AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Saturn Transit 2023: ಜನವರಿ 17ರಂದು ಕುಂಭ ರಾಶಿಗೆ ಶನಿ ಸಂಚಾರ: ಈ ಎರಡು ರಾಶಿ, ಲಗ್ನದವರು ಎಚ್ಚರಿಕೆಯಿಂದ ಇರಬೇಕು

ಶನಿ ಸಂಚಾರ 2023: ಮುಂದಿನ ವರ್ಷ ಜನವರಿ 17ರ ನಂತರ ಈ ಎರಡು ರಾಶಿ, ಲಗ್ನದವರು ಎಚ್ಚರಿಕೆಯಿಂದ ಇರಬೇಕು ಎಂದು ಕರ್ನಾಟಕದ ಖ್ಯಾತ ಜ್ಯೋತಿಷಿ ಹೇಳಿದ್ದಾರೆ.

Saturn Transit 2023: ಜನವರಿ 17ರಂದು ಕುಂಭ ರಾಶಿಗೆ ಶನಿ ಸಂಚಾರ: ಈ ಎರಡು ರಾಶಿ, ಲಗ್ನದವರು ಎಚ್ಚರಿಕೆಯಿಂದ ಇರಬೇಕು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Dec 11, 2022 | 7:59 AM

Share

ಮುಂದಿನ ವರ್ಷ, ಅಂದರೆ 2023ರ ಜನವರಿ 17ಕ್ಕೆ ಮತ್ತೆ (ಈ ಹಿಂದೆ ಕೆಲ ಸಮಯ ಕುಂಭ ರಾಶಿಯ ಶನಿ ಸಂಚಾರ ಆಗಿದೆ) ಶನಿಗ್ರಹ ಕುಂಭದಲ್ಲಿ ಉದಯ ಆಗಲು ಶುರು ಮಾಡುತ್ತಾನೆ. ಯಾವ ಜಾತಕರಿಗೆ ಕರ್ಕಾಟಕ ಲಗ್ನವೋ, ಕರ್ಕಾಟಕ ರಾಶಿಯೋ (ಜನ್ಮ ರಾಶಿ) ಅಥವಾ ಕರ್ಕಾಟಕದಲ್ಲಿಯೋ, ವೃಶ್ಚಿಕದಲ್ಲೋ ಜನ್ಮ ಜಾತಕದಲಿ ಶನಿ ಇದ್ದರೆ ಅಂಥವರು 2025ರ ಮಾರ್ಚ್‌ ತನಕ, ಹೆಚ್ಚೂ ಕಡಿಮೆ ಎರಡೂ ಕಾಲ ವರ್ಷ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಉಡುಪಿಯ ಕಾಪು ಮೂಲದ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಬಗ್ಗೆ ಟಿವಿ9 ಕನ್ನಡ ಡಿಜಿಟಲ್‌ನಿಂದ ಪ್ರಕಾಶ್ ಅಮ್ಮಣ್ಣಾಯ ಅವರನ್ನೇ ಮಾತನಾಡಿಸಿ, ಕಾರಣ ಮತ್ತು ಎಚ್ಚರಿಕೆ ಎರಡರ ಬಗ್ಗೆಯೂ ಕೇಳಲಾಯಿತು. ಅವರು ನೀಡಿದ ಉತ್ತರದ ವಿವರಣೆ ಹೀಗಿದೆ.

ಮೊದಲಿಗೆ ಆಯಾ ವ್ಯಕ್ತಿಗಳು ತಮ್ಮ ಜನ್ಮ ಜಾತಕವನ್ನು ನೋಡಿಕೊಳ್ಳಬೇಕು. ಒಂದು ವೇಳೆ ಹೇಗೆ ನೋಡಿಕೊಳ್ಳುವುದು ಎಂಬುದು ಗೊತ್ತಿಲ್ಲ ಅಂತಾದಲ್ಲಿ ಜ್ಯೋತಿಷಿಗಳಲ್ಲಿ ತೋರಿಸಿಕೊಳ್ಳಬೇಕು. ಲಗ್ನ ಎಂದು ಅದರ ಮುಂದೆ ಬರೆದಿರಲಾಗುತ್ತದೆ. ಅಥವಾ ಎಲ್ಲಿ ಚಂದ್ರ ಇದೆಯೋ (ರಾಶಿ ಅಥವಾ ಭಾವ ಕುಂಡಲಿಯಲ್ಲಿ) ಅದು ಆ ವ್ಯಕ್ತಿಯ ರಾಶಿ ಆಗಿರುತ್ತದೆ. ಅಲ್ಲಿಂದ ಗಡಿಯಾರ ತಿರುಗುವ ರೀತಿಯಲ್ಲಿ ಎಣಿಸುತ್ತಾ ಬಂದರೆ ಯಾರಿಗೆ ಶನಿ ಇರುವ ಸ್ಥಾನವು, ಅಂದರೆ ಕುಂಭ ರಾಶಿಯು ಎಂಟು ಅಥವಾ ನಾಲ್ಕನೇ ಸ್ಥಾನ ಆಗಿರುತ್ತದೋ ಅಂಥವರು ಬಹಳ ಜಾಗ್ರತೆ ವಹಿಸಿಕೊಳ್ಳಬೇಕು.

ಕುಂಭ ರಾಶಿಯಲ್ಲಿ ಶನಿ ಸಂಚಾರದ ಪರಿಣಾಮಗಳು

ಕರ್ಕಾಟಕ ಲಗ್ನ ಅಥವಾ ಕರ್ಕಾಟಕ ರಾಶಿಯವರು ಹಾಗೂ ಒಂದು ವೇಳೆ ಯಾರ ಜನ್ಮ ಜಾತಕದಲ್ಲಿ ಕರ್ಕಾಟಕ ರಾಶಿಯಲ್ಲಿ ಶನಿ ಇರುತ್ತದೋ ಅಂಥವರಿಗೆ ಅಲ್ಲಿಂದ ಎಣಿಸುತ್ತಾ ಬಂದರೆ ಕುಂಭ ರಾಶಿಯಲ್ಲಿನ ಶನಿ ಎಂಟನೇ ಮನೆ ಆಗುತ್ತದೆ. ಅದೇ ರೀತಿ ವೃಶ್ಚಿಕಕ್ಕೆ ಕುಂಭ ರಾಶಿ ನಾಲ್ಕನೇ ಸ್ಥಾನವಾಗುತ್ತದೆ. ಆದ್ದರಿಂದ ವೃಶ್ಚಿಕ ಲಗ್ನದವರು ಅಥವಾ ಆ ರಾಶಿಯಲ್ಲಿ ಚಂದ್ರ ಇರುವಂಥವರು ಮೇಲೆ ತಿಳಿಸಿದಂತೆ ಇನ್ನು ಎರಡೂ ಕಾಲು ವರ್ಷ ಎಚ್ಚರದಿಂದ ಇರಬೇಕು.

ಇನ್ನು ಬರೀ ಎಚ್ಚರಿಕೆ ಅಂದರಾಯಿತಾ, ವಿವರಿಸಿ ಹೇಳಿ ಅನ್ನುವವರಿಗೆ, ಆರೋಗ್ಯ ಸಮಸ್ಯೆ, ವಿವಾದಗಳು ಉಂಟಾಗಬಹುದು. ವಿವಾದಾತ್ಮಕ ಹೇಳಿಕೆ,ಬರಹದ ಮೂಲಕ ಸಮಸ್ಯೆ ಉಂಟಾದೀತು.ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳಾದೀತು. ಹೊಸ ಹೊಸ ಉದ್ಯಮಕ್ಕೆ ಕೈ ಹಾಕಬಾರದು. ಇದ್ದುದನ್ನೇ ನಿರ್ವಹಿಸಿಕೊಂಡು ಹೋಗೋದು, ವಿವಾದಗಳಿಂದ ದೂರ ಇರೋದೇ ಇದಕ್ಕೆ ಪ್ರಥಮ ಪರಿಹಾರ.

ಶನಿ ಸಂಚಾರದ ದುಷ್ಪರಿಣಾಮಕ್ಕೆ ಪರಿಹಾರ ಹೀಗಿದೆ:

ಇನ್ನು ಈ ಅವಧಿಯಲ್ಲಿ ದೇವತಾರಾಧನೆ ರೂಪದಲ್ಲಿ ಪರಿಹಾರ ಏನು ಅಂದರೆ, ಆಂಜನೇಯ, ಈಶ್ವರ, ಅಯ್ಯಪ್ಪ ಈ ದೇವರ ಆರಾಧನೆಯನ್ನು ಶ್ರದ್ಧಾ- ಭಕ್ತಿಯಿಂದ ಮಾಡಬೇಕು. ಇನ್ನು ಯಾವುದೇ ನಿರ್ಧಾರವನ್ನು ಕೈಗೊಳ್ಳುವಾಗ ವಿವೇಕಯುತರಾಗಿ ನಡೆದುಕೊಳ್ಳಬೇಕು. ಇಂಥ ಸನ್ನಿವೇಶದಲ್ಲಿ ಯಾವುದೇ ಜಾತಕರಿಗೆ ರಕ್ಷಣೆ ನೀಡಬಹುದಾದದ್ದು ಅವರ ವಿವೇಚನೆ. ಅಡಸಾ ಬಡಸಾ ಮಾತು, ನಡವಳಿಕೆ ಇವುಗಳಿಂದ ಸಮಸ್ಯೆಗಳಾಗುತ್ತವೆ. ಆದ್ದರಿಂದ ವಿವೇಕಯುತರಾಗಬೇಕು, ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ಮಾತು ಮುಗಿಸಿದರು.

ಲೇಖನ – ಸ್ವಾತಿ ಎನ್ ಕೆ

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 6:05 am, Sun, 11 December 22

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್