AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್ ವಾಪಸಾಗಲು ರೇವಣ್ಣ ಇಟ್ಟ ಮುಹೂರ್ತಕ್ಕಿದೆ ವಿಶೇಷ ಶಕ್ತಿ! ಜ್ಯೋತಿಷ್ಯ ವಿಶ್ಲೇಷಣೆ ಇಲ್ಲಿದೆ

ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಪ್ರಜ್ವಲ್ ಭಾರತಕ್ಕೆ ಬರಲು ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ ಅವರೇ ಮುಹೂರ್ತ ಫಿಕ್ಸ್ ಮಾಡಿಸಿದ್ದಾರೆ ಎನ್ನಲಾಗಿದೆ. ಪ್ರಜ್ವಲ್ ಭಾರತಕ್ಕೆ ಬರುವ ದಿನಾಂಕ ಮತ್ತು ಮುಹೂರ್ತದಿಂದ ಜ್ಯೋತಿಷ್ಯ ಪ್ರಕಾರ ಪ್ರಜ್ವಲ್​ಗೆ ಏನು ಲಾಭವಾಗಲಿದೆ ಎಂಬ ಬಗ್ಗೆ ಖ್ಯಾತ ವೈದಿಕ ಜ್ಯೋತಿಷಿ ಡಾ. ಬಸವರಾಜ್ ಗುರೂಜಿ ವಿಶ್ಲೇಷಣೆ ಮಾಡಿದ್ದಾರೆ. ಆ ಕುರಿತ ವಿವರ ಇಲ್ಲಿದೆ.

ಪ್ರಜ್ವಲ್ ವಾಪಸಾಗಲು ರೇವಣ್ಣ ಇಟ್ಟ ಮುಹೂರ್ತಕ್ಕಿದೆ ವಿಶೇಷ ಶಕ್ತಿ! ಜ್ಯೋತಿಷ್ಯ ವಿಶ್ಲೇಷಣೆ ಇಲ್ಲಿದೆ
ಖ್ಯಾತ ವೈದಿಕ ಜ್ಯೋತಿಷಿ ಡಾ. ಬಸವರಾಜ್ ಗುರೂಜಿ ವಿಶ್ಲೇಷಣೆ
ಗಣಪತಿ ಶರ್ಮಾ
|

Updated on:May 30, 2024 | 12:55 PM

Share

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಕೊನೆಗೂ ಭಾರತಕ್ಕೆ ಬರಲು ದಿನಾಂಕ ನಿಗದಿಯಾಗಿದೆ. ಎಲ್ಲವೂ ಈವರೆಗಿನ ಲೆಕ್ಕಾಚಾರದಂತೆಯೇ ನಡೆದರೆ ಪ್ರಜ್ವಲ್ ಇಂದು ರಾತ್ರಿ 12ರ ನಂತರ ಬೆಂಗಳೂರಿಗೆ ತಲುಪಬೇಕು. ಅಂದಹಾಗೆ, ಈ ದಿನಾಂಕದಂದೇ ಪ್ರಜ್ವಲ್ ಭಾರತಕ್ಕೆ ಬರಲು ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ ಅವರೇ ಮುಹೂರ್ತ ಫಿಕ್ಸ್ ಮಾಡಿಸಿದ್ದಾರಂತೆ! ಕಾರಣವೇನೆಂದರೆ, ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಈ ಮುಹೂರ್ತ ಪ್ರಜ್ವಲ್​ ರೇವಣ್ಣಗೆ ಬಹಳ ಒಳ್ಳೆಯದು ಎಂಬ ನಂಬಿಕೆ ಹೊಂದಿರುವುದು.

ಪ್ರಜ್ವಲ್ ಭಾರತಕ್ಕೆ ಬರುವ ದಿನಾಂಕ ಮತ್ತು ಇದರಿಂದ ಜ್ಯೋತಿಷ್ಯ ಪ್ರಕಾರ ಪ್ರಜ್ವಲ್​ಗೆ ಏನು ಲಾಭವಾಗಲಿದೆ ಎಂಬ ಬಗ್ಗೆ ಖ್ಯಾತ ವೈದಿಕ ಜ್ಯೋತಿಷಿ ಡಾ. ಬಸವರಾಜ್ ಗುರೂಜಿ ವಿಶ್ಲೇಷಣೆ ಮಾಡಿದ್ದಾರೆ. ಆ ಕುರಿತ ವಿವರ ಇಲ್ಲಿದೆ.

ಮೇ 31ರ ಶುಕ್ರವಾರ ಬೆಳಗ್ಗೆ 10-00 ಗಂಟೆಗೆ ಪ್ರಜ್ವಲ್ ರೇವಣ್ಣ ಎಸ್​​ಐಟಿ ಮುಂದೆ ವಿಚಾರಣೆಗೆ ಹಾಜರಾದರೆ ಅವರಿಗೆ ವಿಶೇಷ ಲಾಭವಿದೆ. ಶುಕ್ರವಾರ ಕರ್ಕ ಲಗ್ನ, ಕುಂಭರಾಶಿ ಇದೆ. ಲಾಭದಲ್ಲಿ ಗುರು, ರವಿ, ಶುಕ್ರ ಇದ್ದು, ಇದು ಮಹಿಳೆಯರಿಗೆ ಸಂಬಂಧಿಸಿಯೂ ಮಹತ್ವದ್ದಾಗಿದೆ. ಶುಕ್ರಬಲ, ಪೂರ್ವಾಭಾದ್ರ ನಕ್ಷತ್ರ ಗುರು ನಕ್ಷತ್ರ, ಶನಿರಾಶಿಯ ಪರಿಣಾಮ ಪ್ರಜ್ವಲ್​ಗೆ ಹಲವಾರು ಬದಲಾವಣೆಗಳ ದಿನವಾಗುವ ಸಾಧ್ಯತೆ ಇದೆ. ಶುಕ್ರವಾರದ ಪಂಚಾಗ ಪ್ರಕಾರ ಹಲವರಿಗೆ ಸಂಕಷ್ಟ, ಹಲವರಿಗೆ ಶುಭ ಆಗಲಿದೆ. ವಿಶೇಷವಾಗಿ ಪ್ರಜ್ವಲ್​​ ಜಾತಕದ ಪ್ರಕಾರ ನೋಡಿದರೆ, ಅವರಿಗೆ ಲಾಭವಾಗುವ ಸಾಧ್ಯತೆ ಹೆಚ್ಚಿದೆ ಎಂದು ಡಾ. ಬಸವರಾಜ್ ಗುರೂಜಿ ವಿಶ್ಲೇಷಿಸಿದ್ದಾರೆ.

ಪ್ರಜ್ವಲ್​​​ಗೆ ಏನು ಪ್ರಯೋಜನ?

ಪ್ರಜ್ವಲ್ ಹುಟ್ಟಿದ ದಿನಾಂಕ 1990 ಆಗಸ್ಟ್​ 5. ಅವರ ಜನ್ಮ ಜಾತಕ ನೋಡಿದರೆ ತುಲಾ ಲಗ್ನ, ಮಕರ ರಾಶಿ, ಉತ್ತರಾಷಾಢ ನಕ್ಷತ್ರವಿದೆ. ಅವರು ಸೂರ್ಯ ಮಹಾ ದಶಾದಲ್ಲಿ ಜನಿಸಿದ್ದು, ಈಗಿನ ಯೋಗದ ಪ್ರಕಾರ ರಾಹು ನಡೀತಾ ಇದೆ. ಈ ಸಂದರ್ಭದಲ್ಲಿ ಅವರ ಜಾತಕ ಅಷ್ಟು ಚೆನ್ನಾಗಿರಲಿಲ್ಲ. ಅಂದರೆ, ಜಾತಕದಲ್ಲಿಯೇ ಅವರಿಗೆ ಗ್ರಹಣ ದೋಷ ಇತ್ತು. ಸದ್ಯ ಮಂಗಳ ಗ್ರಹ ನಾಳೆ ಸ್ವಂತ ಮನೆಗೆ ಬರಲಿದೆ. ಶುಕ್ರ ಗ್ರಹ ರವಿ ಹಾಗೂ ಗುರು ಜತೆ ವೃಷಭ ರಾಶಿಯಲ್ಲಿದೆ. ಇಂಥ ಸ್ಥಿತಿಯಲ್ಲಿ ಶುಕ್ರವಾರ 10 ಗಂಟೆಯ ಮುಹೂರ್ತದಲ್ಲಿ ಪ್ರಜ್ವಲ್ ವಿಚಾರಣೆಗೆ ಹಾಜರಾದರೆ ಶತ್ರುಗಳೂ ಮಿತ್ರರಾಗುವ ಸಾಧ್ಯತೆ ಇದೆ. ಈ ಉದ್ದೇಶವನ್ನಿಟ್ಟುಕೊಂಡೇ ಜಾತಕ ನೋಡಿ ಪ್ರಜ್ವಲ್ ವಾಪಸ್ ಬರಲು ಈ ಮುಹೂರ್ತ ಇಟ್ಟಿರುವ ಸಾಧ್ಯತೆ ಇದೆ ಎಂದು ಗುರೂಜಿ ತಿಳಿಸಿದ್ದಾರೆ.

ರಾತ್ರಿಯೇ ಬಂದರೆ ಏನಾಗುತ್ತದೆ?

ಶುಕ್ರವಾರ 10 ಗಂಟೆಯ ಮುಹೂರ್ತ ಚೆನ್ನಾಗಿರುವುದೇನೋ ನಿಜ. ಹಾಗೆಂದು ಅದೇ ಮುಹೂರ್ತಕ್ಕೆ ಅಲ್ಲದೆ ಒಟ್ಟಾರೆಯಾಗಿ ಇಂದು (ಗುರುವಾರ) ಸಂಜೆ 4 ಗಂಟೆಯ ನಂತರ ಶುಕ್ರವಾರ ರಾತ್ರಿ 9 ಗಂಟೆಯ ಒಳಗೆ ಯಾವ ಸಮಯದಲ್ಲಿ ಬಂದರೂ ಪ್ರಜ್ವಲ್​ಗೆ ಬಹಳಷ್ಟು ಪ್ರಯೋಜನ ಇದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: ಇಂದು ಮಧ್ಯರಾತ್ರಿ ಬೆಂಗಳೂರಿಗೆ ಪ್ರಜ್ವಲ್? ಬರುತ್ತಿದ್ದಂತೆ ಬಂಧನ, ನಾಳೆ ಜಾಮೀನು ಅರ್ಜಿ ವಿಚಾರಣೆ

ಈ ಅವಧಿಯಲ್ಲಿ ವಾಪಸ್ ಬಂದರೆ ಆತನಿಗೆ ಶತ್ರುಗಳು ಮಿತ್ರರಾಗುವ ಯೋಗ ಇದೆ. ಜತೆಗೆ, ಆತನ ಜಾತಕ ದೋಷದ ಪ್ರಕಾರ ಇರುವ ಋಣಾತ್ಮಕತೆ ಪ್ರಭಾವ ಶೇ 40ರಷ್ಟು ತಗ್ಗಲಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:39 pm, Thu, 30 May 24

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ದೀದಿ ಕೋಟೆಯನ್ನು ಬಿಜೆಪಿ ಛಿದ್ರಗೊಳಿಸಿದ್ದು ಹೇಗೆ? ಪ್ರಲ್ಹಾದ್ ಜೋಶಿ ಮಾಹಿತಿ
ದೀದಿ ಕೋಟೆಯನ್ನು ಬಿಜೆಪಿ ಛಿದ್ರಗೊಳಿಸಿದ್ದು ಹೇಗೆ? ಪ್ರಲ್ಹಾದ್ ಜೋಶಿ ಮಾಹಿತಿ
ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ
ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ
ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್​:FSL ವರದಿಯನ್ನೇ ತಿರುಚಿದ ಗ್ಯಾಂಗ್!
ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್​:FSL ವರದಿಯನ್ನೇ ತಿರುಚಿದ ಗ್ಯಾಂಗ್!
ಮೋದಿ ಅಧಿಕಾರ ಸಾಕು ಅಂದಿದ್ರು; ಅಚ್ಚರಿಯ ಸಂಗತಿ ಬಿಚ್ಚಿಟ್ಟ ಪ್ರಲ್ಹಾದ್ ಜೋಶಿ
ಮೋದಿ ಅಧಿಕಾರ ಸಾಕು ಅಂದಿದ್ರು; ಅಚ್ಚರಿಯ ಸಂಗತಿ ಬಿಚ್ಚಿಟ್ಟ ಪ್ರಲ್ಹಾದ್ ಜೋಶಿ
ಕಾಕ್ರೋಜ್‌ ಪಾರ್ಟಿ ಸಂಸ್ಥಾಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್‌
ಕಾಕ್ರೋಜ್‌ ಪಾರ್ಟಿ ಸಂಸ್ಥಾಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್‌
RSS ವಿವರಣೆ ಕೇಳಿದ ಪ್ರಿಯಾಂಕ್ ಖರ್ಗೆಗೆ ತೇಜಸ್ವಿ ಸೂರ್ಯ ಖಡಕ್ ಉತ್ತರ
RSS ವಿವರಣೆ ಕೇಳಿದ ಪ್ರಿಯಾಂಕ್ ಖರ್ಗೆಗೆ ತೇಜಸ್ವಿ ಸೂರ್ಯ ಖಡಕ್ ಉತ್ತರ
ಜಮೀರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು: ಪಾದರಾಯನಪುರದಲ್ಲಿ ಹೈಡ್ರಾಮಾ
ಜಮೀರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು: ಪಾದರಾಯನಪುರದಲ್ಲಿ ಹೈಡ್ರಾಮಾ
ತಾಯಿಯಿಂದ ಬೇರ್ಪಟ್ಟು ಗ್ರಾಮಕ್ಕೆ ಬಂದ ಮರಿಯಾನೆ: ಆಹಾರ ನೀಡಿದ ಗ್ರಾಮಸ್ಥರು!
ತಾಯಿಯಿಂದ ಬೇರ್ಪಟ್ಟು ಗ್ರಾಮಕ್ಕೆ ಬಂದ ಮರಿಯಾನೆ: ಆಹಾರ ನೀಡಿದ ಗ್ರಾಮಸ್ಥರು!
ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಶಾಸಕ ಇಕ್ಬಾಲ್ ಹುಸೇನ್
ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಶಾಸಕ ಇಕ್ಬಾಲ್ ಹುಸೇನ್
ಅಮೆರಿಕ-ಇರಾನ್ ಶಾಂತಿ ಒಪ್ಪಂದ, ಪ್ರಮುಖ ಷರತ್ತುಗಳೇನು?
ಅಮೆರಿಕ-ಇರಾನ್ ಶಾಂತಿ ಒಪ್ಪಂದ, ಪ್ರಮುಖ ಷರತ್ತುಗಳೇನು?