AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂರ್ಯನ ಕುಂಭರಾಶಿ ಪ್ರವೇಶದಿಂದ ಯಾರಿಗೆ ಶುಭಾಶುಭ ಫಲ

ಫೆಬ್ರವರಿ 13 ರಿಂದ 23 ರವರೆಗೆ ಸೂರ್ಯನು ಕುಂಭ ರಾಶಿಯ ಶನಿಯ ದ್ರೇಕ್ಕಾಣದಲ್ಲಿ ಸಂಚರಿಸುತ್ತಾನೆ. ಈ ಸಂಕ್ರಮಣವು ರಾಶಿಗಳ ಮೇಲೆ ಶುಭ, ಅಶುಭ ಮತ್ತು ಮಿಶ್ರ ಫಲಗಳನ್ನು ನೀಡುತ್ತದೆ. ಮಕರ, ಕುಂಭ, ವೃಷಭ, ತುಲಾ ರಾಶಿಗಳಿಗೆ ಲಾಭ, ಮೇಷ, ಧನು ರಾಶಿಗಳಿಗೆ ಮಿಶ್ರ ಫಲ. ಸಿಂಹ, ಕರ್ಕಾಟಕ ರಾಶಿಗಳಿಗೆ ಎಚ್ಚರಿಕೆ ಅಗತ್ಯ. ದ್ರೇಕ್ಕಾಣದ ಪ್ರಭಾವದಿಂದ ನಿಮ್ಮ ಭವಿಷ್ಯದಲ್ಲಿನ ಬದಲಾವಣೆಗಳನ್ನು ತಿಳಿಯಿರಿ.

ಸೂರ್ಯನ ಕುಂಭರಾಶಿ ಪ್ರವೇಶದಿಂದ ಯಾರಿಗೆ ಶುಭಾಶುಭ ಫಲ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Feb 06, 2026 | 9:24 AM

Share

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ರೇಕ್ಕಾಣದ ಮೂಲಕ ಭವಿಷ್ಯದ ಚಿಂತನೆಯನ್ನು ಮಾಡಲು ಸಾಧ್ಯ. ಫೆಬ್ರವರಿ13 ರಿಂದ ಫೆಬ್ರವರಿ 23ರವರೆಗೆ ಸೂರ್ಯನು ಕುಂಭ ರಾಶಿಯಲ್ಲಿದ್ದು ಶನಿಯ ದ್ರೇಕ್ಕಾಣದಲ್ಲಿ (ಅಂದರೆ ಕುಂಭ ರಾಶಿಯ ಮೊದಲ ೧೦ ಡಿಗ್ರಿ) ಇರುತ್ತಾನೆ. ಕುಂಭದ ಮೊದಲ ದ್ರೇಕ್ಕಾಣ ಶನಿಯದ್ದಾಗಿದೆ. ಈ ರಾಶಿಯಲ್ಲಿ ಶನಿಯ ಪ್ರಭಾವ ಅಧಿಕವಾಗಿ ಉಂಟಾಗುವ ಕಾರಣ ಶುಭಾಶುಭ ಫಲಗಳು ಹೀಗಿವೆ.

​ಸೂರ್ಯ ಮತ್ತು ಶನಿ ಪರಸ್ಪರ ಶತ್ರು ಗ್ರಹಗಳು. ಸೂರ್ಯನು ಶನಿಯ ಮನೆಯಾದ ಕುಂಭದಲ್ಲಿ ಸಂಚರಿಸುವಾಗ ಮತ್ತು ಶನಿಯ ದ್ರೇಕ್ಕಾಣದಲ್ಲೇ ಇದ್ದಾಗ ಫಲಗಳು ಕೊಂಚ ಕಠಿಣವಾಗಿರುತ್ತವೆ.

​ಶುಭ ಫಲಗಳು:

​ಮಕರ ಮತ್ತು ಕುಂಭ ರಾಶಿ:

ನಿಮ್ಮ ರಾಶ್ಯಾಧಿಪತಿ ಶನಿಯೇ ಆಗಿರುವುದರಿಂದ, ಕೆಲಸದಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಹಳೆಯ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ.

​ವೃಷಭ ರಾಶಿ:

ಹತ್ತನೇ ಮನೆಯಲ್ಲಿ ಈ ಸ್ಥಿತಿ ಇರುವುದರಿಂದ ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿಗಳು ಸಿಗುತ್ತವೆ. ಅಧಿಕಾರದಲ್ಲಿರುವವರಿಂದ ಗೌರವ ದೊರೆಯುತ್ತದೆ.

​ತುಲಾ ರಾಶಿ:

ಸಂಶೋಧನೆ ಅಥವಾ ತಾಂತ್ರಿಕ ಕ್ಷೇತ್ರದಲ್ಲಿ ಇರುವವರಿಗೆ ಈ ಕಾಲವು ಬಹಳ ಅನುಕೂಲಕರವಾಗಿದೆ. ಶ್ರಮಕ್ಕೆ ತಕ್ಕಂತೆ ಆರ್ಥಿಕ ಲಾಭವಾಗಲಿದೆ.

​ಮಿಶ್ರ ಫಲಗಳು:

​ಮೇಷ ರಾಶಿ:

ಏಕಾದಶ ರಾಶಿಯಲ್ಲಿ ಸೂರ್ಯ ಇರುವುದರಿಂದ ಆರ್ಥಿಕ ಲಾಭವಿರುತ್ತದೆ, ಆದರೆ ಸ್ನೇಹಿತರೊಂದಿಗೆ ಅಥವಾ ಹಿರಿಯ ಸಹೋದರರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ.

​ಧನು ರಾಶಿ:

ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ಸಣ್ಣ ಪ್ರಯಾಣಗಳಿಂದ ಲಾಭವಾಗಬಹುದು, ಆದರೆ ಕೆಲಸದಲ್ಲಿ ವಿಳಂಬ ಉಂಟಾಗಬಹುದು.

​ಅಶುಭ ಫಲಗಳು:

​ಸಿಂಹ ರಾಶಿ:

ಸೂರ್ಯನು ನಿಮ್ಮ ರಾಶ್ಯಾಧಿಪತಿ. ಸಪ್ತಮ ಸ್ಥಾನದಲ್ಲಿ ಶತ್ರು ರಾಶಿಯಲ್ಲಿದ್ದು ಶನಿ ದ್ರೇಕ್ಕಾಣದಲ್ಲಿರುವುದು ದಾಂಪತ್ಯ ಜೀವನದಲ್ಲಿ ಉದ್ವಿಗ್ನತೆ ಅಥವಾ ಪಾಲುದಾರಿಕೆಯಲ್ಲಿ ನಷ್ಟ ತರಬಹುದು. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.

​ಕರ್ಕಾಟಕ ರಾಶಿ:

ಅಷ್ಟಮ ಸ್ಥಾನದಲ್ಲಿ ಸೂರ್ಯ ಮತ್ತು ಶನಿಯ ಪ್ರಭಾವ ಇರುವುದರಿಂದ ಅನಗತ್ಯ ಮಾನಸಿಕ ಒತ್ತಡ, ಅಪವಾದ ಅಥವಾ ತಂದೆಯ ಆರೋಗ್ಯದಲ್ಲಿ ಏರುಪೇರಾಗಬಹುದು.

​ವೃಶ್ಚಿಕ ರಾಶಿ:

ಚತುರ್ಥದಲ್ಲಿ ಈ ಸ್ಥಿತಿ ಇರುವುದರಿಂದ ಮನೆಯ ಸುಖ-ಶಾಂತಿಗೆ ಭಂಗ ಬರಬಹುದು ಅಥವಾ ಆಸ್ತಿ ವಿಚಾರದಲ್ಲಿ ವಿವಾದಗಳು ತಲೆದೂರಬಹುದು.

​ಸೂರ್ಯ-ಶನಿ ಸಂಬಂಧವು ತಂದೆ-ಮಗನ ನಡುವಿನ ಭಿನ್ನಾಭಿಪ್ರಾಯ ಅಥವಾ ಮೇಲಧಿಕಾರಿಗಳೊಂದಿಗೆ ಸಂಘರ್ಷವನ್ನು ಸೂಚಿಸುತ್ತದೆ.

​ಈ ಸಮಯದಲ್ಲಿ ಪ್ರತಿದಿನ ಶಿವ ಪಂಚಾಕ್ಷರಿ ಮಂತ್ರ ಜಪಿಸುವುದು ಅಥವಾ ಸೂರ್ಯನಿಗೆ ನಮಸ್ಕಾರ ಅಶುಭ ಫಲಗಳನ್ನು ಕಡಿಮೆ ಮಾಡಲು ಸಹಕಾರಿ. ​ – ಲೋಹಿತ ಹೆಬ್ಬಾರ್

ಗಂಡ ಹೆಂಡತಿ ಒಂದೇ ತಟ್ಟೆಯಲ್ಲಿ ಊಟ ಮಾಡಿದರೆ ಏನಾಗುತ್ತೆ ಗೊತ್ತಾ?
ಗಂಡ ಹೆಂಡತಿ ಒಂದೇ ತಟ್ಟೆಯಲ್ಲಿ ಊಟ ಮಾಡಿದರೆ ಏನಾಗುತ್ತೆ ಗೊತ್ತಾ?
ಭಾರಿ ಅಗ್ನಿ ಅನಾಹುತ, ಸುಟ್ಟು ಕರಕಲಾಯ್ತು 40 ಮಂದಿ ಪ್ರಯಾಣಿಕರಿದ್ದ ಬಸ್
ಭಾರಿ ಅಗ್ನಿ ಅನಾಹುತ, ಸುಟ್ಟು ಕರಕಲಾಯ್ತು 40 ಮಂದಿ ಪ್ರಯಾಣಿಕರಿದ್ದ ಬಸ್
WPL ಟ್ರೋಫಿಯನ್ನು ಆರ್​ಸಿಬಿ ಅಭಿಮಾನಿಗಳಿಗೆ ಅರ್ಪಿಸಿದ ಸ್ಮೃತಿ
WPL ಟ್ರೋಫಿಯನ್ನು ಆರ್​ಸಿಬಿ ಅಭಿಮಾನಿಗಳಿಗೆ ಅರ್ಪಿಸಿದ ಸ್ಮೃತಿ
ಆರ್​ಸಿಬಿ ಚಾಂಪಿಯನ್ ಸಂಭ್ರಮಾಚರಣೆ ಹೇಗಿತ್ತು ನೋಡಿ
ಆರ್​ಸಿಬಿ ಚಾಂಪಿಯನ್ ಸಂಭ್ರಮಾಚರಣೆ ಹೇಗಿತ್ತು ನೋಡಿ
ಫೈನಲ್​ನಲ್ಲಿ 23 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ಸ್ಮೃತಿ
ಫೈನಲ್​ನಲ್ಲಿ 23 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ಸ್ಮೃತಿ
ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ್ಯಾರು? ತೇಜಸ್ವಿ ಸೂರ್ಯ ಹೇಳಿದ್ದಿಷ್ಟು
ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ್ಯಾರು? ತೇಜಸ್ವಿ ಸೂರ್ಯ ಹೇಳಿದ್ದಿಷ್ಟು
ಒಂದು ನಾಯಿಯಿಂದ ತಪ್ಪಿಸಿಕೊಳ್ಳಲು ಗೇಟ್ ಹಾರಿದವನಿಗೆ ಕಾದಿತ್ತು ಶಾಕ್!
ಒಂದು ನಾಯಿಯಿಂದ ತಪ್ಪಿಸಿಕೊಳ್ಳಲು ಗೇಟ್ ಹಾರಿದವನಿಗೆ ಕಾದಿತ್ತು ಶಾಕ್!
ಈ ಕಟ್ಟಡದ ಮುಂಭಾಗ ರೀಲ್ಸ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡ ರಜತ್
ಈ ಕಟ್ಟಡದ ಮುಂಭಾಗ ರೀಲ್ಸ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡ ರಜತ್
ಅಕ್ರಮ ವಲಸಿಗರನ್ನು ರಕ್ಷಿಸಲು ಟಿಎಂಸಿ ಶಕ್ತಿ ಮೀರಿ ಪ್ರಯತ್ನ;ಮೋದಿ ವಾಗ್ದಾಳಿ
ಅಕ್ರಮ ವಲಸಿಗರನ್ನು ರಕ್ಷಿಸಲು ಟಿಎಂಸಿ ಶಕ್ತಿ ಮೀರಿ ಪ್ರಯತ್ನ;ಮೋದಿ ವಾಗ್ದಾಳಿ
ಜ್ಯೋತಿಷಿ ಜತೆ ಚಕ್ಕಂದ: ಹೆಂಡ್ತಿಯ ಮತ್ತಷ್ಟು ಕಾಮಪುರಣ ಬಿಚ್ಚಿಟ್ಟ ಪತಿ
ಜ್ಯೋತಿಷಿ ಜತೆ ಚಕ್ಕಂದ: ಹೆಂಡ್ತಿಯ ಮತ್ತಷ್ಟು ಕಾಮಪುರಣ ಬಿಚ್ಚಿಟ್ಟ ಪತಿ