AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಕ್​ನ ಹಿಂಬದಿಯಲ್ಲಿ ಯುವಕ-ಯುವತಿಯರನ್ನ ಕೂರಿಸಿಕೊಂಡು ವೀಲಿಂಗ್; ಪುಂಡರ ಡೆಡ್ಲಿ ವೀಲಿಂಗ್ ದೃಶ್ಯ ಮೊಬೈಲ್​ನಲ್ಲಿ ಸೆರೆ

ಹೊಸಕೋಟೆಯಿಂದ ದೇವನಹಳ್ಳಿ ಮೂಲಕ ದೊಡ್ಡಬಳ್ಳಾಪುರ ವರೆಗೂ ನೂತನ ರಾಷ್ಟ್ರಿಯಾ ಹೆದ್ದಾರಿ 648 ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಈ ಹಿನ್ನಲೆ ಬೈಕ್​​ನ ಹಿಂಬದಿಯಲ್ಲಿ ಒಬ್ಬರನ್ನ ಕೂರಿಸಿಕೊಂಡು ಹೆದ್ದಾರಿಯಲ್ಲಿ ಮುಂದಿನ ವೀಲ್ ಮೇಲಕ್ಕೆತ್ತಿ ಕೆಲವುರ ವೀಲಿಂಗ್ ಮಾಡುತ್ತಿದ್ದರೆ, ಜೊತೆಗಾರರು ವೀಡಿಯೋ ಮಾಡುತ್ತಾ ಹುಚ್ಚಾಟ ಮಾಡ್ತಿದ್ದಾರೆ.

ನವೀನ್ ಕುಮಾರ್ ಟಿ
| Edited By: |

Updated on:Dec 10, 2023 | 7:33 PM

Share

ಬೆಂಗಳೂರು ಗ್ರಾಮಾಂತರ, ಡಿ.10: ಅದು ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ಜಸ್ಟ್ ಎರಡು ತಿಂಗಳಿಂದಷ್ಟೆ ಉದ್ಘಾಟನೆಯಾಗಿದ್ದ ನೂತನ ಚತುಷ್ಪಥ ರಸ್ತೆಯ ರಾಷ್ಟ್ರಿಯ ಹೆದ್ದಾರಿ(National Highway) 648 ಹೊಸ ಹೈವೇ ಜೊತೆಗೆ ಹೈಟೆಕ್ ಕ್ಯಾಮರಾಗಳನ್ನು ಸಹ ಅಳವಡಿಸಿದ್ದಾರೆ. ಆದ್ರೆ, ಕ್ಯಾಮರಾಗಳಿದ್ದಾವೆ ಎನ್ನುವ ಭಯವು ಇಲ್ಲದೆ, ವೀಕೆಂಡ್ ಬಂದರೆ ಸಾಕು ವೀಲಿಂಗ್(Bike wheeling)ಪುಂಡರ ಹಾವಳಿ ಹೆಚ್ಚಾಗುತ್ತಿದ್ದು, ಡೆಡ್ಲಿ ವೀಲಿಂಗ್ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ.

ಕಣ್ಣು ಹಾಯಿಸಿದಷ್ಟು ದೂರ ಹೆದ್ದಾರಿ ಸ್ವಚ್ಚಂಧವಾಗಿ ಕಾಣುತ್ತಿದೆ. ನೂತನ ಹೈವೇ ಎಂದು ವಾಹನ ಸವಾರರು ಸಹ ಅತಿ ವೇಗದಲ್ಲಿ ಬರ್ತಿದ್ರೆ, ಇಲ್ಲೊಂದು ಗ್ಯಾಂಗ್ ಮಾತ್ರ ಜೀವ ಭಯ ಎನ್ನುವುದು ಇಲ್ಲದೆ ಅಕ್ಷರಶಃ ಅಟ್ಟಹಾಸ ಮೆರೆಯುತ್ತಿದ್ದಾರೆ. ಒಂದೆಡೆ ವಾಹನ ಸವಾರರ ವೇಗವಾಗಿ ಬರುತ್ತಿದ್ದರೆ, ಅವರ ನಡುವೆಯೇ ಹಿಂಬದಿಯಲ್ಲಿ ಯುವಕ-ಯುವತಿಯರನ್ನ ಕೂರಿಸಿಕೊಂಡ ಪುಂಡರು ನಡು ರಸ್ತೆಯಲ್ಲಿ ವೀಲಿಂಗ್ ಮಾಡುತ್ತಾ ಹುಚ್ಚಾಟವಾಡುತ್ತಿದ್ದಾರೆ.

ಇದನ್ನೂ ಓದಿ:Mysore News: ವೀಲಿಂಗ್ ಶೋಕಿಗಾಗಿ ಬೈಕ್​ ಕಳ್ಳತನ; ಇಬ್ಬರ ಬಂಧನ

ಹೊಸಕೋಟೆ ದೊಡ್ಡಬಳ್ಳಾಪುರ ನಡುವೆ ಹೆಚ್ಚಾಯ್ತು ಹುಚ್ಚಾಟ

ಜಿಲ್ಲೆಯ ಹೊಸಕೋಟೆಯಿಂದ ದೇವನಹಳ್ಳಿ ಮೂಲಕ ದೊಡ್ಡಬಳ್ಳಾಪುರ ವರೆಗೂ ನೂತನ ರಾಷ್ಟ್ರಿಯಾ ಹೆದ್ದಾರಿ 648 ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಚತುಷ್ಪಥ ರಸ್ತೆಯಾಗಿ ಹೆದ್ದಾರಿ ನಿರ್ಮಾಣವಾಗಿರುವ ಕಾರಣ, ಚಿಕ್ಕಬಳ್ಳಾಫುರದ ನಂದಿಬೆಟ್ಟ ಈಶಾ ಪೌಂಡೇಶನ್ ಮತ್ತು ಘಾಟಿ ಸುಬ್ರಮಣ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಾರೆ. ಆದ್ರೆ, ಈ ನಡುವೆ ಇದೇ ಹೆಸರಿನಲ್ಲಿ ಲಾಂಗ್ ಡ್ರೈವ್ ಬರ್ತಿರುವ ಕೆಲ ಯುವಕ ಯುವತಿಯರು ಹೆದ್ದಾರಿಯಲ್ಲಿ ಡೆಡ್ಲಿ ವೀಲಿಂಗ್ ಮಾಡುತ್ತಾ ಅಟ್ಟಹಾಸ ಮೆರೆಯುತ್ತಿದ್ದಾರೆ.

ಹಿಂಬದಿಯಲ್ಲಿ ಯುವಕ-ಯುವತಿಯನ್ನ ಕೂರಿಸಿಕೊಂಡು ವೀಲಿಂಗ್​

ಬೈಕ್​​ನ ಹಿಂಬದಿಯಲ್ಲಿ ಒಬ್ಬರನ್ನ ಕೂರಿಸಿಕೊಂಡು ಹೆದ್ದಾರಿಯಲ್ಲಿ ಮುಂದಿನ ವೀಲ್ ಮೇಲಕ್ಕೆತ್ತಿ ಕೆಲವುರ ವೀಲಿಂಗ್ ಮಾಡುತ್ತಿದ್ದರೆ, ಜೊತೆಗಾರರು ವೀಡಿಯೋ ಮಾಡುತ್ತಾ ಹುಚ್ಚಾಟ ಮಾಡ್ತಿದ್ದಾರೆ. ಇನ್ನು ಯುವಕ ಯುವತಿಯರು ಈ ರೀತಿ ಹುಚ್ಚಾಟ ಮಾಡುತ್ತಾ ಹೋಗ್ತಿದ್ರೆ ಹಿಂಬದಿ ಬರುವ ವಾಹನ ಸವಾರರು ಜೀವ ಕೈಲಿಡಿದು ಸಂಚರಿಸುವ ಸ್ಥಿತಿ ಎದುರಾಗಿದೆ.

ಇದನ್ನೂ ಓದಿ:ತುಮಕೂರು ರಿಂಗ್ ರಸ್ತೆಯಲ್ಲಿ ವೀಲಿಂಗ್ ಪುಂಡರ ಹಾವಳಿ; ವಾಹನ ಸವಾರರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ

ಇನ್ನು ಈ ವೀಲಿಂಗ್ ಪುಂಡರು, ಹಿಂಬದಿ ನಂಬರ್ ಪ್ಲೇಟ್​ಗಳನ್ನ ಸಹ ಹಾಕಿಕೊಳ್ಳದೆ ಬಂದು ರಾಜಾ ರೋಷವಾಗಿ ವೀಲಿಂಗ್​ ಮಾಡುತ್ತಿದ್ದಾರೆ. ವೀಲಿಂಗ್ ಮಾಡಿ ಅವರು ಬೀಳೋದು ಅಲ್ಲದೆ, ಇತರೆ ವಾಹನ ಸವಾರರ ಜೀವಕ್ಕೂ ಸಂಚಾಕಾರವನ್ನ ಪುಂಡರು ತರ್ತಿದ್ದು, ಹೆದ್ದಾರಿಯಲ್ಲಿ ಹೈವೇ ಗಸ್ತು ಪೊಲೀಸರಿದ್ರು, ಯಾವುದೇ ಪ್ರಯೋಜನವಾಗುತ್ತಿಲ್ಲ. ಇನ್ನು ಹೆದ್ದಾರಿಯಲ್ಲಿ ಹೈಟೆಕ್ ಕ್ಯಾಮರಾಗಳನ್ನ ಸಹ ಈಗಾಗಲೇ ಅಳವಡಿಕೆ ಮಾಡಿದ್ದು, ವೀಕೆಂಡ್​ನಲ್ಲಿ ವೀಲಿಂಗ್ ಪುಂಡರ ವಿರುದ್ದ ಸ್ಪೇಷಲ್ ಡ್ರೈವ್ ಮಾಡಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಒಟ್ಟಾರೆ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬಂತೆ ಪುಂಡರು ಹೆದ್ದಾರಿಯಲ್ಲಿ ವೀಲಿಂಗ್ ಮಾಡಿ ಅಟ್ಟಹಾಸ ಮೆರೆಯುತ್ತಿದ್ರೆ, ವಾಹನ ಸವಾರರು ಜೀವ ಕೈಲಿಡಿದು ಸಂಚರಿಸುತ್ತಿದ್ದಾರೆ. ಇನ್ನಾದರೂ ಪೊಲೀಸರು ವೀಲಿಂಗ್ ಪುಂಡರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ವೀಲಿಂಗ್ ಪುಂಡರಿಗೆ ತಕ್ಕ ಶಾಸ್ತ್ರಿ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:32 pm, Sun, 10 December 23

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ