AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಅಡುಗೆ ಸಹಾಯಕಿ ಜೊತೆ ಸೆಲ್ಫಿ ತೆಗೆದು ಗ್ರೂಪ್​ಗೆ ಹಾಕಿದ್ದ ಶಿಕ್ಷಕ ಅಮಾನತು

ಅಮಾನತು ಆದ ಶಿಕ್ಷಕನ ಹೆಸರು ಆಂಜನೇಯ ನಾಯ್ಕ. ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕ. ಕೊರೊನಾ ಕಾರಣ ಶಾಲೆಗಳು ಬಂದ್ ಆಗಿವೆ. ಆದರೆ ಈತ ನಿತ್ಯ ಶಾಲೆಗೆ ಬಂದು ಅಡುಗೆ ಸಹಾಯಕಿಯರನ್ನು ಕರೆಸುತ್ತಿದ್ದ. ಅಲ್ಲದೇ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು, ಅದನ್ನ ವಿವಿಧ ಗ್ರೂಪ್​ಗಳಿಗೆ ಹಾಕುತ್ತಿದ್ದ.

ದಾವಣಗೆರೆ: ಅಡುಗೆ ಸಹಾಯಕಿ ಜೊತೆ ಸೆಲ್ಫಿ ತೆಗೆದು ಗ್ರೂಪ್​ಗೆ ಹಾಕಿದ್ದ ಶಿಕ್ಷಕ ಅಮಾನತು
ಅಡುಗೆ ಸಹಾಯಕಿ ಜೊತೆ ಸೆಲ್ಫಿ ತೆಗೆದ ಶಿಕ್ಷಕ
sandhya thejappa
sandhya thejappa|

Updated on: Jul 07, 2021 | 12:06 PM

Share

ದಾವಣಗೆರೆ: ಶಿಕ್ಷಕರು ಎಂದರೆ ಮಕ್ಕಳ ಪಾಲಿಗೆ ದೇವರು ಅಂತಾರೆ. ಆದರೆ ಇವರಲ್ಲಿ ಕೆಲವೊಬ್ಬರು ಕಿಲಾಡಿಗಳು ಇರುತ್ತಾರೆ. ಅಂತವರಿಗೆ ಪಠ್ಯಕ್ಕಿಂತ ಪಠ್ಯೇತರ ಚಟುವಟಿಕೆಗಳಲ್ಲಿಯೇ ಹೆಚ್ಚು ಆಸಕ್ತಿ. ಜಿಲ್ಲೆಯಲ್ಲಿ ಶಿಕ್ಷಕನೊಬ್ಬ ಮಾಡಬಾರದ ಕೆಲಸ ಮಾಡಿ ಅಮಾನತ್ತು ಆಗಿದ್ದಾನೆ. ಶಾಲೆ ಇಲ್ಲದಿದ್ದರೂ ಪ್ರತಿದಿನ ಶಾಲೆಗೆ ಬರುವ ಶಿಕ್ಷಕ, ಬಿಸಿಯೂಟ ಅಡುಗೆ ಸಹಾಯಕಿಯ ಜೊತೆ ಸೆಲ್ಫಿ ತೆಗೆಸಿಕೊಂಡು ಗ್ರೂಪ್​ಗಳಿಗೆ ಹಾಕುತ್ತಿದ್ದ. ಇದೊಂದೆ ಅಲ್ಲ. ಹತ್ತಾರು ಕಾರಣಕ್ಕೆ ಈತನಿಂದ ಇಡೀ ಗ್ರಾಮಸ್ಥರಿಗೆ ಬೇಸರವಾಗುತ್ತಿತ್ತು. ಮೇಲಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಗ್ರಾಮಸ್ಥರು ನೇರವಾಗಿ ಶಿಕ್ಷಣ ಸಚಿವರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದರು.

ಅಮಾನತು ಆದ ಶಿಕ್ಷಕನ ಹೆಸರು ಆಂಜನೇಯ ನಾಯ್ಕ. ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕ. ಕೊರೊನಾ ಕಾರಣ ಶಾಲೆಗಳು ಬಂದ್ ಆಗಿವೆ. ಆದರೆ ಈತ ನಿತ್ಯ ಶಾಲೆಗೆ ಬಂದು ಅಡುಗೆ ಸಹಾಯಕಿಯರನ್ನು ಕರೆಸುತ್ತಿದ್ದ. ಅಲ್ಲದೇ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು, ಅದನ್ನ ವಿವಿಧ ಗ್ರೂಪ್​ಗಳಿಗೆ ಹಾಕುತ್ತಿದ್ದ. ಶಾಲೆಗಳು ತೆರೆದಿದ್ದಾಗ ಈತ ಕುಡಿದು ಬರುತಿದ್ದ. ಅಲ್ಲದೇ ಮಕ್ಕಳಿಂದ ಗುಟ್ಕಾ ತರಿಸುತ್ತಿದ್ದ.

ಎರಡು ವರ್ಷದ ಹಿಂದೆ ಓರ್ವ ಮಹಿಳೆ ಈತನ ವಿರುದ್ಧ ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ. ಈ ಎಲ್ಲ ಕಾರಣಕ್ಕಾಗಿ ಗ್ರಾಮಸ್ಥರು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ದೂರು ನೀಡಿದ್ದರು. ಹೀಗೆ ದೂರು ನೀಡಿದ ತಕ್ಷಣವೇ ಸಚಿವವರು ಜಾಗೃತರಾಗಿ ದಾವಣಗೆರೆ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಅವರಿಗೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಆದೇಶ ನೀಡಿದ್ದರು.

ಪರಮೇಶ್ವರಪ್ಪ ನಡೆಸಿದ ತನಿಖೆಯಲ್ಲಿ ಗ್ರಾಮಸ್ಥರು ಮಾಡಿದ ಆರೋಪಗಳು ಸತ್ಯವಾಗಿದ್ದವು. ಜೊತೆಗೆ ಗ್ರಾಮದ ಬಹುತೇಕರು ಐತನ ವಿರುದ್ಧ ದೂರು ಹೇಳಿದರು. ಎಲ್ಲ ಸಾಕ್ಷಿಗಳನ್ನು ಆಧಾರಿಸಿ ಶಿಕ್ಷಕ ಆಂಜನೇಯ ನಾಯ್ಕ ಎಂಬಾತನನ್ನ ಸೇವೆಯಿಂದ ಅಮಾನತು ಮಾಡಲಾಗಿದೆ.

ಇದನ್ನೂ ಓದಿ

ಪಕ್ಕದಲ್ಲಿ ಪತಿ ಬಂದು ಕುಳಿತುಕೊಳ್ಳುತ್ತಿದ್ದಂತೆ ದೊಡ್ಡದಾಗಿ ಅಳುತ್ತ ಮತ್ತೊಬ್ಬ ಮಹಿಳೆಯನ್ನು ತಬ್ಬಿಕೊಂಡ ವಧು; ಈ ವಿಡಿಯೋ ನೋಡಿದ್ರೆ ನಿಮಗೂ ನಗು ಬರುತ್ತೆ..

ಪೊಲೀಸ್ ಮನೆಯಲ್ಲೇ ಕಳ್ಳತನ ಮಾಡಿ ಕ್ಷಮೆ ಪತ್ರ ಬರೆದಿಟ್ಟ ಖದೀಮ; ಮತ್ತೊಂದೆಡೆ ಕಳ್ಳನಿಗೆ ಮನೆ ಮಾಲೀಕನ ಜಾಣ ಪತ್ರ!

(A teacher who took a selfie with a kitchen maid has been suspended)

Follow Us
sandhya thejappa
sandhya thejappa
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್