AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಸವಾಲಾಗಿ ಸ್ವೀಕರಿಸಿದ ಕಾರ್ಯದಲ್ಲಿ ನಿಮಗೆ ಜಯ ಪ್ರಾಪ್ತಿ

11 ಫೆಬ್ರವರಿ​ 2025: ಮಂಗಳವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಪರರ ದುಃಖಕ್ಕೆ ಸ್ಪಂದನೆ ಇರಲಿ. ಆಪ್ತರ ಮೇಲೆ ಬೇಸರಪಟ್ಟುಕೊಳ್ಳುವ ಸಾಧ್ಯತೆ ಇದೆ. ಇಂದು ಅತಿಯಾದ ನಿದ್ರೆಯಿಂದ ಜಾಡ್ಯವು ಬರುವುದು. ಹಾಗಾದರೆ ಫೆಬ್ರವರಿ 11 ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಸವಾಲಾಗಿ ಸ್ವೀಕರಿಸಿದ ಕಾರ್ಯದಲ್ಲಿ ನಿಮಗೆ ಜಯ ಪ್ರಾಪ್ತಿ
ಸವಾಲಾಗಿ ಸ್ವೀಕರಿಸಿದ ಕಾರ್ಯದಲ್ಲಿ ನಿಮಗೆ ಜಯ ಪ್ರಾಪ್ತಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Feb 11, 2025 | 12:10 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಚತುರ್ದಶೀ ನಿತ್ಯನಕ್ಷತ್ರ : ಆಶ್ಲೇಷಾ ಯೋಗ : ಪ್ರೀತಿ, ಕರಣ : ತೈತಿಲ, ಸೂರ್ಯೋದಯ – 06 – 59 am, ಸೂರ್ಯಾಸ್ತ – 06 – 34 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:41 – 17:08, ಯಮಘಂಡ ಕಾಲ 09:53 – 11:20, ಗುಳಿಕ ಕಾಲ12:47 – 14:14.

ಮೇಷ ರಾಶಿ: ಸವಾಲಾಗಿ ಸ್ವೀಕರಿಸಿದ ಕಾರ್ಯದಿಂದ ನಿಮಗೆ ಜಯ ಪ್ರಾಪ್ತಿ. ಎಲ್ಲದಕ್ಕೂ ವಿಧಿಯನ್ನು ದೂರುವುದರಲ್ಲಿ ಅರ್ಥವಿರದು. ಪುರುಷಪ್ರಯತ್ನವೂ ನೂರಕ್ಕೆ ನೂರಿರಲಿ. ನಿಮ್ಮ ನಿರೀಕ್ಷಿತ ಸಮಯವು ಸಮೀಪಿಸುತ್ತಿರುವಂತೆ ನಿಮಗೆ ಅನ್ನಿಸುವುದು. ಆತುರದಲ್ಲಿ ಏನನ್ನಾದರೂ ಮಾಡಿಕೊಂಡೀರ. ನಿಮ್ಮ ಮಾತಿನಲ್ಲಿ ತಾರ್ಕಿಕತೆ ಹೆಚ್ಚು ಕಾಣುವುದು. ಅಮೂಲ್ಯ ವಸ್ತುಗಳ ಖರೀದಿಯಿಂದ ಹಣದ ಉಳಿತಾಯ. ಸಮಯೋಚಿತ ಮಾತುಗಳಿಂದ ಪ್ರಶಂಸೆಯು ಸಿಗಬಹುದು. ವಿವಾಹಯೋಗವು ಬಂದರೂ ಅದನ್ನು ನೀವು ಸ್ವೀಕರಿಸುವ ರೀತಿ ಭಿನ್ನವಾಗಿ ಇರಲಿದೆ. ಇಂದಿನ ನಿಮ್ಮ ಸಮಯದ ವ್ಯತ್ಯಾಸದಿಂದ ಕೆಲವು ಕಾರ್ಯಗಳು ಬದಲಾವಣೆ ಆಗಬಹುದು. ಅನ್ಯರ ಪ್ರಭಾವಕ್ಕೆ ಸಿಕ್ಕ ಅನಂತರ ಹೊರಬರುವುದು ಕಷ್ಟ. ಸಂಗಾತಿಯು ನಿಮ್ಮ ಗುಟ್ಟನ್ನು ಹೊರಹಾಕಬಹುಉ. ಬಹಳ ದಿನಗಳಿಂದ ಕಾರ್ಮಿಕರ ವಿಚಾರದಲ್ಲಿ ನಿಮಗೆ ಅಸಮಾಧಾನವಿದ್ದು ಅದನ್ನು ತೋರ್ಪಡಿಸುವಿರಿ. ಸಂಗಾತಿಗೆ ಸುಳ್ಳು ಹೇಳಿ ನಿಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಪಕ್ಷಪಾತದಿಂದ ನಿಮಗೇ ತೊಂದರೆ ಎದುರಾದೀತು.

ವೃಷಭ ರಾಶಿ: ಇಂದು ವಿನೋದವನ್ನು ಮಾಡಲು ಹೋಗಿ ವಿಷಾದವಾದೀತು. ಶರೀರ ಪೀಡೆಯಿಂದ ಅಸತಂಕವಾಗಬಹುದು. ವಿಚಿತ್ರ ಸಂಗತಿಗಳು ನಿಮ್ಮನ್ನು ಬದಲಾಯಿಸಬಹುದು. ನಿಮ್ಮ ಬಗ್ಗೆಯೇ ನೀವು ಕೊರಗುತ್ತ ಇರುವಿರಿ. ಸಮಯದ ಹೊಂದಾಣಿಕೆಯಲ್ಲಿ ನೀವು ಸೋಲಬಹುದು. ಸಭ್ಯರಂತೆ ಇಂದು ನೀವು ತೋರುವಿರಿ. ನೀವು ಮೊದಲೇ ನಿರ್ಧರಿಸಿರುವ ಕೆಲಸಗಳನ್ನು ಪೂರ್ಣ ಮಾಡಲು ಸಮಯವು ಸಿಗದೇ ಹೋದೀತು. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇದೆ. ನಿಮ್ಮ ವಿವಾಹದ ಮಾತುಕತೆಗಳು ನಿಮಗೆ ಖುಷಿ ಕೊಡಬಹುದು. ವೃತ್ತಿಗಾಗಿ ನೀವು ಮಾಡುವ ಪ್ರಯತ್ನವು ಫಲಿಸುವುದು. ಸಿಗದಿರುವುದರ ಬಗ್ಗೆ ಆಸೆಯನ್ನು ಬಿಡುವಿರಿ. ಯಾರಾದರೂ ಬಂದು ನಿಮ್ಮ ಬಳಿ ಕೆಲಸ ಮಾಡಿಕೊಡಲು ಕೇಳಬಹುದು. ಗೊತ್ತಿರುವ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳಿ. ಬೇರೆಯವರು ನಿಮ್ಮನ್ನು ಅಳೆಯುವ ಮೊದಲು ನೀವೇ ನಿಮ್ಮನ್ನು ಅಳೆದುಕೊಳ್ಳಿ.

ಮಿಥುನ ರಾಶಿ: ನೀರಿನಿಂದ ಭಯಗೊಳ್ಳುವ ಸಾಧ್ಯತೆ ಇದೆ. ನಿದ್ರೆಯಲ್ಲಿ ಕಂಡ ಸ್ವಪ್ನವು ನಿಮಗೆ ಸಂತೋಷವನ್ನು ಕೊಡುವುದು. ಸಂಗಾತಿಯ ನಡೆಯು ನಿಮಗೆ ಮೆಚ್ಚುಗೆಯಾಗದು. ನಿಮ್ಮ ಏಕಾಗ್ರತೆಯ ಕಾರ್ಯಕ್ಕೆ ಭಂಗವಾಗುವ ಸಾಧ್ಯತೆ ಇದೆ. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು. ಜವಾಬ್ದಾರಿಯಿಂದ ತಲೆ ಭಾರವಾಗುವುದು. ಅನವಶ್ಯಕ ಹರಟೆಯಿಂದ ಅಧಿಕಾರಿಗಳು ನಿಮ್ಮ ಮೇಲೆ ಸಿಟ್ಟಾಗಬಹುದು. ಬೆನ್ನು ನೋವಿನ ಸಮಸ್ಯೆಗೆ ಸೂಕ್ತ ಪರಿಹಾರವು ಸಿಕ್ಕೀತು. ಸಂಗಾತಿಗೆ ಇಂದು ಸಂತೋಷವನ್ನು ಕೊಡುವಿರಿ. ಕಾರ್ಯದ ಒತ್ತಡವಿರುವ ಕಾರಣ ಸಮಯದ ಅಭಾವ ಎನಿಸಬಹುದು. ನೀವು ಹಿರಿಯರ ಜೊತೆ ಸಣ್ಣ ವಿಚಾರಕ್ಕೂ ವಾಗ್ವಾದಕ್ಕೆ ಇಳಿಯುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಎಲ್ಲರ ಬಳಿ ಹೇಳಿಕೊಳ್ಳುವಿರಿ. ಮನಸ್ಸನ್ನು ಖಾಲಿ ಬಿಡದೇ ಏನಾದರೊಂದು ಕಾರ್ಯದಲ್ಲಿ ತೊಡಗಿಸಿ.

ಕರ್ಕಾಟಕ ರಾಶಿ: ನೀವು ಸರಳವಾದ ಮಾರ್ಗವನ್ನು ಇಂದು ಆಯ್ಕೆ ಮಾಡಿಕೊಳ್ಳಲಾರಿರಿ. ನಿಮ್ಮ ಮಾತುಗಳು ಸ್ವಾರ್ಥದಿಂದ ಕೂಡಿರುವುದು. ಆಪ್ತರಿಗೆ ಬೇಸರವನ್ನು ಕೊಟ್ಟು, ಅನಂತರ ಸಮಾಧಾನ ಮಾಡಬೇಕಾಗುವುದು. ಭವಿಷ್ಯದ ಬಗ್ಗೆ ಅತಿಯಾದ ಆಲೋಚನೆ ಇರಲಿದೆ. ಸಹೋದರನಿಂದ ನಿಮಗೆ ಸಮಸ್ಯೆ ಆಗಬಹುದು. ಹಠದ ಸ್ವಭಾವದಿಂದ ಸಂಗಾತಿಗೆ ಕಿರಿಕಿರಿ ಎನಿಸಬಹುದು. ಮನಸ್ತಾಪವನ್ನು ಮನಸ್ಸಿನೊಳಗೇ ಇಟ್ಟುಕೊಳ್ಳುವಿರಿ. ಸಮಯಪ್ರಜ್ಞೆಯು ಇಂದು ಕೆಲಸ ಮಾಡದು. ನಿಮ್ಮನ್ನು ಇಷ್ಟವಿಲ್ಲದ ಕಡೆ ವರ್ಗಾವಣೆಯಾಗುವುದು. ಉದ್ಯೋಗದ ಸ್ಥಳದಲ್ಲಿ ಕಹಿ ಅನುಭವವಾದೀತು. ಇನ್ನೊಬ್ಬರ ಮಾತುಗಳನ್ನು ಕೇಳುವ ಸಹನೆಯು ಬೇಕು. ಯಾರದೋ ತಪ್ಪಿನಿಂದ ನಿಮಗೆ ದೋಷವು ಅಂಟಿಕೊಂಡಿದ್ದು ತಿಳಿದುಬರುವುದು. ದುರಭ್ಯಾಸದಿಂದ ಆರ್ಥಿಕ ನಷ್ಟವಾಗುತ್ತದೆ. ಉತ್ತಮ ಅವಕಾಶಗಳಿಂದಲೂ ನೀವು ವಂಚಿತರಾಗುವಿರಿ. ಕುಟುಂಬದ ನಡವಳಿಕೆಯು ನಿಮಗೆ ಅರ್ಥವಾಗದೇ ಹೋದೀತು. ದುರಭ್ಯಾಸದ ಕಡೆ ನಿಮ್ಮ ಗಮನವು ಇರಲಿದೆ. ನಿಮ್ಮ ಚಿಂತನೆಗಳನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ.

ಸಿಂಹ ರಾಶಿ: ಸಣ್ಣ ಆದಾಯ ಮೂಲವನ್ನು ಕಡೆಗಣಿಸಬಹುದು. ನಿಮ್ಮ ಕ್ರಮಬದ್ಧವಾದ ನಡೆಗಳು ನಿಮಗೇ ಅಡ್ಡಗಾಲಾದಂತೆ ತೋರುವುದು. ಏನಾದರೂ ಮಾಡುತ್ತ ನಿಮ್ಮ ಮನಸ್ಸಿಗೆ ಕೆಲಸವನ್ನು ಕೊಡುವಿರಿ. ಜಾಣ್ಮೆಯಿಂದ ಇಂದು ನೀವು ಪ್ರಶಂಸೆಯನ್ನು ಪಡೆಯುವಿರಿ. ವೃತ್ತಿಯಲ್ಲಿ ಕೆಲವು ಸಂತೋಷದ ಕ್ಷಣಗಳು ನಿಮ್ಮದಾಗಲಿವೆ. ಮನೋವಿಕಾರವನ್ನು ಎಲ್ಲರೆದುರೂ ತೋರಿಸುವುದು ಬೇಡ. ನಿಮ್ಮದು ಅಂದುಕೊಂಡವು ವಸ್ತುವು ದೂರವಾಗಬಹುದು. ಪರರ ದುಃಖಕ್ಕೆ ಸ್ಪಂದನೆ ಇರಲಿ. ಆಪ್ತರ ಮೇಲೆ ಬೇಸರಪಟ್ಟುಕೊಳ್ಳುವ ಸಾಧ್ಯತೆ ಇದೆ. ಇಂದು ಅತಿಯಾದ ನಿದ್ರೆಯಿಂದ ಜಾಡ್ಯವು ಬರುವುದು. ದೈಹಿಕ ಶ್ರಮವು ಇಂದು ಹೆಚ್ಚಿರುವುದು. ನಿಮ್ಮ ಶಿಷ್ಯರಿಂದ ನಿಮಗೆ ಉಡುಗೊರೆ ಸಿಗುವ ಸಾಧ್ಯತೆ ಇದೆ. ಭೂಮಿಯನ್ನು ಮಾರಾಟಮಾಡುವ ಸ್ಥಿತಿಯು ಬರಬಹುದು. ಉತ್ಸಾಹದಿಂದ ನೀವು ಇಂದಿನ ಕಾರ್ಯವನ್ನು ಮಾಡುತ್ತಿದ್ದರೂ ದಿನದ ಕೊನೆಗೆ ಸಲ್ಲದ ಮಾತುಗಳನ್ನು ನೀವು ಕೇಳಬೇಕಾದೀತು.

ಕನ್ಯಾ ರಾಶಿ: ನಂಬಿಸಲು ಸುಳ್ಳುಗಳನ್ನು ಹೇಳುವಿರಿ. ಕೈ ಮೀರಿದ ಅನಂತರ ನಿಮಗೆ ಯಾವ ವಿಚಾರವನ್ನೂ ಏನನ್ನೂ ಮಾಡಲಾಗದು. ಒತ್ತಡಗಳು ನಾನಾ ಭಾಗಗಳಿಂದ ಬರಬಹುದು. ಕೆಲಸವಿಲ್ಲದೆ ಕಡೆ ನೀವು ಇರಲಾರಿರಿ. ಅಧಿಕಾರವರ್ಗದಿಂದ ಶೋಷಣೆಗೆ ಒಳಗಾಗುವಿರಿ. ನಿಮ್ಮಿಂದ ಉಪಕಾರ ಪಡೆದವರು ನಿಮ್ಮ ವಿರುದ್ಧ ಬೀಳಬಹುದು. ಸಿಕ್ಕ ಸಣ್ಣ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಿ. ಇಷ್ಟ ದೇವರನ್ನು ಪ್ರಾರ್ಥಿಸಿ ನೀವು ಮುಂದಿನ ಕಾರ್ಯಗಳಿಗೆ ತೆರಳುವಿರಿ. ನಿಮ್ಮ ಕೆಲಸದಲ್ಲಿ ಇಂದು ಅಡತಡೆಗಳು ಬರಲಿದೆ. ಅದನ್ನು ಗಂಭಿರವಾಗಿ ತೆಗೆದುಕೊಳ್ಳುವುದು ಬೇಡ. ಬದುಕಿಗೆ ತಿರುವು ಬರುವ ಸಾಧ್ಯತೆ ಇದೆ. ಇಂದಿನ ಕಾರ್ಯವು ನಿಮಗೆ ಸಮಾಧಾನ ಕೊಡದೇ ಇರಬಹುದು. ಭೋಗವಸ್ತುಗಳನ್ನು ಅನವಶ್ಯಕವಾಗಿ ಖರೀದಿಸುವಿರಿ. ನಿಮ್ಮ ಇಷ್ಟದವರು ನಿಮ್ಮ ಭೇಟಿಯಾಗಬಹುದು. ಸಣ್ಣ ಉಳಿತಾಯಕ್ಕೆ ಇಂದು ಬೆಲೆಯು ಬಂದಂತಾಗುವುದು. ಜೀವನದ ಲಕ್ಷ್ಯವು ಬೇರೆ ಕಡೆಗೆ ಇರಲಿದೆ.