AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Moon in Cancer: ಜನಿಸುವಾಗ ಕರ್ಕಾಟಕದಲ್ಲಿ ಚಂದ್ರನಿದ್ದರೆ ಏನಾಗುತ್ತದೆ?

ರಾಶಿ ಚಕ್ರದ ನಾಲ್ಕನೆಯ ರಾಶಿಯಾದ ಕರ್ಕಾಟಕ ರಾಶಿಯ ಅಧಿಪತಿ ಚಂದ್ರನಾದ ಕಾರಣ ಈ ರಾಶಿಯಲ್ಲಿ ಜನಿಸಿದರು, ಈ ರಾಶಿಗೆ ಚಂದ್ರನ ಅಗಮನವಾದಾಗ ಅಥವಾ ಚಂದ್ರನ‌ ದಶಾಕಾಲದಲ್ಲಿ ಎಂತಹ ಬದಲಾವಣೆಗಳನ್ನು ಗಮನಿಸಬಹುದು ಎನ್ನುವುದನ್ನು ನೋಡಬೇಕು.

Moon in Cancer: ಜನಿಸುವಾಗ ಕರ್ಕಾಟಕದಲ್ಲಿ ಚಂದ್ರನಿದ್ದರೆ ಏನಾಗುತ್ತದೆ?
ಜನಿಸುವಾಗ ಕರ್ಕಾಟಕದಲ್ಲಿ ಚಂದ್ರನಿದ್ದರೆ ಏನಾಗುತ್ತದೆ?
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jul 17, 2024 | 12:30 AM

Share

ವೇದಂಗ ಜ್ಯೋತಿಷ್ಯದಲ್ಲಿ ಏಳು ಗ್ರಹರೆಂದೂ ಎರಡು ಛಾಯಾಗ್ರಹರೆಂದೂ ವಿಭಾಗವಿದೆ. ಈ ಗ್ರಹರನ್ನು ಆತ್ಮ, ಮನಸ್ಸು, ಬಲ, ಮಾತು ಮುಂತಾದ ವಿಭಾಗ ಹಾಗೂ ಅವುಗಳನ್ನೇ ರಾಜ, ರಾಣಿ, ಯುವರಾಜ, ಮಂತ್ರಿ, ಸೇನಾಪತಿ ಮೊದಲಾಗಿ ರಾಜ್ಯದ ವಿಂಗಡಣೆಯನ್ನೂ ಮಾಡಿದ್ದಾರೆ.

ರಾಶಿ ಚಕ್ರದಲ್ಲಿ ವಿಶೇಷವೆಂದರೆ ಎಲ್ಲ ಗ್ರಹರಿಗೂ ಎರೆಡು ರಾಶಿಗಳ ಆಧಿಪತ್ಯವಿದೆ. ಸೂರ್ಯ ಹಾಗು ಚಂದ್ರರಿಗೆ ಒಂದೇ. ಕರ್ಕಾಟಕವು ಚಂದ್ರನದ್ದಾದರೆ, ಸಿಂಹವು ಸೂರ್ಯನದ್ದು. ಏಕೆಂದರೆ ಅವರು ರಾಜ ಹಾಗೂ ರಾಣಿಯರಾದ ಕಾರಣ ಉಳಿದೆಲ್ಲ ಗ್ರಹರ ವೀಕ್ಷಣೆಯನ್ನೂ ಚಲಿಸಲು ಪ್ರೇರಣೆಯನ್ನೂ ಕೊಡುತ್ತವೆ.

ರಾಶಿ ಚಕ್ರದ ನಾಲ್ಕನೆಯ ರಾಶಿಯಾದ ಕರ್ಕಾಟಕ ರಾಶಿಯ ಅಧಿಪತಿ ಚಂದ್ರನಾದ ಕಾರಣ ಈ ರಾಶಿಯಲ್ಲಿ ಜನಿಸಿದರು, ಈ ರಾಶಿಗೆ ಚಂದ್ರನ ಅಗಮನವಾದಾಗ ಅಥವಾ ಚಂದ್ರನ‌ ದಶಾಕಾಲದಲ್ಲಿ ಎಂತಹ ಬದಲಾವಣೆಗಳನ್ನು ಗಮನಿಸಬಹುದು ಎನ್ನುವುದನ್ನು ನೋಡಬೇಕು.

ಇದನ್ನೂ ಓದಿ: ಕರ್ಕಾಟಕ ರಾಶಿಯಲ್ಲಿ ಮಹಿಳಾ ಪರ ಶುಕ್ರ ಪ್ರವೇಶ! ಇವರಿಗೆಲ್ಲ ಅದೃಷ್ಟದ ಬಾಗಿಲು ತೆರೆಯುತ್ತದೆ

ಈ ರಾಶಿಯವರ ನಡೆ ನೇರವಾಗಿ ಇರದು.‌ ವಕ್ರವಾಗಿ, ವೇಗವಾಗಿ ಚಲಿಸುವನು. ಸಾಮಾನ್ಯವಾಗಿ ಏಡಿಯ ನಡೆಯನ್ನು ಗಮನಿಸಿದಾಗ ಗೊತ್ತಾಗುತ್ತದೆ.

ಸ್ತ್ರೀಯರ ಯಾವ ಪಾಶಕ್ಕೂ ಬೀಳದೇ ಸ್ವತಂತ್ರವಾದ ಯೋಚನೆ, ಯೋಜನೆಯನ್ನು ಮಾಡುವನು. ಮೋಹಕ್ಕೆ ಸಿಲುಕದವನು. ಹಿತಮಿತ್ರರನ್ನು ಆತ ಹೊಂದುವನು.

ಬೃಹತ್ ಗಾತ್ರದ ಮನೆಯಲ್ಲಿ ವಾಸಿಸುವನು. ಅಷ್ಟು ಮಾತ್ರವಲ್ಲ, ಸಂಪತ್ತು ಕೂಡ ಸ್ಥಿರವಾಗಿ ಇರದು. ಬಂದ ಸಂಪತ್ತು ಮತ್ತಾವುದೋ ರೀತಿಯಲ್ಲಿ ಖರ್ಚಾಗುವುದು.

ಇವರು ಯಾವದೇ ದಬ್ಬಾಳಿಕೆಯಿಂದ‌ ಮಾತು ಕೇಳುವುದಿಲ್ಲ. ಬದಲಿಗೆ ಉಪಾಯದ ಮೂಲಕ ಅವರಿಂದ‌ ಕೆಲಸವನ್ನು ಮಾಡಿಸಿಕೊಳ್ಳಬೇಕು.‌ ಪ್ರೀತಿಯಿಂದ ಮಾತನ್ನು ಕೇಳಿಸಲು ಸಾಧ್ಯ.

ಹೆಚ್ಚು ಸ್ನೇಹವನ್ನು ಸಂಪಾದಿಸುವರು ಮತ್ತು ಸಮುದ್ರ, ಸರೋವರ, ಉದ್ಯಾನ ಮುಂತಾದ ಪ್ರದೇಶವನ್ನು ಇಷ್ಟಪಡುವರು. ಇಂತಹ ಅಲ್ಲಿಯೇ ಅವರ ವಾಸವು ಹೆಚ್ಚಾಗಿರುವುದು.

ಹೀಗೆ ಇವೆಲ್ಲವೂ ಕರ್ಕಾಟಕ ರಾಶಿಯವರ ಲಕ್ಷಣವಾಗಿದೆ. ಇವುಗಳನ್ನು ಚಂದ್ರದಶಾ ಕಾಲದಲ್ಲಿ, ಚಂದ್ರನು ಕರ್ಕಾಟಕ ರಾಶಿಗೆ ಬಂದಾಗ ಆಗುತ್ತದೆ.‌ ಅದರಲ್ಲಿಯೂ ಪುಷ್ಯ ಹಾಗೂ ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದವರ ಸ್ವಭಾವದಲ್ಲಿ ಇದು ಅಧಿಕವಾಗಿ ಗೋಚರಿಸುತ್ತದೆ. ಪುನರ್ವಸು ನಕ್ಷತ್ರದಲ್ಲಿ ಕಡಿಮೆಯಾಗಿಯೂ ಕೆಲವು ಮಾತ್ರವೇ ಕಾಣಿಸುವಂತಹದ್ದೂ ಆಗಿರುತ್ತದೆ.

-ಲೋಹಿತ ಹೆಬ್ಬಾರ್ – 8762924271

ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್