ಬಾಗಲಕೋಟೆ ಜಿಲ್ಲೆ ಜನರಲ್ಲಿ ಹೆಚ್ಚಾಯಿತು ಮದ್ರಾಸ್ ಐ ಭೀತಿ: ಪ್ರತಿದಿನ 40ಕ್ಕೂ ಹೆಚ್ಚು ರೋಗಿಗಳು ಜಿಲ್ಲಾಸ್ಪತ್ರೆಗೆ ಭೇಟಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 10, 2023 | 9:43 PM

Bagalkote News: ಮದ್ರಾಸ್ ಐ ಮಾರಣಾಂತಿಕ‌ ವೈರಲ್ ಫೀವರ್ ಅಲ್ಲದಿದ್ದರೂ ಇದರಿಂದ ಜನರು ವಿಪರೀತ ಕಿರಿ ಕಿರಿ ಅನುಭವಿಸುವಂತಾಗಿದೆ. ಬಾಗಲಕೋಟಿ ಜಿಲ್ಲೆಯಲ್ಲಿ ಮದ್ರಾಸ್ ಐನಿಂದ ಜನರು ಬಳಲುತ್ತಿದ್ದಾರೆ. ಅತಿ ವೇಗವಾಗಿ ಮದ್ರಾಸ್ ಐ ಹರಡುತ್ತಿದ್ದು ಜನರಲ್ಲಿ ಭೀತಿ ಹುಟ್ಟಿಸಿದೆ. ಜಿಲ್ಲಾಸ್ಪತ್ರೆಗೆ ಪ್ರತಿದಿನ 40-50 ಮದ್ರಾಸ್ ಐ ರೋಗಿಗಳ ಬರುತ್ತಿದ್ದು ವೈದ್ಯರು‌ ನಿರಂತರವಾಗಿ ಚಿಕಿತ್ಸೆ ಮುಂದುವರೆಸಿದ್ದಾರೆ. 

ಬಾಗಲಕೋಟೆ ಜಿಲ್ಲೆ ಜನರಲ್ಲಿ ಹೆಚ್ಚಾಯಿತು ಮದ್ರಾಸ್ ಐ ಭೀತಿ: ಪ್ರತಿದಿನ 40ಕ್ಕೂ ಹೆಚ್ಚು ರೋಗಿಗಳು ಜಿಲ್ಲಾಸ್ಪತ್ರೆಗೆ ಭೇಟಿ
ಕಣ್ಣಿನ ತಪಾಸಣೆ ‌ನಡೆಸುತ್ತಿರುವ ವೈದ್ಯರು
Follow us on

ಬಾಗಲಕೋಟೆ, ಆಗಸ್ಟ್​ 10: ಪ್ರತಿ ವರ್ಷ ಒಂದಿಲ್ಲೊಂದು ವೈರಸ್​ಗಳು ಜನರನ್ನು ಕಾಡುತ್ತಿವೆ. ಮೂರು ವರ್ಷ ಕಾಡಿದ ಕೋವಿಡ್ ಈಗ ತಣ್ಣಗಾಗಿದೆ. ಆದರೆ ಈ ವರ್ಷ ಮದ್ರಾಸ್ ಐ (madras eye effect) ವಕ್ಕರಿಸಿದೆ. ಜಿಲ್ಲೆಯಲ್ಲಿ ಮದ್ರಾಸ್ ಐನಿಂದ ಜನರು ಬಳಲುತ್ತಿದ್ದಾರೆ. ಅತಿ ವೇಗವಾಗಿ ಮದ್ರಾಸ್ ಐ ಹರಡುತ್ತಿದ್ದು ಜನರಲ್ಲಿ ಭೀತಿ ಹುಟ್ಟಿಸಿದೆ. ಸದ್ಯ ಈಗ ಎಲ್ಲ ಕಡೆ ಮದ್ರಾಸ್ ಐನದ್ದೆ ಹಾವಳಿ. ಪ್ರತಿ ಹಳ್ಳಿ ಪಟ್ಟಣ ನಗರದಲ್ಲೂ ಮದ್ರಾಸ್ ಐ ಪೇಷಂಟ್ ಗಳ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ ಬಾಗಲಕೋಟೆ ಜಿಲ್ಲೆಯಲ್ಲಿ ಮದ್ರಾಸ್ ಐ ಹಾವಳಿ ಹೆಚ್ಚಾಗಿದ್ದು,ಜನರಲ್ಲಿ ಮದ್ರಾಸ್ ಐ ಭೀತಿ ಶುರುವಾಗಿದೆ.

ಕಣ್ಣಿನಲ್ಲಿ ನೀರು ಬರುವುದು, ಕಣ್ಣು ಕೆಂಪಾಗೋದು, ಉರಿತ, ಕಣ್ಣು ಚುಚ್ಚುವಿಕೆ, ನೋವು, ಬಾವು ಕಾಣಿಸಿಕೊಳ್ಳುವ ಲಕ್ಷಣ ಇರುವ ಮದ್ರಾಸ್ ಐ ಲಕ್ಷಣವಾಗಿದೆ. ಜಿಲ್ಲಾಸ್ಪತ್ರೆಗೆ ಪ್ರತಿದಿನ 40-50 ಮದ್ರಾಸ್ ಐ ರೋಗಿಗಳ ಬರುತ್ತಿದ್ದು ವೈದ್ಯರು‌ ನಿರಂತರವಾಗಿ ಚಿಕಿತ್ಸೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಶಾಲೆಗಳು ಆರಂಭವಾಗಿ ಎರಡು ತಿಂಗಳಾದರೂ ಸಿಗದ ಎರಡನೇ ಸೆಟ್ ಸಮವಸ್ತ್ರ: ಶಿಕ್ಷಣ ಇಲಾಖೆ ವಿರುದ್ಧ ವಿದ್ಯಾರ್ಥಿಗಳು ಬೇಸರ

ಬಾಗಲಕೋಟೆಯ 50 ಬೆಡ್ ಆಸ್ಪತ್ರೆ, ಜಿಲ್ಲೆಯ ಐದು ತಾಲ್ಲೂಕಾಸ್ಪತ್ರೆ, 49 ಪ್ರಾಥಮಿಕ ಆರೋಗ್ಯ ಕೇಂದ್ರ, 8 ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿದಿನ 20-30 ಮದ್ರಾಸ್ ಐ ರೋಗಿಗಳು ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಹೊರಟಿದ್ದಾರೆ‌. ಉಳಿದಂತೆ ಖಾಸಗಿ ಆಸ್ಪತ್ರೆಗಳು ಸೇರಿ ಒಟ್ಟು ಪ್ರತಿನಿತ್ಯ ಸರಾಸರಿ 1500 ಜನರು ಮದ್ರಾಸ್ ಐ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುಟಾಣಿ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೂ ಮದ್ರಾಸ್ ಐ ಬಾಧೆ ಕಾಡುತ್ತಿದೆ. ಇದರಿಂದ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.

ಮದ್ರಾಸ್ ಐ ಮಾರಣಾಂತಿಕ‌ ವೈರಲ್ ಫೀವರ್ ಅಲ್ಲ ಆದರೂ ಇದರಿಂದ ಜನರು ವಿಪರೀತ ಕಿರಿ ಕಿರಿ ಅನುಭವಿಸುತ್ತಾರೆ. ಮದ್ರಾಸ್ ಐ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಯೋಜನೆ ಮೂಲಕ ಪ್ರತಿ ತಾಲ್ಲೂಕಿನಲ್ಲಿ ಶಾಲೆ ಕಾಲೇಜು ಅಂಗನವಾಡಿಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಪ್ರತಿ ತಾಲ್ಲೂಕಿನಲ್ಲಿ ಎರಡು ತಂಡ ಮಾಡಲಾಗಿದೆ. ಇದರಲ್ಲಿ ತಂಡದಲ್ಲಿ ಕಣ್ಣಿನ ವೈದ್ಯರು ಸೇರಿದಂತೆ ಇಬ್ಬರು ವೈದ್ಯರು ನರ್ಸ್ ಗಳು ಇರಲಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ ಕರಾಟೆ ಕಲಿ, ಎಲೆಕ್ಟ್ರಿಷಿಯನ್ ಮಗಳು ಚಿನ್ನ ಗೆದ್ದು ವಿಶ್ವಮಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ! ಆರ್ಥಿಕ ನೆರವು ಬೇಕಿದೆ

ಆಸ್ಪತ್ರೆಗಳಲ್ಲಿ ಇದಕ್ಕೆ ವೈದ್ಯರು ಐ ಡ್ರಾಪ್ಸ್ ಹಾಗೂ ಸಲಹೆ ಕೊಟ್ಟು ಕಳಿಸುತ್ತಿದ್ದಾರೆ. ಜನರು ಭಯಪಡುವ ಅಗತ್ಯವಿಲ್ಲ. ಇದಕ್ಕೆ‌ ಮುಂಜಾಗ್ರತಾ ಕ್ರಮ ಮುಖ್ಯ, ಸಾಂಕ್ರಾಮಿಕ ಆಗಿರೋದರಿಂದ ಒಬ್ಬರು ಮತ್ತೊಬ್ಬರ ಟಾವೆಲ್ ಆಗಲಿ ಖರ್ಚಿಪ್ ಆಗಲಿ ಬಳಸಬಾರದು. ಮತ್ತೊಬ್ಬರ ವಸ್ತುಗಳನ್ನು ಬಳಸಬಾರದು. ಮದ್ರಾಸ್ ಐ ಬಂದವರಿಂದ ಆದಷ್ಟು ಅಂತರ ಕಾಪಾಡಬೇಕು. ಇದೇ ಈ ವೈರಲ್ ಇಂಪೆಕ್ಷನ್​ಗೆ ಬಹುಮುಖ್ಯವಾದ ಮದ್ದು ಅಂತಿದ್ದಾರೆ.

ಜಿಲ್ಲೆಯಲ್ಲಿ ಮದ್ರಾಸ್ ಐ ಬಾರಿ ಭೀತಿ ಹುಟ್ಟಿಸಿದ್ದು, ಮುಕ್ತವಾಗಿ ಜನರ ಜೊತೆ ಬೆರೆಯಲು ಹಿಂದೇಟು ಹಾಕುವಂತಾಗಿದೆ. ಮಾರಣಾಂತಿಕವಲ್ಲದಿದ್ದರೂ ಜನರಿಗೆ ಕಿರಿಕಿರಿ ಮಾಡುವ ಮದ್ರಾಸ್ ಐ ಅನ್ನು ಮುಂಜಾಗ್ರತಾ ಕ್ರಮ ಕೈಗೊಂಡು ಜನರೇ ತೊಲಗಿಸಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:42 pm, Thu, 10 August 23