AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ಬೆಂಗಳೂರು ಸೋಲ್’ ಅನಾವರಣ: ಕಲಾಪ್ರೇಮಿಗಳ ಮನಗೆದ್ದ ಜೌಮ್ ಪ್ಲೆನ್ಸಾ ಶಿಲ್ಪಕಲೆ

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ವಿಶ್ವಪ್ರಸಿದ್ಧ ಕಲಾವಿದ ಜೌಮ್ ಪ್ಲೆನ್ಸಾ ಅವರ 16 ಅಡಿ ಎತ್ತರದ 'ಬೆಂಗಳೂರು ಸೋಲ್' ಕಲಾಕೃತಿ ಅನಾವರಣಗೊಂಡಿದೆ. ವಿವಿಧ ಭಾಷೆಗಳ ಅಕ್ಷರಗಳ ಸಂಗಮವಾಗಿರುವ ಈ ಶಿಲ್ಪಕಲೆಯು ಈಗ ಪ್ರಯಾಣಿಕರ ಪ್ರಮುಖ ಆಕರ್ಷಣೆಯಾಗಿದೆ.ಬಯೋಕಾನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜುಂದಾರ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆಯಿಂದ ಸೋಲ್ ಶಿಲ್ಪ ಉದ್ಘಾಟನೆಗೊಂಡಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 'ಬೆಂಗಳೂರು ಸೋಲ್' ಅನಾವರಣ: ಕಲಾಪ್ರೇಮಿಗಳ ಮನಗೆದ್ದ ಜೌಮ್ ಪ್ಲೆನ್ಸಾ ಶಿಲ್ಪಕಲೆ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ 'ಬೆಂಗಳೂರು ಸೋಲ್' ಅನಾವರಣ
ಭಾವನಾ ಹೆಗಡೆ
|

Updated on:Apr 26, 2026 | 12:54 PM

Share

ಬೆಂಗಳೂರು, ಏಪ್ರಿಲ್ 26: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 (T2) ಈಗ ಮತ್ತೊಂದು ಜಾಗತಿಕ ಆಕರ್ಷಣೆಗೆ ಸಾಕ್ಷಿಯಾಗಿದೆ. ವಿಶ್ವಪ್ರಸಿದ್ಧ ಸ್ಪ್ಯಾನಿಷ್ ಕಲಾವಿದ ಜೌಮ್ ಪ್ಲೆನ್ಸಾ ಅವರು ಕೆತ್ತಿರುವ 16 ಅಡಿ ಎತ್ತರದ ‘ಬೆಂಗಳೂರಿನ ಆತ್ಮ’ (Bengaluru’s Soul) ಎಂಬ ಭವ್ಯ ಶಿಲ್ಪಕಲೆಯು ಶನಿವಾರ ಸಂಜೆ ಅನಾವರಣಗೊಂಡಿದ್ದು, ಪ್ರಯಾಣಿಕರ ಪಾಲಿಗೆ ಹೊಸ ‘ಇನ್‌ಸ್ಟಾಗ್ರಾಮ್ ಸ್ಪಾಟ್’ ಆಗಿ ಹೊರಹೊಮ್ಮಿದೆ.

ವೈವಿಧ್ಯತೆಯ ಪ್ರತಿಬಿಂಬ

ಈ ಬೃಹತ್ ಕಲಾಕೃತಿಯು ಕನ್ನಡ, ಅರೇಬಿಕ್, ಚೈನೀಸ್, ತಮಿಳು, ಕೊರಿಯನ್, ಗ್ರೀಕ್, ಹಿಂದಿ ಮತ್ತು ಲ್ಯಾಟಿನ್ ಸೇರಿದಂತೆ ವಿಶ್ವದ ವಿವಿಧ ಭಾಷೆಗಳ ಅಕ್ಷರಗಳನ್ನು ಹಾಗೂ ಗಣಿತದ ಚಿಹ್ನೆಗಳನ್ನು ಒಳಗೊಂಡಿದೆ. ಬೆಂಗಳೂರಿನ ಸಾಂಸ್ಕೃತಿಕ ವೈವಿಧ್ಯತೆ, ಸೃಜನಶೀಲತೆ ಮತ್ತು ಜಾಗತಿಕ ದೃಷ್ಟಿಕೋನಕ್ಕೆ ಈ ಶಿಲ್ಪಕಲೆಯು ಗೌರವ ಸಲ್ಲಿಸುತ್ತದೆ. ಅಕ್ಷರಗಳನ್ನು ಹೆಣೆದು ಸಿದ್ಧಪಡಿಸಿದ ಈ ವಿನ್ಯಾಸವು ನಗರದ ವೈವಿಧ್ಯತೆಯನ್ನು ಸಾರುತ್ತದೆ.

ಬಯೋಕಾನ್ ಫೌಂಡೇಶನ್ ಸಹಯೋಗ

ಬಯೋಕಾನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರ ಆಮಂತ್ರಣದ ಮೇರೆಗೆ ಜೌಮ್ ಪ್ಲೆನ್ಸಾ ಅವರು ಈ ಕಲಾಕೃತಿಯನ್ನು ರಚಿಸಿದ್ದಾರೆ. ಸಾರ್ವಜನಿಕ ಕಲೆಗಳು ನಾಗರಿಕ ಸ್ಥಳಗಳಿಗೆ ಮಾನವೀಯ ಸ್ಪರ್ಶ ನೀಡುತ್ತವೆ ಮತ್ತು ಹಂಚಿಕೆಯ ಗುರುತನ್ನು ಬೆಳೆಸುತ್ತವೆ ಎಂದು ಶಾ ಅಭಿಪ್ರಾಯಪಟ್ಟಿದ್ದಾರೆ. ಭಾರತಕ್ಕೆ ಸ್ಪೇನ್ ರಾಯಭಾರಿಯಾದ ಜುವಾನ್ ಆಂಟೋನಿಯೊ ಮಾರ್ಚ್ ಪುಜೋಲ್ ಅವರು ಈ ಕಲಾಕೃತಿಯನ್ನು ಲೋಕಾರ್ಪಣೆಗೊಳಿಸಿದರು.

ಕಲಾವಿದ ಹೇಳಿದ್ದೇನು?

ಗ್ಯಾಲರಿಗಳಿಗೆ ಭೇಟಿ ನೀಡಲು ಸಾಧ್ಯವಾಗದ ಜನಸಾಮಾನ್ಯರ ದೈನಂದಿನ ಜೀವನದಲ್ಲಿ ಸೌಂದರ್ಯವನ್ನು ತರುವ ಹಂಬಲ ನನ್ನದು ಎಂದು ಕಲಾವಿದ ಪ್ಲೆನ್ಸಾ ಹೇಳಿದ್ದಾರೆ. ಚಿಕಾಗೋ, ನ್ಯೂಯಾರ್ಕ್ ಮತ್ತು ಲಂಡನ್‌ನಂತಹ ಮಹಾನಗರಗಳಲ್ಲಿ ಕಲಾಕೃತಿಗಳನ್ನು ರಚಿಸಿರುವ ಪ್ಲೆನ್ಸಾ, ಈಗ ಬೆಂಗಳೂರಿನ ಹೆಮ್ಮೆಯ ವಿಮಾನ ನಿಲ್ದಾಣಕ್ಕೆ ತಮ್ಮ ಅದ್ಭುತ ಕೊಡುಗೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:53 pm, Sun, 26 April 26

Follow Us