AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಂದೇಮಾತರಂ ಹೇಳುವಂತೆ ವಿಕ್ರಮ್‌ ಹೆಗ್ಡೆಗೆ ಒತ್ತಾಯ: ವಿಡಿಯೋ ಮಾಡಿದ್ದು ಇವರೇ

ಬೆಂಗಳೂರು: ನಗರದ ಫ್ರೀಡಂ ಪಾರ್ಕ್​ನಲ್ಲಿ ಪಾಕ್‌ ಪರ ಘೋಷಣೆ ಕೂಗಿ ದೇಶದ್ರೋಹ ಆರೋಪದಲ್ಲಿ ಬಂಧನಕ್ಕೀಡಾಗಿರುವ ಅಮೂಲ್ಯಾ ಕುರಿತು ಮತ್ತೊಂದು ‘ವಿಡಿಯೋ ಸಾಕ್ಷ್ಯ’ ಲಭ್ಯವಾಗಿದೆ. ಮಂಗಳೂರು ಏರ್‌ಪೋರ್ಟ್‌ನಲ್ಲಿ ವಂದೇಮಾತರಂ ಹೇಳುವಂತೆ ಪೋಸ್ಟ್‌ ಕಾರ್ಡ್‌ ಸಂಪಾದಕ ವಿಕ್ರಮ್‌ ಹೆಗ್ಡೆಗೆ ಒತ್ತಾಯಿಸುವ ವಿಡಿಯೋ ಮಾಡಿದ್ದು ಇದೇ ಅಮೂಲ್ಯಾ ಎಂದು ತಿಳಿದುಬಂದಿದೆ. ಅರ್ನಾಬ್ ಗೋಸ್ವಾಮಿಗೆ ಫ್ಲೈಟ್​ನಲ್ಲಿ ಕುನಾಲ್ ಎಂಬಾತ ಪ್ರಶ್ನೆ ಕೇಳಿ ವಿಡಿಯೋ ಮಾಡಿದ್ದ. ಕುನಾಲ್ ಮಾಡಿದ್ದ ವಿಡಿಯೋ ಬಹಳ ವೈರಲ್ ಅಗಿತ್ತು. ಈ ವಿಡಿಯೋ ನೋಡಿದ ಅಮೂಲ್ಯಾ ಸಾಮಾಜಿಕ ಜಾಲತಾಣದಲ್ಲಿ ಶೇರ್ […]

ವಂದೇಮಾತರಂ ಹೇಳುವಂತೆ ವಿಕ್ರಮ್‌ ಹೆಗ್ಡೆಗೆ ಒತ್ತಾಯ: ವಿಡಿಯೋ ಮಾಡಿದ್ದು ಇವರೇ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Feb 28, 2020 | 1:54 PM

Share

ಬೆಂಗಳೂರು: ನಗರದ ಫ್ರೀಡಂ ಪಾರ್ಕ್​ನಲ್ಲಿ ಪಾಕ್‌ ಪರ ಘೋಷಣೆ ಕೂಗಿ ದೇಶದ್ರೋಹ ಆರೋಪದಲ್ಲಿ ಬಂಧನಕ್ಕೀಡಾಗಿರುವ ಅಮೂಲ್ಯಾ ಕುರಿತು ಮತ್ತೊಂದು ‘ವಿಡಿಯೋ ಸಾಕ್ಷ್ಯ’ ಲಭ್ಯವಾಗಿದೆ.

ಮಂಗಳೂರು ಏರ್‌ಪೋರ್ಟ್‌ನಲ್ಲಿ ವಂದೇಮಾತರಂ ಹೇಳುವಂತೆ ಪೋಸ್ಟ್‌ ಕಾರ್ಡ್‌ ಸಂಪಾದಕ ವಿಕ್ರಮ್‌ ಹೆಗ್ಡೆಗೆ ಒತ್ತಾಯಿಸುವ ವಿಡಿಯೋ ಮಾಡಿದ್ದು ಇದೇ ಅಮೂಲ್ಯಾ ಎಂದು ತಿಳಿದುಬಂದಿದೆ. ಅರ್ನಾಬ್ ಗೋಸ್ವಾಮಿಗೆ ಫ್ಲೈಟ್​ನಲ್ಲಿ ಕುನಾಲ್ ಎಂಬಾತ ಪ್ರಶ್ನೆ ಕೇಳಿ ವಿಡಿಯೋ ಮಾಡಿದ್ದ. ಕುನಾಲ್ ಮಾಡಿದ್ದ ವಿಡಿಯೋ ಬಹಳ ವೈರಲ್ ಅಗಿತ್ತು. ಈ ವಿಡಿಯೋ ನೋಡಿದ ಅಮೂಲ್ಯಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಳು. ವೈರಲ್ ಕ್ರೇಜ್​ನಿಂದ ಇದೇ ದಾರಿ ಹಿಡಿದ ಅಮೂಲ್ಯಾ ಬಂಧನಕ್ಕೂ 15 ದಿನ ಮುಂಜೆ ಮಂಗಳೂರು ಏರ್‌ಪೋರ್ಟ್‌ನಲ್ಲಿ ವಿಡಿಯೋ ಮಾಡಿ ಬಿಟ್ಟಿದ್ದಾಳೆ ಎನ್ನಲಾಗಿದೆ.

ವೈರಲ್ ಕ್ರೇಜ್​ನಿಂದ ಪ್ರಭಾವಿತರಾಗಿದ್ದ ಅಮೂಲ್ಯಾ & ಗ್ಯಾಂಗ್: ವೈರಲ್ ಆಗಬೇಕು ಎಂಬ ಹುಚ್ಚಿನಲ್ಲಿದ ಅಮೂಲ್ಯಾ ಮತ್ತು ಸ್ನೇಹಿತರು ಮಂಗಳೂರು ಏರ್‌ಪೋರ್ಟ್‌ನಲ್ಲಿ ಸಿಕ್ಕ ವಿಕ್ರಮ್ ಹೆಗ್ಡೆಗೆ ವಂದೇಮಾತರಂ ಹೇಳುವಂತೆ ಒತ್ತಾಯಿಸಿದ್ದರು. ನಜ್ಮಾ ನಜೀರ್, ಕವಿತಾ ರೆಡ್ಡಿ ಮತ್ತು ಅಮೂಲ್ಯಾ ಸೇರಿಕೊಂಡು ಚಿತ್ರಿಸಿರುವ ವಿಡಿಯೋ ಇದಾಗಿತ್ತು.

ರಾಷ್ಟ್ರದಲ್ಲಿರುವ ಮೀಸಲಾತಿ ಮತ್ತು ಪೌರತ್ವ ವಿಚಾರವಾಗಿ ಪ್ರಶ್ನಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ನಂತರ ಈ ವಿಡಿಯೋ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅರ್ನಾಬ್ ಗೋಸ್ವಾಮಿಗೆ ಮಾಡಿದ್ದ ವಿಡಿಯೋ ನೋಡಿಯೇ ಅಮೂಲ್ಯ & ಗ್ಯಾಂಗ್ ಹೀಗೆ ಮಾಡಿದ್ರು ಎನ್ನುವ ಅಂಶ ಬಯಲಾಗಿದೆ.

Published On - 12:27 pm, Fri, 28 February 20

Follow Us
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ