Daily Horoscope 17 July 2024: ಈ ರಾಶಿಯವರಿಗೆ ಸಹೋದ್ಯೋಗಿಗಳಿಂದ ಧನಸಹಾಯ; ದಿನ ಭವಿಷ್ಯ ಇಲ್ಲಿದೆ

ಜ್ಯೋತಿಷ್ಯವು ಬಾಹ್ಯಾಕಾಶದ ಕಾಯಗಳ ಸ್ಥಾನಗಳ ಆಧಾರದ ಮೇಲೆ ಮಾನವನ ವ್ಯಕ್ತಿತ್ವ, ಭವಿಷ್ಯ ಇತ್ಯಾದಿಗಳನ್ನು ತಿಳಿಯಬಹುದೆಂಬ ನಂಬಿಕೆ. ಈ ಜ್ಯೋತಿಷ್ಯವನ್ನು ಅಥವಾ ನಿತ್ಯ ಭವಿಷ್ಯವನ್ನು (Horoscope) ಕೆಲ ಜನರು ನಂಬುತ್ತಾರೆ. ಮತ್ತೆ ಕೆಲ ಜನರು ನಂಬುವುದಿಲ್ಲ. ಆದಾಗ್ಯೂ ಮತ್ತೆ ಕೆಲ ಜನರು ಹವ್ಯಾಸಕ್ಕಾಗಿ ಅಥವಾ ಇಂದು ಅವರ ಜೀವನದಲ್ಲಿ ಏನು ಘಟಿಸಲಿದೆ ಎಂಬುವುದನ್ನು ತಿಳಿಯಲು ನಿತ್ಯ ತಮ್ಮ ರಾಶಿ ಭವಿಷ್ಯವನ್ನು ನೋಡುತ್ತಾರೆ. ಇನ್ನು ಜುಲೈ  17ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope 17 July 2024: ಈ ರಾಶಿಯವರಿಗೆ ಸಹೋದ್ಯೋಗಿಗಳಿಂದ ಧನಸಹಾಯ; ದಿನ ಭವಿಷ್ಯ ಇಲ್ಲಿದೆ
ರಾಶಿ ಭವಿಷ್ಯ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 17, 2024 | 12:06 AM

ಜ್ಯೋತಿಷ್ಯವು ಪ್ರಪಂಚದಾದ್ಯಂತದ ಸಂಸ್ಕೃತಿಗಳಲ್ಲಿ ಶತಮಾನಗಳಿಂದಲೂ ಕಾಣಬಹುದು. ಕೆಲವರು ಜ್ಯೋತಿಷ್ಯವನ್ನು ಆತ್ಮಾವಲೋಕನ ಮತ್ತು ತಿಳುವಳಿಕೆಗೆ ಉಪಯುಕ್ತ ಸಾಧನವೆಂದು ಪರಿಗಣಿಸಿದರೆ, ಮತ್ತೆ ಕೆಲವರು ಎಲ್ಲರಂತೆ ತಮ್ಮ ರಾಶಿ ಭವಿಷ್ಯವನ್ನು ನೋಡುತ್ತಾರೆ. ಬುಧವಾರದ (ಜುಲೈ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ ಎಂದು ಇಲ್ಲಿ ತಿಳಿಯಿರಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ಸಾಧ್ಯ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 13 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ 12:39 ರಿಂದ 14:15ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:50 ರಿಂದ 09:26ರ ವರೆಗೆ, ಗುಳಿಕ ಕಾಲ 11:02ರಿಂದ 12:39ರ ವರೆಗೆ.

ಮೇಷ ರಾಶಿ : ನಿಮ್ಮ ಸಹೋದ್ಯೋಗಿಗಳು ನಿಮಗೆ ಅನಿವಾರ್ಯವಾಗಿ ಬಂದ ಸಂಕಟಕ್ಕೆ ಧನಸಹಾಯ ಮಾಡುವರು. ಇಂದು ನಿಮ್ಮ ಅನೇಕ ದಿನಗಳ ಕಾಲ ಬಾಕಿ ಇರುವ ಕೆಲಸಗಳು ಒಂದೊಂದಾಗಿಯೇ ಸಮಾಪ್ತಿಯಾಗಲಿದೆ‌. ಬಂಧುಗಳ ಜೊತೆ ವಿವಾದವು ಆಗಬಹುದು. ಸಂಗಾತಿಯ ಆರೋಗ್ಯವನ್ನು ನೋಡಿಕೊಳ್ಳಬೇಕಾಗುವುದು. ಅಪರಿಚಿತರನ್ನು ನಂಬಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆಯು ಕೆಲವು ವಿಚಾರದಲ್ಲಿ ಕಾಣಿಸುವುದು. ಮಕ್ಕಳಿಗೆ ಸಮಯ ಕೊಡಲಾಗದಷ್ಟು ಕಾರ್ಯದಲ್ಲಿ ನಿರತರಾಗುವಿರಿ. ಇಂದು ನಿಮ್ಮ ಶ್ರಮ ಹೆಚ್ಚು ಆದಾಯ ಕಡಿಮೆಯಾಗಬಹುದು. ನಿಮ್ಮ ವೈವಾಹಿಕ ಜೀವನದ ಕೆಲವು ಹಳೆಯ ನೆನಪುಗಳು ಖುಷಿಯನ್ನು ಕೊಡುವುದು. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವಿರಿ. ಅಧಿಕಾರದಲ್ಲಿ ಇದ್ದರೂ ವಿನಯತೆಯು ನಿಮ್ಮನ್ನು ಮೇಲಕ್ಕೆ ಏರಿಸುವುದು.

ವೃಷಭ ರಾಶಿ : ಇಂದು ನೀವು ವಹಿಸಿಕೊಂಡ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯವಾಗುವುದು. ಇಂದು ನಿಮಗೆ ಅಪರೂಪದ ವ್ಯಕ್ತಿಗಳ ಭೇಟಿಯಾಗಬಹುದು. ಘಟನೆಗಳು ನಿಮ್ಮ ಅಲೋಚನಾ ಕ್ರಮಗಳು ಬದಲಿಸಬಹುದು.‌ ನಿಮ್ಮ ಕೆಲಸದ ಬಗ್ಗೆ ಹೆಚ್ಚು ತಿಳಿದಿರುವುದು ಒಳ್ಳೆಯದು. ನಿಮ್ಮ ಪರೀಕ್ಷೆಗಳೂ ಆಗಬಹುದು. ಆಪ್ತರೇ ನಿಮ್ಮನ್ನು ಎಲ್ಲರೆದುರು ಟೀಕಿಸಿಯಾರು. ಯಾರನ್ನೂ ಹೆಚ್ಚು ಅವಲಂಬಿಸಿ ಯೋಜನೆಗಳನ್ನು ಘೋಷಿಸಿ. ಯಾರನ್ನೋ ಮೆಚ್ಚಿಸಲು ಕೆಲಸವನ್ನು ಮಾಡಬೇಕಾಗುವುದು. ನಿಮ್ಮ ಉದ್ಯೋಗದ ಕನಸು ನನಸಾಗುವ ಹಂತಕ್ಕೆ ತಲುಪಬಹುದು. ಅಶಿಸ್ತಿನ ವ್ಯವಸ್ಥೆಯಿಂದ ಸಿಟ್ಟಾಗುವಿರಿ. ಸರಕಾರವನ್ನು ಕೇಳಿದರೆ ಆಗುವುದಿಲ್ಲ ಎನುವುದು ಬೇಡ. ನಿಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ನೀವು ಕಾಣುವುದು ಸಮಂಜಸವಲ್ಲ. ನಿಮ್ಮ ಸಕಾರಾತ್ಮಕ ನಿಲುವು ಹಲವರಿಗೆ ಇಷ್ಟವಾಗುವುದು. ನೀವು ಕೆಲಸದಲ್ಲಿ ಪಾರದರ್ಶಕತೆಯನ್ನು ಹೆಚ್ಚು ಇಷ್ಟಪಡುವಿರಿ.

ಮಿಥುನ ರಾಶಿ : ನಿಮ್ಮ ಜೀವನದಲ್ಲಿ ತಪ್ಪು ತಿಳುವಳಿಕೆಗಳೇ ಹೆಚ್ಚು ತೋರುವುದು. ನಿಮ್ಮ ಮಾತಿನ ಮೇಲೆ ಗಮನವಿರಲಿ. ನೀವು ಶಾಂತವಾಗಿ ಇದ್ದಷ್ಟೂ ನಿಮ್ಮ ಸಂಬಂಧವನ್ನು ಗಟ್ಟಿಯಾಗುವುದು. ಯಾರ ಮೇಲೂ ಗೊತ್ತಿಲ್ಲದೇ ಏನನ್ನಾದರೂ ಹೇಳಿಬಿಡಬೇಡಿ. ಅದರಿಂದ ನೋವಾದೀತು ಅವರಿಗೆ.‌ ಆಯ್ಕೆ‌ ಮಾಡಿಕೊಳ್ಳುವಾಗ ಎಡವುವಿರಿ. ನಿಮ್ಮ ಯೋಗ್ಯತೆಯ ಪರೀಕ್ಷೆಗೆ ಆಗಬಹುದು. ಎಚ್ಚರವಾಗಿರಿ. ಮಕ್ಕಳ ಯಶಸ್ಸನ್ನು ಎಲ್ಲರೂ ಖುಷಿಯಿಂದ ಹಂಚಿಕೊಳ್ಳುವಿರಿ. ಸಹೋದರ ಜೊತೆಗಿನ ಸಂಬಂಧವು ಅತ್ಯಂತ ಆಪ್ತವಾಗಲಿದೆ. ಅತಿಯಾದ ಚಿಂತೆಯಿಂದ ಯಾವ ಪ್ರಯೋಜನವಾಗದು. ಇಂದು ನಿಮಗೆ ಬಂಧನದಿಂದ ಬಿಡುಗಡೆಯಾದ ಅನಿಭವವಾಗಿವುದು. ಇಲ್ಲವಾದರೆ ಮುಂದೆ ನೀವು ನಷ್ಟವನ್ನು ಕಷ್ಟವನ್ನೂ ಅನುಭವಿಸಬೇಕಾಗಬಹುದು. ವ್ಯಾಪಾರಸ್ಥರು ಸುಲಭದಲ್ಲಿ ಲಾಭವನ್ನು ಗಳಿಸುವುದು ಕಷ್ಟವಾದೀತು. ನೀವೇ ಮಾಡುವ ಕಾರ್ಯವನ್ನು ಖುದ್ದಾಗಿ ನಿರ್ವಹಿಸಿ.

ಕರ್ಕಾಟಕ ರಾಶಿ : ಇಂದು ಪ್ರತಿ ಸಣ್ಣ ವಿಚಾರಕ್ಕೂ ಕೋಪ‌ ಮಾಡಿಕೊಳ್ಳುವಿರಿ. ಇಂದು ನೀವು ಬಹಳ ಮುಖ್ಯವಾದ ಮತ್ತು ನಿಮಗೆ ಪ್ರಿಯವಾದ ವಸ್ತುವೊಂದನ್ನು ಪಡೆಯಬಹುದು. ಹೆಚ್ಚು ಉತ್ಸಾಹದಾಯಕವಾದ ದಿನ‌ ನಿಮ್ಮದಾಗಲಿದೆ. ರೋಗಕ್ಕೆ ಚಿಕಿತ್ಸೆಯನ್ನು ಪಡೆಯಬೇಕು ಎಂಬ ಮನೋಭಾವ ಬಾರದೇ ಇರಬಹುದು. ಹೊಸದಾಗಿ ವಿದ್ಯಾಭ್ಯಾಸವನ್ನು ಮಾಡಿ ಮುಗಿಸಿದವರಿಗೆ ಕೆಲಸವು ಸಿಗುವುದು ಕಷ್ಟವಾದೀತು. ಸ್ವಂತ ವ್ಯವಹಾರದಲ್ಲಿ ಲಾಭವಿರಲಿದೆ. ಕೆಲವರ ಮಾತು ನಿಮಗೆ ಕಿರಿಕಿರಿಯಾದೀತು. ಹಣವನ್ನು ಖರ್ಚು ಮಾಡಲು ಯೋಚಿಸಿ. ಕಛೇರಿಗೆ ಹೋಗುವಾಗ ಏನಾದರೂ ಆದೀತು. ನಿಮಗೆ ಗೊತ್ತಿರುವ ವಿಚಾರವನ್ನು ಇನ್ನೊಬ್ಬರಿಗೆ ಹಂಚುವಿರಿ. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆಯನ್ನು ಬಲದಿಂದ ತಂದುಕೊಳ್ಳಬೇಕು. ಉದ್ಯಮದಲ್ಲಿ ಶತ್ರುಗಳು ಹುಟ್ಟಿಕೊಳ್ಳಬಹುದು. ನಿಮ್ಮ ಸ್ಥಗಿತಗೊಂಡ ಕೆಲಸವು ಪೂರ್ಣವಾಗುವ ಹಂತಕ್ಕೆ ಹೋಗಬಹುದು. ಅನಾರೋಗ್ಯದ ವಿಷಯದಲ್ಲಿ ಬರುವ ಸೂಚನೆಯನ್ನು ತಿರಸ್ಕರಿಸುವುದು ಬೇಡ.

ಸಿಂಹ ರಾಶಿ : ಇಂದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳ ಶ್ರಮ ಸಫಲವಾಗದು. ಭೂಮಿಯ ವ್ಯವಹಾರದಲ್ಲಿ ಉತ್ತಮ‌ ನಡೆ ಇರಲಿದೆ. ನಡೆಯುವಾಗ ಎಚ್ಚರಿಕೆ ಇರಲಿ. ಭವಿಷ್ಯದ ತೀವ್ರವಾಗಿ ಕಾಡುವುದು. ಸಾಲದಿಂದ ನಿಮಗೆ ಬಹಳ ತೊಂದರೆಯಾದೀತು. ಆರೋಗ್ಯವನ್ನು ಕಾಪಾಡಿಕೊಳ್ಳಿ. ಅಪರಿಚಿತರಿಂದ ನಿಮಗೆ ದುಃಖವಾದೀತು. ದುರಭ್ಯಾಸವನ್ನು ಅಂಟಿಸಿಕೊಳ್ಳುವ ವಾತಾವರಣ ನಿಮ್ಮ ಸುತ್ತ‌ ನಿರ್ಮಾಣವಾಗುವುದು. ನಗು ಮುಖವೇ ನಿಮ್ಮ ಹಲವಾರು ಕೆಲಸಗಳನ್ನು ಮಾಡಿಕೊಡುವುದು. ಮಾತನ್ನು ಸ್ಪಷ್ಟವಾಗಿ ಆಡಿ. ಒತ್ತಡವು ಹೆಚ್ಚಿದ್ದೀತು. ಕುಳಿತಲ್ಲೇ ಕುಳಿತರೇ ಆಗದು. ಬಂಧುಗಳ ವಿಚಾರದಲ್ಲಿ ನಿಮಗೆ ನಂಬಿಕೆ ಕಡಿಮೆಯಾಗುವುದು. ನಿಮಗೆ ಸಿಕ್ಕ ಅನಾದರದಿಂದ ಬೇಸರವಾಗಬಹುದು. ಮಕ್ಕಳ ಉದ್ಯಮಕ್ಕೆ ನೀವು ಸಹಾಯ ಮಾಡುವಿರಿ. ದ್ವೇಷದಿಂದ ನಿಮ್ಮ ಜೀವನವು ಮಾರ್ಗಭ್ರಷ್ಟವೂ ಆಗಬಹುದು. ಹಳೆಯ ವೈಮನಸ್ಯವನ್ನು ಬಿಟ್ಟು ಮುಂದಡಿ ಇಡಬೇಕು.

ಕನ್ಯಾ ರಾಶಿ : ಇಂದು ಅಪರಿಚಿತರು ಮಾರಾಟದ ವಿಚಾರದಲ್ಲಿ ಮೋಸ ಮಾಡುವರು. ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು ನೀವು ಶ್ರಮಿಸಬೇಕಾಗುತ್ತದೆ. ಹಳೆಯ ಖಾಯಿಲೆಗಳು ಪುನಃ ಬರುವ ಸಾಧ್ಯತೆ ಇದೆ. ಕಳೆದುಕೊಂಡಿದ್ದನ್ನು ಪಡೆದುಕೊಳ್ಳಲು ಯತ್ನಿಸಬಹುದು. ಕುಟುಂಬಕ್ಕೆ ಸಹಕಾರ ಕೊಡಲಿದ್ದೀರಿ. ಇಂದಿನ ಕೆಲವು ಸಮಯವನ್ನು ವ್ಯರ್ಥವಾಗಿ ಕಳೆಯಬೇಕಾಗುವುದು. ವಿವಾದದ ಹೇಳಿಕೆಗಳಿಂದ ನಿಮಗೆ ತೊಂದರೆಯಾದೀತು. ಮನಸ್ಸಿನಲ್ಲಿ ಅಶಾಂತಿಯು ಇರಲಿದೆ. ಎಂದೋ ಮಾಡಿದ ಹೂಡಿಕೆಯಿಂದ ಸಹಾಯವಾಗಲಿದೆ. ನಿಮ್ಮ ಸಂಬಂಧವನ್ನು ಒಂದು ಹೆಜ್ಜೆ ಮುಂದೆ ಇಡಲು ಯೋಚಿಸುತ್ತೀರಿ. ಎಲ್ಲದಕ್ಕೂ ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತ ಯಾವ ಕಾರ್ಯವನ್ನೂ ಸಫಲ ಮಾಡಲಾಗದು. ನಿಮ್ಮ ಕೆಲಸದ ಬಗ್ಗೆ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಹಕಾರ ಲಭ್ಯ.

ತುಲಾ ರಾಶಿ : ಸಾಂಸಾರಿಕ ಬದುಕಿನಲ್ಲಿ ಇಂದು ಸಣ್ಣಪುಟ್ಟ ಕಲಹಗಳಿದ್ದರೂ ತೂಗಿಸಿಕೊಂಡು ಹೋಗುವ ಸಾಮರ್ಥ್ಯ ಇರುವುದು. ಮರ್ಯಾದಿಗೆ ಅಂಜಿ ಮಾಡಬೇಕಾದ ಕೆಲಸಗಳನ್ನು ಮುಂದೂಡುವಿರಿ. ಧಾರ್ಮಿಕ ಆಚರಣೆಗಳಲ್ಲಿ ಶ್ರದ್ಧೆಯು ಕಡಿಮೆ ಆದೀತು. ಹಿಂದೆ ಮಾಡಿದ ಸಾಮಾಜಿಕ ಕೆಲಸಗಳಿಂದ ಗೌರವು ಸಿಗಲಿದೆ. ನೂತನ ಸ್ಥಳವನ್ನು ಖರೀದಿಸಲಿದ್ದೀರಿ. ಹೊಗಳಿಕೆಯಿಂದ ನಿಮ್ಮ ಬಳಿ ಕಾರ್ಯವನ್ನು ಮಾಡಿಸಿಕೊಳ್ಳುವರು. ಹಿತಶತ್ರುಗಳ ಬಗ್ಗೆ ತಿಳಿದಿರುವುದು ಒಳ್ಳೆಯದು. ಅವರ ಜೊತೆ ಹೆಚ್ಚಿನ ಚರ್ಚೆಯನ್ನು ಮಾಡಬೇಡಿ. ನಿಮ್ಮ ಪ್ರೇಮಿ ಅತ್ಯಂತ ಅನಿರೀಕ್ಷಿತ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ನಿಮ್ಮದಾದ ಸ್ವಂತ ಬಳಗವನ್ನು ತಯಾರು ಮಾಡಿಕೊಳ್ಳುವಿರಿ. ಇಂದು ದಾಯಾದಿ ಕಲಹವು ತಾರಕಕ್ಕೆ ಹೋಗಬಹುದು. ಸಹೋದ್ಯೋಗಿಗಳು ನಿಮ್ಮ ಬಗ್ಗೆ ದೂರಬಹುದು. ಯಾವಾಗಲೋ ಮಾಡಿದ ಸಾಮಾಜಿಕ ಕೆಲಸಗಳಿಂದ ಗೌರವ ಪ್ರಾಪ್ತಿಯಾಗುವುದು.

ವೃಶ್ಚಿಕ ರಾಶಿ : ಎಂತಹ ಆಪ್ತರಾದರೂ ಸಹಕಾರವನ್ನು ಕೇಳುವಾಗ ಹಿಂದೇಟು ಹಾಕುವಿರಿ. ನೀವು ಏನನ್ನಾದರೂ ಸಾಧಿಸುವ ನಿಮ್ಮ ಹೋರಾಟದಲ್ಲಿ ಸ್ವಲ್ಪ ನಿರ್ದಯತ್ವದಿಂದ ಇರಬೇಕಾಗುತ್ತದೆ. ಏನೂ ಗೊತ್ತಿಲ್ಲದೇ ದ್ವೇಷಮಾಡಬೇಡಿ ಯಾರನ್ನೂ. ನಿಮ್ಮ ಅಹಂಕಾರವೇ ನಿಮಗೆ ಪೆಟ್ಟುಕೊಡಬಹುದು. ಮನಸ್ಸನ್ನು ಗಟ್ಟಿ ಮಾಡಿಕೊಂಡು ಮುನ್ನಡೆಯಿರಿ. ಉತ್ತಮ ಆಲೋಚನೆಗಳು ನಿಮ್ಮನ್ನು ಕೈ ಹಿಡಿದು ನಡೆಸುವುವು. ಯಾರನ್ನೋ ಸಂಗಾತಿಯನ್ನಾಗಿ ಒಪ್ಪಿಕೊಳ್ಳಲು ಇಷ್ಟವಾಗದು. ಪ್ರಯಾಣವನ್ನು ಅನಿವಾರ್ಯವಾದರೆ ಮಾಡಿ. ಆಲಸ್ಯಕ್ಕೆ ನೀವೆರ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಿ. ಕೆಲಸಗಳನ್ನು ಅದು ಕೆಡಿಸೀತು. ಈ ಸಮಯದಲ್ಲಿ ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ನಾಟಕೀಯತೆಯಿಂದ ನೀವು ಹೊರಬಂದರೆ ಒಳ್ಳೆಯದು. ಕಛೇರಿಯಲ್ಲಿ ನಿಮ್ಮ ಮಾತು ಮತ್ತು ನಡವಳಿಕೆಯ ಬಗ್ಗೆ ಗಮನವಿರುವುದು.

ಧನು ರಾಶಿ : ಇಂದು ನಿಮಗೆ ಹಳೆಯ ಘಟನೆಗಳಿಂದ ಪಾಪಪ್ರಜ್ಞೆ ಕಾಡಬಹುದು. ನಿಮ್ಮ ಕೆಲಸವನ್ನು ಬದಿಗಿರಿಸಿ ನಿಮಗೆ ಸಿಕ್ಕ ಯಶಸ್ಸನ್ನು ಅನುಭವಿಸಿ. ಹತ್ತಾರು ಅವಕಾಶಗಳು ತೆರೆದಿದ್ದರೂ ಯಾವುದೂ ನಿಮಗೆ ಸೂಕ್ತವಾಗಿ ಇರಲಾರದು. ಯೋಗ್ಯವಾದುದು ಸಿಕ್ಕರೂ ಇನ್ನೊಬ್ಬರ ಪಾಲಾಗುವ ಸಾಧ್ಯತೆ ಇದೆ. ನೀವು ಸರಿಯಾಗಿ ಇದ್ದರೂ ಬೇರೆಯವರಿಗೆ ಸರಿ ಇಲ್ಲದಂತೆ ಕಾಣಿಸುವುದು. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೋಲುವಿರಿ. ಉದ್ವೇಗವು ನಿಮ್ಮ ನೆಮ್ಮದಿಯನ್ನು ಹಾಳು ಮಾಡೀತು. ಕೆಲಸಗಳು ಅಪೂರ್ಣವಾಗಲಿವೆ. ಕಳೆದುದರ ಬಗ್ಗೆ ಚಿಂತೆ ಬೇಡ. ಎಲ್ಲಿಯೂ ವ್ಯಕ್ತಿಗತ ಅಭಿಪ್ರಾಯವನ್ನು ನೀವು ಪ್ರಕಟಿಸುವುದು ಬೇಡ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯವು ಹೆಚ್ಚಾಗಬಹುದು. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಉತ್ತಮ ಅವಕಾಶಗಳು ಸಣ್ಣ ಅಂತರದಲ್ಲಿ ಕೈ ತಪ್ಪಿವುದು.‌ ಅನಿವಾರ್ಯವಾಗಿ ಸಿಕ್ಕ ಜವಾಬ್ದಾರಿಯನ್ನು ನಿಭಾಯಿಸುವುದು ಕಷ್ಟ.

ಮಕರ ರಾಶಿ : ಇಂದು ನಿಮ್ಮ ಆಸ್ತಿಯ ಮಾರಾಟಕ್ಕೆ ಸಂಬಂಧಿಸಿದಂತೆ ಅಂತಿಮ‌ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಮಾನಸಿಕ ಒತ್ತಡದಿಂದ ಹೊರಬರಲು ಪ್ರಯತ್ನಿಸಿ. ಎಲ್ಲದಕ್ಕೂ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡುವರು. ನಿಮಗೆ ಅದು ಇಷ್ಟವಾಗದೇ ಕಿರಿಕಿರಿ ಆದೀತು. ನಿಮ್ಮವರ ಮೇಲೆ ನಂಬಿಕೆ ಇರಲಿ. ಬಂದಿದ್ದನ್ನು ಸ್ವೀಕರಿಸುವ ಸ್ವಭಾವದಿಂದ ಹೆಚ್ಚು ಸುಖವಾಗಿ ಇರಬಹುದು. ಭೂಮಿಯ ವ್ಯವಹಾರವು ತಕ್ಕ ಮಟ್ಟಿಗೆ ಲಾಭವನ್ನು ನೀಡುತ್ತದೆ, ನಿರೀಕ್ಷಿಸಿದಷ್ಟು ಅಲ್ಲ. ವೃತ್ತಿಯಲ್ಲಿ ನಿಮ್ಮ ಮಾತನ್ನು ಕೇಳಿಸುವುದು ಕಷ್ಡವಾಗುವುದು. ಆದ್ದರಿಂದ ಮಾತನ್ನು ಕಡಿಮೆ ಮಾಡಿ, ಕೆಲಸದ ಕಡೆ ಗಮನವಿರಲಿ. ನೂತನ ವಸ್ತುಗಳನ್ನು ಖರೀದಿಸುವಿರಿ. ಸಂಗಾತಿಯ ನೋವಿನಲ್ಲಿ ಭಾಗಿಯಾಗಲಾಗದು. ನಿಮ್ಮ ಆಯ್ಕೆಯು ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರಬಹುದು. ಸ್ವಂತ ಉದ್ಯಮಿಗಳಿಗೆ ಕಾರ್ಮಿಕರ‌ ಕೊರತೆ ಆಗುವ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ಪಾಲುದಾರಿಕೆಯನ್ನು ಕೈಬಿಡುವುದು ಒಳ್ಳೆಯದು.

ಕುಂಭ ರಾಶಿ : ಇಂದು ನಿಮ್ಮ ಮನಸ್ಸು ಅನೇಕರ ಸಲಹೆಗಳ ಕಾರಣದಿಂದ ಬಹಳ ಚಂಚಲವಾಗಿರಲಿದೆ. ಸಿಕ್ಕ ಸೌಕರ್ಯಗಳಿಂದ ಕೆಲವು ತೊಂದರೆಗಳನ್ನು ಅನುಭವಿಸಬೇಕಾಗಬಹುದು. ಸಜ್ಜನರ ಸಹವಾಸ ನಿಮಗೆ ಸಿಗಲಿದೆ. ನಿಮ್ಮ ಉತ್ತಮ‌ ಆಲೋಚನೆಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳುವಿರಿ. ಸ್ನೇಹಿತರ ಜೊತೆಗಿನ ಅನುಬಂಧವು ಸ್ವಲ್ಪ ಹದಗೆಡಬಹುದು. ಸಿಕ್ಕ ಅವಕಾಶಗಳನ್ನು ದುರುಪಯೋಗ ಮಾಡಿಕೊಳ್ಳಬಹುದು. ಸುತ್ತಾಟಗಳು ನಿಮಗೆ ಆಯಾಸವನ್ನು ಉಂಟುಮಾಡುವುವು.‌ ಅಂದುಕೊಂಡಷ್ಟು ಕೆಲಸವಾಗಿದ್ದರೂ ಆಗಿರುವಷ್ಟರಲ್ಲಿ ಖುಷಿಯಿರಲಿದೆ. ಜಬಾಬ್ದಾರಿಯಲ್ಲಿ ಸ್ವಲ್ಪ ಹಿನ್ನಡೆಯಾದೀತು. ಎಲ್ಲ ಸಂದರ್ಭವನ್ನೂ ಒಂದೇ ರೀತಿಯಲ್ಲಿ ನೋಡಲಾಗದು. ಸಂಗಾತಿಯ ಜೊತೆ ಕುಳಿತು ದುಃಖದಿಂದ ಸಮಾಧಾನ ಮಾಡುವಿರಿ. ಆರೋಗ್ಯವಾಗಿರಲು, ನೀವು ಅಸಂಬದ್ಧ ಚಿಂತೆಗಳಿಂದಲೂ ದೂರವಿರಬೇಕು. ಹೇಳಬೇಕಾದುದನ್ನು ಸರಿಯಾಗಿ ಹೇಳಿ.

ಮೀನ ರಾಶಿ : ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಸಹಕಾರ ಸಿಗಲಿದೆ. ನಿಮ್ಮ ಪ್ರಯತ್ನಕ್ಕೆ ಅದೃಷ್ಟವೂ ಜೊತೆಯಾಗುವುದು. ಅಲ್ಪ ಪ್ರಯತ್ನದಿಂದ ಇಂದು ಕೆಲಸವನ್ನು ಸಾಧಿಸಿಕೊಳ್ಳಬಹುದು. ನಿಮ್ಮನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡರೂ ಇನ್ನೊಬ್ಬರು ಅದನ್ನು ಬೇರೇ ರೀತಿಯಲ್ಲಿ ಅರ್ಥೈಸುವರು. ಸ್ನೇಹಿತರಿಂದ ಸಹಾಯಗಳು ಸಿಗಬಹುದು. ಸಾಮೂಹಿಕ ಕಾರ್ಯದ ನೇತೃತ್ವ ವಹಿಸುವಿರಿ. ಎಲ್ಲರ ಜೊತೆ ಸಂತೋಷದಿಂದ ಮಾಡುವುದು ಒಳ್ಳೆಯದು. ಸಲುಗಿಯನ್ನು ಹೆಚ್ಚು ಮಕ್ಕಳ ವಿಚಾರದಲ್ಲಿ ಕೊಡುವುದು ಬೇಡ. ಗೃಹದ ನಿರ್ವಹಣೆಗೆ ಅಧಿಕ ಖರ್ಚು ಬರಬಹುದು. ಇದು ಅನಿವಾರ್ಯವಾದುದು ಆಗಿದೆ. ನೂತನ ವಸ್ತುಗಳನ್ನು ಖರೀದಿಸಿದರೂ ಅದನ್ನು ಉಪಯೋಗಿಸಲು ಆಗದೇ, ಇಂದು ಅದನ್ನು ಬಳಸುವಿರಿ. ಕಾನೂನಿಗೆ ವಿರುದ್ಧವಾಗಿ ಕಾರ್ಯವನ್ನು ಮಾಡುವ ಆಲೋಚನೆಯನ್ನು ಮಾಡುವುದಿದ್ದರೆ ಅಂತಹ ಸಾಹಸದಲ್ಲಿ ತೊಡಗಿಕೊಳ್ಳುವುದು ಬೇಡ.

ತಾಜಾ ಸುದ್ದಿ
ಜೈಲೊಳಗಿನ ಅವ್ಯವಹಾರಗಳಲ್ಲಿ ಉನ್ನತಾಧಿಕಾರಿಗಳು ಶಾಮೀಲು: ಆನೇಕಲ್ ನಿವಾಸಿ
ಜೈಲೊಳಗಿನ ಅವ್ಯವಹಾರಗಳಲ್ಲಿ ಉನ್ನತಾಧಿಕಾರಿಗಳು ಶಾಮೀಲು: ಆನೇಕಲ್ ನಿವಾಸಿ
ಎಚ್ಚರಿಕೆ ನೀಡಿದರೂ ಮೀನು ಹಿಡಿಯಲು ನೀರಿಗೆ ಇಳಿದ ಮೀನುಗಾರರು
ಎಚ್ಚರಿಕೆ ನೀಡಿದರೂ ಮೀನು ಹಿಡಿಯಲು ನೀರಿಗೆ ಇಳಿದ ಮೀನುಗಾರರು
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಅಪರಾಧ ಹೆಚ್ಚಿವೆ: ಆರ್ ಅಶೋಕ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಅಪರಾಧ ಹೆಚ್ಚಿವೆ: ಆರ್ ಅಶೋಕ
‘ದೇವಸ್ಥಾನದ ಮುಂದೆ ಆ ವಿಚಾರ ಬೇಡ’; ದರ್ಶನ್ ವಿಚಾರದಲ್ಲಿ ಶ್ರುತಿ ಖಡಕ್ ಮಾತು
‘ದೇವಸ್ಥಾನದ ಮುಂದೆ ಆ ವಿಚಾರ ಬೇಡ’; ದರ್ಶನ್ ವಿಚಾರದಲ್ಲಿ ಶ್ರುತಿ ಖಡಕ್ ಮಾತು
ಇನ್ಫಿನಿಕ್ಸ್ ಲೇಟೆಸ್ಟ್ Infinix Buds Neo ಮತ್ತು Infinix XE27 ಬಿಡುಗಡೆ
ಇನ್ಫಿನಿಕ್ಸ್ ಲೇಟೆಸ್ಟ್ Infinix Buds Neo ಮತ್ತು Infinix XE27 ಬಿಡುಗಡೆ
ತಮ್ಮ ಕೋಪಕ್ಕೆ ಮಾಧ್ಯಮದವರು ಕ್ಯಾರೆ ಅನ್ನದಾಗ ಪರಮೇಶ್ವರ್ ಮೆತ್ತಗಾದರು!
ತಮ್ಮ ಕೋಪಕ್ಕೆ ಮಾಧ್ಯಮದವರು ಕ್ಯಾರೆ ಅನ್ನದಾಗ ಪರಮೇಶ್ವರ್ ಮೆತ್ತಗಾದರು!
ಬಾಗಲಕೋಟೆ: ಮೃತ ಮಹಾದೇವಿ ಪೋಷಕರಿಗೆ ಮಹಿಳಾ ಆಯೋಗದ ಅಧ್ಯಕ್ಷೆಯಿಂದ ಸಾಂತ್ವನ
ಬಾಗಲಕೋಟೆ: ಮೃತ ಮಹಾದೇವಿ ಪೋಷಕರಿಗೆ ಮಹಿಳಾ ಆಯೋಗದ ಅಧ್ಯಕ್ಷೆಯಿಂದ ಸಾಂತ್ವನ
ಮಂತ್ರಾಲಯದ ರಾಯರ ಮಠದಲ್ಲಿ 350 ಕಲಾವಿದರಿಂದ ರಾಮಾಯಣಂ ಗೀತಗೆ ನೃತ್ಯ, ದಾಖಲೆ
ಮಂತ್ರಾಲಯದ ರಾಯರ ಮಠದಲ್ಲಿ 350 ಕಲಾವಿದರಿಂದ ರಾಮಾಯಣಂ ಗೀತಗೆ ನೃತ್ಯ, ದಾಖಲೆ
VIDEO: ಸಿಟ್ಟಿನಿಂದ ರಿಝ್ವಾನ್​ನತ್ತ ಚೆಂಡೆಸೆದ ಶಕೀಬ್ ಅಲ್ ಹಸನ್
VIDEO: ಸಿಟ್ಟಿನಿಂದ ರಿಝ್ವಾನ್​ನತ್ತ ಚೆಂಡೆಸೆದ ಶಕೀಬ್ ಅಲ್ ಹಸನ್
ವಿಐಪಿ ಖೈದಿಗಳಿಗೆ ‘ಸೇವೆ’ ಒದಗಿಸುವ ಪದ್ಧತಿ ಬಹಳ ವರ್ಷಗಳಿಂದ ನಡೆಯುತ್ತಿದೆ!
ವಿಐಪಿ ಖೈದಿಗಳಿಗೆ ‘ಸೇವೆ’ ಒದಗಿಸುವ ಪದ್ಧತಿ ಬಹಳ ವರ್ಷಗಳಿಂದ ನಡೆಯುತ್ತಿದೆ!