AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Narendra Modi: ಶೀಘ್ರವೇ ಕಾಂಗ್ರೆಸ್​ ಭದ್ರಕೋಟೆಗೂ ಲಗ್ಗೆ! ಗಣಿ ನಾಡು ಸಂಡೂರಿನಲ್ಲಿ ಮೈನಿಂಗ್ ಕಾಲೇಜು ಶಂಕುಸ್ಥಾಪನೆಗೆ ಪ್ರಧಾನಿ ಮೋದಿ ಆಗಮನ

Mining National College -Sandur: 200 ಕೋಟಿ ರೂಪಾಯಿ ವೆಚ್ಚದಲ್ಲಿ ಗಣಿ ನಾಡು ಸಂಡೂರಿನಲ್ಲಿ ಆರಂಭವಾಗಲಿರುವ ದೇಶದ 2ನೇ ಮೈನಿಂಗ್ ಕಾಲೇಜು ಶಂಕುಸ್ಥಾಪನೆಗೆ ಸ್ವತ: ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ

Narendra Modi: ಶೀಘ್ರವೇ ಕಾಂಗ್ರೆಸ್​ ಭದ್ರಕೋಟೆಗೂ ಲಗ್ಗೆ! ಗಣಿ ನಾಡು ಸಂಡೂರಿನಲ್ಲಿ ಮೈನಿಂಗ್ ಕಾಲೇಜು ಶಂಕುಸ್ಥಾಪನೆಗೆ ಪ್ರಧಾನಿ ಮೋದಿ ಆಗಮನ
ಮೈನಿಂಗ್ ಕಾಲೇಜು ಶಂಕುಸ್ಥಾಪನೆಗೆ ಪ್ರಧಾನಿ ಮೋದಿ
Follow us
ಸಾಧು ಶ್ರೀನಾಥ್​
| Updated By: Digi Tech Desk

Updated on:Mar 13, 2023 | 11:54 AM

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಹ ರಾಜ್ಯದಲ್ಲಿ ಅಬ್ಬರದ ಪ್ರಚಾರ ಮಾಡ್ತಿದ್ದಾರೆ. ಈಗಾಗಲೇ ವಿವಿಧ ಜಿಲ್ಲೆಗಳಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಗಣಿ ನಾಡು ಬಳ್ಳಾರಿ ಜಿಲ್ಲೆಗೂ ಆಗಮಿಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಭದ್ರಕೋಟೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮೈನಿಂಗ್ ಕಾಲೇಜಿಗೆ ಶಂಕುಸ್ಥಾಪನೆ ನೇರವೇರಿಸಿ ಗಣಿ ನಾಡಲ್ಲಿ ಕೇಸರಿ ಪತಾಕೆ ಹಾರಿಸಲು ರಣತಂತ್ರ ರೂಪಿಸಿದ್ದಾರೆ. ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮಂಡ್ಯ, ಮೈಸೂರು, ಶಿವಮೊಗ್ಗದಲ್ಲಿ ಮೋದಿ ಪ್ರಚಾರ ಮಾಡಿದ್ದಾಯ್ತು. ಗಣಿ ನಾಡು ಬಳ್ಳಾರಿಗೂ (Bellari) ಆಗಮಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ (Narendra Modi). ಗಣಿ ನಾಡಿನ ಮೈನಿಂಗ್ ಕಾಲೇಜಿಗೆ (Mining National College) ಶಂಕುಸ್ಥಾಪನೆ (foundation stone) ಮೋದಿ ಆಗಮನ. ಯೆಸ್. ರಾಜ್ಯದ ವಿವಿಧ ಜಿಲ್ಲೆಗಳಿಗೆ ಈಗಾಗಲೇ ಪ್ರವಾಸ ಮಾಡಿರೋ ಪ್ರಧಾನಿ ನರೇಂದ್ರ ಮೋದಿ ಗಣಿ ನಾಡು ಬಳ್ಳಾರಿ ಜಿಲ್ಲೆಗೂ ಶೀಘ್ರದಲ್ಲೂ ಆಗಮಿಸಲಿದ್ದಾರೆ.

ಗಣಿ ನಾಡು ಬಳ್ಳಾರಿ ಜಿಲ್ಲೆಯ ಸಂಡೂರು (Sandur) ಅಂದ್ರೆ ಕಾಂಗ್ರೆಸ್ ನ ಭದ್ರಕೋಟೆ. ಕಾಂಗ್ರೆಸ್ ನ ಕೋಟೆ ಮೇಲೆ ಕೇಸರಿ ಪತಾಕೆ ಹಾರಿಸಲು ಬಿಜೆಪಿ ನಾಯಕರು ರಣತಂತ್ರ ಮಾಡಿದ್ದಾರೆ. ಅದಕ್ಕಾಗೇ ಈಗಾಗಲೇ ಚುನಾವಣಾ ಚಾಣಕ್ಯ ಅಮಿತ್ ಶಾ ಸಂಡೂರಿನಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಸಹ ಸಂಡೂರು ಕ್ಷೇತ್ರಕ್ಕೆ ಆಗಮಿಸ್ತಾರಂತೆ. ಹೌದು. ಗಣಿ ಬಾಧಿತ ಪ್ರದೇಶಗಳ ಅಭಿವೃದ್ದಿಗಾಗಿ ತಗೆದಿರಿಸಲಾಗಿರುವ ಕೆಎಂಆರ್ ಸಿ ಫಂಡ್ ನಲ್ಲಿ ಮೈನಿಂಗ್ ಕಾಲೇಜು ಸ್ಥಾಪನೆ ಮಾಡಲಾಗ್ತಿದೆ.

200 ಕೋಟಿ ರೂಪಾಯಿ ವೆಚ್ಚದಲ್ಲಿ ಗಣಿ ನಾಡು ಸಂಡೂರಿನಲ್ಲಿ ಆರಂಭವಾಗಲಿರುವ ದೇಶದ 2ನೇ ಮೈನಿಂಗ್ ಕಾಲೇಜು ಶಂಕುಸ್ಥಾಪನೆಗೆ ಸ್ವತ: ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಮಾರ್ಚ್​​ ತಿಂಗಳ ಅಂತ್ಯದೊಳಗೆ ಮೈನಿಂಗ್ ಕಾಲೇಜಿಗೆ ಶಂಕುಸ್ಪಾಪನೆ ನೇರವೇರುವ ಸಾಧ್ಯತೆಯಿದ್ದು ಪ್ರಧಾನಿ ನರೇಂದ್ರ ಮೋದಿ ಮೂಲಕವೇ ಕಾಲೇಜು ಆರಂಭಿಸಲು ಬಿಜೆಪಿ ನಾಯಕರು ರಣತಂತ್ರ ರೂಪಿಸಿದ್ದಾರೆ.

ಸಂಡೂರು ವಿಧಾನಸಭಾ ಕ್ಷೇತ್ರ ಹೇಳಿ ಕೇಳಿ ಕಾಂಗ್ರೆಸ್ ನ ಭದ್ರಕೋಟೆಯಾಗಿದೆ. ಇದೂವರೆಗೂ ನಡೆದ 15 ಚುನಾವಣೆಗಳಲ್ಲಿ 13 ಭಾರಿ ಕಾಂಗ್ರೆಸ್​ ಗೆಲುವು ಸಾಧಿಸಿದೆ. ಒಂದು ಬಾರಿಯೂ ಬಿಜೆಪಿ ಖಾತೆ ತಗೆಯದ ಪರಿಣಾಮ ಸಂಡೂರು ವಿಧಾನಸಭಾ ಕ್ಷೇತ್ರ ಗೆಲ್ಲಲು ಬಿಜೆಪಿ ನಾಯಕರು ಈ ಬಾರಿ ರಣತಂತ್ರ ರೂಪಿಸಿದ್ದಾರೆ. ಸಂಡೂರು ವಿಧಾನಸಭಾ ಕ್ಷೇತ್ರದಿಂದ ಸಚಿವ ಬಿ ಶ್ರೀರಾಮುಲು ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಚುನಾವಣಾ ಚಾಣಕ್ಯ ಅಮಿತ್ ಶಾ ಸಂಡೂರಿನಲ್ಲಿ ಅಬ್ಬರದ ಪ್ರಚಾರ ನಡೆಸಿಯಾಗಿದೆ. ಇದೀಗ ಮೈನಿಂಗ್ ಕಾಲೇಜು ಶಂಕುಸ್ಥಾಪನೆ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಗಣಿ ನಾಡಿಗೆ ಆಗಮಿಸಲಿದ್ದಾರೆ. ಈ ಮೂಲಕ ಮೋದಿ ಪ್ರಭಾವದಿಂದ ಸಂಡೂರು ಕ್ಷೇತ್ರ ಗೆಲ್ಲಲು ಬಿಜೆಪಿ ನಾಯಕರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೇ ಶುರುವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಅಬ್ಬರ ಪ್ರಚಾರ ಪ್ರವಾಸ ಮಾಡ್ತಿದ್ದಾರೆ. ಇದೀಗ ಗಣಿ ನಾಡಿನ ಸಂಡೂರಿಗೂ ಪ್ರಧಾನಿ ಮೋದಿ ಆಗಮಿಸುತ್ತಿರುವುದರಿಂದ ಸಂಡೂರು ವಿಧಾನಸಭಾ ಕ್ಷೇತ್ರ ಗೆಲ್ಲಬಹುದು ಅನ್ನೋದು ಬಿಜೆಪಿ ನಾಯಕರ ಲೆಕ್ಕಾಚಾರ. ಆದ್ರೆ ಕಾಂಗ್ರೆಸ್​​ನ ಭದ್ರಕೋಟೆ ಮೇಲೆ ಕೇಸರಿ ಪತಾಕೆ ಹಾರುತ್ತಾ ಅನ್ನೋದು ಕಾಯ್ದುನೋಡಬೇಕಿದೆ.

ವರದಿ: ವೀರೇಶ್ ದಾನಿ, ಟಿವಿ9, ಬಳ್ಳಾರಿ

Published On - 11:32 am, Mon, 13 March 23

ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ವಯನಾಡು: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ
ವಯನಾಡು: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ
ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ
ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ
ಕಾಶಿ ವಿಶ್ವನಾಥ ದೇವಾಲಯದ ನಿರ್ಬಂಧಿತ ಪ್ರದೇಶದಲ್ಲಿ ತೇಜ್​ಪ್ರತಾಪ್ ಯಾದವ್
ಕಾಶಿ ವಿಶ್ವನಾಥ ದೇವಾಲಯದ ನಿರ್ಬಂಧಿತ ಪ್ರದೇಶದಲ್ಲಿ ತೇಜ್​ಪ್ರತಾಪ್ ಯಾದವ್
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ:ಕುಮಟಾ-ಶಿರಸಿ ಸಂಪರ್ಕ ಕಡಿತ!
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ:ಕುಮಟಾ-ಶಿರಸಿ ಸಂಪರ್ಕ ಕಡಿತ!
ಬರೋಬ್ಬರಿ 11 ಸಿಕ್ಸ್​: IPLನಲ್ಲಿ ಅಟ್ಟರ್ ಫ್ಲಾಸ್, MLCಯಲ್ಲಿ ಸಿಡಿಲಬ್ಬರ
ಬರೋಬ್ಬರಿ 11 ಸಿಕ್ಸ್​: IPLನಲ್ಲಿ ಅಟ್ಟರ್ ಫ್ಲಾಸ್, MLCಯಲ್ಲಿ ಸಿಡಿಲಬ್ಬರ
ಧಾರಾಕಾರ ಮಳೆಗೆ ಕಾಂಪೌಂಡ್ ಗೋಡೆ ಕುಸಿತ, ಎದೆನಡುಗಿಸುತ್ತೆ ಭಯಾನಕ ದೃಶ್ಯ!
ಧಾರಾಕಾರ ಮಳೆಗೆ ಕಾಂಪೌಂಡ್ ಗೋಡೆ ಕುಸಿತ, ಎದೆನಡುಗಿಸುತ್ತೆ ಭಯಾನಕ ದೃಶ್ಯ!
ಮಡೆನೂರು ಮನು ಆ ರೀತಿ ಮಾತಾಡಿದ್ದರೆ ಖಂಡಿತಾ ತಪ್ಪು: ವಿನೋದ್ ಪ್ರಭಾಕರ್
ಮಡೆನೂರು ಮನು ಆ ರೀತಿ ಮಾತಾಡಿದ್ದರೆ ಖಂಡಿತಾ ತಪ್ಪು: ವಿನೋದ್ ಪ್ರಭಾಕರ್
ಸೈಪ್ರಸ್​ಗೆ ಹೊರಟ ಪ್ರಧಾನಿ ಮೋದಿ
ಸೈಪ್ರಸ್​ಗೆ ಹೊರಟ ಪ್ರಧಾನಿ ಮೋದಿ