ಬಾಗಲಕೋಟೆಯಲ್ಲಿ ಕಳ್ಳತನ ಸಾಬೀತು ಪಡಿಸಲು ಹೋಗಿ ಸ್ನೇಹಿತೆಯ ಕೈಗಳನ್ನೇ ಸುಟ್ಟ ಮಹಿಳೆ

ಮೌಡ್ಯತೆಗೆ ಒಳಗಾಗಿ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಮೊತ್ತೊಬ್ಬರ ಪ್ರಾಣ ತೆಗೆದಿದ್ದಾರೆ. ಅದೇರೀತಿ ಬಾಗಲಕೋಟೆ ತಾಲ್ಲೂಕಿನ ಖಜ್ಜಿಡೋಣಿ ಗ್ರಾಮದಲ್ಲಿ ಮಹಿಳೆಯೊಬ್ಬಳು ಮೌಡ್ಯತೆಗೆ ಒಳಗಾಗಿ ತನ್ನ ಸ್ನೇಹಿತೆಯ ಕೈಗಳನ್ನೇ ಸುಟ್ಟಿದ್ದಾಳೆ.

ಬಾಗಲಕೋಟೆಯಲ್ಲಿ ಕಳ್ಳತನ ಸಾಬೀತು ಪಡಿಸಲು ಹೋಗಿ ಸ್ನೇಹಿತೆಯ ಕೈಗಳನ್ನೇ ಸುಟ್ಟ ಮಹಿಳೆ
ಶೋಭಾ (ಎಡಚಿತ್ರ) ಗಾಯಗೊಂಡ ಲಕ್ಷ್ಮಿ (ಬಲಚಿತ್ರ)
Follow us
| Updated By: ವಿವೇಕ ಬಿರಾದಾರ

Updated on: Jul 26, 2023 | 10:06 AM

ಬಾಗಲಕೋಟೆ: ಮೌಡ್ಯತೆಗೆ ಒಳಗಾಗಿ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತು ಮೊತ್ತೊಬ್ಬರ ಪ್ರಾಣ ತೆಗೆದಿದ್ದಾರೆ. ಅದೇರೀತಿ ಬಾಗಲಕೋಟೆ (Bagalkot) ತಾಲ್ಲೂಕಿನ ಖಜ್ಜಿಡೋಣಿ ಗ್ರಾಮದಲ್ಲಿ ಮಹಿಳೆಯೊಬ್ಬಳು ಮೌಡ್ಯತೆಗೆ ಒಳಗಾಗಿ ತನ್ನ ಸ್ನೇಹಿತೆಯ ಕೈಗಳನ್ನೇ ಸುಟ್ಟಿದ್ದಾಳೆ. ಖಜ್ಜಿಡೋಣಿ ಗ್ರಾಮದ ಶೋಭಾ ಹಂಚಿನಾಳ ಎಂಬುವರ ಮನೆಯಲ್ಲಿ ಬುಧುವಾರ (ಜು.19) ರಂದು ಕಳ್ಳತನವಾಗಿತ್ತು. ಖದೀಮರು ಹಾಡುಹಗಲೇ ಶೋಭಾ ಹಂಚಿನಾಳ ಮನೆಯಲ್ಲಿದ್ದ ತಿಜೋರಿ ಒಡೆದು 7.40 ಲಕ್ಷ ಮೌಲ್ಯದ ಚಿನ್ನವನ್ನು ‌ಕಳ್ಳತನ (Robbery) ಮಾಡಿದ್ದರು.

ಈ ಬಗ್ಗೆ ದೇವರ ಹೇಳಿಕೆ ಹೇಳುವ ತಾಯವ್ವ ಬಳಿ ಹೋಗಿ ನಮ್ಮ ಮನೆ ಕಳ್ಳತ ಮಾಡಿದವರು ಯಾರು ಎಂದು ಶೋಭಾ‌ ಮನೆಯವರು ಕೇಳಿದ್ದರು. ಇದಕ್ಕೆ ತಾಯವ್ವ ಮಾನೆ ನಿನ್ನ ಸ್ನೇಹಿತೆ ಲಕ್ಷ್ಮಿ ಪೆಟ್ಲೂರ (29) ಕಳ್ಳತನ ಮಾಡಿದ್ದಾಳೆ ಎಂದು ಹೇಳಿದ್ದಳು.

ಇದನ್ನೂ ಓದಿ: ಬಾಗಲಕೋಟೆ: ವಾತಾವರಣ ವೈಪರೀತ್ಯದಿಂದ ಬೆಳೆಗಳಿಗೆ ಕೀಟಗಳ ಕಾಟ; ರೈತರ ಅಳಲು

ಅಲ್ಲದೇ ಆಕೆ ಕಳ್ಳತನ ಮಾಡಿಲ್ಲ ಅಂದರೆ ಸುಡುವ ಎಣ್ಣೆಯಲ್ಲಿ ಕೈ ಎದ್ದಿ ಪರೀಕ್ಷೆ ಮಾಡಿ ಎಂದಿದ್ದಳು. ತಾಯವ್ವ ಮಾನೆ ಮಾತು ಕೇಳಿದ ಶೋಭಾ ಹಂಚಿನಾಳ ಹಾಗೂ ಕುಟುಂಬಸ್ಥರು, ಸೋಮವಾರ (ಜು.24) ರಂದು ಲಕ್ಷ್ಮಿ ಪೆಟ್ಲೂರ ಅವರಿಗೆ ಕರೆ ಮಾಡಿ ಶೋಭಾ ಮನೆಗೆ ಕರೆಸಿದ್ದಳು.ಮನೆಗೆ ಬಂದ ಲಕ್ಷ್ಮಿ ಅವರಿಗೆ ಶೋಭಾ ಈ ಬಗ್ಗೆ ಪ್ರಶ್ನಿಸಿದ್ದಾಳೆ. ಅದಕ್ಕೆ ಲಕ್ಷ್ಮಿ ನಾನು ಕಳ್ಳತನ ಮಾಡಿಲ್ಲವೆಂದಿದ್ದಾರೆ.

ಅದಕ್ಕೆ ಶೋಭಾ ಹಾಗೂ ಕುಟುಂಬಸ್ಥರು ಮನೆಯಲ್ಲಿ ಸುಡುವ ಎಣ್ಣೆಯಲ್ಲಿ ಲಕ್ಷ್ಮಿ ಕೈ ಎದ್ದಿದ್ದಾರೆ. ಇದರಿಂದ ಲಕ್ಷ್ಮಿ ಅವರ ಎರಡು ಮುಂಗೈಗೆ ತೀರ್ವವಾಗಿ ಗಾಯವಾಗಿದ್ದು, ಕಲಾದಗಿ‌ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಾದಗಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ