AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಸರುಗದ್ದೆ ಕಂಬಳ: ಹರಕೆಯ ಓಟಕ್ಕೆ ಸಾಕ್ಷಿಯಾಯಿತು ಉಡುಪಿಯ ಕಂಬಳ ಮನೆತನ

ಪ್ರಶಸ್ತಿಗಾಗಿ ಓಡುವ ಸ್ಪರ್ಧಾತ್ಮಕ ಕಂಬಳದ ನಡುವೆ, ದೈವಗಳ ಹರಕೆ ತೀರಿಸುವ ಉದ್ದೇಶದಿಂದ ಪ್ರತಿ ವರ್ಷ ಕಂಬಳ ಮನೆತನದ ಸಹಯೋಗದಲ್ಲಿ ಕೆಸರು ಗದ್ದೆ ಕೋಣಗಳ ಓಟ ನಡೆಯುವುದು ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ವಿಶೇಷ.

ಕೆಸರುಗದ್ದೆ ಕಂಬಳ: ಹರಕೆಯ ಓಟಕ್ಕೆ ಸಾಕ್ಷಿಯಾಯಿತು ಉಡುಪಿಯ ಕಂಬಳ ಮನೆತನ
ಕಂಬಳ ಮನೆತನದಿಂದ ಕೆಸರು ಗದ್ದೆ ಓಟ
Follow us
preethi shettigar
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 28, 2021 | 6:53 PM

ಉಡುಪಿ: ನಗರದ ಕಡವೂರು ಗ್ರಾಮದಲ್ಲಿ ಇರುವ ಕಂಬಳ ಮನೆತನದ ಗದ್ದೆಯಲ್ಲಿ ಪ್ರತಿವರ್ಷವು ಕೂಡ ಕೆಸರುಗದ್ದೆಯ ಓಟ ನಡೆಯುತ್ತದೆ. ಹತ್ತಾರು ಕೋಣಗಳು ಗತ್ತಿನಿಂದ ಓಟದಲ್ಲಿ ಭಾಗವಹಿಸುತ್ತವೆ. ಆದರೆ ಬಿಲ್ಲಿನ ಎದೆಯಿಂದ ಹೊರಟ ಬಾಣದಂತೆ ಕೆಸರುಗದ್ದೆಯಲ್ಲಿ ಮಿಂಚಿನಓಟ ನಡೆಸುವ ಈ ಕೋಣಗಳು ಇಲ್ಲಿಗೆ ಸ್ಪರ್ಧೆಯ ಉದ್ದೇಶದಿಂದ ಬಂದಿಲ್ಲ. ಬದಲಿಗೆ ಇವು ಹರಕೆಯ ಓಟಕ್ಕೆ ಬಂದ ಕೋಣಗಳು.

ಕಂಬಳ ಮನೆಯಲ್ಲಿರುವ ಕುಮಾರ ದೈವಕ್ಕೆ ಅಚ್ಚುಮೆಚ್ಚಿನ ಹರಕೆಯೆಂದರೆ ಕಂಬಳದಲ್ಲಿ ಕೋಣ ಇಳಿಸುವುದು. ಇಲ್ಲಿನ ದೈವಕ್ಕೆ ಹರಕೆ ರೂಪದಲ್ಲಿ ಕೋಣ ಓಡಿಸುವುದಾಗಿ ಹೇಳಿಕೊಂಡ ಅನೇಕರ ಪ್ರಾರ್ಥನೆಗಳು ಫಲಿಸಿವೆ. ಊರಿನಲ್ಲಿ ಕೃಷಿ ಚಟುವಟಿಕೆಗಳು, ಮಳೆ-ಬೆಳೆ ಚೆನ್ನಾಗಿ ಆಗಬೇಕು ಎಂಬ ಉದ್ದೇಶದಿಂದ ಈ ಕಂಬಳವನ್ನು ಅನಾದಿಕಾಲದಿಂದ ನಡೆಸಿಕೊಂಡು ಬರಲಾಗುತ್ತಿದೆ. ಇನ್ನು ಜಾನುವಾರುಗಳಿಗೆ ಕಾಯಿಲೆಗಳು ಬಾಧಿಸಿದಾಗಲೂ ಕಂಬಳದ ಹರಕೆ ಹೊರುವುದು ಇಲ್ಲಿನ ವಾಡಿಕೆ.

ಈ ಕಂಬಳ ಆಚರಣೆ ಇಲ್ಲಿ ಒಂದು ಧಾರ್ಮಿಕ ಕ್ರಿಯೆಯಾಗಿ ನಡೆಯುತ್ತಿದ್ದು, ಕಂಬಳಕ್ಕೆ ದಿನ ನಿಗದಿ ಆದ ಬಳಿಕ ಕಂಬಳ ಮನೆತನದವರು ವ್ರತಾಚರಣೆಯಲ್ಲಿ ಇರುತ್ತಾರೆ. ಕಂಬಳಕ್ಕೆ ಪೂರ್ವಭಾವಿಯಾಗಿ ಪ್ರಾಯೋಗಿಕ ಓಟ ನಡೆಯುತ್ತದೆ. ಕಂಬಳದ ದಿನ ಮುಂಜಾನೆ ಗ್ರಾಮದ ದೈವ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಸಿ ಬಳಿಕ ಕುಮಾರ ದೈವದ ದರ್ಶನ ನಡೆಯುತ್ತದೆ.

kambala

ಕುಮಾರ ದೈವದ ದರ್ಶನ

ಈ ಹೊತ್ತಿಗೆ ಕೋಣಗಳು ಕಂಬಳದ ಗದ್ದೆಯ ಬಳಿಗೆ ಬಂದಿರುತ್ತವೆ. ಕುಮಾರ ಪಾತ್ರಿಯು ಕಂಬಳ ಗದ್ದೆಗೆ ಆಗಮಿಸಿ ಕೋಣಗಳ ಓಟದ ಸೊಬಗನ್ನು ಕಣ್ತುಂಬಿಕೊಳ್ಳುತ್ತಾರೆ. ಇದಿಷ್ಟು ಕಂಬಳದ ದಿನ ನಡೆಯುವ ಆಚರಣೆಗಳು. ಈ ಕಂಬಳಕ್ಕೆ ಸಾಕಷ್ಟು ಧಾರ್ಮಿಕ ಮಹತ್ವವಿದ್ದು, ಕಂಬಳ ನಡೆಸದೆ ಹೋದರೆ ಗ್ರಾಮಕ್ಕೆ ಆಪತ್ತುಗಳು ಬರುತ್ತವೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಹಾಗಾಗಿ ಊರಿನ ಕಂಬಳವನ್ನು ಗ್ರಾಮಸ್ಥರೂ ಯಾವುದೇ ಕಾರಣಕ್ಕೂ ತಪ್ಪಿಸುವುದಿಲ್ಲ.

kambala

ಡೋಲು ಬಡಿದು ಕಂಬಳಕ್ಕೆ ಚಾಲನೆ

kambala

ಕೆಸರು ಗದ್ದೆ ಓಟಕ್ಕೆ ಸಿದ್ಧವಾದ ಕೋಣಗಳು

ನಗರೀಕರಣ ಬೆಳೆಯುತ್ತಿದ್ದಂತೆ ಈ ಆಚರಣೆಗಳು ನಾಶವಾಗುವ ಹಂತ ತಲುಪಿದೆ. ಹಿಂದೆ ಈ ಗದ್ದೆಗಳ ಪಕ್ಕದಲ್ಲಿ ಸ್ವಚ್ಛಂದವಾಗಿ ಹರಿಯುತ್ತಿದ್ದ ಇಂದ್ರಾಣಿ ನದಿಯ ನೀರನ್ನು ಬಳಸಿ ಕಂಬಳ ಮಾಡಲಾಗುತ್ತಿತ್ತು. ಆದರೆ ಈಗ ಈ ನದಿ ಕಲುಷಿತವಾದ ಕಾರಣ ಕಂಬಳ ಗದ್ದೆಗೆ ನೀರು ಹೊಂದಿಸುವುದೇ ದೊಡ್ಡ ಸವಾಲಾಗಿದೆ. ಇನ್ನು ನಗರ ಪ್ರದೇಶದ ಗದ್ದೆಗಳೆಲ್ಲ ಲೇಔಟ್​ಗಳಾಗಿ ಕೋಣಗಳೆಲ್ಲಾ ಕಸಾಯಿಖಾನೆ ಸೇರಿವೆ. ಆದರೂ ಈ ಆಚರಣೆ ನಿಲ್ಲಬಾರದು ಎಂಬ ಉದ್ದೇಶದಿಂದ ದೂರದೂರದಿಂದ ಕೋಣಗಳನ್ನು ಕರೆಸಿಕೊಂಡು ಕಂಬಳ ನಡೆಸಲಾಗುತ್ತಿದೆ ಎಂದು ಸ್ಥಳೀಯರಾದ ರಮೇಶ್ ಹೇಳಿದ್ದಾರೆ.

ಇದನ್ನೂ ಓದಿ: Kambala Record ಕಂಬಳದಲ್ಲಿ ಹೊಸ ದಾಖಲೆ: ಶ್ರೀನಿವಾಸ್ ಗೌಡರ ದಾಖಲೆ ಮುರಿದ ಬೈಂದೂರು ವಿಶ್ವನಾಥ್​

ಸಿದ್ದಿ ಸಮುದಾಯದ ಜೊತೆ ಸರಳತೆಯ ಪಾಠ ಕಲಿತ ‘ಭರ್ಜರಿ ಬ್ಯಾಚುಲರ್ಸ್’
ಸಿದ್ದಿ ಸಮುದಾಯದ ಜೊತೆ ಸರಳತೆಯ ಪಾಠ ಕಲಿತ ‘ಭರ್ಜರಿ ಬ್ಯಾಚುಲರ್ಸ್’
ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಮುನೀರ್ ನಾಪತ್ತೆ?
ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಮುನೀರ್ ನಾಪತ್ತೆ?
Daily Devotional: ಯಾರಿಗೆಲ್ಲಾ ಮನೆ ಖರೀದಿ ಯೋಗವಿದೆ ತಿಳಿಯಿರಿ
Daily Devotional: ಯಾರಿಗೆಲ್ಲಾ ಮನೆ ಖರೀದಿ ಯೋಗವಿದೆ ತಿಳಿಯಿರಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯಿರಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯಿರಿ
ಐಎನ್‌ಎಸ್ ವಿಕ್ರಾಂತ್ ಪರಾಕ್ರಮ : ಪಾಕಿಸ್ತಾನದ ಕರಾಚಿ ಬಂದರು ಧ್ವಂಸ
ಐಎನ್‌ಎಸ್ ವಿಕ್ರಾಂತ್ ಪರಾಕ್ರಮ : ಪಾಕಿಸ್ತಾನದ ಕರಾಚಿ ಬಂದರು ಧ್ವಂಸ
34 ಎಸೆತಗಳಲ್ಲಿ 70 ರನ್; ಡೆಲ್ಲಿ ವಿರುದ್ಧ ಪ್ರಿಯಾಂಶ್ ಅಬ್ಬರ
34 ಎಸೆತಗಳಲ್ಲಿ 70 ರನ್; ಡೆಲ್ಲಿ ವಿರುದ್ಧ ಪ್ರಿಯಾಂಶ್ ಅಬ್ಬರ
ಜಮ್ಮುವಿನಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಭಾರತ
ಜಮ್ಮುವಿನಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಭಾರತ
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕಥೆ ಊಹೆ ಮಾಡಲೂ ಸಾಧ್ಯವಿಲ್ಲ: ಚಂದು ಗೌಡ
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕಥೆ ಊಹೆ ಮಾಡಲೂ ಸಾಧ್ಯವಿಲ್ಲ: ಚಂದು ಗೌಡ
ಭಾರತದ ನಡೆಗಳಿಂದ ತತ್ತರಿಸುತ್ತಿದೆ ಪಾಕಿಸ್ತಾನ, ಅದಕ್ಕೆ ಮುಂದೇನು ಕಾದಿದೆಯೋ
ಭಾರತದ ನಡೆಗಳಿಂದ ತತ್ತರಿಸುತ್ತಿದೆ ಪಾಕಿಸ್ತಾನ, ಅದಕ್ಕೆ ಮುಂದೇನು ಕಾದಿದೆಯೋ
ಉಡುಪಿ ಶ್ರೀಕೃಷ್ಣನಿಗೆ ಪರ್ಯಾಯ ಶ್ರೀ, ಪುತ್ತಿಗೆ ಶ್ರೀಗಳಿಂದ ವಿಶೇಷ ಅಲಂಕಾರ
ಉಡುಪಿ ಶ್ರೀಕೃಷ್ಣನಿಗೆ ಪರ್ಯಾಯ ಶ್ರೀ, ಪುತ್ತಿಗೆ ಶ್ರೀಗಳಿಂದ ವಿಶೇಷ ಅಲಂಕಾರ