AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DCC ಬ್ಯಾಂಕ್​ ಪಟ್ಟಕ್ಕೇರೋಕೆ ಪೈಪೋಟಿ, BSYಗೆ ತಲೆನೋವಾದ ಸ್ವಪಕ್ಷೀಯರ ಪ್ರತಿಷ್ಠೆ

ಬೆಳಗಾವಿ: ಕುಂದಾನಗರಿಯಲ್ಲಿ ಚುನಾವಣೆ ನಡೆದ್ರೆ ಕೊತ ಕೊತ ಅನ್ನೋದು ಫಿಕ್ಸ್.. ಅದ್ರಲ್ಲೂ ಪಿಎಲ್​ಡಿ ಬ್ಯಾಂಕ್ ಎಲೆಕ್ಷನ್ ಅಂದಿನ ಸಮ್ಮಿಶ್ರ ಸರ್ಕಾರವನ್ನೇ ಅಲುಗಾಡಿಸಿ ಬಿಟ್ಟಿತ್ತು. ಆದ್ರೀಗ ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಾದಿ ಚುನಾವಣೆಗೆ ಬಿಜೆಪಿಯಲ್ಲೇ ಭಾರಿ ಪೈಪೋಟಿ ಶುರುವಾಗಿದೆ. ಇದು ಸಿಎಂ ಬಿಎಸ್​​ವೈ ಸರ್ಕಾರಕ್ಕೆ ಢವ ಢವ ಶುರುವಾಗಿದೆ. ಕುಂದಾನಗರಿಯಲ್ಲಿ ಡಿಸಿಸಿ ಬ್ಯಾಂಕ್​ ಪಟ್ಟಕ್ಕೇರೋಕೆ ‘ಕತ್ತಿ’ವರಸೆ! ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್​ ಚುನಾವಣೆ ಬರೋ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನಡೆಯಲಿದೆ. ಮಾರ್ಚ್ ತಿಂಗಳಿನಿಂದಲೇ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ. […]

DCC ಬ್ಯಾಂಕ್​ ಪಟ್ಟಕ್ಕೇರೋಕೆ ಪೈಪೋಟಿ, BSYಗೆ ತಲೆನೋವಾದ ಸ್ವಪಕ್ಷೀಯರ ಪ್ರತಿಷ್ಠೆ
ಸಾಧು ಶ್ರೀನಾಥ್​
|

Updated on:Feb 23, 2020 | 2:50 PM

Share

ಬೆಳಗಾವಿ: ಕುಂದಾನಗರಿಯಲ್ಲಿ ಚುನಾವಣೆ ನಡೆದ್ರೆ ಕೊತ ಕೊತ ಅನ್ನೋದು ಫಿಕ್ಸ್.. ಅದ್ರಲ್ಲೂ ಪಿಎಲ್​ಡಿ ಬ್ಯಾಂಕ್ ಎಲೆಕ್ಷನ್ ಅಂದಿನ ಸಮ್ಮಿಶ್ರ ಸರ್ಕಾರವನ್ನೇ ಅಲುಗಾಡಿಸಿ ಬಿಟ್ಟಿತ್ತು. ಆದ್ರೀಗ ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಾದಿ ಚುನಾವಣೆಗೆ ಬಿಜೆಪಿಯಲ್ಲೇ ಭಾರಿ ಪೈಪೋಟಿ ಶುರುವಾಗಿದೆ. ಇದು ಸಿಎಂ ಬಿಎಸ್​​ವೈ ಸರ್ಕಾರಕ್ಕೆ ಢವ ಢವ ಶುರುವಾಗಿದೆ.

ಕುಂದಾನಗರಿಯಲ್ಲಿ ಡಿಸಿಸಿ ಬ್ಯಾಂಕ್​ ಪಟ್ಟಕ್ಕೇರೋಕೆ ‘ಕತ್ತಿ’ವರಸೆ! ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್​ ಚುನಾವಣೆ ಬರೋ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನಡೆಯಲಿದೆ. ಮಾರ್ಚ್ ತಿಂಗಳಿನಿಂದಲೇ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಅಧ್ಯಕ್ಷ ಗಾದಿಗೇರೋಕೆ ಪ್ರಭಾವಿ ನಾಯಕರು ಒಂದೇ ಪಕ್ಷದಲ್ಲಿದ್ಕೊಂಡೆ ಗೇಮ್ ಪ್ಲ್ಯಾನ್ ಮಾಡ್ತಿದ್ದಾರೆ.

ಒಂದ್ಕಡೆ ಡಿಸಿಸಿ ಬ್ಯಾಂಕ್ ಪಟ್ಟ ಗಿಟ್ಟಿಸಿಕೊಳ್ಳೋಕೆ ಮಾಜಿ ಸಂಸದ ರಮೇಶ್ ಕತ್ತಿ ರಣತಂತ್ರ ಹೆಣೆದಿದ್ದಾರೆ. ಅದ್ರಲ್ಲೂ, ಸಹೋದರ ಉಮೇಶ್​ ಕತ್ತಿ ಸಹಾಯದಿಂದ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರೆ. ಇನ್ನೂ ಕತ್ತಿ ಬ್ರದರ್ಸ್ ಬೆನ್ನಿಗೆ ಜಾರಕಿಹೊಳಿ ಬ್ರದರ್ಸ್ ಕೂಡ ನಿಂತಿದ್ದಾರೆ.

ಇನ್ನು, ಡಿಸಿಎಂ ಲಕ್ಷ್ಮಣ ಸವದಿ ಈ ಬಾರಿಯಾದ್ರೂ ಡಿಸಿಸಿ ಬ್ಯಾಂಕ್ ತಮ್ಮ ಹಿಡಿತಕ್ಕೆ ಪಡೆಯೋಕೆ ತಂತ್ರ ಹೆಣೆದಿದ್ದಾರೆ. ಸವದಿ ಕೂಡ ಕೆಲ ನಿರ್ದೇಶಕರನ್ನ ತಮ್ಮ ಬಳಿ ಸೆಳೆದಿದ್ದಾರಂತೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕೂಡ ಸವದಿಗೆ ಬೆನ್ನಿಗೆ ನಿಂತಿದ್ದಾರಂತೆ.

ಡಿಸಿಸಿ ಬ್ಯಾಂಕ್​​ಗೆ ಕುಮಟಳ್ಳಿಯನ್ನ ನಾಮನಿರ್ದೇಶನ ಮಾಡಿ ಅಧ್ಯಕ್ಷರನ್ನಾಗಿ ಮಾಡುವಂತೆ ಒತ್ತಡ ಹೇರ್ತಿದ್ದಾರೆನ್ನಲಾಗಿದೆ. ಇನ್ನು, ಈ ಕುರಿತು ಪ್ರತಿಕ್ರಿಯಿಸಿರೋ ಮಹೇಶ್ ಕುಮಟಳ್ಳಿ ನಾನು ನಿರ್ದೇಶಕ ಸ್ಥಾನಕ್ಕೆ ನಾಮನಿರ್ದೇಶನ ಮಾಡುವಂತೆ ಕೇಳಿಲ್ಲ. ಚುನಾವಣೆಯಲ್ಲಿ ಡಿಸಿಎಂ ಸವದಿಗೆ ಬೆಂಬಲವಿದೆ ಅನ್ನೋ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಒಟ್ನಲ್ಲಿ ಪಿಎಲ್​ಡಿ ಬ್ಯಾಂಕ್ ಎಲೆಕ್ಷನ್​ ಬೈಎಲೆಕ್ಷನ್​​ನಲ್ಲಿ ಕೊತ ಕೊತ ಕುದ್ದು ಹೋಗಿದ್ದ ಕುಂದಾನಗರಿ ಅಖಾಡ ಈಗ ರಂಗೇರಿದೆ. ಇದೀಗ ಡಿಸಿಸಿ ಬ್ಯಾಂಕ್​ ಎಲೆಕ್ಷನ್​​​ನಲ್ಲಿ ಸಾಹುಕಾರ್ ಟೀಂ ಹಾಗೂ ಸವದಿ ಟೀಂ ನಡುವೆ ಗೇಮ್ ಪ್ಲ್ಯಾನ್ ಶುರುವಾಗಿದೆ. ಇನ್ನೊಂದ್ಕಡೆ ಸ್ವಪಕ್ಷೀಯದವರಲ್ಲೇ ಶುರುವಾಗಿರೋ ಯುದ್ಧವನ್ನ​ ಸಿಎಂ ಬಿಎಸ್​ವೈ ಹೇಗೆ ನಿಭಾಯಿಸ್ತಾರೆ ನೋಡ್ಬೇಕು.

Published On - 2:30 pm, Sun, 23 February 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ