AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದ್ಭುತ ಉದ್ಯಾನವನದಿಂದ‌ ಕೂಡಿದೆ ಅಮೀನಗಡ ಪೊಲೀಸ್ ಠಾಣೆ; ಪರಿಸರ ಕಾಳಜಿಗೆ ಜನರಿಂದ ಮೆಚ್ಚುಗೆ

ಠಾಣೆಯ ಸಿಬ್ಬಂದಿಗಳ ಪರಿಶ್ರಮದಿಂದಾಗಿ ಅಮೀನಗಡ ಪೊಲೀಸ್ ಠಾಣೆ ನೋಡುಗರ ಗಮನ ಸೆಳೆಯುವುದರ ಜೊತೆಗೆ ಪ್ರತಿಶತ ನೂರರಷ್ಟು ಕೇಸ್​ಗಳನ್ನು ಡಿಸ್ಪೋಜಲ್‌ (ಎಫ್​ಐಆರ್​ ಆದ ಕೇಸ್ ಕೋರ್ಟ್​ಗೆ ಚಾರ್ಜಶೀಟ್ ಸಲ್ಲಿಸೋದು)ಮಾಡಿರುವ ಖ್ಯಾತಿ ಹೊಂದಿದೆ.

ಅದ್ಭುತ ಉದ್ಯಾನವನದಿಂದ‌ ಕೂಡಿದೆ ಅಮೀನಗಡ ಪೊಲೀಸ್ ಠಾಣೆ; ಪರಿಸರ ಕಾಳಜಿಗೆ ಜನರಿಂದ ಮೆಚ್ಚುಗೆ
ಅಮೀನಗಡ ಪೊಲೀಸ್ ಸ್ಟೇಷನ್
Follow us
TV9 Web
| Updated By: preethi shettigar

Updated on:Jan 01, 2022 | 2:25 PM

ಬಾಗಲಕೋಟೆ: ಪೊಲೀಸ್ ಠಾಣೆ ಅಂದರೆ ಸಾಕು ಜನರು ಒಂದು ಕ್ಷಣ‌ ದಿಗಿಲುಗೊಳ್ಳುತ್ತಾರೆ. ಅಪ್ಪಿ ತಪ್ಪಿಯೂ ಆ ಕಡೆ ತಲೆ ಹಾಕಿ ಕೂಡ ಮಲಗುವುದಕ್ಕೂ ಇಷ್ಟಪಡುವುದಿಲ್ಲ. ಆದರೆ ಬಾಗಲಕೋಟೆ ಪೊಲೀಸ್​ ಠಾಣೆಗೆ (Police station) ಹೋದರೆ ಭಯ ಇರುವುದಿಲ್ಲ. ಏಕೆಂದರೆ ಇಲ್ಲಿಗೆ ಭೇಟಿ ನೀಡಿದಾಗ ಸುಂದರ ಹಸಿರು ಗಾರ್ಡನ್ ‌ಮೊದಲಿಗೆ ಸ್ವಾಗತ ಮಾಡುತ್ತದೆ. ಇನ್ನು ಒಳಗಡೆ ಹೋದರೆ ಹೈಟೆಕ್ ಠಾಣೆ, ಸ್ವಚ್ಚಂದವಾಗಿ ಕಾಣುವ ಆವರಣ, ಸುಸಜ್ಜಿತ ಕಟ್ಟಡ ಎಲ್ಲವೂ ವ್ಯವಸ್ಥಿತವಾಗಿದೆ. ಸದ್ಯ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪೊಲೀಸ್ ಠಾಣೆ ಎಲ್ಲರನ್ನು ಆಕರ್ಷಿಸಿದೆ.

ಅಮೀನಗಡ ಪೊಲೀಸ್ ಠಾಣೆಯ ಆವರಣ ಸುತ್ತಲೂ ಸ್ವಚ್ಛಂದವಾಗಿ ನಳನಳಿಸುತ್ತಿದೆ. ಇದಕ್ಕೆ ಕಾರಣ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ. ಠಾಣೆಯ ಸಿಬ್ಬಂದಿಗಳ ಪರಿಶ್ರಮದಿಂದಾಗಿ ಅಮೀನಗಡ ಪೊಲೀಸ್ ಠಾಣೆ ನೋಡುಗರ ಗಮನ ಸೆಳೆಯುವುದರ ಜೊತೆಗೆ ಪ್ರತಿಶತ ನೂರರಷ್ಟು ಕೇಸ್​ಗಳನ್ನು ಡಿಸ್ಪೋಜಲ್‌ (ಎಫ್​ಐಆರ್​ ಆದ ಕೇಸ್ ಕೋರ್ಟ್​ಗೆ ಚಾರ್ಜಶೀಟ್ ಸಲ್ಲಿಸೋದು)ಮಾಡಿರುವ ಖ್ಯಾತಿ ಹೊಂದಿದೆ. ಜಿಲ್ಲಾ ಪೊಲೀಸ್ ಇಲಾಖೆಯಿಂದ ಪ್ರಶಸ್ತಿ ಜೊತೆಗೆ ನಗದು ಕೂಡ ಪಡೆದುಕೊಂಡಿದೆ. ಇಲಾಖೆಯ 71 ಲಕ್ಷ ರೂಪಾಯಿ ಅನುದಾನದಲ್ಲಿ ಇಷ್ಟೆಲ್ಲ ಸುಧಾರಣೆ ಮಾಡಲಾಗಿದೆ.

ಉತ್ತಮ ವಾತಾವರಣ ಹೊಂದಿದ ಠಾಣೆ, ಕೇಸ್ ದಾಖಲಾತಿಯಲ್ಲಿ ಶಿಸ್ತುಬದ್ದ ಠಾಣೆ ಎಂದು ಪ್ರಶಂಸೆಗೆ ಅಮೀನಗಢ ಠಾಣೆ ಪಾತ್ರವಾಗಿದೆ ಎಂದು ಬಾಗಲಕೋಟೆ ಎಸ್​ಪಿ ಲೋಕೇಶ್ ಜಗಲಾಸರ್ ಹೇಳಿದ್ದಾರೆ.

police station

ಗಾರ್ಡನ್

ಇನ್ನು ಪೊಲೀಸ್ ಠಾಣೆಗೆ ಬರುವ ದಾರಿಯನ್ನು ಸಿಸಿ ರೋಡ್ ಮಾಡಲಾಗಿದೆ. ಠಾಣೆಯ ಮುಂಭಾಗದಲ್ಲಿ ಮಿನಿ ಪಾರ್ಕ್ ರೀತಿಯಲ್ಲಿ ಸಿಂಗರಿಸಲಾಗಿದೆ. ಅಲ್ಲದೇ ಠಾಣೆಯ ಆವರಣದಲ್ಲಿ ಕಾಂಕ್ರೀಟ್ ಹಾಗೂ ಫ್ಲೂರ್ ಟೈಲ್ಸ್ ಅಳವಡಿಸಲಾಗಿದೆ. ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಅಲ್ಲದೇ, ಪೊಲೀಸ್ ಠಾಣೆಗೆ ಬಂದವರಿಗೆ ಸರಿಯಾಗಿ ಕುಳಿತುಕೊಳ್ಳುವುದಕ್ಕೆ ಸೂಕ್ತ ಜಾಗೆ ಕಲ್ಪಿಸಲಾಗಿದೆ. ಅಮೀನಗಢ ಪೊಲೀಸ್ ಠಾಣೆ ಪಿಎಸ್​ಐ ಮಲ್ಲಿಕಾರ್ಜುನ ಕುಲಕರ್ಣಿ ಅವರ ಕಾಳಜಿ ಮೂಲಕ ಠಾಣೆ ಈಗ ವಿಭಿನ್ನ ಠಾಣೆಯಾಗಿ ಹೊರಹೊಮ್ಮಿದೆ. ಇನ್ನು ಕಚೇರಿಯ ಒಳಗೆ ಕೂಡ ದೂರು ದಾಖಲಿಸಿಕೊಳ್ಳುವ ಸಿಬ್ಬಂದಿಯ ಸುತ್ತಲೂ ಗಾಜಿನ ಕೌಂಟರ್ ನಿರ್ಮಿಸಲಾಗಿದೆ. ಜೊತೆಗೆ ಒಂದೊಂದು ಬೀಟ್​ಗೆ ತಕ್ಕಂತೆ ಒಂದೊಂದು ಹಳ್ಳಿಯ ದಾಖಲಾತಿ‌ ಮಾಹಿತಿ ಎಲ್ಲಾ ಕಡತಗಳನ್ನು ಅಚ್ಚುಕಟ್ಟಾಗಿ ಪ್ರತ್ಯೇಕವಾಗಿ ಜೋಡಿಸಿ ಇಡಲಾಗಿದೆ. ಹೀಗಾಗಿ ಅಮೀನಗಡ ಪೊಲೀಸ್ ಠಾಣೆ ಸಿಬ್ಬಂದಿಯ ಕಾರ್ಯವೈಖರಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Mallikarjun kulkarni

ಪಿಎಸ್​ಐ ಮಲ್ಲಿಕಾರ್ಜುನ ಕುಲಕರ್ಣಿ

ವರದಿ: ರವಿ ಮೂಕಿ

ಇದನ್ನೂ ಓದಿ: ಪೊಲೀಸ್​ ಠಾಣೆಯಲ್ಲಿ ಕಂಗನಾ ಬಿಂಕ ನೋಡಿ ಅಚ್ಚರಿ ಪಟ್ಟ ಪೊಲೀಸರು; ಹೈಲೈಟ್​ ಆಯ್ತು ಮುತ್ತಿನ ನೆಕ್ಲೆಸ್

Sachin Atulkar: ವೈರಲ್​ ಆಯ್ತು ಐಪಿಎಸ್​ ಅಧಿಕಾರಿಯ ಫೋಟೋ; ಪೊಲೀಸ್​ ಎಂದರೆ ಹೀಗೆ ಇರಬೇಕು ಎಂದ ನೆಟ್ಟಿಗರು

Published On - 9:09 am, Sat, 1 January 22

‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ