AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆಯಲ್ಲಿ ಕಳ್ಳತನ ಸಾಬೀತು ಪಡಿಸಲು ಹೋಗಿ ಸ್ನೇಹಿತೆಯ ಕೈಗಳನ್ನೇ ಸುಟ್ಟ ಮಹಿಳೆ

ಮೌಡ್ಯತೆಗೆ ಒಳಗಾಗಿ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಮೊತ್ತೊಬ್ಬರ ಪ್ರಾಣ ತೆಗೆದಿದ್ದಾರೆ. ಅದೇರೀತಿ ಬಾಗಲಕೋಟೆ ತಾಲ್ಲೂಕಿನ ಖಜ್ಜಿಡೋಣಿ ಗ್ರಾಮದಲ್ಲಿ ಮಹಿಳೆಯೊಬ್ಬಳು ಮೌಡ್ಯತೆಗೆ ಒಳಗಾಗಿ ತನ್ನ ಸ್ನೇಹಿತೆಯ ಕೈಗಳನ್ನೇ ಸುಟ್ಟಿದ್ದಾಳೆ.

ಬಾಗಲಕೋಟೆಯಲ್ಲಿ ಕಳ್ಳತನ ಸಾಬೀತು ಪಡಿಸಲು ಹೋಗಿ ಸ್ನೇಹಿತೆಯ ಕೈಗಳನ್ನೇ ಸುಟ್ಟ ಮಹಿಳೆ
ಶೋಭಾ (ಎಡಚಿತ್ರ) ಗಾಯಗೊಂಡ ಲಕ್ಷ್ಮಿ (ಬಲಚಿತ್ರ)
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Jul 26, 2023 | 10:06 AM

Share

ಬಾಗಲಕೋಟೆ: ಮೌಡ್ಯತೆಗೆ ಒಳಗಾಗಿ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತು ಮೊತ್ತೊಬ್ಬರ ಪ್ರಾಣ ತೆಗೆದಿದ್ದಾರೆ. ಅದೇರೀತಿ ಬಾಗಲಕೋಟೆ (Bagalkot) ತಾಲ್ಲೂಕಿನ ಖಜ್ಜಿಡೋಣಿ ಗ್ರಾಮದಲ್ಲಿ ಮಹಿಳೆಯೊಬ್ಬಳು ಮೌಡ್ಯತೆಗೆ ಒಳಗಾಗಿ ತನ್ನ ಸ್ನೇಹಿತೆಯ ಕೈಗಳನ್ನೇ ಸುಟ್ಟಿದ್ದಾಳೆ. ಖಜ್ಜಿಡೋಣಿ ಗ್ರಾಮದ ಶೋಭಾ ಹಂಚಿನಾಳ ಎಂಬುವರ ಮನೆಯಲ್ಲಿ ಬುಧುವಾರ (ಜು.19) ರಂದು ಕಳ್ಳತನವಾಗಿತ್ತು. ಖದೀಮರು ಹಾಡುಹಗಲೇ ಶೋಭಾ ಹಂಚಿನಾಳ ಮನೆಯಲ್ಲಿದ್ದ ತಿಜೋರಿ ಒಡೆದು 7.40 ಲಕ್ಷ ಮೌಲ್ಯದ ಚಿನ್ನವನ್ನು ‌ಕಳ್ಳತನ (Robbery) ಮಾಡಿದ್ದರು.

ಈ ಬಗ್ಗೆ ದೇವರ ಹೇಳಿಕೆ ಹೇಳುವ ತಾಯವ್ವ ಬಳಿ ಹೋಗಿ ನಮ್ಮ ಮನೆ ಕಳ್ಳತ ಮಾಡಿದವರು ಯಾರು ಎಂದು ಶೋಭಾ‌ ಮನೆಯವರು ಕೇಳಿದ್ದರು. ಇದಕ್ಕೆ ತಾಯವ್ವ ಮಾನೆ ನಿನ್ನ ಸ್ನೇಹಿತೆ ಲಕ್ಷ್ಮಿ ಪೆಟ್ಲೂರ (29) ಕಳ್ಳತನ ಮಾಡಿದ್ದಾಳೆ ಎಂದು ಹೇಳಿದ್ದಳು.

ಇದನ್ನೂ ಓದಿ: ಬಾಗಲಕೋಟೆ: ವಾತಾವರಣ ವೈಪರೀತ್ಯದಿಂದ ಬೆಳೆಗಳಿಗೆ ಕೀಟಗಳ ಕಾಟ; ರೈತರ ಅಳಲು

ಅಲ್ಲದೇ ಆಕೆ ಕಳ್ಳತನ ಮಾಡಿಲ್ಲ ಅಂದರೆ ಸುಡುವ ಎಣ್ಣೆಯಲ್ಲಿ ಕೈ ಎದ್ದಿ ಪರೀಕ್ಷೆ ಮಾಡಿ ಎಂದಿದ್ದಳು. ತಾಯವ್ವ ಮಾನೆ ಮಾತು ಕೇಳಿದ ಶೋಭಾ ಹಂಚಿನಾಳ ಹಾಗೂ ಕುಟುಂಬಸ್ಥರು, ಸೋಮವಾರ (ಜು.24) ರಂದು ಲಕ್ಷ್ಮಿ ಪೆಟ್ಲೂರ ಅವರಿಗೆ ಕರೆ ಮಾಡಿ ಶೋಭಾ ಮನೆಗೆ ಕರೆಸಿದ್ದಳು.ಮನೆಗೆ ಬಂದ ಲಕ್ಷ್ಮಿ ಅವರಿಗೆ ಶೋಭಾ ಈ ಬಗ್ಗೆ ಪ್ರಶ್ನಿಸಿದ್ದಾಳೆ. ಅದಕ್ಕೆ ಲಕ್ಷ್ಮಿ ನಾನು ಕಳ್ಳತನ ಮಾಡಿಲ್ಲವೆಂದಿದ್ದಾರೆ.

ಅದಕ್ಕೆ ಶೋಭಾ ಹಾಗೂ ಕುಟುಂಬಸ್ಥರು ಮನೆಯಲ್ಲಿ ಸುಡುವ ಎಣ್ಣೆಯಲ್ಲಿ ಲಕ್ಷ್ಮಿ ಕೈ ಎದ್ದಿದ್ದಾರೆ. ಇದರಿಂದ ಲಕ್ಷ್ಮಿ ಅವರ ಎರಡು ಮುಂಗೈಗೆ ತೀರ್ವವಾಗಿ ಗಾಯವಾಗಿದ್ದು, ಕಲಾದಗಿ‌ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಾದಗಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್