AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು Drugs ತಗೊಂಡಿಲ್ಲ ಸರ್.. ದಯವಿಟ್ಟು ನನ್ನನ್ನು ಆರೋಪಿಯನ್ನಾಗಿ ಮಾಡಬೇಡಿ’

ದಕ್ಷಿಣ ಕನ್ನಡ: ಮಂಗಳೂರಿನಲ್ಲಿ CCB ವಿಚಾರಣೆಗೆ ಇಂದು ಹಾಜರಾಗಿದ್ದ ಌಂಕರ್​ ಅನುಶ್ರೀ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿಚಾರಣೆ ಮುಗಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು ಎಂದು ತಿಳಿದುಬಂದಿದೆ. ಈ ಮೊದಲು ನಗರದ ಹೊರವಲಯದ ಪಣಂಬೂರಿನಲ್ಲಿರುವ ಮಂಗಳೂರು ಉತ್ತರ ವಿಭಾಗದ ಪೊಲೀಸ್​ ಕಚೇರಿಯಲ್ಲಿ ಌಂಕರ್​ ಅನುಶ್ರೀಗೆ ತನಿಖಾಧಿಕಾರಿಗಳು‌ ತೀವ್ರ ವಿಚಾರಣೆಗೆ ಒಳಪಡಿಸಿದರು. ಬೆಳಗ್ಗೆ 9.30ರಿಂದ ಸತತ ಮೂರು ಗಂಟೆಗಳ ಕಾಲ DCP ವಿನಯ್ ಗಾಂವ್ಕರ್​ ನೇತೃತ್ವದಲ್ಲಿ ವಿಚಾರಣೆ ನಡೆಯಿತು. ಬಳಿಕ ಌಂಕರ್​ ಅನುಶ್ರೀರನ್ನು CCB ಪೊಲೀಸರು ಮಂಗಳೂರು ಪೊಲೀಸ್ […]

‘ನಾನು Drugs ತಗೊಂಡಿಲ್ಲ ಸರ್.. ದಯವಿಟ್ಟು ನನ್ನನ್ನು ಆರೋಪಿಯನ್ನಾಗಿ ಮಾಡಬೇಡಿ’
KUSHAL V
|

Updated on:Sep 26, 2020 | 4:27 PM

Share

ದಕ್ಷಿಣ ಕನ್ನಡ: ಮಂಗಳೂರಿನಲ್ಲಿ CCB ವಿಚಾರಣೆಗೆ ಇಂದು ಹಾಜರಾಗಿದ್ದ ಌಂಕರ್​ ಅನುಶ್ರೀ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿಚಾರಣೆ ಮುಗಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು ಎಂದು ತಿಳಿದುಬಂದಿದೆ. ಈ ಮೊದಲು ನಗರದ ಹೊರವಲಯದ ಪಣಂಬೂರಿನಲ್ಲಿರುವ ಮಂಗಳೂರು ಉತ್ತರ ವಿಭಾಗದ ಪೊಲೀಸ್​ ಕಚೇರಿಯಲ್ಲಿ ಌಂಕರ್​ ಅನುಶ್ರೀಗೆ ತನಿಖಾಧಿಕಾರಿಗಳು‌ ತೀವ್ರ ವಿಚಾರಣೆಗೆ ಒಳಪಡಿಸಿದರು. ಬೆಳಗ್ಗೆ 9.30ರಿಂದ ಸತತ ಮೂರು ಗಂಟೆಗಳ ಕಾಲ DCP ವಿನಯ್ ಗಾಂವ್ಕರ್​ ನೇತೃತ್ವದಲ್ಲಿ ವಿಚಾರಣೆ ನಡೆಯಿತು.

ಬಳಿಕ ಌಂಕರ್​ ಅನುಶ್ರೀರನ್ನು CCB ಪೊಲೀಸರು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಸಹ ಕರೆದೊಯ್ದರು. ಜೊತೆಗೆ, ಅಲ್ಲಿಯೂ ಸಹ ಆಕೆಯನ್ನು ವಿಚಾರಣೆಗೆ ಒಳಪಡಿಸಲಾಯಿತು ಎಂಬ ಮಾಹಿತಿ ಸಿಕ್ಕಿದೆ. ಌಂಕರ್​ ಅನುಶ್ರೀ ವಿಚಾರಣೆಯ ಇನ್​ಸೈಡ್ ಡಿಟೇಲ್ಸ್ ಟಿವಿ 9ಗೆ ಲಭ್ಯವಾಗಿದೆ. ವಿಚಾರಣೆ ವೇಳೆ ಌಂಕರ್​ ಅನುಶ್ರೀ ಕೆಲ ಸತ್ಯ ಬಾಯಿಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ನಿನ್ನೆ ಮೊನ್ನೆ ಮಾಧ್ಯಮಗಳಲ್ಲಿ ತರುಣ್ ಸಿಕ್ಕಿ ಮೂರು ವರ್ಷಗಳೇ ಆಗಿದೆ ಅಂತಾ ಹೇಳಿದ್ದ ಅನುಶ್ರೀ ಪೊಲೀಸ್​ ವಿಚಾರಣೆ ವೇಳೆ ಲಾಕ್​ಡೌನ್​ಗೂ ಮೊದಲು ಆತನನ್ನು ಭೇಟಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರಂತೆ. ಲಾಕ್​ಡೌನ್ ಆಗಲು ಮೂರು ತಿಂಗಳ ಮುಂಚೆ ತರುಣ್ ಸಿಕ್ಕಿದ್ದ. ಆಗ ಇಬ್ಬರು ಬೆಂಗಳೂರಿನಲ್ಲಿ‌ ಮೀಟ್ ಆಗಿದ್ದೆವು ಎಂದು ಹೇಳಿದ್ದಾರಂತೆ. ಌಂಕರ್​ ಅನುಶ್ರೀನ ಕಾಲ್ ಡಿಟೇಲ್ಸ್​ನಿಂದ ಈ ಮಾಹಿತಿ ಬಯಲಾಗುವುದು ಅನ್ನೋ ಕಾರಣದಿಂದ ಆಕೆ ಇದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

‘ದಯವಿಟ್ಟು ನನ್ನ ಆರೋಪಿಯನ್ನಾಗಿ ಮಾಡಬೇಡಿ’ ನಾನು ಡ್ರಗ್ಸ್ ತಗೊಂಡಿಲ್ಲ ಸರ್. ಈ ಇಬ್ಬರು ಇಂಥವರು ಅಂತಾ ಗೊತ್ತಿರಲಿಲ್ಲ ಸರ್. ದಯವಿಟ್ಟು ನನನ್ನು ಆರೋಪಿಯನ್ನಾಗಿ ಮಾಡಬೇಡಿ ಅಂತಾ ಌಂಕರ್​ ಅನುಶ್ರೀ ಮನವಿ ಮಾಡಿದರು ಎಂದು ತಿಳಿದುಬಂದಿದೆ. ಜೊತೆಗೆ, ನಾನು ಡ್ರಗ್ಸ್ ಸೇವಿಸಿಲ್ಲ ಅಂತಾ DCP ವಿನಯ್ ಗಾಂವ್ಕರ್​ಗೆ ಌಂಕರ್​ ಅನುಶ್ರೀ ಹೇಳಿದ್ದಾರಂತೆ.

ಇದನ್ನೂ ಓದಿ: ನಿನ್ನೆ ಚಕ್ಕರ್, ಇಂದು ಹಾಜರ್: ಪಣಂಬೂರು ಠಾಣೆಗೆ ಬಂದ ಅನುಶ್ರೀ

Published On - 4:22 pm, Sat, 26 September 20

ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?
ಜೈಲಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯ ರೌಡಿಸಂ
ಜೈಲಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯ ರೌಡಿಸಂ
ಕಸ ಎಸೆಯಲು ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ
ಕಸ ಎಸೆಯಲು ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ