನಿ ಗ್ರಹ ಕರ್ಕಾಟಕ ರಾಶಿಯಲ್ಲಿ ಇತ್ತು. ಅಲ್ಲಿಂದ ಇನ್ನೂರಾ ನಲವತ್ತು ಡಿಗ್ರಿ ಬಿಂದುವಿಗೆ ಶನಿಯು ಸ್ಥಿತನಾದಾಗ ಈಗ ಇರುವ ಪರಿಸ್ಥಿತಿಗಿಂತ ಇನ್ನೂ ಹೆಚ್ಚು ಆತಂಕಕಾರಿಯಾದ ಸನ್ನಿವೇಶ ಎದುರಾಗುತ್ತದೆ. ಶನಿ ಧರ್ಮ- ಕರ್ಮದ ಆಧಾರದಲ್ಲಿ ಫಲ ನೀಡುವ ಗ್ರಹ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಈ ಸಲ ಮತ್ತೆ ಶನಿಯು ಮೀನರಾಶಿಯಲ್ಲಿ ಜುಲೈ ನಂತರ ವಕ್ರಗತಿಗೆ ಬರುತ್ತಾನೆ. ಇದು ಇನ್ನೂ ಅಪಾಯದ ಸೂಚನೆಯೇ ಆಗುತ್ತದೆ.

ನೆನಪಿರಬೇಕಾದ ಮತ್ತೊಂದು ವಿಚಾರ ಏನೆಂದರೆ, ಪಾಪಗ್ರಹರಾದ ಕುಜ- ಶನಿಗಳು ವಕ್ರಗತಿಗೆ ಬಂದರೆ ‘ವಕ್ರಗ್ರಹೋ ಮಹಾವೀರ್ಯಃ’ ಎಂಬ ಪ್ರಮಾಣ ಇದೆ. ಅದರಂತೆ ಆ ಎರಡೂ ಗ್ರಹಗಳು ಮತ್ತೂ ಬಲಿಷ್ಠ ಆಗುತ್ತವೆ ಹಾಗೂ ಅವುಗಳ ಫಲಗಳು ಸಹ ತೀಕ್ಷ್ಣವಾಗುತ್ತವೆ.

ಇದನ್ನೂ ಓದಿ: ಉಗ್ರ ದಾಳಿಯಲ್ಲಿ ಮೃತಪಟ್ಟವರಿಗೆ ನ್ಯಾಯ ಸಿಗುತ್ತೆ, ಉಗ್ರರಿಗೆ ಕಠಿಣ ಶಿಕ್ಷೆ ಕೊಟ್ಟೇ ಕೊಡುತ್ತೇವೆ: ಮೋದಿ

ಕರ್ಕಾಟಕ ಶನಿಯ ಫಲ

ಅದೇ ರೀತಿ ಪಾಕಿಸ್ತಾನ ಸಹ ಪ್ರತ್ಯೇಕವಾದದ್ದು ಭಾರತ ಸ್ವಾತಂತ್ರ್ಯವಾದ ಸಮಯದಲ್ಲಿಯೇ. ಅಂದರೆ ಅದೇ ಕರ್ಕಾಟಕ ಶನಿಯ ಫಲ ಪಡೆಯುತ್ತದೆ. ಸದ್ಯಕ್ಕೆ ಮೀನ ರಾಶಿಯಲ್ಲಿ ಶನಿ ಸಂಚಾರ ನಡೆಯುತ್ತಿದೆ. ಶನಿಯ ಜೊತೆಗೆ ಅವನ ರೀತಿಯಲ್ಲಿಯೇ ಫಲ ನೀಡುವಂಥ ರಾಹು ಗ್ರಹ ಇದೆ. ಕಾಲ ಪುರುಷನ ಹನ್ನೆರಡನೇ ಸ್ಥಾನದಲ್ಲಿ ಎರಡು ಪಾಪ ಗ್ರಹಗಳು. ಇನ್ನು ಅಲ್ಲಿಯೇ ಇರುವಂಥ ಬುಧ ಗ್ರಹದ ಸ್ವಭಾವ ಏನೆಂದರೆ, ಪಾಪ ಗ್ರಹದ ಒಟ್ಟಿಗೆ ಇದ್ದರೆ ಅವನೂ ಪಾಪಿ ಆಗುತ್ತಾನೆ. ಏಪ್ರಿಲ್ ಇಪ್ಪತ್ತೇಳನೇ ತಾರೀಕು ಅಮಾವಾಸ್ಯೆಯಂದು ಚಂದ್ರ ತನ್ನ ಸಂಪೂರ್ಣ ಬಲವನ್ನು ಕಳೆದುಕೊಂಡಿರುತ್ತಾನೆ, ಮೇಷ ರಾಶಿಯಲ್ಲಿ ಇರುತ್ತಾನೆ. ಆ ಸಂದರ್ಭದಲ್ಲಿ ಕರ್ಕಾಟಕದಲ್ಲಿಯೇ ನೀಚ ಸ್ಥಿತಿ ಕುಜ ಗ್ರಹ ಇರುತ್ತದೆ. ಈ ಗ್ರಹ ಸ್ಥಿತಿ ಪರಿವರ್ತನಾ ಯೋಗವಾಗುತ್ತದೆ. ಅಂದರೆ ಮೇಷ ರಾಶಿಯ ಅಧಿಪತಿಯಾದ ಕುಜ ಗ್ರಹ ಕರ್ಕಾಟಕದಲ್ಲಿ ಹಾಗೂ ಕರ್ಕಾಟಕ ರಾಶಿಯ ಅಧಿಪತಿಯಾದ ಚಂದ್ರ ಮೇಷ ರಾಶಿಯಲ್ಲಿ ಇರುತ್ತದೆ. ಆದರೆ ಇದು ಶುಭ ಪರಿವರ್ತನೆ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ. ಬಲವೇ ಇಲ್ಲದ ಚಂದ್ರನು ಪಾಪದ ಫಲವನ್ನೇ ನೀಡುತ್ತದೆ.

ಇದನ್ನೂ ಓದಿ
Image
ಝೇಲಂ ನೀರು ಬಿಡುಗಡೆಯಿಂದ ಪಿಒಕೆಯಲ್ಲಿ ಪ್ರವಾಹ ಪರಿಸ್ಥಿತಿ, ಪಾಕ್​ಗೆ ಭೀತಿ
Image
ಕೇವಲ ನೀರಿಗಾಗಿ ಅಲ್ಲ, ಔಷಧಿಗಾಗಿಯೂ ಹಾತೊರೆಯಲಿದೆ ಪಾಕಿಸ್ತಾನ
Image
ಭಾರತದಿಂದ ಸಿಂಧೂ ನದಿ ನೀರು ಒಪ್ಪಂದ ಸ್ಥಗಿತ, ಪಾಕಿಸ್ತಾನಕ್ಕಾಗುವ ನಷ್ಟವೇನು?
Image
ಪಾಕಿಸ್ತಾನಕ್ಕೆ ಭಾರತದ ಶಾಕ್; ಏನಿದು ಸಿಂಧೂ ಜಲ ಒಪ್ಪಂದ?

ಈಗಿನ ಸ್ಥಿತಿ ಸೆಪ್ಟೆಂಬರ್ ತಿಂಗಳ ತನಕ ಬಹಳ ನಿರ್ಣಾಯಕವಾಗಿ ಆತಂಕ ತರುವಂತೆಯೇ ಮುಂದುವರಿಯುತ್ತದೆ. ಅದರಲ್ಲೂ ಕುಜ ಗ್ರಹವು ಕರ್ಕಾಟಕದಿಂದ ಸಿಂಹ ರಾಶಿಗೆ ಜೂನ್ ಆರನೇ ತಾರೀಕಿನಂದು ಪ್ರವೇಶಿಸಿ, ಜುಲೈ ಇಪ್ಪತ್ತೇಳನೇ ತಾರೀಕಿನ ತನಕ ಕೇತು ಗ್ರಹದ ಜೊತೆಗೆ ಇರುವಾಗ ಸಂಕಷ್ಟದ ಹಾಗೂ ಸಂಘರ್ಷದ ಸಮಯ ಆಗಿರುತ್ತದೆ. ಇಗೋ ಯುದ್ಧ ಅಗೋ ಯುದ್ಧ ಎಂದು ಭಾರತ ಹಾಗೂ ಪಾಕಿಸ್ತಾನದ ಮಧ್ಯೆಯ ಪರಿಸ್ಥಿತಿಯನ್ನು ನೋಡುವಂತಾಗುತ್ತದೆ. ಈ ಬಾರಿ ಹಿಂದೆಂದೂ ಕಂಡಿರದಂಥ ಕೆಳ ಮಟ್ಟಕ್ಕೆ ಪಾಕಿಸ್ತಾನ ಇಳಿಯಲಿದೆ. “ನನ್ನದು ಒಂದು ಕಣ್ಣು ಹೋದರೂ ಪರವಾಗಿಲ್ಲ, ಶತ್ರುವಿನದು ಎರಡು ಕಣ್ಣು ಹೋಗಬೇಕು” ಎಂಬ ಮನಸ್ಥಿತಿಯದು. ಈ ಫಲವನ್ನು ಪಾಕಿಸ್ತಾನ ಉಣ್ಣುತ್ತದೆಯಾದರೂ ಭಾರತಕ್ಕೂ ಘಾಸಿ ಮಾಡುವಂತೆ ಗ್ರಹ ಸ್ಥಿತಿಗಳು ಗೋಚರಿಸುತ್ತಿವೆ. ಭಾರತ- ಪಾಕಿಸ್ತಾನ ಎರಡೂ ದೇಶಗಳ ಪಾಲಿನ ಗ್ರಹ ಸ್ಥಿತಿ ಒಂದೇ ಥರ ಇರುವಂಥದ್ದು. ನೋವು ಅಂತ ಬಂದಾಗಲೂ ಹೋಲಿಕೆ ಕಂಡಬರುವುದು ಸಹಜ.

ತೀರಾ ಕೆಳಮಟ್ಟಕ್ಕೆ ಇಳಿಯಲಿದೆ ಪಾಕ್

ಭಾರತದ ಮೇಲಿನ ದ್ವೇಷದಿಂದಾಗಿ ಪಾಕಿಸ್ತಾನವು ತುಂಬ ಕೆಳ ಮಟ್ಟಕ್ಕೆ ಇಳಿದು, ಜಗತ್ತಿನ ಎದುರು ಹಾಗೂ ತನ್ನದೇ ದೇಶದ ಜನರ ಎದುರು ಅಲ್ಲಿನ ಅಧಿಕಾರಸ್ಥರು “ಛೀ ಥೂ” ಎಂದೆನಿಸಿಕೊಳ್ಳುವ ಮಟ್ಟಕ್ಕೆ ಮುಟ್ಟುತ್ತಾರೆ. ಈ ತೀರಾ ಕೆಳ ಮಟ್ಟಕ್ಕೆ ಇಳಿಯುವುದು ಅಂತ ಹೇಳುವುದಕ್ಕೆ ಕಾರಣವಾಗಿರುವುದು ಕುಜ- ಕೇತು ಸಂಯೋಗ. ಇನ್ನು ಇದೇ ವೇಳೆ ಭಾರತದಲ್ಲಿನ ಕೇಂದ್ರ ಸರ್ಕಾರದಿಂದ ಏಕರೂಪ ನಾಗರಿಕ ಸಂಹಿತೆಯೂ ಸೇರಿದಂತೆ ಇತರ ಪ್ರಬಲ ಕಾಯ್ದೆ- ಕಾನೂನುಗಳನ್ನು ತರುವುದಕ್ಕೆ ಮುಂದಾಗುತ್ತಾರೆ. ಇದರಿಂದಾಗಿ ದೇಶದೊಳಗೆ ಕೂಡ ಸಂಘರ್ಷಗಳು, ಒಂದು ಜನಾಂಗದವರ ಆಕ್ರೋಶ, ಆಕ್ರಮಣಕಾರಿ ನಡವಳಿಕೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ನಾಯಕತ್ವದ ಸ್ಥಾನದಲ್ಲಿ ಇರುವವರ ನಿರ್ಧಾರ- ಆಲೋಚನೆ- ನಡವಳಿಕೆ ಬಗ್ಗೆಯೇ ಅಪಸ್ವರ ಏಳುವ ಸೂಚನೆಗಳು ದಟ್ಟವಾಗಿವೆ. ಆ ನಂತರದಲ್ಲಿ ಆಗುವ ಬೆಳವಣಿಗೆಗಳಿಂದಾಗಿ ನಾಯಕತ್ವ ಸ್ಥಾನದಲ್ಲಿ ಇರುವವರ ಆಲೋಚನೆ, ನಡವಳಿಕೆ ಹಾಗೂ ತೆಗೆದುಕೊಳ್ಳುವ ನಿರ್ಧಾರಗಳು ಹೊಸ ಭರವಸೆ ಹಾಗೂ ಬೆಳಕನ್ನು ನೀಡುತ್ತದೆ.

ಪಾಕಿಸ್ತಾನದಲ್ಲಿನ ಜನರ ಬದುಕು ಈ ಹಿಂದೆಂದೂ ಕಾಣದಷ್ಟು ದುಸ್ತರವಾಗಲಿದೆ. ಬೆಲೆ ಏರಿಕೆ ಸೇರಿದಂತೆ ಅದೇ ದೇಶದಲ್ಲಿನ ಆಂತರಿಕ ಬಿಕ್ಕಟ್ಟು ಸಂಪೂರ್ಣವಾಗಿ ಹೈರಾಣ ಮಾಡಲಿದೆ. ಅಲ್ಲಿ ಜನರು ಬೀದಿಗೆ ಇಳಿದು ಹೋರಾಟ ಮಾಡಲಿದ್ದಾರೆ. ನಾಯಕತ್ವ ವಹಿಸಿದವರು ದೇಶವನ್ನೇ ಬಿಟ್ಟು ಹೋಗುವ ಸಾಧ್ಯತೆಗಳು ಹೆಚ್ಚಿವೆ. ಅಲ್ಲಿ ಮತ್ತೆ ಸೇನಾಡಳಿತ ತರಬಹುದು ಅಥವಾ ಆ ಪ್ರಯತ್ನದಲ್ಲಿ ಆಗುವಂಥ ಬೆಳವಣಿಗೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ- ಮರ್ಯಾದೆ ಕಳೆಯುವಂತೆ ಮಾಡುತ್ತದೆ. ಕುಜ- ಕೇತು ಸಿಂಹ ರಾಶಿಯಲ್ಲಿ ಇರುವುದು, ಅದರ ಮೇಲೆ ಕುಂಭ ರಾಶಿಯಲ್ಲಿ ಇರುವಂಥ ರಾಹು ಗ್ರಹದ ದೃಷ್ಟಿ, ಆ ನಂತರ ಕನ್ಯಾ ರಾಶಿಯಲ್ಲಿ ಕುಜ ಗ್ರಹ ಪ್ರವೇಶ ಹಾಗೂ ಮೀನ ರಾಶಿಯಲ್ಲಿ ಇರುವಂಥ ಶನಿ ಗ್ರಹದ ವೀಕ್ಷಣೆ ಇವೆಲ್ಲ ಸೇರಿ ಹಲವು ಕಡೆಗಳಲ್ಲಿ ಭಯೋತ್ಪಾದಕರ ದಾಳಿಗಳು ಸಹ ಆಗಲಿವೆ.

ವಿಶ್ವಾಸದ ಧ್ವನಿಯಲ್ಲಿ ಒಡಕು

ಈ ಅವಧಿಯಲ್ಲಿ ಭಾರತದಲ್ಲಿ ಸಹ ನೆಮ್ಮದಿ ಕದಡಲಿದೆ. ಜನರ ವಿಶ್ವಾಸದ ಧ್ವನಿಯಲ್ಲಿ ಒಡಕು ಕಾಣುವಂತೆ ಆಗಬಹುದು. ತಮ್ಮ ಗಟ್ಟಿ ನಂಬಿಕೆ ಹಾಗೂ ಗಟ್ಟಿ ಧ್ವನಿ ಯಾವುದಿತ್ತೋ ಅದರ ಬಗ್ಗೆಯೇ ಅಭಿಪ್ರಾಯ ಭೇದ ಕಾಣಿಸಿಕೊಳ್ಳಲಿದೆ. ಜನಾಂಗೀಯ ಸಂಘರ್ಷ ಕಾಣಬೇಕಾಗುತ್ತದೆ. ಇದು ಅಮೆರಿಕ, ಭಾರತ ಸೇರಿ ಯುರೋಪ್ ನಲ್ಲಿಯೂ ಕಾಣಿಸಿಕೊಳ್ಳಲಿದೆ. ಏಕ ಕಾಲದಲ್ಲಿ ಹಲವು ಕಡೆ ಯುದ್ಧವನ್ನು ಕಾಣುವಂತಾಗಲಿದೆ. ಇನ್ನು ಭಾರತದ ಒಳಗೆ ಕೂಡ ಜನರ ಸಿಟ್ಟು ಒಂದು ಕಡೆಗೆ ತಿರುಗಲಿದೆ. ಈ ವರ್ಷದ ಗ್ರಹ ಸ್ಥಿತಿಯ ಪರಿಣಾಮವು ಮುಂದಿನ ಐದು ವರ್ಷಗಳ ನಂತರದ ಬೆಳವಣಿಗೆಗಳಿಗೆ ಸೂಚಕ ಆಗಲಿದೆ.

ವೃಷಭ ರಾಶಿಯಲ್ಲಿ ಶನಿ ಸಂಚಾರ ಮಾಡುವ ವೇಳೆಯಲ್ಲಿ ಶಕಟಭೇದ ಆಗುತ್ತದೆ. ಆ ಸಂಚಾರದ ಫಲ ಏನು ಎಂಬುದನ್ನು ಈ ಹಿಂದೆಯೂ ಬೇರೆ ಬೇರೆ ಸಂದರ್ಭದಲ್ಲಿ ಪ್ರಸ್ತಾವ ಮಾಡಿದ್ದೇನೆ. ಈಗ ಇನ್ನೂ ಒಮ್ಮೆ ಹೇಳುತ್ತಿದ್ದೇನೆ: ಜನಾಂಗೀಯ ಸಂಘರ್ಷವು ನಿರ್ಣಾಯಕ ಹಂತವನ್ನು ತಲುಪುತ್ತದೆ. ಸಮಸ್ಯೆಗಳಿಗೆ ಮುಕ್ತಿಯ ಕಾಲ ಅದಾಗಿರಲಿದೆ. ಏನೇನಾಗಬಹುದು, ಹೇಗೆ ಆಗಬಹುದು ಎಂಬುದನ್ನು ಆ ಪರಮಾತ್ಮನ ನಿರ್ಧಾರಕ್ಕೆ ಬಿಟ್ಟು ಬಿಡೋಣ. ಪಕ್ಕದಲ್ಲಿರುವ ಪಾಕಿಸ್ತಾನದ ಸ್ಥಿತಿ ಏನಾದೀತು ಎಂಬುದನ್ನು ಎಲ್ಲರೂ ಕಾಣುವಂತಾಗುತ್ತದೆ. ಜೊತೆಗೆ ಭಾರತದ ಒಳಗಿನ ಆಂತರಿಕ ಸಂಘರ್ಷ ಹಾಗೂ ಕೆಲವು ಬಿಕ್ಕಟ್ಟಿನ ಸನ್ನಿವೇಶ ಎದುರಿಸಬೇಕಾಗುತ್ತದೆ. ಆ ಬಗ್ಗೆ ಚಿಂತಿಸುತ್ತಾ ಕೂತರೆ ಉಪಯೋಗವಿಲ್ಲ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ

(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಲೇಖಕರದ್ದಾಗಿದೆ. ಅದನ್ನು ಜ್ಯೋತಿಷ್ಯದ ಆಧಾರದಲ್ಲಿ ಹಂಚಿಕೊಂಡಿದ್ದಾರೆ. ಈ ಮೇಲ್ಕಂಡ ಯಾವುದೇ ಅಭಿಪ್ರಾಯವನ್ನು ಟಿವಿ9 ಕನ್ನಡ ವೆಬ್ ಸೈಟ್ ಆಗಲಿ ಅಥವಾ ಅದರ ಯಾವುದೇ ಸೋದರ ಸಂಸ್ಥೆಗಳಾಗಲೀ ಅನುಮೋದಿಸುವುದಿಲ್ಲ.)

ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್​ಎ
ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್​ಎ
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ
ಸಂಗೀತ ಕ್ಷೇತ್ರದಲ್ಲಿ ಅರ್ಜುನ್ ಜನ್ಯ ಮಗಳ ಸಾಧನೆ; ತಂದೆಯಾಗಿ ಹೆಮ್ಮೆಯ ಕ್ಷಣ
ಸಂಗೀತ ಕ್ಷೇತ್ರದಲ್ಲಿ ಅರ್ಜುನ್ ಜನ್ಯ ಮಗಳ ಸಾಧನೆ; ತಂದೆಯಾಗಿ ಹೆಮ್ಮೆಯ ಕ್ಷಣ
ರಾತ್ರಿ ಸುರಿದ ಮಳೆಯಿಂದ ನಡುಗಡ್ಡೆಯಾಗಿ ಮಾರ್ಪಟ್ಟಿರುವ ಸಾಯಿ ಲೇಔಟ್
ರಾತ್ರಿ ಸುರಿದ ಮಳೆಯಿಂದ ನಡುಗಡ್ಡೆಯಾಗಿ ಮಾರ್ಪಟ್ಟಿರುವ ಸಾಯಿ ಲೇಔಟ್
ನಗರದ ಲ್ಯಾಂಡ್ ಮಾರ್ಕ್​ ಎನಿಸಿಕೊಂಡಿರುವ ಸ್ಟೇಡಿಯಂ ಸ್ಥಿತಿ ಹೇಗಿದೆ ನೋಡಿ
ನಗರದ ಲ್ಯಾಂಡ್ ಮಾರ್ಕ್​ ಎನಿಸಿಕೊಂಡಿರುವ ಸ್ಟೇಡಿಯಂ ಸ್ಥಿತಿ ಹೇಗಿದೆ ನೋಡಿ
ಬದುಕಿರುವವರು ಸತ್ತಂತೆ ಕನಸಿನಲ್ಲಿ ಬಂದರೆ ಏನರ್ಥ? ವಿಡಿಯೋ ನೋಡಿ
ಬದುಕಿರುವವರು ಸತ್ತಂತೆ ಕನಸಿನಲ್ಲಿ ಬಂದರೆ ಏನರ್ಥ? ವಿಡಿಯೋ ನೋಡಿ