AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಚ್ಛತೆ ಪಾಠ ಹೇಳಿಕೊಡುವ ಬಿಬಿಎಂಪಿಯಲ್ಲಿ ಇಲಿಗಳ ಕಾಟ

ಬೆಂಗಳೂರು: ಸ್ವಚ್ಛತೆ ಪಾಠ ಹೇಳಿಕೊಡಬೇಕಾದ ಬಿಬಿಎಂಪಿಯೇ ಸ್ವಚ್ಛತೆ ಕಾಪಾಡಿಕೊಂಡಿಲ್ಲ. ತನ್ನ ಕಚೇರಿಯಲ್ಲೇ ನೂರಾರು ಸಮಸ್ಯೆ ಎದುರಿಸುತ್ತಿದೆ. ಬಿಬಿಎಂಪಿಯಲ್ಲಿ ಮೂಷಿಕ ಸಾಮ್ರಾಜ್ಯ ಕಟ್ಟಿಕೊಂಡಿದೆ. ಮಹಾಪೌರರನ್ನು ಕಾಡುತ್ತಿವೆ ಇಲಿಗಳು, ಬಿಬಿಎಂಪಿ ಕಚೇರಿಯಲ್ಲೇ ಸಮಸ್ಯೆ! ಕ್ಲೀನ್ ಕ್ಲೀನ್ ಅಂತಾ ಸಿಲಿಕಾನ್ ಸಿಟಿ ಜನರಿಗೆಲ್ಲಾ ಸ್ವಚ್ಛತೆಯ ಪಾಠ ಹೇಳಿಕೊಡುವ ಬಿಬಿಎಂಪಿಗೆ ತನ್ನ ಕಚೇರಿಯಲ್ಲೇ ಇಲಿಗಳ ಕಾಟ ಶುರುವಾಗಿದೆ. ಕೆಲವರ್ಷಗಳ ಹಿಂದೆ ಪಾಲಿಕೆ ಇಲಿ ಹಿಡಿಯೋದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತೀವ್ರ ಟೀಕೆಗೂ ಗುರಿಯಾಗಿತ್ತು. ಇಷ್ಟುದಿನ ಬಿಬಿಎಂಪಿ ಕಚೇರಿಯಲ್ಲಿ ಆ ಕಡೆ, ಈ […]

ಸ್ವಚ್ಛತೆ ಪಾಠ ಹೇಳಿಕೊಡುವ ಬಿಬಿಎಂಪಿಯಲ್ಲಿ ಇಲಿಗಳ ಕಾಟ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Nov 17, 2019 | 9:59 PM

Share

ಬೆಂಗಳೂರು: ಸ್ವಚ್ಛತೆ ಪಾಠ ಹೇಳಿಕೊಡಬೇಕಾದ ಬಿಬಿಎಂಪಿಯೇ ಸ್ವಚ್ಛತೆ ಕಾಪಾಡಿಕೊಂಡಿಲ್ಲ. ತನ್ನ ಕಚೇರಿಯಲ್ಲೇ ನೂರಾರು ಸಮಸ್ಯೆ ಎದುರಿಸುತ್ತಿದೆ. ಬಿಬಿಎಂಪಿಯಲ್ಲಿ ಮೂಷಿಕ ಸಾಮ್ರಾಜ್ಯ ಕಟ್ಟಿಕೊಂಡಿದೆ.

ಮಹಾಪೌರರನ್ನು ಕಾಡುತ್ತಿವೆ ಇಲಿಗಳು, ಬಿಬಿಎಂಪಿ ಕಚೇರಿಯಲ್ಲೇ ಸಮಸ್ಯೆ! ಕ್ಲೀನ್ ಕ್ಲೀನ್ ಅಂತಾ ಸಿಲಿಕಾನ್ ಸಿಟಿ ಜನರಿಗೆಲ್ಲಾ ಸ್ವಚ್ಛತೆಯ ಪಾಠ ಹೇಳಿಕೊಡುವ ಬಿಬಿಎಂಪಿಗೆ ತನ್ನ ಕಚೇರಿಯಲ್ಲೇ ಇಲಿಗಳ ಕಾಟ ಶುರುವಾಗಿದೆ. ಕೆಲವರ್ಷಗಳ ಹಿಂದೆ ಪಾಲಿಕೆ ಇಲಿ ಹಿಡಿಯೋದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತೀವ್ರ ಟೀಕೆಗೂ ಗುರಿಯಾಗಿತ್ತು.

ಇಷ್ಟುದಿನ ಬಿಬಿಎಂಪಿ ಕಚೇರಿಯಲ್ಲಿ ಆ ಕಡೆ, ಈ ಕಡೆ ಸುತ್ತಾಡುತ್ತಿದ್ದ ಇಲಿಗಳ ಸಾಮ್ರಾಜ್ಯ, ನೇರವಾಗಿ ಮೇಯರ್ ಕುರ್ಚಿ ಕೆಳಗೆ ದಾಳಿಯಿಟ್ಟಿದೆ. ಮೇಯರ್ ಕ್ಯಾಬಿನ್​ನಲ್ಲಿ ಎಲ್ಲೆಂದರಲ್ಲಿ ಇಲಿಗಳು ದಾಳಿ ಮಾಡಿ ವಸ್ತುಗಳನ್ನ ಹಾಳು ಮಾಡುತ್ತಿವೆ.

ಬಿಬಿಎಂಪಿಯಲ್ಲಿ ಇಲಿಗಳು ಕಾಟಕೊಡ್ತಿವೆ ಅನ್ನೋ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದೆ. ಅದರಲ್ಲೂ ಮೇಯರ್ ಕಚೇರಿಯಲ್ಲಿ ಇಂತಹ ಸಮಸ್ಯೆ ಇದೆ ಅನ್ನೋದು ಮತ್ತಷ್ಟು ಜೋಕ್ ಕ್ರಿಯೇಟ್ ಮಾಡಿದ್ದು, ಸ್ವಚ್ಛೆತೆಯ ಪಾಠ ಹೇಳುವವರ ಬಗ್ಗೆ ಜನ ಕುಹಕವಾಡುತ್ತಿದ್ದಾರೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು