ಉಡುಪಿ ಜಿಲ್ಲೆ ಮಲ್ಪೆ ಸಮೀಪದ ಕಲ್ಮಾಡಿಯ ಭೂಗತ ಪಾತಕಿ ಬನ್ನಂಜೆ ರಾಜನನ್ನು 2015ರಲ್ಲಿ ಕೋಕಾ ಕಾಯ್ದೆಯಡಿ ಮೊರಾಕ್ಕೊದಲ್ಲಿ ಬಂಧಿಸಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳುಹಿಸಲಾಗಿತ್ತು. ಇವನ ವಿರುದ್ಧ ಕೊಲೆ, ಶೂಟೌಟ್, ದರೋಡೆ ಸೇರಿದಂತೆ 15 ಕ್ರಿಮಿನಲ್ ಪ್ರಕರಣಗಳಿವೆ. ಆಗಸ್ಟ್ 27, 2018ರಂದು ತಾಯಿ ವಿಲಾಸಿನಿ ಶೆಟ್ಟಿಗಾರ್ ಮೃತಪಟ್ಟಾಗ ಪರೋಲ್ ಮೇಲೆ ಬಂದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ. ಬನ್ನಂಜೆ ರಾಜನ ಸಂಬಂಧಿಗಳು ಈಗಲೂ ಉಡುಪಿಯಲ್ಲಿದ್ದಾರೆ. ಬನ್ನಂಜೆ ರಾಜ ಜೈಲಿನಲ್ಲಿದ್ದರೂ ಸಹಚರರ ಮೂಲಕ ಆಗಾಗ ಉದ್ಯಮಿಗಳಿಗೆ ಬೆದರಿಕೆ ಹಾಕಿಸುತ್ತಿದ್ದ ಎಂಬ ಆರೋಪಗಳು ಕೇಳಿಬಂದಿದ್ದವು. ಬ್ರಹ್ಮಾವರದ ಉದ್ಯಮಿ ರತ್ನಾಕರ ಶೆಟ್ಟಿ ಎಂಬುವರಿಗೆ ಹಫ್ತಾ ನೀಡುವಂತೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಮಾರ್ಚ್ 22, 2019ರಂದು ಬನ್ನಂಜೆ ರಾಜನ ಸಹಚರರನ್ನು ಬಂಧಿಸಲಾಗಿತ್ತು.
ಮಂಗಳೂರು ಮುಲ್ಕಿ ಕೊಲ್ನಾಡು ಕೆಎಸ್ ರಾವ್ ನಗರ ನಿವಾಸಿ ಶಶಿ ಪೂಜಾರಿ ಯಾನೆ ಶಾಡೋ (28), ರವಿಚಂದ್ರ ಪೂಜಾರಿ ಯಾನೆ ವಿಕ್ಕಿ ಪೂಜಾರಿ (30), ಮಂಗಳೂರು ಪೆರ್ಮಂಕಿ ಉಲಾಯಿಬೆಟ್ಟು ಪಟ್ರಕೋಡಿ ಹೌಸ್ ನಿವಾಸಿ ಧನರಾಜ್ ಪೂಜಾರಿ ಯಾನೆ ಧನರಾಜ್ ಯಾನೆ ರಾಕ್ (26), ಕೊಡವೂರು ಗ್ರಾಮದ ಮಲ್ಪೆ ಕೊಳದ ಯಶಸ್ವಿನಿ ಐಸ್ ಪ್ಲಾಂಟ್ ನಿವಾಸಿ ಧನರಾಜ್ ಸಾಲ್ಯಾನ್ ಯಾನೆ ಧನು ಕೊಳ (30) ಹಾಗೂ ಮಲ್ಪೆ ಸರಕಾರಿ ಪಿ.ಯು. ಕಾಲೇಜು ಬಳಿ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಮಿತಿ ಹತ್ತಿರ ನಿವಾಸಿ ಉಲ್ಲಾಸ್ ಶೆಣೈ ಯಾನೆ ಉಲ್ಲಾಸ್ (27) ಬೆದರಿಕೆ ಪ್ರಕರಣದಲ್ಲಿ ಬಂಧಿತರು.ಇದನ್ನೂ ಓದಿ: K Annamalai: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ನೇಮಕ
ಇದನ್ನೂ ಓದಿ: ಸೋಲುಗಳು ಜೀವನದ ಒಂದು ಭಾಗ, ಇಂಥ ಸೋಲುಗಳನ್ನು ಜೀವನದಲ್ಲಿ ಬಹಳ ನೋಡಿದ್ದೇನೆ: ಕೆ.ಅಣ್ಣಾಮಲೈ ಟ್ವೀಟ್