ಆಪರೇಷನ್ ಅಜಯ್ ಮೂಲಕ ತಾಯ್ನಾಡಿಗೆ ಆಗಮಿಸಿದ 9 ಕನ್ನಡಿಗರು; ಇಸ್ರೇಲ್​ ಪರಿಸ್ಥಿತಿ ಬಗ್ಗೆ ಹೇಳಿದ್ದಿಷ್ಟು

ನಮ್ಮ ಸುಮಾರು‌ ಜನ ಸ್ನೇಹಿತರು ಅಲ್ಲಿನ ಘಟನೆಗಳ ಬಗ್ಗೆ ಹೇಳುತ್ತಿದ್ದರೆ, ತುಂಬಾ ಬೇಸರವಾಗುತ್ತಿತ್ತು. ಆಫೀಸ್​ನಲ್ಲಿ ಬಹಳ ಭಯದಿಂದ ಎಲ್ಲರೂ ಕೆಲಸ ಮಾಡುತ್ತಿದ್ದರು. ತುಂಬಾ ಜನ ನಮ್ಮ ಸ್ನೇಹಿತರು ಗಾಜಾದಲ್ಲಿ ತೊಂದರೆ ಸಿಲುಕಿರುವುದು ಹೇಳುತ್ತಿದ್ದರು. ಇದೆಲ್ಲ ಕೇಳಿದಾಗ ತುಂಬಾ ಬೇಜಾರಾಗುತ್ತಿತ್ತು ಎಂದು ಇಸ್ರೇಲ್​ಯಿಂದ ಕನ್ನಡತಿಯೊಬ್ಬರು ಹೇಳಿದ್ದಾರೆ.

ಆಪರೇಷನ್ ಅಜಯ್ ಮೂಲಕ ತಾಯ್ನಾಡಿಗೆ ಆಗಮಿಸಿದ 9 ಕನ್ನಡಿಗರು; ಇಸ್ರೇಲ್​ ಪರಿಸ್ಥಿತಿ ಬಗ್ಗೆ ಹೇಳಿದ್ದಿಷ್ಟು
ಇಸ್ರೇಲ್​ನಿಂದ ಭಾರತಕ್ಕೆ ಬಂದ ಕನ್ನಡಿಗರು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 14, 2023 | 3:19 PM

ಬೆಂಗಳೂರು ಗ್ರಾಮಾಂತರ, ಅ.14: ಇಸ್ರೇಲ್(Israel) ಮತ್ತು ಹಮಾಸ್(Hamas)ನಡುವೆ ಸಂಘರ್ಷ‌ ಹಿನ್ನೆಲೆ ಇದೀಗ ಇಸ್ರೇಲ್​ನಲ್ಲಿದ್ದ ಭಾರತೀಯರು(Indians), ಆಪರೇಷನ್ ಅಜಯ್ ಮೂಲಕ ತಾಯ್ನಾಡಿಗೆ ವಾಪಾಸ್ ಆಗಿದ್ದಾರೆ. 2 ನೇ ಬ್ಯಾಚ್​ನ 12:40 ರ‌ ಏರ್ ಇಂಡಿಯಾ ವಿಮಾನದಲ್ಲಿ 6 ಜನ ಪುರುಷರು ಹಾಗೂ 3 ಮಹಿಳೆಯರ ಸೇರಿದಂತೆ ಒಟ್ಟು 9 ಜನ ಕನ್ನಡಿಗರು ಆಗಮಿಸಿದ್ದಾರೆ. ಹೌದು, ದಕ್ಷಿಣ ಮೂರ್ತಿ, ಶಾಂತಮೂರ್ತಿ, ಉತ್ತಾಶ್ ದೇವನೂರು, ಸತೀಶ್ ಚಕ್ರಪಾಣಿ, ಶಿಲ್ಪ ಶ್ರೀ, ಸುಮತಿ, ಸೂರಜ್ ಕೃಷ್ಣ, ಪುಣ್ಯಕೋಟಿ ಮತ್ತು ಅಕ್ಷರ ಅವರು ಇಸ್ರೇಲ್​ನಿಂದ ದೆಹಲಿಗೆ ಬಂದು, ಅಲ್ಲಿಂದ ಬೆಂಗಳೂರಿನ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಂದಿದ್ದಾರೆ. ಇವರನ್ನು ಅಧಿಕಾರಿಗಳು ಬರಮಾಡಿಕೊಂಡಿದ್ದು, ತವರಿಗೆ ಕಳಿಸಲಿದ್ದಾರೆ.

ಇಸ್ರೇಲ್​ನ ಉತ್ತರ ಭಾಗದಲ್ಲಿ ಯಾವುದೇ ತೊಂದರೆ ಇರಲಿಲ್ಲ

ಕೆಂಪೇಗೌಡ ಏರ್ಪೊರ್ಟ್​ಗೆ ಇಸ್ರೇಲ್​ನಿಂದ ಆಗಮಿಸಿದವರಲ್ಲಿ ಒಬ್ಬರಾದ ಪುಣ್ಯಕೋಟಿ ಎಂಬುವವರು ಮಾತನಾಡಿ, ‘ಇಸ್ರೇಲ್​ನ ಉತ್ತರ ಭಾಗದಲ್ಲಿ ಯಾವುದೇ ತೊಂದರೆ ಇರಲಿಲ್ಲ. ಆದರೆ, ನಮ್ಮ ಸುಮಾರು‌ ಜನ ಸ್ನೇಹಿತರು ಅಲ್ಲಿನ ಘಟನೆಗಳ ಬಗ್ಗೆ ಹೇಳುತ್ತಿದ್ದರೆ, ತುಂಬಾ ಬೇಸರವಾಗುತ್ತಿತ್ತು. ಆಫೀಸ್​ನಲ್ಲಿ ಬಹಳ ಭಯದಿಂದ ಎಲ್ಲರೂ ಕೆಲಸ ಮಾಡುತ್ತಿದ್ದರು. ತುಂಬಾ ಜನ ನಮ್ಮ ಸ್ನೇಹಿತರು ಗಾಜಾದಲ್ಲಿ ತೊಂದರೆ ಸಿಲುಕಿರುವುದು ಹೇಳುತ್ತಿದ್ದರು. ಇದೆಲ್ಲ ಕೇಳಿದಾಗ ತುಂಬಾ ಬೇಜಾರಾಗುತ್ತಿತ್ತು. ಎಲ್ಲವೂ ಸರಿ ಹೋದ ನಂತರ ನಾವು ಮತ್ತೆ ವಾಪಸ್ ತೆರಳುವ ವಿಶ್ವಾಸವಿದೆ ಎಂದರು.

ಇದನ್ನೂ ಓದಿ:Israel Hamas Conflict Explained: ಇಸ್ರೇಲ್-ಹಮಾಸ್ ಯುದ್ಧದಲ್ಲಿ ರಣರಂಗವಾಗಿರುವ ಗಾಜಾ ಪಟ್ಟಿ ಯಾವುದು? ಏನಿದರ ಇತಿಹಾಸ?

ನಿನ್ನೆ ಬೆಂಗಳೂರಿಗೆ ಬಂದಿದ್ದ ಓರ್ವ ಕನ್ನಡಿಗ

ಹೌದು, ಇಸ್ರೇಲ್​ನಲ್ಲಿ ಯುದ್ದ ಪರಿಸ್ಥಿತಿ ಇರುವುದರಿಂದ ಅಲ್ಲಿರುವ ಭಾರತೀಯರನ್ನು ಆಪರೇಷನ್ ಅಜಯ್ ಮೂಲಕ ತವರು ದೇಶಕ್ಕೆ ಕರೆದುಕೊಂಡು ಬರುವ ಕೆಲಸ ನಡೆಯುತ್ತಿದೆ. ಅದರಂತೆ ನಿನ್ನೆ(ಅ.13) ರಾತ್ರಿ ಇಸ್ರೇಲ್​​​ನಿಂದ 212 ಭಾರತೀಯರನ್ನು ಹೊತ್ತ ಮೊದಲ ವಿಮಾನ ಭಾರತಕ್ಕೆ ಆಗಮಿಸಿತ್ತು. ಅದರಲ್ಲಿ ವಿಜಯಪುರ ಮೂಲದ ಈರಣ್ಣ ಎಂಬುವವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಏರ್​ಪೋರ್ಟ್​​ಗೆ ಆಗಮಿಸಿ, ಇಸ್ರೇಲ್​ನಲ್ಲಿ ಯಾವುದೇ ಆತಂಕದ ಪರಿಸ್ಥಿತಿ ಇಲ್ಲ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ