AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virgo Yearly Horoscope 2025: ಈ ರಾಶಿಯವರಿಗೆ ದೈವಾನುಗ್ರಹಗಳ ಫಲವಾಗಿ ಈ ವರ್ಷವನ್ನು ಗೆಲ್ಲಲು ಸಾಧ್ಯ

ಕನ್ಯಾ ರಾಶಿ ವರ್ಷ ಭವಿಷ್ಯ 2025: ಕನ್ಯಾ ರಾಶಿಯವರಿಗೆ ಈ ವರ್ಷ ಗ್ರಹಗಳು ಅಶುಭಸ್ಥಾನದಲ್ಲಿ ಇರುವುದರಿಂದ ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಕಾರ್ಯದಲ್ಲಿ ಏರುಪೇರು ಆಗುವುದರಿಂದ ಮಾನಸಿಕವಾಗಿ ತಯಾರಿದ್ದರೆ ಎಂತಹ ಸ್ಥಿತಿಯನ್ನು ಸರಿದೂಗಿಸಿಕೊಳ್ಳಬಹುದು. ನಿಮ್ಮ ಆರೋಗ್ಯ ಹಾಗೂ 2025ರಲ್ಲಿ ನೀವು ಮಾಡುಬೇಕಾದ ಕಾರ್ಯದ ಬಗ್ಗೆ ಇಲ್ಲಿ ತಿಳಿಸಲಾಗಿದೆ.

Virgo Yearly Horoscope 2025: ಈ ರಾಶಿಯವರಿಗೆ ದೈವಾನುಗ್ರಹಗಳ ಫಲವಾಗಿ ಈ ವರ್ಷವನ್ನು ಗೆಲ್ಲಲು ಸಾಧ್ಯ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Dec 31, 2024 | 5:40 PM

Share

ಬಹಳ ಸುಖದಿಂದ ಕಾಲ ಕಳೆದ ನಿಮಗೆ ಈ ವರ್ಷ ಅದು ಕಡಿಮೆಯಾಗಲಿದೆ. ನವಮದಲ್ಲಿ ಇರುವ ಗುರುವು ದಶಮಕ್ಕೆ ಹೋಗುವನು. ಸಪ್ತಮದ ಇದ್ದ ರಾಹುವು ಷಷ್ಠಕ್ಕೆ ಬರುವನು. ಹಾಗೆಯೇ ಕೇತುವು ದ್ವಾದಶ ಸ್ಥಾನಕ್ಕೆ ಹೋಗುವನು. ಆದ್ದರಿಂದ ಈ ವರ್ಷ ಗ್ರಹಗಳು ಅಶುಭಸ್ಥಾನದಲ್ಲಿ ಇರುವುದರಿಂದ ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಕಾರ್ಯದಲ್ಲಿ ಏರುಪೇರು ಆಗುವುದರಿಂದ ಮಾನಸಿಕವಾಗಿ ತಯಾರಿದ್ದರೆ ಎಂತಹ ಸ್ಥಿತಿಯನ್ನು ಸರಿದೂಗಿಸಿಕೊಳ್ಳಬಹುದು. ಪುರುಷ ಪ್ರಯತ್ನ ಹಾಗೂ ದೈವಾನುಗ್ರಹಗಳ ಫಲವಾಗಿ ಈ ವರ್ಷವನ್ನು ಗೆಲ್ಲಲು ಸಾಧ್ಯ.

ಆರೋಗ್ಯ :

ಈ ನಿಮ್ಮ ಆರೋಗ್ಯವು ಕ್ಷೀಣಿಸುವುದು. ಮತ್ತೆ ಮತ್ತೆ ಏನಾದರೂ ತೊಂದರೆ ಕಾಣಿಸುವುದು. ಇದೇ ನಿಮಗೆ ದೌರ್ಬಲ್ಯದಂತೆ ಕಾಣಿಸುವುದು. ಮನೋಬಲವು ಗಟ್ಟಿಯಾಗಿದ್ದರೆ ಎದುರಿಸಬಹುದು. ರಾಹು ದಶೆಯವರಿಗೆ ಅನಾರೋಗ್ಯ ಹೆಚ್ಚು ಕಾಡುವುದು.

ಪ್ರೇಮ ಮತ್ತು ವಿವಾಹ :

ಪ್ರೇಮವು ಕೈಗೂಡುವುದು. ಶನಿ ದಶೆ ಇದ್ದವರಿಗೆ ವರ್ಷಾರಂಭದಲ್ಲಿ ನಿಮ್ಮ ಪ್ರೇಮವು ಫಲಿಸಿ ಸಂತೋಷಗೊಳ್ಳುವಿರಿ. ಉಳಿದವರು ಆತುರ ಪಡದೇ ನಿಧಾನಿಸಿದರೆ ಉತ್ತಮ. ವಿವಾಹವನ್ನು ಆಗಬಯಸುವವರಿಗೆ ಕಾಲ ಕೂಡಿ ಬರದು. ಒಂದಿಲ್ಲ ಒಂದು ಕಾರಣ ವೈವಾಹಿಕ ಜೀವನಕ್ಕೆ ಅಡ್ಡಿ ಮಾಡಬಹುದು.

ಉದ್ಯೋಗ ಮತ್ತು ಆರ್ಥಿಕತೆ :

ಇದು ಬಹಳ ಮುಖ್ಯವಾದ ಅಂಶವೇ ಆದರೂ ಭೂಮಿಯ ವ್ಯವಹಾರ ಮಾಡುವವರಿಗೆ, ಬೋಧಕ ವರ್ಗಕ್ಕೆ ಉತ್ತಮ ಸಮಯ ಈ ವರ್ಷ. ಫೆಬ್ರುವರಿಯ ಅನಂತರ ಹಣಕಾಸಿನ ಹರಿವು ಚೆನ್ನಾಗಿ ಇರಲಿದೆ.ಸಂಗಾತಿಯ ಕಡೆಯಿಂದಲೂ ಆರ್ಥಿಕ ಸಹಾಯವನ್ನು ಬಯಸಬಹುದು. ಆದರೆ ಅದು ಇನ್ನೊಂದು ರೀತಿ ಮನೋಭಾವಕ್ಕೆ ನಾಂದಿಯಾಗಲಿದೆ.

ಕುಟುಂಬ ವ್ಯವಸ್ಥೆ :

ಕುಟುಂಬವು ನಿಮಗೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಇಡೀ ವರ್ಷ ಕುಟುಂಬ ಜೊತೆ ಬಹಳ ಸೌಹಾರ್ದವಾಗಿ ಇರುವಿರಿ. ಸಂಪೂರ್ಣ ಸಹಕಾರವನ್ನು ಪಡೆಯಬಹುದಾಗಿದೆ. ಹಿರಿಯರೂ ನಿಮ್ಮ ಪರವಾಗಿ ಇರುವರು.

ಶತ್ರುಬಾಧೆ :

ಇದು ಈ ವರ್ಷದ ಉತ್ತಮ‌ಫಲಗಳಲ್ಲಿ ಒಂದು. ಅದರಲ್ಲೂ ರಾಹು ದಶೆಯವರಿಗೆ ಶತ್ರುಗಳಿಂದ ಮುಕ್ತಿ ಸಿಕ್ಕಿ ನೆಮ್ಮದಿ ಕಾಣಲು ಸಾಧ್ಯ. ಶತ್ರುತ್ವವನ್ನು ವಿರೋಧಿಗಳು ಬಯಸಿದರೂ ಅದು ಆಗದು. ಇದು ನಿಮ್ಮ ಉನ್ನತಿಗೆ ಪೂರಕವಾದುದಾಗಿದೆ.

ಅದೃಷ್ಟ :

ಇದು ನಿಮ್ಮ ಪಾಲಿಗೆ ಇದ್ದು ಫೆಬ್ರವರಿಯಿಂದ ಇದರ ಪರಿಣಾಮವನ್ನು ಕಾಣಬಹುದು. ವೈವಾಹಿಕ ಜೀವನದಲ್ಲಿ, ಆರ್ಥಿಕವಾಗಿ ಹಾಗೂ ಭೋಗಕ್ಕೆ ಸಂಬಂಧಿಸಿದಂತೆ ಎಲ್ಲವನ್ನೂ ಪಡೆಯಲು ಸಾಧ್ಯ. ಮೊದಲ ಆರು ತಿಂಗಳಲ್ಲಿ ಅಮಿತವಾದ ಸುಖ ನೆಮ್ಮದಿ ನಿಮ್ಮದಾಗುವುದು.

ಎಲ್ಲ ಶುಭಗಳು ನಿಮ್ಮ ಬದುಕಿನಲ್ಲಿ ಬರಬೇಕಾದರೆ ದೈವಾನುಗ್ರಹವೂ ಅವಶ್ಯಕ. ಎಲ್ಲವೂ ಪುರುಷಪ್ರಯತ್ನದಿಂದ ಎಂಬ ಧೋರಣೆ ಬೇಡ. ಲಕ್ಷ್ಮೀನಾರಾಯಣರ ಕೃಪಾಕಟಾಕ್ಷಕ್ಕೆ ಬೇಕಾದ ಉಪಾಸನೆಯನ್ನು ಮಾಡಿ. ವಿಶೇಷ ಸಂದರ್ಭದಗಳು ಬಂದಾಗ ಅದನ್ನು ಬಳಸಿಕೊಂಡು ಶ್ರೇಯಸ್ಸನ್ನು ಕಾಣಬಹುದು.

-ಲೋಹಿತ ಹೆಬ್ಬಾರ್, ಇಡುವಾಣಿ

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ