ರೋಲ್​ಕಾಲ್​ ನೀಡದಿದ್ದಕ್ಕೆ ಪಟಾಕಿ ಅಂಗಡಿ ಮಾಲೀಕರಿಗೆ ಬಿಜೆಪಿ ಮುಖಂಡನಿಂದ ಹಲ್ಲೆ

ರೋಲ್​ಕಾಲ್​ ನೀಡದಿದ್ದಕ್ಕೆ ಪಟಾಕಿ ಅಂಗಡಿ ಮಾಲೀಕರಿಗೆ ಆನೇಕಲ್ ಪುರಸಭೆ ಬಿಜೆಪಿ ಸದಸ್ಯೆಯ ಪತಿ, ಬಿಜೆಪಿ ಮುಖಂಡ ಚರಣ್​ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದಾರೆ.

ರೋಲ್​ಕಾಲ್​ ನೀಡದಿದ್ದಕ್ಕೆ ಪಟಾಕಿ ಅಂಗಡಿ ಮಾಲೀಕರಿಗೆ ಬಿಜೆಪಿ ಮುಖಂಡನಿಂದ ಹಲ್ಲೆ
ಬಿಜೆಪಿ ಮುಖಂಡ ಚರಣ್
Edited By:

Updated on: Oct 25, 2022 | 6:37 PM

ಆನೇಕಲ್: ರೋಲ್​ಕಾಲ್​ ನೀಡದಿದ್ದಕ್ಕೆ ಪಟಾಕಿ ಅಂಗಡಿ ಮಾಲೀಕರಿಗೆ ಆನೇಕಲ್ ಪುರಸಭೆ ಬಿಜೆಪಿ ಸದಸ್ಯೆಯ ಪತಿ, ಬಿಜೆಪಿ (BJP) ಮುಖಂಡ ಚರಣ್​ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿರುವ ಘಟನೆ ಆನೇಕಲ್ (Anekal) ತಾಲೂಕಿನ ಹೊಸೂರು ಮುಖ್ಯರಸ್ತೆಯ ನೆರಳೂರು ಗೇಟ್​ ಬಳಿ ನಡೆದಿದೆ. ಎಸ್​​.ಎಲ್​​.ವಿ ಪಟಾಕಿ ಅಂಗಡಿ ಮಾಲೀಕರಾದ ಕಿರಣ್ ಮತ್ತು ಹರೀಶ್​ ಮೇಲೆ ಬಿಜೆಪಿ ಮುಖಂಡ ಚರಣ, ತೇಜಸ್, ಹರೀಶ, ಗುರುರಾಜ್ ಸೇರಿದಂತೆ 10 ಜನರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ರಾತ್ರಿ ವೇಳೆ ಪಟಾಕಿ ಅಂಗಡಿ ಹೋಗಿದ್ದ ಚರಣ್​ ಪಟಾಕಿ ಕೊಡು ಎಂದು ಕೇಳಿದ್ದಾನೆ. ಅದಕ್ಕೆ ಮಾಲಿಕರು ಅಂಗಡಿ ಬಾಗಿಲು ಮುಚ್ಚಿದ್ದೇವೆ ಬೆಳಗ್ಗೆ ಬನ್ನಿ ಎಂದಿದ್ದಾರೆ. ಇದಕ್ಕೆ ಧಮ್ಕಿ ಹಾಕಿ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಇದರಿಂದ ಪಟಾಕಿ ಅಂಗಡಿ ಮಾಲೀಕರಿಗೆ ಎದೆ, ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗಂಭೀರ ಗಾಯಗೊಂಡ ಕಿರಣ್​ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:36 pm, Tue, 25 October 22