AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಂದೇಮಾತರಂ ಹೇಳುವಂತೆ ವಿಕ್ರಮ್‌ ಹೆಗ್ಡೆಗೆ ಒತ್ತಾಯ: ವಿಡಿಯೋ ಮಾಡಿದ್ದು ಇವರೇ

ಬೆಂಗಳೂರು: ನಗರದ ಫ್ರೀಡಂ ಪಾರ್ಕ್​ನಲ್ಲಿ ಪಾಕ್‌ ಪರ ಘೋಷಣೆ ಕೂಗಿ ದೇಶದ್ರೋಹ ಆರೋಪದಲ್ಲಿ ಬಂಧನಕ್ಕೀಡಾಗಿರುವ ಅಮೂಲ್ಯಾ ಕುರಿತು ಮತ್ತೊಂದು ‘ವಿಡಿಯೋ ಸಾಕ್ಷ್ಯ’ ಲಭ್ಯವಾಗಿದೆ. ಮಂಗಳೂರು ಏರ್‌ಪೋರ್ಟ್‌ನಲ್ಲಿ ವಂದೇಮಾತರಂ ಹೇಳುವಂತೆ ಪೋಸ್ಟ್‌ ಕಾರ್ಡ್‌ ಸಂಪಾದಕ ವಿಕ್ರಮ್‌ ಹೆಗ್ಡೆಗೆ ಒತ್ತಾಯಿಸುವ ವಿಡಿಯೋ ಮಾಡಿದ್ದು ಇದೇ ಅಮೂಲ್ಯಾ ಎಂದು ತಿಳಿದುಬಂದಿದೆ. ಅರ್ನಾಬ್ ಗೋಸ್ವಾಮಿಗೆ ಫ್ಲೈಟ್​ನಲ್ಲಿ ಕುನಾಲ್ ಎಂಬಾತ ಪ್ರಶ್ನೆ ಕೇಳಿ ವಿಡಿಯೋ ಮಾಡಿದ್ದ. ಕುನಾಲ್ ಮಾಡಿದ್ದ ವಿಡಿಯೋ ಬಹಳ ವೈರಲ್ ಅಗಿತ್ತು. ಈ ವಿಡಿಯೋ ನೋಡಿದ ಅಮೂಲ್ಯಾ ಸಾಮಾಜಿಕ ಜಾಲತಾಣದಲ್ಲಿ ಶೇರ್ […]

ವಂದೇಮಾತರಂ ಹೇಳುವಂತೆ ವಿಕ್ರಮ್‌ ಹೆಗ್ಡೆಗೆ ಒತ್ತಾಯ: ವಿಡಿಯೋ ಮಾಡಿದ್ದು ಇವರೇ
ಸಾಧು ಶ್ರೀನಾಥ್​
|

Updated on:Feb 28, 2020 | 1:54 PM

Share

ಬೆಂಗಳೂರು: ನಗರದ ಫ್ರೀಡಂ ಪಾರ್ಕ್​ನಲ್ಲಿ ಪಾಕ್‌ ಪರ ಘೋಷಣೆ ಕೂಗಿ ದೇಶದ್ರೋಹ ಆರೋಪದಲ್ಲಿ ಬಂಧನಕ್ಕೀಡಾಗಿರುವ ಅಮೂಲ್ಯಾ ಕುರಿತು ಮತ್ತೊಂದು ‘ವಿಡಿಯೋ ಸಾಕ್ಷ್ಯ’ ಲಭ್ಯವಾಗಿದೆ.

ಮಂಗಳೂರು ಏರ್‌ಪೋರ್ಟ್‌ನಲ್ಲಿ ವಂದೇಮಾತರಂ ಹೇಳುವಂತೆ ಪೋಸ್ಟ್‌ ಕಾರ್ಡ್‌ ಸಂಪಾದಕ ವಿಕ್ರಮ್‌ ಹೆಗ್ಡೆಗೆ ಒತ್ತಾಯಿಸುವ ವಿಡಿಯೋ ಮಾಡಿದ್ದು ಇದೇ ಅಮೂಲ್ಯಾ ಎಂದು ತಿಳಿದುಬಂದಿದೆ. ಅರ್ನಾಬ್ ಗೋಸ್ವಾಮಿಗೆ ಫ್ಲೈಟ್​ನಲ್ಲಿ ಕುನಾಲ್ ಎಂಬಾತ ಪ್ರಶ್ನೆ ಕೇಳಿ ವಿಡಿಯೋ ಮಾಡಿದ್ದ. ಕುನಾಲ್ ಮಾಡಿದ್ದ ವಿಡಿಯೋ ಬಹಳ ವೈರಲ್ ಅಗಿತ್ತು. ಈ ವಿಡಿಯೋ ನೋಡಿದ ಅಮೂಲ್ಯಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಳು. ವೈರಲ್ ಕ್ರೇಜ್​ನಿಂದ ಇದೇ ದಾರಿ ಹಿಡಿದ ಅಮೂಲ್ಯಾ ಬಂಧನಕ್ಕೂ 15 ದಿನ ಮುಂಜೆ ಮಂಗಳೂರು ಏರ್‌ಪೋರ್ಟ್‌ನಲ್ಲಿ ವಿಡಿಯೋ ಮಾಡಿ ಬಿಟ್ಟಿದ್ದಾಳೆ ಎನ್ನಲಾಗಿದೆ.

ವೈರಲ್ ಕ್ರೇಜ್​ನಿಂದ ಪ್ರಭಾವಿತರಾಗಿದ್ದ ಅಮೂಲ್ಯಾ & ಗ್ಯಾಂಗ್: ವೈರಲ್ ಆಗಬೇಕು ಎಂಬ ಹುಚ್ಚಿನಲ್ಲಿದ ಅಮೂಲ್ಯಾ ಮತ್ತು ಸ್ನೇಹಿತರು ಮಂಗಳೂರು ಏರ್‌ಪೋರ್ಟ್‌ನಲ್ಲಿ ಸಿಕ್ಕ ವಿಕ್ರಮ್ ಹೆಗ್ಡೆಗೆ ವಂದೇಮಾತರಂ ಹೇಳುವಂತೆ ಒತ್ತಾಯಿಸಿದ್ದರು. ನಜ್ಮಾ ನಜೀರ್, ಕವಿತಾ ರೆಡ್ಡಿ ಮತ್ತು ಅಮೂಲ್ಯಾ ಸೇರಿಕೊಂಡು ಚಿತ್ರಿಸಿರುವ ವಿಡಿಯೋ ಇದಾಗಿತ್ತು.

ರಾಷ್ಟ್ರದಲ್ಲಿರುವ ಮೀಸಲಾತಿ ಮತ್ತು ಪೌರತ್ವ ವಿಚಾರವಾಗಿ ಪ್ರಶ್ನಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ನಂತರ ಈ ವಿಡಿಯೋ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅರ್ನಾಬ್ ಗೋಸ್ವಾಮಿಗೆ ಮಾಡಿದ್ದ ವಿಡಿಯೋ ನೋಡಿಯೇ ಅಮೂಲ್ಯ & ಗ್ಯಾಂಗ್ ಹೀಗೆ ಮಾಡಿದ್ರು ಎನ್ನುವ ಅಂಶ ಬಯಲಾಗಿದೆ.

Published On - 12:27 pm, Fri, 28 February 20

Follow Us
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ