AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಪ್ಲಿ ಕೋಟೆಯಲ್ಲಿ ಪಿರಂಗಿ ಗುಂಡುಗಳು ಪತ್ತೆ! ಅವು ಆದಿಲ್ ಶಾಹಿ ಕಾಲದ್ದು ಎಂದರು ಇತಿಹಾಸ ಸಂಶೋಧಕ ಕೋಲ್ಕಾರ್

ಕಂಪ್ಲಿಯ ಗಂಡುಗಲಿ ಕುಮಾರರಾಮನ ಕೋಟೆಯಲ್ಲಿ ದೊರೆತ ಪಿರಂಗಿ ಗುಂಡುಗಳ ವಿಚಾರವಾಗಿ ಕೋಟೆಗೆ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಭೇಟಿ ನೀಡಿ ಪರಿಶೀಲಿಸಿದರು, ಕೋಟೆ ಮಹಾದ್ವಾರದ ಮೇಲ್ಬಾಗದಲ್ಲಿ ದೊರೆತ ಫಿರಂಗಿ ಗುಂಡುಗಳು ಬಿಜಾಪುರದ ಆದಿಲ್ ಶಾಹಿ ಸಾಮ್ರಾಜ್ಯದ ದಂಡನಾಯಕನಾಗಿದ್ದ ಶಹಾಜಿ (ಶಿವಾಜಿಯ ತಂದೆ) ಯ ಕಾಲದ್ದಾಗಿವೆ.

ಕಂಪ್ಲಿ ಕೋಟೆಯಲ್ಲಿ ಪಿರಂಗಿ ಗುಂಡುಗಳು ಪತ್ತೆ! ಅವು ಆದಿಲ್ ಶಾಹಿ ಕಾಲದ್ದು ಎಂದರು ಇತಿಹಾಸ ಸಂಶೋಧಕ ಕೋಲ್ಕಾರ್
ಪಿರಂಗಿ ಗುಂಡುಗಳು
TV9 Web
| Edited By: |

Updated on:Jun 24, 2022 | 4:20 PM

Share

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಐತಿಹಾಸಿಕ ಗಂಡುಗಲಿ ಕುಮಾರ ರಾಮನ ಕೋಟೆಯ ಮಹಾದ್ವಾರದ ಸಂರಕ್ಷಣಾ ಸಂದರ್ಭದಲ್ಲಿ ದೊರೆತ 39 ಫಿರಂಗಿ ಗುಂಡುಗಳು(Cannon Bullets) ಬಿಜಾಪುರದ ಆದಿಲ್ ಶಾಹಿ(Adil Shahi) ಸಾಮ್ರಾಜ್ಯದ ದಂಡನಾಯಕನಾಗಿದ್ದ ಶಹಾಜಿ ಕಾಲದ್ದಾಗಿದೆ ಎಂದು ಗಂಗಾವತಿಯ ಇತಿಹಾಸ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಂಪ್ಲಿಯ ಗಂಡುಗಲಿ ಕುಮಾರರಾಮನ ಕೋಟೆಯಲ್ಲಿ ದೊರೆತ ಪಿರಂಗಿ ಗುಂಡುಗಳ ವಿಚಾರವಾಗಿ ಕೋಟೆಗೆ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಭೇಟಿ ನೀಡಿ ಪರಿಶೀಲಿಸಿದರು, ಕೋಟೆ ಮಹಾದ್ವಾರದ ಮೇಲ್ಬಾಗದಲ್ಲಿ ದೊರೆತ ಫಿರಂಗಿ ಗುಂಡುಗಳು ಬಿಜಾಪುರದ ಆದಿಲ್ ಶಾಹಿ ಸಾಮ್ರಾಜ್ಯದ ದಂಡನಾಯಕನಾಗಿದ್ದ ಶಹಾಜಿ (ಶಿವಾಜಿಯ ತಂದೆ) ಯ ಕಾಲದ್ದಾಗಿವೆ. 1657 ರಲ್ಲಿ ಶಹಾಜಿಯು ಕನಕಗಿರಿ ಮೇಲೆ ದಾಳಿ ಮಾಡಿ ಇಮ್ಮಡಿ ಉಡುಚಪ್ಪ ನಾಯಕನನ್ನು ಸೋಲಿಸಿ ಕನಕಗಿರಯನ್ನು ವಶಪಡಿಸಿಕೊಂಡು, ನಂತರ ಆನೆಗೊಂದಿ, ಇದಾದ ಮೇಲೆ ಕಂಪ್ಲಿ ಮೇಲೆ ದಾಳಿ ಮಾಡಿ ಕಂಪ್ಲಿ ಕೋಟೆಯನ್ನೂ ವಶಕ್ಕೆ ಪಡೆಯುತ್ತಾನೆ. ಕೋಟೆಗಳನ್ನು ಗೆದ್ದ ಸುದ್ದಿಯನ್ನು ಬಿಜಾಪುರದ ಸುಲ್ತಾನ್ ಅಲಿ ಆದಿಲ್‌ಶಾಹಿಗೆ 1657 ರ ಜುಲೈ 6 ರಂದು ಪತ್ರ ಬರೆದು ತಿಳಿಸುತ್ತಾನೆ. ಇದರ ಜತೆಗೆ ಫಿರಂಗಿ, ಮದ್ದುಗುಂಡುಗಳನ್ನು ಸಂಗ್ರಹಿಸಲು ಕಂಪ್ಲಿ ಕೋಟೆ ಪ್ರಶಸ್ತವಾಗಿದ್ದು, ಇದನ್ನೇ ಜಹಾಗೀರ್ ಆಗಿ ನೀಡುವಂತೆ ಕೋರುತ್ತಾನೆ. ಕಂಪ್ಲಿ ಕೋಟೆಯಲ್ಲೇ ಶಹಾಜಿ ಕೆಲಕಾಲ ವಾಸವಿರುತ್ತಾನೆ. ಈ ಸಮಯದಲ್ಲಿ ಆತ ಫಿರಂಗಿ ಗುಂಡುಗಳನ್ನು ಸಂಗ್ರಹಿಸಿರುವ ಸಾಧ್ಯತೆಗಳಿವೆ ಎಂದರು.

ಬಿಜಾಪುರದ ಅದಿಲ್ ಶಾಹಿಗಳು ಮದ್ದು ಗುಂಡುಗಳನ್ನು ಹೆಚ್ಚಾಗಿ ಬಳಸುತ್ತಿದ್ದರು. ಕೋಟೆಯ ರಕ್ಷಣಾ ಉದ್ದೇಶಕ್ಕಾಗಿ ಕೋಟೆಯ ಮೇಲ್ಬಾಗದಲ್ಲಿ ಫಿರಂಗಿ ಗುಂಡುಗಳನ್ನು ಸಂಗ್ರಹಿಸುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೆಚ್ಚಿನ ಸಂಶೋಧನೆಯಿಂದ ಇನ್ನಷ್ಟು ಮಾಹಿತಿ ತಿಳಿಯಲು ಸಾಧ್ಯ ಎಂದರು. ಡಾ.ಸುರೇಶ್‌ಗೌಡ ಪ್ರಮುಖರಾದ ಎಸ್.ಡಿ.ಬಸವರಾಜ್, ಬಾಗಲಿ, ಮಂಜುನಾಥ ಬಂಗಿ ದೊಡ್ಡ ಮಂಜುನಾಥ ಇತರರಿದ್ದರು. ಇದನ್ನೂ ಓದಿ: ನಾಡಿಯನ್ನು ಒತ್ತಿ ಹಿಡಿದರೆ ನಿದ್ರಾಹೀನತೆ ಸಮಸ್ಯೆ ಮಾಯ!

Published On - 4:20 pm, Fri, 24 June 22

Follow Us
ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ಒಂದು ರನ್​​ಗಾಗಿ ಇಷ್ಟೆಲ್ಲ ಪೋಸ್​​​ ಬೇಕಿತ್ತಾ ಪಾಂಡ್ಯ?
ಒಂದು ರನ್​​ಗಾಗಿ ಇಷ್ಟೆಲ್ಲ ಪೋಸ್​​​ ಬೇಕಿತ್ತಾ ಪಾಂಡ್ಯ?