AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಂಭ ರಾಶಿಯಲ್ಲಿ ರಾಹುವಿನ ಉಲ್ಟಾ ನಡೆ!: ಈ 3 ರಾಶಿಗಳಿಗೆ 18 ವರ್ಷಗಳ ಕಾಲ ಲಾಟರಿ ಹೊಡೆಯೋದು ಗ್ಯಾರಂಟಿ

ಕುಂಭ ರಾಶಿಯಲ್ಲಿ ರಾಹುವಿನ ಬಲವಾದ ಸ್ಥಾನವು ಶುಭ ಹಾಗೂ ಮಿಶ್ರ ಫಲಗಳನ್ನು ನೀಡುತ್ತದೆ. ಶನಿ, ಸೂರ್ಯ, ಗುರು, ಶುಕ್ರರ ಪ್ರಭಾವದಿಂದ ರಾಹು ದಶೆಯು 12 ರಾಶಿಗಳ ಮೇಲೆ ವಿಭಿನ್ನ ಪರಿಣಾಮ ಬೀರುತ್ತದೆ. ಗುರುವಿನ ನವಾಂಶವು ನಕಾರಾತ್ಮಕತೆಯನ್ನು ತಗ್ಗಿಸಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಮೇಷ, ಮಿಥುನ, ಧನು ರಾಶಿಗಳಿಗೆ ಉತ್ತಮ ಯೋಗವಿದೆ. ಉತ್ತಮ ಫಲಗಳಿಗಾಗಿ ಗುರು ಮತ್ತು ದುರ್ಗಾ ಆರಾಧನೆ ಶ್ರೇಷ್ಠ.

ಕುಂಭ ರಾಶಿಯಲ್ಲಿ ರಾಹುವಿನ ಉಲ್ಟಾ ನಡೆ!: ಈ 3 ರಾಶಿಗಳಿಗೆ 18 ವರ್ಷಗಳ ಕಾಲ ಲಾಟರಿ ಹೊಡೆಯೋದು ಗ್ಯಾರಂಟಿ
ರಾಹು ಸಂಚಾರ ಶುಭ ಫಲ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:May 25, 2026 | 3:59 PM

Share

ಕುಂಭ ರಾಶಿಯು ರಾಹುವಿಗೆ ಅತ್ಯಂತ ಬಲವಾದ ಹಾಗೂ ಸ್ವಕ್ಷೇತ್ರಕ್ಕೆ ಸಮಾನವಾದ ರಾಶಿಯೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ. ಇದರೊಂದಿಗೆ ರಾಹುವು ಶನಿಯ ದ್ರೇಕ್ಕಾಣ ಮತ್ತು ತ್ರಿಂಶಾಂಶ, ರವಿಯ ಹೋರೆ, ಗುರುವಿನ ನವಾಂಶ ಹಾಗೂ ಶುಕ್ರನ ದ್ವಾದಶಾಂಶದಲ್ಲಿದ್ದು ಮಿಶ್ರ ಫಲವನ್ನು ನೀಡುತ್ತಾನೆ.

​ರಾಹುವಿನ ಸಂಚಾರ :

​ದ್ವಾದಶ ರಾಶಿಗಳ ಫಲವನ್ನು ತಿಳಿಯುವ ಮುನ್ನ ರಾಹುವಿನ ಈ ಷಡ್ವರ್ಗ ಸ್ಥಿತಿಯ ಆಂತರಿಕ ಬಲವನ್ನು ಅರ್ಥಮಾಡಿಕೊಳ್ಳಬೇಕು.

​ಕುಂಭ ರಾಶಿ :

ರಾಹು ಶನಿಯ ಮನೆಯಲ್ಲಿದ್ದು, ಶನಿಯದೇ ದ್ರೇಕ್ಕಾಣ ಹಾಗೂ ತ್ರಿಂಶಾಂಶದಲ್ಲಿ ಇರುವುದರಿಂದ ಅತ್ಯಂತ ತೀಕ್ಷ್ಣವಾದ, ಗಂಭೀರವಾದ ಹಾಗೂ ಕರ್ಮಫಲಕ್ಕೆ ತಕ್ಕಂತೆ ಫಲ ನೀಡುವ ಶಕ್ತಿಯನ್ನು ಪಡೆಯುತ್ತಾನೆ. ಇದು ತಾಂತ್ರಿಕ ಜ್ಞಾನ, ಸಂಶೋಧನೆ ಮತ್ತು ಆಳವಾದ ಚಿಂತನೆಗೆ ಉತ್ತಮ.

ರಾಹು ಸೂರ್ಯನ ಹೋರೆಯಲ್ಲಿದ್ದಾಗ ಭೌತಿಕ ಸುಖ, ಅಧಿಕಾರ ಲಾಲಸೆ ಮತ್ತು ಸಮಾಜದಲ್ಲಿ ಗುರುತಿಸಿಕೊಳ್ಳುವ ಹಠವನ್ನು ಹೆಚ್ಚಿಸುತ್ತಾನೆ. ನವಾಂಶದಲ್ಲಿ ಗುರುವಿನ ಬಲವಿರುವುದರಿಂದ ರಾಹುವಿನ ತಾಮಸಿಕ ಗುಣಗಳು ಕಡಿಮೆಯಾಗಿ, ಧಾರ್ಮಿಕ ಪ್ರವೃತ್ತಿ, ನ್ಯಾಯಯುತ ಆಲೋಚನೆ ಮತ್ತು ಉನ್ನತ ಜ್ಞಾನ ಲಭಿಸುತ್ತದೆ. ಶುಕ್ರನ ಸಂಬಂಧದಿಂದಾಗಿ ಕಲಾತ್ಮಕತೆ, ಲೌಕಿಕವಾದ ಸುಖ-ಭೋಗಗಳ ಮೇಲಿನ ಆಕರ್ಷಣೆ ಹೆಚ್ಚುತ್ತದೆ.

​ರಾಹು ದಶೆಯಲ್ಲಿ 12 ರಾಶಿಗಳು

​ರಾಹು ದಶೆಯು ಒಟ್ಟು ೧೮ ವರ್ಷಗಳ ಕಾಲ ಇರುತ್ತದೆ. ಪ್ರಸ್ತುತ ರಾಹುವು ಶುಭ ಗ್ರಹಗಳಾದ ಗುರು ಮತ್ತು ಶುಕ್ರ ಹಾಗೂ ಕ್ರೂರ ಗ್ರಹಗಳಾದ ಶನಿ ಮತ್ತು ಸೂರ್ಯನ ಮಿಶ್ರ ಬಲವನ್ನು ಹೊಂದಿರುವುದರಿಂದ, ರಾಹು ದಶೆಯ ಫಲಗಳು ಅತ್ಯಂತ ರೋಚಕವಾಗಿರಲಿದೆ.

ರಾಹು ದಶೆಯ ಪ್ರಮುಖ ಫಲಗಳು

ಮೇಷ, ಮಿಥುನ, ಧನು ಅತ್ಯುತ್ತಮ ಫಲ:

ಈ ರಾಶಿಗಳಿಗೆ ರಾಹು ದಶೆಯು ಅದೃಷ್ಟವನ್ನು ತರುತ್ತದೆ. ಆಕಸ್ಮಿಕ ಧನಲಾಭ, ಉನ್ನತ ಪದವಿ, ಸಮಾಜದಲ್ಲಿ ಗೌರವ ಹಾಗೂ ವಿದೇಶ ಪ್ರಯಾಣದ ಯೋಗಗಳು ಈ ದಶೆಯಲ್ಲಿ ಸಿದ್ಧಿಸಲಿವೆ. ಗುರುವಿನ ನವಾಂಶ ಬಲವು ಇವರನ್ನು ತಪ್ಪು ಹಾದಿಗೆ ಹೋಗದಂತೆ ತಡೆಯುತ್ತದೆ.

ವೃಷಭ, ಕನ್ಯಾ, ಮಕರ ವೃತ್ತಿ ಮತ್ತು ಆರ್ಥಿಕ ಯಶಸ್ಸು: ಶನಿಯ ವರ್ಗಗಳ ಪ್ರಭಾವದಿಂದಾಗಿ ಈ ರಾಶಿಗಳವರಿಗೆ ಕಠಿಣ ಪರಿಶ್ರಮದ ಅನಂತರ ಅಪಾರ ಯಶಸ್ಸು ಸಿಗುತ್ತದೆ. ವ್ಯವಹಾರದಲ್ಲಿ ವಿಸ್ತರಣೆ, ರಾಜಕೀಯ ಅಥವಾ ತಾಂತ್ರಿಕ ಕ್ಷೇತ್ರದಲ್ಲಿ ಉನ್ನತಿ ಲಭಿಸಲಿದೆ. ಆದರೆ ಮಾನಸಿಕ ಒತ್ತಡ ಸಾಮಾನ್ಯ.

ಇದನ್ನೂ ಓದಿ: ಉದ್ಯೋಗ ಭವಿಷ್ಯ: ಈ ವಾರ ಬಾಸ್‌ನಿಂದ ಮೆಚ್ಚುಗೆಯೋ ಅಥವಾ ಕೆಲಸದಲ್ಲಿ ಕಿರಿಕಿರಿಯೋ?: ಕೆರಿಯರ್ ಗ್ರಹಗತಿಯಲ್ಲಿ ಮಹತ್ವದ ಬದಲಾವಣೆ

ಸಿಂಹ, ತುಲಾ, ಕುಂಭ ಮಿಶ್ರ ಫಲ :

ಶುಕ್ರನ ದ್ವಾದಶಾಂಶ ಇರುವುದರಿಂದ ಈ ರಾಶಿಗಳಿಗೆ ಭೌತಿಕ ಸುಖ, ಪ್ರೇಮ ಸಂಬಂಧ ಹಾಗೂ ಕಲಾತ್ಮಕ ಯಶಸ್ಸು ಸಿಗುತ್ತದೆ. ಆದರೆ ಸೂರ್ಯ ಮತ್ತು ಶನಿಯ ವೈರತ್ವದ ಪ್ರಭಾವದಿಂದಾಗಿ ದಾಂಪತ್ಯದಲ್ಲಿ ಅಥವಾ ಪಾಲುದಾರಿಕೆಯಲ್ಲಿ ಏರಿಳಿತಗಳು ಕಾಣಿಸಿಕೊಳ್ಳಬಹುದು.

ಕರ್ಕಾಟಕ, ವೃಶ್ಚಿಕ, ಮೀನ :

ಈ ರಾಶಿಗಳಿಗೆ ರಾಹು ದಶೆಯು ಆರಂಭದಲ್ಲಿ ಸ್ವಲ್ಪ ಸಂಘರ್ಷಮಯವಾಗಿರಬಹುದು. ಆದರೆ ಗುರುವಿನ ನವಾಂಶದ ಬಲ ಇರುವುದರಿಂದ, ಇವರು ಜ್ಯೋತಿಷ್ಯ, ಮಂತ್ರ-ತಂತ್ರ, ಸಂಶೋಧನೆ ಅಥವಾ ಆಧ್ಯಾತ್ಮಿಕ ರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಲಿದ್ದಾರೆ. ಆರೋಗ್ಯ ಮತ್ತು ವೆಚ್ಚಗಳ ಮೇಲೆ ನಿಯಂತ್ರಣ ಅಗತ್ಯ.

​ಈ ಸ್ಥಿತಿಯಯಲ್ಲಿ ರಾಹುವು ಭೌತಿಕವಾಗಿ ಯಶಸ್ಸನ್ನು ನೀಡಿದರೂ, ಆಂತರಿಕವಾಗಿ ಶನಿ ಮತ್ತು ರವಿಯ ಪ್ರಭಾವದಿಂದಾಗಿ ಸಂಘರ್ಷವನ್ನು ತಂದೊಡ್ಡಬಹುದು. ಆದರೆ ಗುರುವಿನ ನವಾಂಶ ಬಲವು ಇಡೀ ಜಾತಕಕ್ಕೆ ಒಂದು ರಕ್ಷಣಾ ಕವಚದಂತೆ ಕೆಲಸ ಮಾಡುವುದರಿಂದ, ರಾಹು ದಶೆಯಲ್ಲಿ ಅಂತಿಮವಾಗಿ ಶುಭ ಫಲಗಳೇ ಹೆಚ್ಚಾಗುತ್ತವೆ.

​ರಾಹು ದಶೆಯ ಶುಭ ಫಲಗಳನ್ನು ಹೆಚ್ಚಿಸಿಕೊಳ್ಳಲು ದೇವಗುರು ಬೃಹಸ್ಪತಿಯ ಮತ್ತು ದುರ್ಗಾ ದೇವಿಯ ಆರಾಧನೆ ಮಾಡುವುದು ಹಾಗೂ ಶನಿವಾರದಂದು ದೀಪಾರಾಧನೆ ಮಾಡುವುದು ಶ್ರೇಯಸ್ಕರ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:59 pm, Mon, 25 May 26

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ಬ್ಯಾಂಕ್ ಆಫ್ ಬರೋಡಾದಲ್ಲಿ 8.70 ಕೋಟಿ ರೂ. ದರೋಡೆ
ಬ್ಯಾಂಕ್ ಆಫ್ ಬರೋಡಾದಲ್ಲಿ 8.70 ಕೋಟಿ ರೂ. ದರೋಡೆ
ಸಿಎಂಗೆ ಹೈಕಮಾಂಡ್​ ದಿಲ್ಲಿ ಬುಲಾವ್ ಬಗ್ಗೆ ಜಾರಕಿಹೊಳಿ ಶಾಕಿಂಗ್ ಮಾತು
ಸಿಎಂಗೆ ಹೈಕಮಾಂಡ್​ ದಿಲ್ಲಿ ಬುಲಾವ್ ಬಗ್ಗೆ ಜಾರಕಿಹೊಳಿ ಶಾಕಿಂಗ್ ಮಾತು
ಮಂಡ್ಯ: ಜಿಂಕೆಯನ್ನು ನುಂಗಿದ್ದ 10 ಅಡಿ ಉದ್ದದ ಬೃಹತ್ ಹೆಬ್ಬಾವು ಸೆರೆ!
ಮಂಡ್ಯ: ಜಿಂಕೆಯನ್ನು ನುಂಗಿದ್ದ 10 ಅಡಿ ಉದ್ದದ ಬೃಹತ್ ಹೆಬ್ಬಾವು ಸೆರೆ!
ಗೃಹಲಕ್ಷ್ಮಿ ಯೋಜನೆ ಹಣ ದುರ್ಬಳಕೆ ಆರೋಪ: ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆ
ಗೃಹಲಕ್ಷ್ಮಿ ಯೋಜನೆ ಹಣ ದುರ್ಬಳಕೆ ಆರೋಪ: ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆ
ಇಂಧನ ಬೆಲೆ ಏರಿಕೆ: ಕೇಂದ್ರ, ರಾಜ್ಯಕ್ಕೆಷ್ಟು ಪಾಲೆಂಬ ಮಾಹಿತಿ ಇಲ್ಲಿದೆ
ಇಂಧನ ಬೆಲೆ ಏರಿಕೆ: ಕೇಂದ್ರ, ರಾಜ್ಯಕ್ಕೆಷ್ಟು ಪಾಲೆಂಬ ಮಾಹಿತಿ ಇಲ್ಲಿದೆ
ಬಕ್ರೀದ್ ಸ್ಪೆಷಲ್: ಪೆರೆಸಂದ್ರ ಸಂತೆಯಲ್ಲಿ ಕುರಿಗಳಿಗೆ ಭಾರೀ ಬೇಡಿಕೆ!
ಬಕ್ರೀದ್ ಸ್ಪೆಷಲ್: ಪೆರೆಸಂದ್ರ ಸಂತೆಯಲ್ಲಿ ಕುರಿಗಳಿಗೆ ಭಾರೀ ಬೇಡಿಕೆ!
ಅಭಿಮಾನಿಗಳ ಬಳಿ ವಿಶೇಷ ಮನವಿ ಇಟ್ಟ ಅಶ್ವಿನಿ ಗೌಡ
ಅಭಿಮಾನಿಗಳ ಬಳಿ ವಿಶೇಷ ಮನವಿ ಇಟ್ಟ ಅಶ್ವಿನಿ ಗೌಡ
ಕಳ್ಳನಾಯಿ: ಬೈಕ್​ನಿಂದ 1 ಲಕ್ಷ ರೂ.ಇದ್ದ ಹಣದ ಬ್ಯಾಗ್ ಕದ್ದೊಯ್ದ ನಾಯಿ
ಕಳ್ಳನಾಯಿ: ಬೈಕ್​ನಿಂದ 1 ಲಕ್ಷ ರೂ.ಇದ್ದ ಹಣದ ಬ್ಯಾಗ್ ಕದ್ದೊಯ್ದ ನಾಯಿ
ಭಟ್ಕಳ ಮೂರಿನ್ ಕಟ್ಟೆ ವಿವಾದ: ಅಸಲಿಗೆ ಆಗಿದ್ದೇನೆಂಬ ಮಾಹಿತಿ ಕೊಟ್ಟ ಎಸ್ಪಿ
ಭಟ್ಕಳ ಮೂರಿನ್ ಕಟ್ಟೆ ವಿವಾದ: ಅಸಲಿಗೆ ಆಗಿದ್ದೇನೆಂಬ ಮಾಹಿತಿ ಕೊಟ್ಟ ಎಸ್ಪಿ
ವಿದೇಶಿ ಪ್ರವಾಸ ಕೈಬಿಟ್ಟು ಸ್ವದೇಶಿ ಪ್ರವಾಸಕ್ಕೆ ಆದ್ಯತೆ ನೀಡಿ!
ವಿದೇಶಿ ಪ್ರವಾಸ ಕೈಬಿಟ್ಟು ಸ್ವದೇಶಿ ಪ್ರವಾಸಕ್ಕೆ ಆದ್ಯತೆ ನೀಡಿ!