Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಂಕರಲಿಂಗ ಜಾತ್ರೆ ಪ್ರಯುಕ್ತ ಬುಲೆಟ್ ಸೌಂದರ್ಯ ಸ್ಪರ್ಧೆ: ಅದ್ಭುತ ಲುಕ್​ಗೆ ಮುಗಿಬಿದ್ದ ಜನತೆ

ಬೆಳಗಾವಿ: ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಬ್ಯೂಟಿಫುಲ್ ಬುಲೆಟ್ ಬೈಕ್​ಗಳು ಹವಾ ಎಬ್ಬಿಸಿದ್ವು. ಇಂದಿನಿಂದ ಸಂಕೇಶ್ವರ ಪಟ್ಟಣದಲ್ಲಿ 3 ದಿನಗಳ ಕಾಲ ಶಂಕರಲಿಂಗ ಜಾತ್ರೆ ಶುರುವಾಗುತ್ತೆ. ಇದ್ರ ಅಂಗವಾಗಿ ನಿನ್ನೆ ಬುಲೆಟ್ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಕರ್ನಾಟಕದಲ್ಲೇ ಮೊದಲ ಬಾರಿಗೆ ಬುಲೆಟ್ ಬೈಕ್​ಗಳ ಬ್ಯೂಟಿ ಕಾಂಪಿಟೇಷನ್ ನಡೀತು. 180ಕ್ಕೂ ಅಧಿಕ ಬುಲೆಟ್ ಬೈಕ್​ಗಳು ಭಾಗವಹಿಸಿದ್ವು. ಕೆಲವೊಂದರ ಮುಂಭಾಗದಲ್ಲಿ ಡಿಫ್ರೆಂಟ್ ಸ್ಟೀಕರ್ ಹಚ್ಚಿದ್ರೆ, ಇನ್ನೂ ಕೆಲವು ಬುಲೆಟ್​ಗಳ ಮೇಲೆ ತಲ್ವಾರ್ ಫಿಕ್ಸ್ ಮಾಡಲಾಗಿತ್ತು. ಹೀಗೆ […]

ಶಂಕರಲಿಂಗ ಜಾತ್ರೆ ಪ್ರಯುಕ್ತ ಬುಲೆಟ್ ಸೌಂದರ್ಯ ಸ್ಪರ್ಧೆ: ಅದ್ಭುತ ಲುಕ್​ಗೆ ಮುಗಿಬಿದ್ದ ಜನತೆ
Follow us
ಸಾಧು ಶ್ರೀನಾಥ್​
|

Updated on: Feb 04, 2020 | 12:32 PM

ಬೆಳಗಾವಿ: ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಬ್ಯೂಟಿಫುಲ್ ಬುಲೆಟ್ ಬೈಕ್​ಗಳು ಹವಾ ಎಬ್ಬಿಸಿದ್ವು. ಇಂದಿನಿಂದ ಸಂಕೇಶ್ವರ ಪಟ್ಟಣದಲ್ಲಿ 3 ದಿನಗಳ ಕಾಲ ಶಂಕರಲಿಂಗ ಜಾತ್ರೆ ಶುರುವಾಗುತ್ತೆ. ಇದ್ರ ಅಂಗವಾಗಿ ನಿನ್ನೆ ಬುಲೆಟ್ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಕರ್ನಾಟಕದಲ್ಲೇ ಮೊದಲ ಬಾರಿಗೆ ಬುಲೆಟ್ ಬೈಕ್​ಗಳ ಬ್ಯೂಟಿ ಕಾಂಪಿಟೇಷನ್ ನಡೀತು. 180ಕ್ಕೂ ಅಧಿಕ ಬುಲೆಟ್ ಬೈಕ್​ಗಳು ಭಾಗವಹಿಸಿದ್ವು.

ಕೆಲವೊಂದರ ಮುಂಭಾಗದಲ್ಲಿ ಡಿಫ್ರೆಂಟ್ ಸ್ಟೀಕರ್ ಹಚ್ಚಿದ್ರೆ, ಇನ್ನೂ ಕೆಲವು ಬುಲೆಟ್​ಗಳ ಮೇಲೆ ತಲ್ವಾರ್ ಫಿಕ್ಸ್ ಮಾಡಲಾಗಿತ್ತು. ಹೀಗೆ ಬಗೆ ಬಗೆ ಬಣ್ಣ.. ಹಾರನ್.. ಸ್ವಚ್ಛವಾಗಿ ಬೈಕ್ ಇಟ್ಕೊಳ್ಳೋದ್ರಿಂದ ಹಿಡಿದು ಎಲ್ಲ ಅಂಶಗಳ ಆಧಾರದ ಮೇಲೆ ಬಹುಮಾನ ವಿತರಿಸಲಾಯ್ತು. ಸ್ಪರ್ಧೆಗೆ ಮಹಾರಾಷ್ಟ್ರ, ಗೋವಾ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದಲೂ ಬೈಕ್​ಗಳು ಬಂದಿದ್ವು. ಮಿರ ಮಿರ ಮಿಂಚುತ್ತಿದ್ದ ಬೈಕ್​ಗಳು ಎಲ್ಲರನ್ನು ಸೆಳೆದ್ವು.

ಬುಲೆಟ್ ರಾಣಿಯರ ಸೌಂದರ್ಯಕ್ಕೆ ಜನ ಮನಸೋತಿದ್ರು. ಅವುಗಳ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡಿದ್ರು. ಒಟ್ನಲ್ಲಿ, ಕುಂದಾನಗರಿಯಲ್ಲಿ ಬುಲೆಟ್ ರಾಣಿಯರ ಬ್ಯೂಟಿಫುಲ್ ಕಾಂಪಿಟೇಷನ್ ಮಸ್ತ್ ಆಗಿತ್ತು. ಅದ್ಭುತ ಲುಕ್ ನೋಡಿ ಕಿಕ್ಕಿರಿದು ಸೇರಿದ್ದ ಜನ ಮಜಾ ಮಾಡಿದ್ರು.

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ