AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ಲಕ್ಷ ರೂ. ಕದ್ದು ಓಡುತ್ತಿದ್ದ ಕಳ್ಳನನ್ನ ಚೇಸ್ ಮಾಡಿ ಹಿಡಿದ KSRTC ಬಸ್ ಚಾಲಕ, ಕಂಡಕ್ಟರ್​ ಕಾರ್ಯಕ್ಕೆ ಬೆಂಗಳೂರು ಕಮಿಷನರ್ ಶಹಬ್ಬಾಸ್‌

ಪ್ರಯಾಣಿಕ 5 ಬ್ಯಾಗ್​ನಲ್ಲಿದ್ದ 5 ಲಕ್ಷ ರೂಪಾಯಿಯನ್ನ ಕದ್ದು ಹೋಗುತ್ತಿದ್ದ ಪಿಕ್ ಆರೋಪಿಯನ್ನ ಕೆ.ಎಸ್.ಆರ್.ಟಿ.ಸಿ(KSRTC) ಚಾಲಕ ಮತ್ತು ನಿರ್ವಾಹಕ ಚೇಸ್ ಮಾಡಿ ಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ದಯಾನಂದ್​ ಅವರು ಬಹುಮಾನ ನೀಡಿ, ಸನ್ಮಾನಿಸಿದ್ದಾರೆ.

5 ಲಕ್ಷ ರೂ. ಕದ್ದು ಓಡುತ್ತಿದ್ದ ಕಳ್ಳನನ್ನ ಚೇಸ್ ಮಾಡಿ ಹಿಡಿದ KSRTC ಬಸ್ ಚಾಲಕ, ಕಂಡಕ್ಟರ್​ ಕಾರ್ಯಕ್ಕೆ ಬೆಂಗಳೂರು ಕಮಿಷನರ್ ಶಹಬ್ಬಾಸ್‌
ಕೆಎಸ್​ಆರ್​ಟಿಸಿ ಸಿಬ್ಬಂದಿ
ರಾಚಪ್ಪಾಜಿ ನಾಯ್ಕ್
| Edited By: |

Updated on: Jun 27, 2023 | 3:18 PM

Share

ಬೆಂಗಳೂರು: ಪ್ರಯಾಣಿಕ 5 ಬ್ಯಾಗ್​ನಲ್ಲಿದ್ದ 5 ಲಕ್ಷ ರೂಪಾಯಿಯನ್ನ ಕದ್ದು ಹೋಗುತ್ತಿದ್ದ ಪಿಕ್ ಆರೋಪಿಯನ್ನ ಕೆ.ಎಸ್.ಆರ್.ಟಿ.ಸಿ(KSRTC) ಚಾಲಕ ಮತ್ತು ನಿರ್ವಾಹಕ ಚೇಸ್ ಮಾಡಿ ಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ(Bengaluru Police Commissioner) ದಯಾನಂದ್​ ಅವರು ಬಹುಮಾನ ನೀಡಿ, ಸನ್ಮಾನಿಸಿದ್ದಾರೆ. ಜೂನ್ 14 ರಂದು ಪಾಂಡಿಚೇರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್ಸ್​ಗೆ ಮೆಜೆಸ್ಟಿಕ್ ಹೋಗಬೇಕೆಂದು ಇಬ್ಬರು ಹತ್ತಿದ್ದಾರೆ. ಆದ್ರೆ, ಎಲೆಕ್ಟ್ರಾನಿಕ್ ಸಿಟಿ ಮದ್ಯದಲ್ಲೇ ಬಸ್ ನಿಲ್ಲಿಸುವಂತೆ ಹೇಳಿದ್ದಾರೆ. ಅದಾಗಲೇ ನಿರ್ವಾಹಕರಿಗೆ ಅವರ ಮೇಲೆ ಅನುಮಾನ ಮೂಡಿದೆ. ಅಲ್ಲಿ ಪ್ರಯಾಣಿಕರೊಬ್ಬರು ಇಳಿದು ಹೋಗುತ್ತಿದ್ದಂತೆ ಬ್ಯಾಗ್ ಪರಿಶೀಲಿಸಿದ್ದು, ನಿರ್ವಾಹಕರಿಗೆ ಐದು ಲಕ್ಷ ಕಾಣ್ತಿಲ್ಲ ಎಂದಿದ್ದಾರೆ. ಅಷ್ಟೊತ್ತಿಗಾಗಲೇ ಇಬ್ಬರು ಆರೋಪಿಗಳು ಓಡಲು ಪ್ರಾರಂಭಿಸಿದ್ದಾರೆ. ಕೂಡಲೇ ನಿರ್ವಾಹಕ ಚೆಸ್​ ಮಾಡಿ ಇಬ್ಬರಲ್ಲಿ ಓರ್ವನನ್ನ ಹಿಡಿದಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಶಹಾ ಅಲ್ಲಾಂ ನಿಂದ ಐದು ಲಕ್ಷ ಹಣ ವಶಕ್ಕೆ ಪಡೆದ ಪೊಲೀಸರು ​

ಇನ್ನು ಓಡಿ ಹೊರಟ್ಟಿದ್ದ ಕಳ್ಳನನ್ನ ಚೇಸ್ ಮಾಡಿದ ಬಸ್ ಚಾಲಕ ಸೋಮಪ್ಪ ಮತ್ತು ಕಂಡಕ್ಟರ್ ಮಂಜುನಾಥ್ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಓರ್ವ ಕಳ್ಳ ಎಸ್ಕೇಪ್​ ಆಗಿದ್ದಾನೆ. ಶಾಹಾ ಅಲ್ಲಾಂ ಎಂಬಾತನನ್ನ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶಹಾ ಅಲ್ಲಾಂ ನಿಂದ ಐದು ಲಕ್ಷ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಲಕ ,ಕಂಡಕ್ಟರ್​ರವರ ಉತ್ತಮ ಕೆಲಸಕ್ಕೆ ನಗರ ಪೊಲೀಸ್ ಆಯುಕ್ತ ದಯಾನಂದರಿಂದ ಸನ್ಮಾನ ಮಾಡಲಾಗಿದೆ.

ಇದನ್ನೂ ಓದಿ:Bengaluru News: ಬಿಟ್​ ಕಾಯಿನ್ ಬಹುಕೋಟಿ ಅಕ್ರಮ ವ್ಯವಹಾರ ಪ್ರಕರಣ: ಮರು ತನಿಖೆ ನಡೆಸುವಂತೆ ಸಿಐಡಿಗೆ ಪತ್ರ ಬರೆದ ನಗರ ಪೊಲೀಸ್​ ಕಮಿಷನರ್ ದಯಾನಂದ್

ಬಸ್ ಸಿಬ್ಬಂದಿಯ ಸಮಯ ಪ್ರಜ್ಞೆಗೆ ನಗರ ಪೊಲೀಸ್ ಆಯುಕ್ತರಿಂದ ಸನ್ಮಾನ

5 ಲಕ್ಷ ಕದ್ದು ಓಡುತ್ತಿದ್ದ ಕಳ್ಳನನ್ನ ಚೇಸ್ ಮಾಡಿ ಹಿಡಿದು ಶೌರ್ಯ ಮೆರೆದಿದ್ದ ಬಸ್ ಸಿಬ್ಬಂದಿಯ ಸಮಯ ಪ್ರಜ್ಞೆಗೆ ಪ್ರಶಂಸೆ ವ್ಯಕ್ತವಾಗಿದ್ದು, ಈ ಕುರಿತು ಸಿಬ್ಬಂದಿ ಸಾಹಸ ಮತ್ತು ಶೌರ್ಯಕ್ಕೆ ಮೆಚ್ಚಿ ಪೊಲೀಸ್ ಆಯುಕ್ತ ದಯಾನಂದ್ ಬಸ್​ ಸಿಬ್ಬಂದಿಗೆ ಬೆಂಗಳೂರು ಕಮಿಷನರ್​ಯಿಂದ ಬಹುಮಾನ ಮತ್ತು ಪ್ರಶಂಸೆ ಪತ್ರ ವಿತರಣೆ ನೀಡಲಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು