AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನಲ್ಲಿ ತೆಂಗಿನಕಾಯಿಗಳಿಂದ ನಿರ್ಮಾಣಗೊಂಡ 21 ಅಡಿ ಎತ್ತರದ ಶಿವಲಿಂಗ: ಸಾರ್ವಜನಿಕರು ಫಿದಾ

ಮೈಸೂರು ನಗರದ ಆಲನಹಳ್ಳಿ ವೃತ್ತದ ಮೈದಾನದಲ್ಲಿ ತೆಂಗಿನಕಾಯಿಗಳಿಂದ ನಿರ್ಮಾಣಗೊಂಡ ಬೃಹದಾಕಾರ ಶಿವಲಿಂಗ ಜನಾಕರ್ಷಣೆಯಾಗಿದೆ. ಶಿವರಾತ್ರಿ ಅಂಗವಾಗಿ ಆಲನಹಳ್ಳಿಯ ಬ್ರಹ್ಮಕುಮಾರಿಸ್ ಆಶ್ರಮದವರು ತೆಂಗಿನ ಕಾಯಿಗಳಿಂದ ಶಿವಲಿಂಗ ನಿರ್ಮಾಣ ಮಾಡಿದ್ದಾರೆ.

ಮೈಸೂರಿನಲ್ಲಿ ತೆಂಗಿನಕಾಯಿಗಳಿಂದ ನಿರ್ಮಾಣಗೊಂಡ 21 ಅಡಿ ಎತ್ತರದ ಶಿವಲಿಂಗ: ಸಾರ್ವಜನಿಕರು ಫಿದಾ
ತೆಂಗಿನಕಾಯಿಗಳಿಂದ ನಿರ್ಮಾಣಗೊಂಡ 21 ಅಡಿ ಎತ್ತರದ ಶಿವಲಿಂಗ
sandhya thejappa
|

Updated on: Mar 10, 2021 | 12:12 PM

Share

ಮೈಸೂರು: ನಾಡಿನೆಲ್ಲೆಡೆ ಶಿವರಾತ್ರಿ ಜಪ ಜೋರಾಗಿದೆ. ಶಿವರಾತ್ರಿ ಅಂಗವಾಗಿ ಶಿವನ ಜಪ ಮಾಡಲು ಜನ ದೇವಾಲಯಗಳ ಮುಂದೆ ಸಾಲುಗಟ್ಟುತ್ತಿದ್ದಾರೆ. ಈ ನಡುವೆ ಮೊದಲ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 21 ಅಡಿ ಎತ್ತರದ ಬೃಹತ್ ಶಿವಲಿಂಗ ನಿರ್ಮಾಣ ಮಾಡಲಾಗಿದೆ. ಅದೂ ಕೂಡ ಶಿವನ ಪೂಜೆಗೆ ಅರ್ಪಿಸಲಾದ ತೆಂಗಿನಕಾಯಿಗಳಿಂದ ಶಿವಲಿಂಗವನ್ನು ನಿರ್ಮಾಣ ಮಾಡಿರುವುದು ವಿಶೇಷವಾಗಿದೆ.

ಮೈಸೂರು ನಗರದ ಆಲನಹಳ್ಳಿ ವೃತ್ತದ ಮೈದಾನದಲ್ಲಿ ತೆಂಗಿನಕಾಯಿಗಳಿಂದ ನಿರ್ಮಾಣಗೊಂಡ ಬೃಹದಾಕಾರ ಶಿವಲಿಂಗ ಜನಾಕರ್ಷಣೆಯಾಗಿದೆ. ಶಿವರಾತ್ರಿ ಅಂಗವಾಗಿ ಆಲನಹಳ್ಳಿಯ ಬ್ರಹ್ಮಕುಮಾರಿಸ್ ಆಶ್ರಮದವರು ತೆಂಗಿನ ಕಾಯಿಗಳಿಂದ ಶಿವಲಿಂಗ ನಿರ್ಮಾಣ ಮಾಡಿದ್ದಾರೆ. ನುರಿತ 15 ಜನ ಕಲಾವಿದರು 8 ದಿನಗಳ ಕಾಲ ಶಿವಲಿಂಗವನ್ನು ನಿರ್ಮಾಣ ಮಾಡಿದ್ದಾರೆ. ಸುಮಾರು 8 ಸಾವಿರ ತೆಂಗಿನಕಾಯಿಗಳಿಂದ ಈ ಶಿವಲಿಂಗವನ್ನು ನಿರ್ಮಾಣ ಮಾಡಲಾಗಿದೆ. ಬೃಹದಾಕಾರ ಶಿವಲಿಂಗವು 21 ಅಡಿ ಎತ್ತರವಿದ್ದು, 12 ಅಡಿ ಅಗಲ ಇದೆ. ಶಿವರಾತ್ರಿ ಅಂಗವಾಗಿ ನಿರ್ಮಾಣವಾಗಿರುವ ಬೃಹತ್ ಲಿಂಗವನ್ನು ಒಂದು ವಾರಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಸದ್ಯ ಎಲ್ಲರಿಗೂ ಉಚಿತ ಪ್ರವೇಶವನ್ನು ನೀಡಲಾಗಿದ್ದು, ಪೊಲೀಸರು ಅನುಮತಿಕೊಟ್ಟರೆ ಇನ್ನು ಒಂದಷ್ಟು ದಿನ ಪ್ರದರ್ಶನವನ್ನು ವಿಸ್ತರಿಸಲಾಗುತ್ತದೆಯಂತೆ.

4 ಲಕ್ಷ ರೂ. ಖರ್ಚು ತೆಂಗಿನಕಾಯಿಗಳಿಂದ ನಿರ್ಮಾಣಗೊಂಡ ಬೃಹತ್ ಶಿವಲಿಂಗಕ್ಕೆ ಸುಮಾರು 4 ಲಕ್ಷ ರೂ. ಖರ್ಚು ಮಾಡಲಾಗಿದೆಯಂತೆ. ಶಿವಲಿಂಗದ ಸುತ್ತ ಶಾಮಿಯಾನ ಹಾಕಿ ಬರುವ ಭಕ್ತರಿಗೆ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಸುಂದರವಾಗಿ ಮೂಡಿಬಂದಿರುವ ಲಿಂಗವನ್ನು ನೋಡಲು ಜನರು ಈಗಾಗಲೇ ಬರುತ್ತಿದ್ದಾರೆ. ಬೃಹತ್ ಲಿಂಗದ ಬಳಿ ನಿಂತು ಮಹಿಳೆಯರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಶಿವಲಿಂಗಕ್ಕೆ ಶಿವ ಭಕ್ತರು ಹಾಗೂ ಸಾರ್ವಜನಿಕರು ಫಿದಾ ಆಗಿದ್ದಾರೆ.

ಶಿವರಾತ್ರಿ ಅಂಗವಾಗಿ ಆಲನಹಳ್ಳಿಯ ಬ್ರಹ್ಮಕುಮಾರಿಸ್ ಆಶ್ರಮದವರು ಶಿವಲಿಂಗವನ್ನು ನಿರ್ಮಾಣ ಮಾಡಿದ್ದಾರೆ

ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಮಹಿಳೆಯರು

ನಾಳೆ ನಡೆಯುವ ಶಿವರಾತ್ರಿ ಆಚರಣೆಗೆ ಎಲ್ಲೆಡೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶಿವರಾತ್ರಿ ದಿನದಂದು ಹಣ್ಣು ಹಂಪಲು ತಿನ್ನುತ್ತ ಜಾಗರಣೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ನಿರ್ಮಾಣಗೊಂಡಿರುವ ಬೃಹತ್ ಶಿವಲಿಂಗ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ತೆಂಗಿನಕಾಯಿಗಳಿಂದ ನಿರ್ಮಾಣಗೊಂಡ ಶಿವಲಿಂಗ

ಇದನ್ನೂ ಓದಿ

ಕೊಪ್ಪಳ ಜಿಲ್ಲೆಯಲ್ಲಿ ಹಣ್ಣಿನ ಮೇಳ: ಶಿವರಾತ್ರಿ ಹಬ್ಬದ ಸಂತಸ ಹೆಚ್ಚಿಸಿದ ವಿವಿಧ ಉತ್ಪನ್ನಗಳು

Maha Shivaratri 2021: ಶಿವ ಶಿವಾ.. ಶಿವರಾತ್ರಿಗೆ ಇನ್ನೂ ಒಂದು ವಾರ ಇರುವಾಗಲೇ ರಣಬಿಸಿಲಿನ ಆರ್ಭಟ ಶುರು!

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!