AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ 4ನೇ ಅಲೆ ಭೀತಿ; ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪಾಲಕರ ಹಿಂದೇಟು, ಪ್ರವೇಶ ಪ್ರಮಾಣ ಶೇ.20ರಷ್ಟು ಇಳಿಕೆ

ಈ ಬಾರಿ ಮೇ 16ರಿಂದ ಶಾಲೆಗಳಿಂದ ಶಾಲೆಗಳು ಶುರುವಾಗಲಿವೆ. ಅಂದಹಾಗೇ, ಖಾಸಗಿ ಶಾಲೆಗಳ ಪ್ರವೇಶಾತಿ ಪ್ರಮಾಣ ಕಡಿಮೆಯಾಗಿದ್ದು ಕೇವಲ ಬೆಂಗಳೂರಲ್ಲಿ ಮಾತ್ರವಲ್ಲ, ಇನ್ನಿತರ ಜಿಲ್ಲೆಗಳಲ್ಲೂ ಇದೇ ಸಮಸ್ಯೆ ತಲೆದೋರಿದೆ.

ಕೊರೊನಾ 4ನೇ ಅಲೆ ಭೀತಿ; ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪಾಲಕರ ಹಿಂದೇಟು, ಪ್ರವೇಶ ಪ್ರಮಾಣ ಶೇ.20ರಷ್ಟು ಇಳಿಕೆ
ಸಾಂಕೇತಿಕ ಚಿತ್ರ
TV9 Web
| Edited By: |

Updated on:Apr 23, 2022 | 1:50 PM

Share

ಕೊರೊನಾ ವೈರಸ್ ಎಂಬುದು ಎಲ್ಲ ಕ್ಷೇತ್ರಗಳ ಮೇಲೆಯೂ ದುಷ್ಪರಿಣಾಮ ಬೀರಿದೆ. ನಮ್ಮ ರಾಜ್ಯ, ದೇಶದಲ್ಲಷ್ಟೇ ಅಲ್ಲ..ಇಡೀ ಪ್ರಪಂಚಕ್ಕೆ ದೊಡ್ಡ ಹೊಡೆತ ಕೊಟ್ಟಿದ್ದು ಕೊರೊನಾ. ಭಾರತದಲ್ಲಿ ಒಟ್ಟು ಮೂರು ಅಲೆಯಲ್ಲಿ ತೊಂದರೆ ಕೊಟ್ಟಿರುವ ಕೊರೊನಾ ಒಮ್ಮೆ ತುಸು ಕಡಿಮೆಯಾಗಿ ಮತ್ತೀಗ ನಿಧಾನಕ್ಕೆ ಹೆಚ್ಚುತ್ತಿದ್ದು, ನಾಲ್ಕನೇ ಅಲೆಯ ಭೀತಿ ಶುರುವಾಗಿದೆ.  ಈ ಮಧ್ಯೆ ಕರ್ನಾಟಕದಲ್ಲಿ ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿ ಪ್ರಮಾಣದಲ್ಲಿ ಕುಸಿತವಾಗಿದ್ದಾಗಿ ಹೇಳಲಾಗುತ್ತಿದೆ. ಕೊರೊನಾದ ನಾಲ್ಕನೇ ಅಲೆ ಭೀತಿಯಿಂದ ಪೋಷಕರು ಪ್ರತಿಷ್ಠಿತ ಶಾಲೆಗಳಿಗೆ ಮಕ್ಕಳ ಅಡ್ಮಿಷನ್​ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಖಾಸಗಿ ಶಾಲೆಗಳ ಪ್ರವೇಶಾತಿ ಪ್ರಮಾಣದಲ್ಲಿ ಶೇ.20ರಷ್ಟು ಕುಸಿತ ಉಂಟಾಗಿದೆ ಎಂದು ಶಾಲೆಗಳೇ ಹೇಳಿಕೊಳ್ಳುತ್ತಿವೆ.

ಕೊರೊನಾ ನಾಲ್ಕನೇ ಅಲೆ ಯಾವಾಗ ಏಳಬಹುದು? ಅದಿನ್ನೆಷ್ಟು ಭೀಕರವಾಗಿರುತ್ತದೆಯೋ ಎಂಬಿತ್ಯಾದಿ ಗೊಂದಲಗಳು ಪೋಷಕರನ್ನು ಕಾಡುತ್ತಿವೆ. ಸಿಕ್ಕಾಪಟೆ ದುಡ್ಡು ಸುರಿದು ದೊಡ್ಡದೊಡ್ಡ ಶಾಲೆಗಳಿಗೆ ಸೇರಿಸಿದರೂ ಕೊರೊನಾ ಸೋಂಕು ಹೆಚ್ಚಾದರೆ ಶಾಲೆಗಳು ಬಂದ್​ ಆಗುತ್ತವೆ. ಲಾಕ್​ಡೌನ್ ಆಗುತ್ತದೆ. ಹೀಗಾದಾಗ ಮಕ್ಕಳಿಗೆ ಆನ್​ಲೈನ್​ಮೂಲಕ ಪಾಠ ಹೇಳಿದರೂ, ಅದು ಆಪ್​ಲೈನ್​ ಕಲಿಕೆಯಂತೆ ಆಗುವುದಿಲ್ಲ. ಹೀಗಾಗಿ ಶಿಕ್ಷಣ ಸರಿಯಾಗಿ ಸಿಗುವುದಿಲ್ಲ ಎಂದು ಯೋಚಿಸುತ್ತಿರುವ ಪಾಲಕರು, ಈ ಬಾರಿ ಮಕ್ಕಳನ್ನು ಸಣ್ಣಪುಟ್ಟ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಿದ್ದಾರೆ.

ಈ ಬಾರಿ ಮೇ 16ರಿಂದ ಶಾಲೆಗಳಿಂದ ಶಾಲೆಗಳು ಶುರುವಾಗಲಿವೆ. ಅಂದಹಾಗೇ, ಖಾಸಗಿ ಶಾಲೆಗಳ ಪ್ರವೇಶಾತಿ ಪ್ರಮಾಣ ಕಡಿಮೆಯಾಗಿದ್ದು ಕೇವಲ ಬೆಂಗಳೂರಲ್ಲಿ ಮಾತ್ರವಲ್ಲ, ಇನ್ನಿತರ ಜಿಲ್ಲೆಗಳಲ್ಲೂ ಇದೇ ಸಮಸ್ಯೆ ತಲೆದೋರಿದೆ. ಒಂದೆಡೆ ಖಾಸಗಿ ಶಾಲೆಗಳಿಗೆ ಶಿಕ್ಷಕರ ಕೊರತೆಯಾಗಿದ್ದರೆ, ಇನ್ನೊಂದೆಡೆ ಈಗ ವಿದ್ಯಾರ್ಥಿಗಳ ಅಡ್ಮಿಷನ್​ ಕೂಡ ಕಡಿಮೆಯಾಗಿದೆ. ಈಗೆರಡು ವರ್ಷಗಳಿಂದ ಶಾಲೆಗಳು ಆಫ್​ಲೈನ್​ ಕ್ಲಾಸ್​ ಮಾಡಿದ್ದೇ ಕಡಿಮೆ. ಲಕ್ಷಾಂತರ ರೂಪಾಯಿ ಫೀ ತುಂಬಿ ಮಕ್ಕಳನ್ನು ಶಾಲೆಗೆ ಕಳಿಸಿದರೂ, ಅವರು ಮನೆಯಲ್ಲೇ ಇರುವಂತಾಗಿದ್ದು ಪಾಲಕರಿಗೆ ನಷ್ಟವೂ ಹೌದು. ಹೀಗಾಗಿ ಪೋಷಕರು ತಮ್ಮ ಮನಸು ಬದಲಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಾಮರಸ್ಯ ಸಂದೇಶ ಸಾರಸಲು ಆನೆಗೊಂದಿಯಿಂದ ಅಂಜನಾದ್ರಿಗೆ ಕಾಂಗ್ರೆಸ್ಸಿಗರ ಪಾದಯಾತ್ರೆ; ವೀಣಾ ಕಾಶಪ್ಪನವರ್ ನೇತೃತ್ವ

Published On - 1:48 pm, Sat, 23 April 22

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ