AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಂದೇಮಾತರಂ ಹೇಳುವಂತೆ ವಿಕ್ರಮ್‌ ಹೆಗ್ಡೆಗೆ ಒತ್ತಾಯ: ವಿಡಿಯೋ ಮಾಡಿದ್ದು ಇವರೇ

ಬೆಂಗಳೂರು: ನಗರದ ಫ್ರೀಡಂ ಪಾರ್ಕ್​ನಲ್ಲಿ ಪಾಕ್‌ ಪರ ಘೋಷಣೆ ಕೂಗಿ ದೇಶದ್ರೋಹ ಆರೋಪದಲ್ಲಿ ಬಂಧನಕ್ಕೀಡಾಗಿರುವ ಅಮೂಲ್ಯಾ ಕುರಿತು ಮತ್ತೊಂದು ‘ವಿಡಿಯೋ ಸಾಕ್ಷ್ಯ’ ಲಭ್ಯವಾಗಿದೆ. ಮಂಗಳೂರು ಏರ್‌ಪೋರ್ಟ್‌ನಲ್ಲಿ ವಂದೇಮಾತರಂ ಹೇಳುವಂತೆ ಪೋಸ್ಟ್‌ ಕಾರ್ಡ್‌ ಸಂಪಾದಕ ವಿಕ್ರಮ್‌ ಹೆಗ್ಡೆಗೆ ಒತ್ತಾಯಿಸುವ ವಿಡಿಯೋ ಮಾಡಿದ್ದು ಇದೇ ಅಮೂಲ್ಯಾ ಎಂದು ತಿಳಿದುಬಂದಿದೆ. ಅರ್ನಾಬ್ ಗೋಸ್ವಾಮಿಗೆ ಫ್ಲೈಟ್​ನಲ್ಲಿ ಕುನಾಲ್ ಎಂಬಾತ ಪ್ರಶ್ನೆ ಕೇಳಿ ವಿಡಿಯೋ ಮಾಡಿದ್ದ. ಕುನಾಲ್ ಮಾಡಿದ್ದ ವಿಡಿಯೋ ಬಹಳ ವೈರಲ್ ಅಗಿತ್ತು. ಈ ವಿಡಿಯೋ ನೋಡಿದ ಅಮೂಲ್ಯಾ ಸಾಮಾಜಿಕ ಜಾಲತಾಣದಲ್ಲಿ ಶೇರ್ […]

ವಂದೇಮಾತರಂ ಹೇಳುವಂತೆ ವಿಕ್ರಮ್‌ ಹೆಗ್ಡೆಗೆ ಒತ್ತಾಯ: ವಿಡಿಯೋ ಮಾಡಿದ್ದು ಇವರೇ
ಸಾಧು ಶ್ರೀನಾಥ್​
|

Updated on:Feb 28, 2020 | 1:54 PM

Share

ಬೆಂಗಳೂರು: ನಗರದ ಫ್ರೀಡಂ ಪಾರ್ಕ್​ನಲ್ಲಿ ಪಾಕ್‌ ಪರ ಘೋಷಣೆ ಕೂಗಿ ದೇಶದ್ರೋಹ ಆರೋಪದಲ್ಲಿ ಬಂಧನಕ್ಕೀಡಾಗಿರುವ ಅಮೂಲ್ಯಾ ಕುರಿತು ಮತ್ತೊಂದು ‘ವಿಡಿಯೋ ಸಾಕ್ಷ್ಯ’ ಲಭ್ಯವಾಗಿದೆ.

ಮಂಗಳೂರು ಏರ್‌ಪೋರ್ಟ್‌ನಲ್ಲಿ ವಂದೇಮಾತರಂ ಹೇಳುವಂತೆ ಪೋಸ್ಟ್‌ ಕಾರ್ಡ್‌ ಸಂಪಾದಕ ವಿಕ್ರಮ್‌ ಹೆಗ್ಡೆಗೆ ಒತ್ತಾಯಿಸುವ ವಿಡಿಯೋ ಮಾಡಿದ್ದು ಇದೇ ಅಮೂಲ್ಯಾ ಎಂದು ತಿಳಿದುಬಂದಿದೆ. ಅರ್ನಾಬ್ ಗೋಸ್ವಾಮಿಗೆ ಫ್ಲೈಟ್​ನಲ್ಲಿ ಕುನಾಲ್ ಎಂಬಾತ ಪ್ರಶ್ನೆ ಕೇಳಿ ವಿಡಿಯೋ ಮಾಡಿದ್ದ. ಕುನಾಲ್ ಮಾಡಿದ್ದ ವಿಡಿಯೋ ಬಹಳ ವೈರಲ್ ಅಗಿತ್ತು. ಈ ವಿಡಿಯೋ ನೋಡಿದ ಅಮೂಲ್ಯಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಳು. ವೈರಲ್ ಕ್ರೇಜ್​ನಿಂದ ಇದೇ ದಾರಿ ಹಿಡಿದ ಅಮೂಲ್ಯಾ ಬಂಧನಕ್ಕೂ 15 ದಿನ ಮುಂಜೆ ಮಂಗಳೂರು ಏರ್‌ಪೋರ್ಟ್‌ನಲ್ಲಿ ವಿಡಿಯೋ ಮಾಡಿ ಬಿಟ್ಟಿದ್ದಾಳೆ ಎನ್ನಲಾಗಿದೆ.

ವೈರಲ್ ಕ್ರೇಜ್​ನಿಂದ ಪ್ರಭಾವಿತರಾಗಿದ್ದ ಅಮೂಲ್ಯಾ & ಗ್ಯಾಂಗ್: ವೈರಲ್ ಆಗಬೇಕು ಎಂಬ ಹುಚ್ಚಿನಲ್ಲಿದ ಅಮೂಲ್ಯಾ ಮತ್ತು ಸ್ನೇಹಿತರು ಮಂಗಳೂರು ಏರ್‌ಪೋರ್ಟ್‌ನಲ್ಲಿ ಸಿಕ್ಕ ವಿಕ್ರಮ್ ಹೆಗ್ಡೆಗೆ ವಂದೇಮಾತರಂ ಹೇಳುವಂತೆ ಒತ್ತಾಯಿಸಿದ್ದರು. ನಜ್ಮಾ ನಜೀರ್, ಕವಿತಾ ರೆಡ್ಡಿ ಮತ್ತು ಅಮೂಲ್ಯಾ ಸೇರಿಕೊಂಡು ಚಿತ್ರಿಸಿರುವ ವಿಡಿಯೋ ಇದಾಗಿತ್ತು.

ರಾಷ್ಟ್ರದಲ್ಲಿರುವ ಮೀಸಲಾತಿ ಮತ್ತು ಪೌರತ್ವ ವಿಚಾರವಾಗಿ ಪ್ರಶ್ನಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ನಂತರ ಈ ವಿಡಿಯೋ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅರ್ನಾಬ್ ಗೋಸ್ವಾಮಿಗೆ ಮಾಡಿದ್ದ ವಿಡಿಯೋ ನೋಡಿಯೇ ಅಮೂಲ್ಯ & ಗ್ಯಾಂಗ್ ಹೀಗೆ ಮಾಡಿದ್ರು ಎನ್ನುವ ಅಂಶ ಬಯಲಾಗಿದೆ.

Published On - 12:27 pm, Fri, 28 February 20

ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ