AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರಾಶ್ರಿತ ಕೇಂದ್ರದಲ್ಲೇ ಮದುವೆಯಾದ ಪ್ರೇಮಿಗಳು; 3 ವರ್ಷದ ಹಳೆಯ ಪ್ರೀತಿಗೆ ಚಿಕ್ಕಮಗಳೂರಿನಲ್ಲಿ ಕಂಕಣ ಭಾಗ್ಯ

ಳೆದ ಮೂರು ವರ್ಷಗಳ ಹಿಂದೆ ಗಾರೆ ಕೆಲಸ ಮಾಡುವಾಗ ಚನ್ನಗಿರಿಯಲ್ಲಿ ಪ್ರೇಮಾಂಕುರವಾಗಿತ್ತು. ಅಲ್ಲಿಂದ ಬಂದ ಇಬ್ಬರು ಚಿಕ್ಕಮಗಳೂರಿನ ಸಖರಾಪಟ್ಟಣದಲ್ಲಿ ನೆಲೆಸಿದ್ದರು. 45 ವರ್ಷದ ಕುಮಾರ ಎಂಬುವವರಿಗೆ, 40 ವರ್ಷದ ರೇಣುಕಾ ಮೇಲೆ ಪ್ರೀತಿ ಆಗಿದ್ದೇನೋ ನಿಜ ಆದರೆ ಮದುವೆ ಆಗಿರಲಿಲ್ಲ.

ನಿರಾಶ್ರಿತ ಕೇಂದ್ರದಲ್ಲೇ ಮದುವೆಯಾದ ಪ್ರೇಮಿಗಳು; 3 ವರ್ಷದ ಹಳೆಯ ಪ್ರೀತಿಗೆ ಚಿಕ್ಕಮಗಳೂರಿನಲ್ಲಿ ಕಂಕಣ ಭಾಗ್ಯ
ಕುಮಾರ ಮತ್ತುರೇಣುಕಾ
TV9 Web
| Edited By: |

Updated on: Jul 07, 2021 | 11:42 AM

Share

ಚಿಕ್ಕಮಗಳೂರು: ಲಾಕ್​ಡೌನ್​ ಸಮಯದಲ್ಲಿ ಎಲ್ಲಾ ಚಟುವಟಿಕೆಗಳು ಬಂದ್ ಆಗಿತ್ತು. ಒಂದೂರಿನಿಂದ ಮತ್ತೊಂದು ಊರಿಗೆ ಹೋದವರು ಕೂಡ ಅಲ್ಲಿಯೇ ನೆಲೆಸುವಂತಾಗಿತ್ತು. ಹೀಗೆ ಊರು ಬಿಟ್ಟು ಊರು ಸೇರಿದ ಹಲವರು ತಂಗಲು ನೆಲೆ ಇಲ್ಲದೆ, ನಿರಾಶ್ರೀತ ಕೇಂದ್ರದಲ್ಲಿ ವಾಸಿಸಿದ ಅನೇಕ ಘಟನೆಗಳ ಬಗ್ಗೆ ನಾವು ಓದಿದ್ದೇವೆ. ಆದರೆ ಚಿಕ್ಕಮಗಳೂರಿನಲ್ಲಿನ ನಿರಾಶ್ರೀತರ ಕೇಂದ್ರದಲ್ಲಿ ವಿಭಿನ್ನವಾದ ಸನ್ನಿವೇಶವೊಂದು ಎದುರಾಗಿದ್ದು, 3 ವರ್ಷದ ಹಳೆಯ ಪ್ರೀತಿ ಮದುವೆ ಬಂಧನಕ್ಕೆ ಒಳಗಾಗಿದೆ. ಚಿತ್ರದುರ್ಗದ ಚನ್ನಗಿರಿಯಲ್ಲಿ ಪ್ರಿತಿಸುತ್ತಿದ್ದ ಈ ಜೋಡಿ ಚಿಕ್ಕಮಗಳೂರಿನ ಸಖರಾಯಪಟ್ಟಣದಲ್ಲಿ ಜೊತೆಯಾಗಿದ್ದಾರೆ.

ಊರಿಂದ ಊರಿಗೆ ಸಾಗಿ, ಸಿಕ್ಕ ಸಣ್ಣಪುಟ್ಟ ಕೆಲಸವನ್ನೇ ಮಾಡಿಕೊಂಡು ಜೀವನ ಸಾಗಿಸುತ್ತಿದ ರೇಣುಕಾ ಮತ್ತು ಕುಮಾರ ಅವರಿಗೆ ಲಾಕ್​ಡೌನ್​ನಿಂದಾಗಿ ಕೆಲಸವಿಲ್ಲದಂತೆ ಆಗಿದೆ. ಹೀಗಾಗಿ ನಿರಾಶ್ರಿತ ಕೇಂದ್ರ ಸೇರಿದ್ದಾರೆ. ಇಬ್ಬರ ಮೂಲವು ಚಿತ್ರದುರ್ಗ ಜಿಲ್ಲೆ. ಕಳೆದ ಮೂರು ವರ್ಷಗಳ ಹಿಂದೆ ಗಾರೆ ಕೆಲಸ ಮಾಡುವಾಗ ಚನ್ನಗಿರಿಯಲ್ಲಿ ಪ್ರೇಮಾಂಕುರವಾಗಿತ್ತು. ಅಲ್ಲಿಂದ ಬಂದ ಇಬ್ಬರು ಚಿಕ್ಕಮಗಳೂರಿನ ಸಖರಾಪಟ್ಟಣದಲ್ಲಿ ನೆಲೆಸಿದ್ದರು. 45 ವರ್ಷದ ಕುಮಾರ ಎಂಬುವವರಿಗೆ, 40 ವರ್ಷದ ರೇಣುಕಾ ಮೇಲೆ ಪ್ರೀತಿ ಆಗಿದ್ದೇನೋ ನಿಜ ಆದರೆ ಮದುವೆ ಆಗಿರಲಿಲ್ಲ.

ಕೊರೊನಾ ಎರಡನೇ ಅಲೆಯ ಅಬ್ಬರದಲ್ಲಿ ಕೆಲಸ ಸಿಗದಿದ್ದಾಗ ಇಬ್ಬರು ಚಿಕ್ಕಮಗಳೂರಲ್ಲಿ ಮುಂದೇನು ಮಾಡುವುದು ಎಂದು ಚಿಂತೆಯಲ್ಲಿದ್ದರು. ಆಗ ಮಲೆನಾಡು ಕ್ರೈಸ್ತ ಸಂಘ 130 ಜನರಿಗೆ ಉಪಯೋಗವಾಗುವಂತೆ ನಿರಾಶ್ರಿತ ಕೇಂದ್ರ ತೆಗೆದಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಇಬ್ಬರು ಅಲ್ಲಿಗೆ ಸೇರಿಕೊಂಡಿದ್ದಾರೆ. ಆ 130ರಲ್ಲಿ ಇವರಿಬ್ಬರಾಗಿ ಲಾಕ್​ಡೌನ್​ ಸಮಯ ಕಳೆದಿದ್ದಾರೆ. ಪ್ರೀತಿಯ ವಿಷಯ ನಿರಾಶ್ರಿತ ಕೇಂದ್ರದಲ್ಲಿ ತಿಳಿದಿದ್ದು, ನಿರಾಶ್ರಿತ ಕೇಂದ್ರದ ಹಿರಿಯರು ಮದುವೆ ಮಾಡಿಸಿ ಹೊಸ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಮದುವೆ ಸಂಭ್ರಮದಲ್ಲಿ ನಿರಾಶ್ರಿತ ಕೇಂದ್ರದ 130 ಜನರೂ ಕುಣಿದು-ಕುಪ್ಪಳಿಸಿ ನವದಂಪತಿಗೆ ಶುಭಹಾರೈಸಿದ್ದಾರೆ. ಅಲ್ಲದೇ ನವಜೋಡಿಗೆ ಸಹಾಯ ಆಗುವಂತೆ ಇಬ್ಬರಿಗೂ ನಗರದ ಹೋಂ ಸ್ಟೇವೊಂದರಲ್ಲಿ ಕೆಲಸ ಕೂಡ ನೀಡಿದ್ದಾರೆ.

ಒಟ್ಟಾರೆ, ಎಲ್ಲೋ ಪ್ರೀತಿಸಿ ಇನ್ನೆಲ್ಲೋ ಬಂದು ನೆಲೆಸಿದ ಪ್ರೇಮಿಗಳಿಗೆ ಸಹೃದಯಿಗಳು ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ. ಮದುವೆಯಾದ ನವದಂಪತಿ ಕೂಡ ಹೊಸ ಬದುಕಿನ ಬಗ್ಗೆ ಹೊಸ ಇಂಗಿತ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಪ್ತಪದಿಯ ಆರನೇ ಹೆಜ್ಜೆ ಇಡುತ್ತಿದ್ದಂತೆ ಮದುವೆಯೇ ಬೇಡವೆಂದ ವಧು; ಪರಿಪರಿಯಾಗಿ ಮನವೊಲಿಸಿದರೂ ವಿವಾಹಕ್ಕೆ ಒಪ್ಪಲೇ ಇಲ್ಲ

ಕಾಲೇಜು ದಿನಗಳಲ್ಲೇ ಮದುವೆಯಾಗಿದ್ದರು ನೀನಾ ಗುಪ್ತಾ; ವರ್ಷದೊಳಗೆ ಮುರಿದು ಬಿದ್ದ ಮೊದಲ ವಿವಾಹದ ಸತ್ಯ ಆತ್ಮಚರಿತ್ರೆಯಲ್ಲಿ ಬಹಿರಂಗ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್