AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ಇತರರಿಗೆ ಸಹಾಯ ಮಾಡುವ ವಿಚಾರದಲ್ಲಿ ಈ 4 ರಾಶಿಯವರು ಸದಾ ಮುಂದು

ಕೆಲವರು ಇತರರಿಗಿಂತ ಹೆಚ್ಚು ಉದಾರ ಮತ್ತು ವಿಶಾಲ ಹೃದಯದವರಾಗಿರುತ್ತಾರೆ. ಈ ರೀತಿಯ ಜನರು ತಮ್ಮ ಸ್ನೇಹಿತರಿಗೆ ಸಹಾಯ ಮಾಡುವ ಮೊದಲು ಎರಡು ಬಾರಿ ಯೋಚಿಸುವುದಿಲ್ಲ ಮತ್ತು ನಿಷ್ಠರಾಗಿರುತ್ತಾರೆ. ಸ್ನೇಹಿತರು ಸಂತೋಷವಾಗಿ ಮತ್ತು ತೃಪ್ತರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ಅವರ ಏಕೈಕ ಕಾಳಜಿ ಆಗಿರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರು ಹೆಚ್ಚು ಉದಾರಿಗಳು ಮತ್ತು ನಿಷ್ಠಾವಂತರು ಹಾಗೂ ಇತರರ ಉದ್ದೇಶಗಳನ್ನು ಒಂದು ಕ್ಷಣವೂ ಅನುಮಾನಿಸದಂಥವರೂ ಆಗಿರುತ್ತಾರೆ. ಹಣದ ಸಮಸ್ಯೆಗಳು ಮತ್ತು ಆರ್ಥಿಕ ಸಮಸ್ಯೆಗಳು ಬಂದಾಗ ಅವರು ಸಹಾಯ ಮಾಡಲು ಯಾವಾಗಲೂ […]

Astrology: ಇತರರಿಗೆ ಸಹಾಯ ಮಾಡುವ ವಿಚಾರದಲ್ಲಿ ಈ 4 ರಾಶಿಯವರು ಸದಾ ಮುಂದು
ರಾಶಿ ಚಕ್ರ
TV9 Web
| Updated By: Skanda|

Updated on: Jul 30, 2021 | 6:48 AM

Share

ಕೆಲವರು ಇತರರಿಗಿಂತ ಹೆಚ್ಚು ಉದಾರ ಮತ್ತು ವಿಶಾಲ ಹೃದಯದವರಾಗಿರುತ್ತಾರೆ. ಈ ರೀತಿಯ ಜನರು ತಮ್ಮ ಸ್ನೇಹಿತರಿಗೆ ಸಹಾಯ ಮಾಡುವ ಮೊದಲು ಎರಡು ಬಾರಿ ಯೋಚಿಸುವುದಿಲ್ಲ ಮತ್ತು ನಿಷ್ಠರಾಗಿರುತ್ತಾರೆ. ಸ್ನೇಹಿತರು ಸಂತೋಷವಾಗಿ ಮತ್ತು ತೃಪ್ತರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ಅವರ ಏಕೈಕ ಕಾಳಜಿ ಆಗಿರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರು ಹೆಚ್ಚು ಉದಾರಿಗಳು ಮತ್ತು ನಿಷ್ಠಾವಂತರು ಹಾಗೂ ಇತರರ ಉದ್ದೇಶಗಳನ್ನು ಒಂದು ಕ್ಷಣವೂ ಅನುಮಾನಿಸದಂಥವರೂ ಆಗಿರುತ್ತಾರೆ. ಹಣದ ಸಮಸ್ಯೆಗಳು ಮತ್ತು ಆರ್ಥಿಕ ಸಮಸ್ಯೆಗಳು ಬಂದಾಗ ಅವರು ಸಹಾಯ ಮಾಡಲು ಯಾವಾಗಲೂ ಸಿದ್ಧರಾಗಿರುತ್ತಾರೆ. ಯಾವುದೇ ಅನುಮಾನ ಇಲ್ಲದೆ ಅವರನ್ನು ಸಂಪರ್ಕಿಸಬಹುದು ಮತ್ತು ಯಾವುದೇ ತೀರ್ಪುಗಳನ್ನು ನೀಡದೆ ಅವರು ಸಹಾಯ ಮಾಡಲು ಸಹ ಸಿದ್ಧರುತ್ತಾರೆ. ಇಲ್ಲಿ ಅಂಥ 4 ರಾಶಿಗಳ ಬಗ್ಗೆ ಮಾಹಿತಿ ಇದೆ. ಅವರು ತಮ್ಮ ಸ್ನೇಹಿತರಿಗೆ ಹೆಚ್ಚು ಸಹಾಯ ಮಾಡುತ್ತಾರೆ. ಯಾವುದು ಆ ನಾಲ್ಕು ರಾಶಿಗಳು ಎಂದು ಮುಂದೆ ತಿಳಿಯಿರಿ.

ಸಿಂಹ ಸಿಂಹ ರಾಶಿಯವರು ಅತ್ಯಂತ ಉದಾರಿಗಳು/ ಇವರು ವಿಪರೀತ ನಿಷ್ಠರಾಗಿರುತ್ತಾರೆ ಮತ್ತು ಸ್ನೇಹಿತರಿಗೆ ಗೌರವ ಮತ್ತು ಮೌಲ್ಯವನ್ನು ನೀಡುತ್ತಾರೆ. ಇವರು ತಮ್ಮ ಸ್ನೇಹಿತರನ್ನು ಹೃದಯಕ್ಕೆ ಹತ್ತಿರದಲ್ಲಿ ಇರಿಸಿಕೊಳ್ಳುತ್ತಾರೆ ಮತ್ತು ತುರ್ತು ಸಂದರ್ಭದಲ್ಲಿ ಸಹಾಯ ಮಾಡಲು ಏನು ಬೇಕಾದರೂ ಮಾಡುತ್ತಾರೆ. ಮರು ಯೋಚಿಸದೆ ಹಣವನ್ನು ಸಾಲವಾಗಿ ಪಡೆಯಲು ಸಹ ಸಿಂಹ ರಾಶಿಯವರನ್ನು ಸಂಪರ್ಕಿಸಬಹುದು.

ಧನು ಈ ರಾಶಿಯವರಿಗೆ ಇತರರಿಗೆ ಸಹಾಯ ಮಾಡುವ ಗುಣ ಜಾಸ್ತಿ ಇರುತ್ತದೆ. ಅಷ್ಟೇ ಅಲ್ಲ, ದಯೆ ಮತ್ತು ಕಾಳಜಿ ಕೂಡ ಜಾಸ್ತಿ ಇರುತ್ತದೆ. ಇವರು ತಮ್ಮ ಸ್ನೇಹಿತರನ್ನು ಬಿಕ್ಕಟ್ಟಿನಿಂದ ಹೊರಗೆ ಕರೆದೊಯ್ಯಲು ಏನು ಬೇಕಾದರೂ ಮಾಡುತ್ತಾರೆ. ತಮ್ಮ ಬಳಿ ಇರುವುದಕ್ಕಿಂತ ಹೆಚ್ಚಿನದನ್ನೇ ನೀಡುವುದಕ್ಕೆ ಸಿದ್ಧತಾಗುತ್ತಾರೆ. ಸದಾ ಜೀವನೋತ್ಸಾಹದಿಂದ ಕಾಣಿಸಿಕೊಳ್ಳುವ ಇವರು, ತಮ್ಮ ಸುತ್ತ ಇರುವವರನ್ನೂ ಸಂತೋಷವಾಗಿರಬೇಕು ಎಂದು ಬಯಸುತ್ತಾರೆ. ಯಾರೇ ವೈಫಲ್ಯ ಕಂಡರೂ ಅಥವಾ ದುಃಃಖದಿಂದ ಇದ್ದರೂ ಇವರಿಗೆ ಸಹಿಸಲು ಸಾಧ್ಯವಾಗಲ್ಲ.

ತುಲಾ ಈ ರಾಶಿಯ ಜನರು ಸ್ವಭಾವತಃ ಒಳ್ಳೆಯ ಜನರು. ಎಲ್ಲವೂ ನ್ಯಾಯಯುತ ಮತ್ತು ಸಮಾನವಾಗಿರಬೇಕೆಂದು ಬಯಸುತ್ತಾರೆ. ತಮ್ಮ ಸ್ನೇಹಿತರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ನೋಡಿದರೆ, ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಅವರಿಗೆ ತಮ್ಮ ಬೆಂಬಲವನ್ನು ನೀಡಲು ಎಲ್ಲವನ್ನೂ ಮಾಡುತ್ತಾರೆ! ಅಪರಿಚಿತರು ಮತ್ತು ಸ್ನೇಹಿತರಿಗೆ ಸಮಾನವಾಗಿ ಸಹಾಯ ಮಾಡಲು ಇಷ್ಟಪಡುತ್ತಾರೆ. ಯಾರೂ ನೋವು ಪಡುವುದನ್ನು ನೋಡುವುದಕ್ಕೆ ಬಯಸುವುದಿಲ್ಲ.

ಕರ್ಕಾಟಕ ಇವರು ಇತರರ ಭಾವನೆಗಳನ್ನು ಗೌರವಿಸುತ್ತಾರೆ. ಬೇರೆಯವರ ಬಗ್ಗೆ ಸಹಾನುಭೂತಿ ಹೊಂದಿರುತ್ತಾರೆ. ಯಾರನ್ನಾದರೂ ಬಿಕ್ಕಟ್ಟಿನಲ್ಲಿ ನೋಡಿದಾಗ ಇವರ ಹೃದಯ ಸುಲಭವಾಗಿ ಕರಗುತ್ತದೆ. ಇತರರಿಗೆ ಸಹಾಯ ಮಾಡಬೇಕು ಎಂಬ ಇವರ ಭಾವನೆಯನ್ನು ಅದುಮಿಟ್ಟುಕೊಳ್ಳುವುದೇ ಕಷ್ಟದ ಕೆಲಸ ಇವರಿಗೆ. ಕೆಲವೊಮ್ಮೆ ಭಾವನಾತ್ಮಕ ಸಂಗತಿಗಳಲ್ಲಿ ಮೂರ್ಖರೆನಿಸಿಕೊಳ್ಳುತ್ತಾರೆ. ನಿಜವಾಗಿಯೂ ಅಗತ್ಯವಿರುವ ತಮ್ಮ ಆಪ್ತರಿಗೆ ನೆರವು ನೀಡುವುದಕ್ಕೆ ಎರಡನೇ ಸಲ ಕೂಡ ಯೋಚಿಸುವುದಿಲ್ಲ.

ಇದನ್ನೂ ಓದಿ: Astrology: ಪ್ರೀತಿಯ ಸಂಬಂಧ ಕಳೆದುಕೊಂಡು ಸಂಕಟ ಪಡುವವರಲ್ಲಿ ಈ 4 ರಾಶಿಯವರೇ ಹೆಚ್ಚು

(These 4 Zodiac Sign People Can Do Anything To Help Their Friends)

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ