AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳದಲ್ಲಿ ಎಂಟು ಕಾಲಿರುವ ಅಪರೂಪದ ಕುರಿ ಜನನ

ಮಲ್ಲಪ್ಪ ಕಳೆದ ಹತ್ತು ವರ್ಷಗಳಿಂದ ಕುರಿ ಕಾಯುವ ಕೆಲಸ ಮಾಡುತ್ತಿದ್ದಾರೆ. ಸುಮಾರು 40 ಕುರಿಗಳನ್ನು ಸಾಕುತ್ತಿದ್ದಾರೆ. ಇಂದು (ಜೂನ್ 14) ಬೆಳಗಿನ ಜಾವ ಅವರ ಒಂದು ಕುರಿ ಎಂಟು ಕಾಲಿನ ಮರಿಗೆ ಜನ್ಮ ನೀಡಿದೆ. ಈ ಹಿಂದೆ ಇದೇ ಕುರಿ ಸಾಮಾನ್ಯ ಕುರಿಗಳಿಗೆ ಅಂದ್ರೆ ಒಂದು ದೇಹ, ಒಂದು ಮುಖ, ನಾಲ್ಕು ಕಾಲಿನ ಎರಡು ಕುರಿಮರಿಗಳಿಗೆ ಜನ್ಮ ನೀಡಿತ್ತು.

ಕೊಪ್ಪಳದಲ್ಲಿ ಎಂಟು ಕಾಲಿರುವ ಅಪರೂಪದ ಕುರಿ ಜನನ
ಎಂಟು ಕಾಲಿರುವ ಅಪರೂಪದ ಕುರಿಮರಿ
TV9 Web
| Edited By: |

Updated on:Jun 14, 2021 | 10:13 AM

Share

ಕೊಪ್ಪಳ: ಸಾಮಾನ್ಯವಾಗಿ ಕುರಿ ಅಂದ್ರೆ ಒಂದು ದೇಹ, ನಾಲ್ಕು ಕಾಲು ಇರೋದನ್ನ ನೋಡಿದ್ದೇವೆ. ಆದರೆ ಜಿಲ್ಲೆಯಲ್ಲಿ ಎಂಟು ಕಾಲು ಇರುವ ಕುರಿಯೊಂದು ಜನನವಾಗಿದೆ. ಕುರಿಗೆ ಒಂದು ಮುಖ, ಎರಡು ದೇಹ, ಎಂಟು ಕಾಲ ಇರುವ ಅಪರೂಪದ ಕುರಿ ಹುಟ್ಟಿದೆ. ಇದೆಲ್ಲ ದೇವರ ಸೃಷ್ಟಿ, ವಿಸ್ಮಯ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜಿಲ್ಲೆ ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದಲ್ಲಿ ಎಂಟು ಕಾಲಿನ ಕುರಿ ಮರಿ ಜನನವಾಗಿದೆ. ಹಾಬಲಕಟ್ಟಿ ಗ್ರಾಮದ ಮಲ್ಲಪ್ಪ ರಾಜೂರು ಮೂಲತಃ ಕುರಿಗಾಹಿ. ಅವರು ಸಾಕಿದ ಕುರಿ ಇಂದು ಎಂಟು ಕಾಲಿನ ವಿಚಿತ್ರ ಕುರಿಮರಿಗೆ ಜನ್ಮ ನೀಡಿದೆ.

ಮಲ್ಲಪ್ಪ ಕಳೆದ ಹತ್ತು ವರ್ಷಗಳಿಂದ ಕುರಿ ಕಾಯುವ ಕೆಲಸ ಮಾಡುತ್ತಿದ್ದಾರೆ. ಸುಮಾರು 40 ಕುರಿಗಳನ್ನು ಸಾಕುತ್ತಿದ್ದಾರೆ. ಇಂದು (ಜೂನ್ 14) ಬೆಳಗಿನ ಜಾವ ಅವರ ಒಂದು ಕುರಿ ಎಂಟು ಕಾಲಿನ ಮರಿಗೆ ಜನ್ಮ ನೀಡಿದೆ. ಈ ಹಿಂದೆ ಇದೇ ಕುರಿ ಸಾಮಾನ್ಯ ಕುರಿಗಳಿಗೆ ಅಂದ್ರೆ ಒಂದು ದೇಹ, ಒಂದು ಮುಖ, ನಾಲ್ಕು ಕಾಲಿನ ಎರಡು ಕುರಿಮರಿಗಳಿಗೆ ಜನ್ಮ ನೀಡಿತ್ತು. ಆದರೆ ಈ ಬಾರಿ ಎಂಟು ಕಾಲಿನ ಕುರಿಮರಿಗೆ ಜನ್ಮ ನೀಡಿದೆ. ಕಳೆದ ಹತ್ತು ವರ್ಷಗಳಲ್ಲಿ ಇಂತಹ ಕುರಿಮರಿ ಜನನವಾಗಿರುವುದು, ಅಥವಾ ಸುತ್ತಮುತ್ತ ಈ ತರಹದ ಕುರಿಮರಿಯನ್ನ ಅವರು ನೋಡೆ ಇಲ್ಲ. ಇಂದು ಬೆಳಗಿನ ಜಾವ ಎಂಟು ಕಾಲಿನ ಕುರಿಮರಿ ಜನ್ಮತಾಳಿದ್ದು, ಜನಿಸಿದ ಒಂದು ಗಂಟೆ ಕುರಿಮರಿ ಚೆನ್ನಾಗಿತ್ತು. ಆದರೆ ವಿಚಿತ್ರ ಆಕಾರ ಹೊಂದಿದ ಕುರಿ ಬದುಕಿದ್ದು ಕೇವಲ ಒಂದು ಗಂಟೆ. ಇನ್ಮು ಜನ ಅದನ್ನ ನೋಡಲು ಬರುವ ಕಾರಣ ಕುರಿಯನ್ನ ಹಾಗೆ ಇಟ್ಟಿದ್ದಾರೆ.

ಹಾಬಲಕಟ್ಟಿ ಗ್ರಾಮದಲ್ಲಿ ಈ ಹಿಂದೆ ಅಪರೂಪದ ಕುರಿ ಜನನ ನೋಡೆ ಇಲ್ಲ. ಅಲ್ಲದೆ ಬೇರೆ ಕುರಿಗಾಹಿಗಳನ್ನ ವಿಚಾರಿಸಿದಾಗ ಯಾವತ್ತೂ ಇಂತಹ ಮರಿ ಹುಟ್ಟಿಲ್ಲ ಎನ್ನುತ್ತಿದ್ದಾರಂತೆ. ಎಂಟು ಕಾಲಿನ ಕುರಿ ಮರಿ ಜನ್ಮ ತಾಳಿದ ಒಂದು ಗಂಟೆಯಲ್ಲಿ ಮೃತವಾಗಿದ್ದು, ಜನರು ನೋಡಲು ಬರುತ್ತಿರುವ ಕಾರಣ ಇನ್ನು ಮಲ್ಲಪ್ಪ ರಾಜೂರ ಕುರಿ ದಡ್ಡೆಯಲ್ಲಿ ಇಟ್ಟುಕೊಂಡಿದ್ದಾರೆ.

ನಾವು ಕುರಿ ಸಾಕಾಣಿಕೆ ಮಾಡುತ್ತ 10 ವರ್ಷ ಆಯ್ತು. ಇಂತಹ ಕುರಿ ನೋಡಿಲ್ಲ. ಎಂಟು ಕಾಲಿನ ಕುರಿ ಮರಿ ನೋಡಿರುವುದು ಇದೆ ಮೊದಲು. ಕುರಿ ಜನಿಸಿದ ಒಂದು ಗಂಟೆ ಬಳಿಕ ಸಾವನ್ನಪ್ಪಿದೆ. ಜಮೀನಿನಲ್ಲಿ ಮಣ್ಣು ಮಾಡುತ್ತೇವೆ ಎಂದು ಕುರಿಗಾಹಿ ಮಲ್ಲಪ್ಪ ರಾಜೂರ್ ತಿಳಿಸಿದರು.

ಇದು ದೇವರ ಸೃಷ್ಟಿ ಏನಲ್ಲ. ಆದರೆ ಕುರಿಗಳ ಸಂತಾನೋತ್ಪತ್ತಿ ಸಮಯದಲ್ಲಿ ವ್ಯತ್ಯಾಸವಾಗಿ ಈ ತರಹದ ಕುರಿಗಳು ಜನನವಾಗಿರತ್ತದೆ. ಈ ರೀತಿ ಅಪರೂಪದ ಕುರಿಗಳು ಬದುಕುವುದು ತುಂಬಾ ಅಪರೂಪ ಅಂತ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರಾದ ಡಾ.ಎಚ್.ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ

ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್​ ದಾಳಿ ಬೆದರಿಕೆ; ಹಣ ಹಿಂದಿರುಗಿಸುವಂತೆ ಕೇಳಿದ್ದಕ್ಕೆ ಪ್ರಿಯಕರನಿಂದಲೇ ಬ್ಲ್ಯಾಕ್​ಮೇಲ್

ಬಾಣಸವಾಡಿಯಲ್ಲಿ ಕೊರೊನಾ ಸೋಂಕಿತ ವೃದ್ಧ ಮಹಿಳೆಯ ಚಿನ್ನದ ಸರ, ಮೊಬೈಲ್​ ಕಳವು; ಖಾಸಗಿ ಆಸ್ಪತ್ರೆ ವಿರುದ್ಧ ದೂರು ದಾಖಲು

(An eight legged sheep was born in koppal)

Published On - 10:11 am, Mon, 14 June 21

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ