AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ತಾನ್‌ಬುಲ್‌ನಿಂದ ಬೆಂಗಳೂರಿಗೆ ಗನ್‌ಗಳ ಪಾರ್ಸೆಲ್, ಗನ್‌ ನೋಡಿ ಏರ್‌ಪೋರ್ಟ್ ಸಿಬ್ಬಂದಿಗೆ ಆತಂಕ: ಮುಂದೇನಾಯ್ತು?

ನಿನ್ನೆ ಕಾರ್ಗೋ ಟರ್ಮಿನಲ್​ಗೆ ಇಸ್ತಾನ್‌ಬುಲ್‌ನಿಂದ ಬಂದಿದ್ದ ಪಾರ್ಸೆಲ್​ ಅನ್ನು ಟ್ರಾನ್ಸಪರ್ ಮಾಡುವಾಗ ಅನುಮಾನವಾಗಿ ಸಿಬ್ಬಂದಿ ಪಾರ್ಸೆಲ್​ ಬಿಚ್ಚಿ ನೋಡಿದ್ದಾರೆ. ಒಪನ್ ಮಾಡಿ ನೋಡಿದಾಗ ಪಾರ್ಸಲ್ ಒಳಗಡೆ ಗನ್​ಗಳು ಪತ್ತೆಯಾಗಿವೆ. ಬಳಿಕ ಗನ್​ಗಳನ್ನು ತೆಗದು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಡಮ್ಮಿ ಗನ್ ಎನ್ನುವುದು ತಿಳಿದಿದೆ.

ಇಸ್ತಾನ್‌ಬುಲ್‌ನಿಂದ ಬೆಂಗಳೂರಿಗೆ ಗನ್‌ಗಳ ಪಾರ್ಸೆಲ್, ಗನ್‌ ನೋಡಿ ಏರ್‌ಪೋರ್ಟ್ ಸಿಬ್ಬಂದಿಗೆ ಆತಂಕ: ಮುಂದೇನಾಯ್ತು?
ಇಸ್ತಾನ್‌ಬುಲ್‌ನಿಂದ ಬೆಂಗಳೂರಿಗೆ ಗನ್‌ಗಳ ಪಾರ್ಸೆಲ್
TV9 Web
| Edited By: |

Updated on:Jul 28, 2021 | 1:09 PM

Share

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಗನ್​ಗಳ ಪಾರ್ಸೆಲ್ ಬಂದಿದ್ದು, ಕಾರ್ಗೋ ಟರ್ಮಿನಲ್​ನಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಯಿತು. ಇಸ್ತಾನ್‌ಬುಲ್‌ನಿಂದ ಬೆಂಗಳೂರಿಗೆ ಗನ್‌ಗಳನ್ನು ಪಾರ್ಸೆಲ್ ಮಾಡಲಾಗಿದ್ದು, ಪರಿಶೀಲನೆಯ ವೇಳೆ ಡಮ್ಮಿ ಗನ್‌ಗಳು ಎಂಬುವುದು ಪತ್ತೆಯಾಗಿದೆ. ಪ್ರಾರಂಭದಲ್ಲಿ ಕಾರ್ಗೋ ಟರ್ಮಿನಲ್ ಸಿಬ್ಬಂದಿ ಗನ್​ಗಳ (Gun) ರಾಶಿ ಕಂಡು ಆತಂಕಗೊಂಡಿದ್ದರು. ಬಳಿಕ ಸತ್ಯಾಂಶ ಬೆಳಕಿಗೆ ಬಂದಿದ್ದು, ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ನಿನ್ನೆ ಕಾರ್ಗೋ ಟರ್ಮಿನಲ್​ಗೆ ಇಸ್ತಾನ್‌ಬುಲ್‌ನಿಂದ ಬಂದಿದ್ದ ಪಾರ್ಸೆಲ್​ ಅನ್ನು ಟ್ರಾನ್ಸಪರ್ ಮಾಡುವಾಗ ಅನುಮಾನವಾಗಿ ಸಿಬ್ಬಂದಿ ಪಾರ್ಸೆಲ್​ ಬಿಚ್ಚಿ ನೋಡಿದ್ದಾರೆ. ಒಪನ್ ಮಾಡಿ ನೋಡಿದಾಗ ಪಾರ್ಸಲ್ ಒಳಗಡೆ ಗನ್​ಗಳು ಪತ್ತೆಯಾಗಿವೆ. ಬಳಿಕ ಗನ್​ಗಳನ್ನು ತೆಗದು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಡಮ್ಮಿ ಗನ್ ಎನ್ನುವುದು ತಿಳಿದಿದೆ. ಸದ್ಯ ಪಾರ್ಸೆಲ್​ ಬಗ್ಗೆ ಏರ್ಪೋಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೆಹಲಿ, ಜಮ್ಮು-ಕಾಶ್ಮೀರದ 40 ಪ್ರದೇಶಗಳಲ್ಲಿ ಸಿಬಿಐ ದಾಳಿ ಜಮ್ಮು-ಕಾಶ್ಮೀರ ಮತ್ತು ದೆಹಲಿ ಸೇರಿ ಒಟ್ಟು 40 ಪ್ರದೇಶಗಳಲ್ಲಿ ಇಂದು ಸಿಬಿಐ ತನಿಖಾ ದಳ ದಾಳಿ ನಡೆಸಿದೆ. ಬಂದೂಕು ಪರವಾನಗಿ  ಅಕ್ರಮ ಮಾರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ರೇಡ್​ ನಡೆದಿದ್ದು, ಜಮ್ಮು-ಕಾಶ್ಮೀರದ ಹಿರಿಯ ಐಎಎಸ್​ ಅಧಿಕಾರಿ ಶಾಹೀದ್ ಇಕ್ಬಾಲ್​ ಚೌಧರಿ ಅವರ ಶ್ರೀನಗರದಲ್ಲಿರುವ ನಿವಾಸ ಸೇರಿ, ಉದ್ಧಾಂಪುರ, ರಾಜೌರಿ, ಅನಂತನಾಗ್​ ಮತ್ತು ಬಾರಾಮುಲ್ಲಾ ಸೇರಿ ಹಲವು ಪ್ರದೇಶಗಳಲ್ಲಿ ಸಿಬಿಐ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.

ಇಕ್ಬಾಲ್​ ಚೌಧರಿಯವರು ಸದ್ಯ ಬುಡಕಟ್ಟು ವ್ಯವಹಾರಗಳ ಕಾರ್ಯದರ್ಶಿಯಾಗಿದ್ದಾರೆ ಮತ್ತು ಜಮ್ಮು-ಕಾಶ್ಮೀರದ ಮಿಷನ್ ಯೂತ್​ನ ಸಿಇಒನೂ ಹೌದು. ಈ ಹಿಂದೆ ಕಥುರಾ, ಕಥುವಾ, ರಿಯಾಸಿ, ರಾಜೌರಿಯಂಡ್ ಉಧಂಪುರ್ ಜಿಲ್ಲೆಗಳ ಜಿಲ್ಲಾಧಿಕಾರಿಯೂ ಆಗಿದ್ದರು. ಇವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಬೇರೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸಾವಿರಾರು ಬಂದೂರು ಪರವಾನಗಿಗಳನ್ನು ನಕಲಿ ಹೆಸರುಗಳಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೇವಲ ಇವರೊಬ್ಬರೇ ಅಲ್ಲದೆ, ಪ್ರಸ್ತುತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು ಎಂಟು ಮಂದಿ ಜಿಲ್ಲಾಧಿಕಾರಿಗಳ ಮೇಲೆ ಸಿಬಿಐ ಕಣ್ಣಿಟ್ಟಿದ್ದು, ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಪೋಟ; 6 ಮಂದಿಗೆ ಗಾಯ

ಗನ್​ ತೋರಿಸಿ ಡಾನ್​ ಆಗ್ತೇನೆ ಎಂದು ಪೋಸ್​ ಕೊಟ್ಟವನು ಅರೆಸ್ಟ್​! ಬಿಲ್ಡಪ್​ ಕೊಟ್ಟು ಪೊಲೀಸರಿಗೆ ಅಥಿತಿಯಾದ

Published On - 1:00 pm, Wed, 28 July 21

Follow Us
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ