Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆಯಲ್ಲಿ ಕಳ್ಳತನ ಸಾಬೀತು ಪಡಿಸಲು ಹೋಗಿ ಸ್ನೇಹಿತೆಯ ಕೈಗಳನ್ನೇ ಸುಟ್ಟ ಮಹಿಳೆ

ಮೌಡ್ಯತೆಗೆ ಒಳಗಾಗಿ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಮೊತ್ತೊಬ್ಬರ ಪ್ರಾಣ ತೆಗೆದಿದ್ದಾರೆ. ಅದೇರೀತಿ ಬಾಗಲಕೋಟೆ ತಾಲ್ಲೂಕಿನ ಖಜ್ಜಿಡೋಣಿ ಗ್ರಾಮದಲ್ಲಿ ಮಹಿಳೆಯೊಬ್ಬಳು ಮೌಡ್ಯತೆಗೆ ಒಳಗಾಗಿ ತನ್ನ ಸ್ನೇಹಿತೆಯ ಕೈಗಳನ್ನೇ ಸುಟ್ಟಿದ್ದಾಳೆ.

ಬಾಗಲಕೋಟೆಯಲ್ಲಿ ಕಳ್ಳತನ ಸಾಬೀತು ಪಡಿಸಲು ಹೋಗಿ ಸ್ನೇಹಿತೆಯ ಕೈಗಳನ್ನೇ ಸುಟ್ಟ ಮಹಿಳೆ
ಶೋಭಾ (ಎಡಚಿತ್ರ) ಗಾಯಗೊಂಡ ಲಕ್ಷ್ಮಿ (ಬಲಚಿತ್ರ)
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ವಿವೇಕ ಬಿರಾದಾರ

Updated on: Jul 26, 2023 | 10:06 AM

ಬಾಗಲಕೋಟೆ: ಮೌಡ್ಯತೆಗೆ ಒಳಗಾಗಿ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತು ಮೊತ್ತೊಬ್ಬರ ಪ್ರಾಣ ತೆಗೆದಿದ್ದಾರೆ. ಅದೇರೀತಿ ಬಾಗಲಕೋಟೆ (Bagalkot) ತಾಲ್ಲೂಕಿನ ಖಜ್ಜಿಡೋಣಿ ಗ್ರಾಮದಲ್ಲಿ ಮಹಿಳೆಯೊಬ್ಬಳು ಮೌಡ್ಯತೆಗೆ ಒಳಗಾಗಿ ತನ್ನ ಸ್ನೇಹಿತೆಯ ಕೈಗಳನ್ನೇ ಸುಟ್ಟಿದ್ದಾಳೆ. ಖಜ್ಜಿಡೋಣಿ ಗ್ರಾಮದ ಶೋಭಾ ಹಂಚಿನಾಳ ಎಂಬುವರ ಮನೆಯಲ್ಲಿ ಬುಧುವಾರ (ಜು.19) ರಂದು ಕಳ್ಳತನವಾಗಿತ್ತು. ಖದೀಮರು ಹಾಡುಹಗಲೇ ಶೋಭಾ ಹಂಚಿನಾಳ ಮನೆಯಲ್ಲಿದ್ದ ತಿಜೋರಿ ಒಡೆದು 7.40 ಲಕ್ಷ ಮೌಲ್ಯದ ಚಿನ್ನವನ್ನು ‌ಕಳ್ಳತನ (Robbery) ಮಾಡಿದ್ದರು.

ಈ ಬಗ್ಗೆ ದೇವರ ಹೇಳಿಕೆ ಹೇಳುವ ತಾಯವ್ವ ಬಳಿ ಹೋಗಿ ನಮ್ಮ ಮನೆ ಕಳ್ಳತ ಮಾಡಿದವರು ಯಾರು ಎಂದು ಶೋಭಾ‌ ಮನೆಯವರು ಕೇಳಿದ್ದರು. ಇದಕ್ಕೆ ತಾಯವ್ವ ಮಾನೆ ನಿನ್ನ ಸ್ನೇಹಿತೆ ಲಕ್ಷ್ಮಿ ಪೆಟ್ಲೂರ (29) ಕಳ್ಳತನ ಮಾಡಿದ್ದಾಳೆ ಎಂದು ಹೇಳಿದ್ದಳು.

ಇದನ್ನೂ ಓದಿ: ಬಾಗಲಕೋಟೆ: ವಾತಾವರಣ ವೈಪರೀತ್ಯದಿಂದ ಬೆಳೆಗಳಿಗೆ ಕೀಟಗಳ ಕಾಟ; ರೈತರ ಅಳಲು

ಅಲ್ಲದೇ ಆಕೆ ಕಳ್ಳತನ ಮಾಡಿಲ್ಲ ಅಂದರೆ ಸುಡುವ ಎಣ್ಣೆಯಲ್ಲಿ ಕೈ ಎದ್ದಿ ಪರೀಕ್ಷೆ ಮಾಡಿ ಎಂದಿದ್ದಳು. ತಾಯವ್ವ ಮಾನೆ ಮಾತು ಕೇಳಿದ ಶೋಭಾ ಹಂಚಿನಾಳ ಹಾಗೂ ಕುಟುಂಬಸ್ಥರು, ಸೋಮವಾರ (ಜು.24) ರಂದು ಲಕ್ಷ್ಮಿ ಪೆಟ್ಲೂರ ಅವರಿಗೆ ಕರೆ ಮಾಡಿ ಶೋಭಾ ಮನೆಗೆ ಕರೆಸಿದ್ದಳು.ಮನೆಗೆ ಬಂದ ಲಕ್ಷ್ಮಿ ಅವರಿಗೆ ಶೋಭಾ ಈ ಬಗ್ಗೆ ಪ್ರಶ್ನಿಸಿದ್ದಾಳೆ. ಅದಕ್ಕೆ ಲಕ್ಷ್ಮಿ ನಾನು ಕಳ್ಳತನ ಮಾಡಿಲ್ಲವೆಂದಿದ್ದಾರೆ.

ಅದಕ್ಕೆ ಶೋಭಾ ಹಾಗೂ ಕುಟುಂಬಸ್ಥರು ಮನೆಯಲ್ಲಿ ಸುಡುವ ಎಣ್ಣೆಯಲ್ಲಿ ಲಕ್ಷ್ಮಿ ಕೈ ಎದ್ದಿದ್ದಾರೆ. ಇದರಿಂದ ಲಕ್ಷ್ಮಿ ಅವರ ಎರಡು ಮುಂಗೈಗೆ ತೀರ್ವವಾಗಿ ಗಾಯವಾಗಿದ್ದು, ಕಲಾದಗಿ‌ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಾದಗಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ