AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರ ಗಮನಕ್ಕೆ: ಕ್ಯಾಸಲ್ ​ರಾಕ್ ಬಳಿ ಗುಡ್ಡ ಕುಸಿತ, ಕರ್ನಾಟಕ ಗೋವಾ ಮಧ್ಯೆ ಸಂಚರಿಸುವ ರೈಲುಗಳು ರದ್ದು

ಕರ್ನಾಟಕ-ಗೋವಾ ಗಡಿಯ ಕ್ಯಾಸಲ್ ​ರಾಕ್ ರೈಲು ನಿಲ್ದಾಣದ ವ್ಯಾಪ್ತಿಯ ಹಳಿಯ ಮೇಲೆ ಮಂಗಳವಾರ (ಜು.25) ಗುಡ್ಡ ಕುಸಿತವಾಗಿದೆ. ಈ ಹಿನ್ನೆಲೆ ಕರ್ನಾಟಕ-ಗೋವಾ ಮಧ್ಯೆ ರೈಲು ಸಂಚಾರ ಬಂದ್​ ಆಗಿದೆ.

ಪ್ರಯಾಣಿಕರ ಗಮನಕ್ಕೆ: ಕ್ಯಾಸಲ್ ​ರಾಕ್ ಬಳಿ ಗುಡ್ಡ ಕುಸಿತ, ಕರ್ನಾಟಕ ಗೋವಾ ಮಧ್ಯೆ ಸಂಚರಿಸುವ ರೈಲುಗಳು ರದ್ದು
ಕ್ಯಾಸಲ್​ ರಾಕ್​
Sahadev Mane
| Edited By: |

Updated on:Jul 26, 2023 | 2:35 PM

Share

ಬೆಳಗಾವಿ: ಕರ್ನಾಟಕ-ಗೋವಾ (Karnataka-Goa) ಗಡಿಯ ಕ್ಯಾಸಲ್ ​ರಾಕ್ (Castl Erock) ರೈಲು ನಿಲ್ದಾಣದ ವ್ಯಾಪ್ತಿಯ ಹಳಿಯ ಮೇಲೆ ಮಂಗಳವಾರ (ಜು.25) ಗುಡ್ಡ ಕುಸಿತವಾಗಿದೆ. ಈ ಹಿನ್ನೆಲೆ ಕರ್ನಾಟಕ-ಗೋವಾ ಮಧ್ಯೆ ರೈಲು ಸಂಚಾರ ಬಂದ್ (Train Cancel)​ ಆಗಿದೆ. ನೈರುತ್ಯ ರೈಲ್ವೆ ಇಲಾಖೆ ಜು.25 ರಿಂದ ಎರಡು ರೈಲುಗಳ ಸಂಚಾರ ರದ್ದು ಮಾಡಿದೆ. ಯಶವಂತಪುರದಿಂದ ವಾಸ್ಕೋ ಡ ಗಾಮಕ್ಕೆ ಹೊರಡುವ (ರೈಲು ಸಂಖ್ಯೆ 17309) ಡೈಲಿ ಎಕ್ಸ್​​ಪ್ರೆಸ್​​ ರೈಲು ಸಂಚಾರ, ವಾಸ್ಕೋ ಡ ಗಾಮದಿಂದ ಯಶವಂತಪುರಕ್ಕೆ ಹೊರಡುವ (ರೈಲು ಸಂಖ್ಯೆ 17310) ಸಂಚಾರ ರದ್ದಾಗಿದೆ.

ನೈರುತ್ಯ ರೈಲ್ವೆ ಇಲಾಖೆಯಿಂದ ನಾಲ್ಕು ಮಾರ್ಗಗಳಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಇನ್ನು ಮಂಗಳವಾರ ಯಶವಂತಪುರದಿಂದ ವಾಸ್ಕೋ ಡ ಗಾಮಕ್ಕೆ ಹೊರಟಿದ್ದ ರೈಲನ್ನು ಹುಬ್ಬಳ್ಳಿಯಲ್ಲಿಯೇ ಕೊನೆಗೊಳಿಸಲಾಗಿದೆ. ಹಾಗೇ ವಾಸ್ಕೋ ಡ ಗಾಮಕ್ಕೆ ತೆರಳಬೇಕಿದ್ದ ದೆಹಲಿ ವಾಸ್ಕೋ ಗೋವಾ ಎಕ್ಸ್​​ಪ್ರೆಸ್​​ ಬೆಳಗಾವಿಯಲ್ಲಿಯೇ ಸಂಚಾರವನ್ನು ಕೊನೆಗೊಳಿಸಿದೆ.

ಇದನ್ನೂ ಓದಿ: ಮಂಗಳೂರು ರೈಲುಗಳಿಗೆ ಕರಾವಳಿಯ ಜನಪ್ರಿಯ ವ್ಯಕ್ತಿಗಳ, ಸ್ಥಳಗಳ ಹೆಸರು ಮರುನಾಮಕರಣ?

ರೈಲು ಸಂಖ್ಯೆ 12779 ವಾಸ್ಕೋ-ಡ-ಗಾಮಾ – ಹಜರತ್ ನಿಜಾಮುದ್ದಿನ್‌ ಗೋವಾ ಎಕ್ಸ್‌ಪ್ರೆಸ್  ಮಾರ್ಗ ಬದಲಾವಣೆಯಾಗಿದೆ. ಈ ರೈಲು ಸಂವರ್ಡಮ್, ಮಡ್ಗಾಂವ್, ಮಜೋರ್ಡಾ, ಮಧುರೆ, ರೋಹಾ, ಪನ್ವೇಲ್, ಕಲ್ಯಾಣ್ ಮತ್ತು ಮನ್ಮಡ್ ಮೂಲಕ ಸಾಗಿದೆ. ಕುಲೆಂ, ಲ್ಹಾಟ್‌ರಾಕ್, ಕ್ಯಾಸ್ಟ್ಲೆರಾಕ್, ಕ್ಯಾಸಲ್‌ರಾಕ್‌ , ಬೆಳಗಾವಿ, ಸತಾರಾ, ಪುಣೆ, ದೌಂಡ್ ಅಹ್ಮದ್‌ನಗರ, ಬೇಲಾಪುರ್ ಮತ್ತು ಕೋಪರ್‌ಗಾಂವ್ ನಿಲ್ದಾಣ ಸಂಚಾರ ರದ್ದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:32 pm, Wed, 26 July 23

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?