AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBMP Director ACB raid ಕಂತೆ ಕಂತೆ ನೋಟು, ಸ್ಟಾಂಪ್, ದುಬಾರಿ ಕಾರುಗಳು, ಮದ್ಯದ ಬಾಟಲಿಗಳು -ಇದು BBMP ಸಹಾಯಕ ನಿರ್ದೇಶಕನ ಕಾರು ಬಾರು

ACB raids BBMP Assistant Director house ಫೆಬ್ರವರಿ 5ರಂದು 20 ಲಕ್ಷ ರೂ. ಲಂಚ ಪಡೆಯುವಾಗ ACB ಬಲೆಗೆ ಬಿದ್ದಿದ್ದ BBMP ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಮನೆ ಮೇಲೆ ದಾಳೆ ನಡೆಸಿದ ಅಧಿಕಾರಿಗಳಿಗೆ ದೊಡ್ಡ ಶಾಕ್​ ಎದುರಾಗಿದೆ. ಬೊಮ್ಮನಹಳ್ಳಿ ವಲಯದ ಸಹಾಯಕ ನಿರ್ದೇಶಕರಾಗಿರುವ ದೇವೇಂದ್ರಪ್ಪ ನಿವಾಸದಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆಯಾಗಿದೆ.

BBMP Director ACB raid ಕಂತೆ ಕಂತೆ ನೋಟು, ಸ್ಟಾಂಪ್, ದುಬಾರಿ ಕಾರುಗಳು, ಮದ್ಯದ ಬಾಟಲಿಗಳು -ಇದು BBMP ಸಹಾಯಕ ನಿರ್ದೇಶಕನ ಕಾರು ಬಾರು
ಕಂತೆ ಕಂತೆ ನೋಟುಗಳು, ಸ್ಟಾಂಪ್​ಗಳು, ದುಬಾರಿ ಕಾರುಗಳು, ಮದ್ಯದ ಬಾಟಲಿಗಳು -ಇದು BBMP ಸಹಾಯಕ ನಿರ್ದೇಶಕನ ಭರ್ಜರಿ ದರ್ಬಾರು
KUSHAL V
|

Updated on:Feb 08, 2021 | 6:18 PM

Share

ಬೆಂಗಳೂರು: ಫೆಬ್ರವರಿ 5ರಂದು 20 ಲಕ್ಷ ರೂ. ಲಂಚ ಪಡೆಯುವಾಗ ACB ಬಲೆಗೆ ಬಿದ್ದಿದ್ದ BBMP ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಮನೆ ಮೇಲೆ ದಾಳೆ ನಡೆಸಿದ ಅಧಿಕಾರಿಗಳಿಗೆ ದೊಡ್ಡ ಶಾಕ್​ ಎದುರಾಗಿದೆ. ಬೊಮ್ಮನಹಳ್ಳಿ ವಲಯದ ಸಹಾಯಕ ನಿರ್ದೇಶಕರಾಗಿರುವ ದೇವೇಂದ್ರಪ್ಪ ನಿವಾಸದಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆಯಾಗಿದೆ. BBMP Assistant Director house ACB raid

BBMP ಕಡತಗಳು

ದೇವೇಂದ್ರಪ್ಪ ಮೇಲೆ ದಾಳಿ ನಡೆಸಿದಾಗ ಅಧಿಕಾರಿಯ ಕಾರಿನಲ್ಲಿ 50ಕ್ಕೂ ಹೆಚ್ಚು ಬಿಬಿಎಂಪಿ‌ ಕಡತಗಳು ಪತ್ತೆಯಾಗಿವೆ. ನಗರ ಯೋಜನೆಗೆ ಸೇರಿದ 480ಕ್ಕೂ ಅಧಿಕ ಕಡತಗಳು ಪತ್ತೆಯಾಗಿವೆ. ಅಷ್ಟೇ ಅಲ್ಲ, ಮೇಲಾಧಿಕಾರಿಗಳ ಹೆಸರಿನಲ್ಲಿರುವ ರಬ್ಬರ್​ ಸ್ಟಾಂಪ್​ಗಳು ಹಾಗೂ ಸೂಕ್ತ ದಾಖಲೆ ಇಲ್ಲದ 7.40 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.

ಅಧಿಕಾರಿ ಮನೆಯಲ್ಲಿ ಪತ್ತೆಯಾದ ಮದ್ಯದ ಬಾಟಲಿಗಳು

ದೇವೇಂದ್ರಪ್ಪ ಅಲ್ಲ ‘ಕುಬೇರ’ಪ್ಪ! ಇದಲ್ಲದೆ, ನಿವಾಸದ ಮೇಲೆ ದಾಳಿ ಮುಂದುವರಿಸಿದ ಅಧಿಕಾರಿಗಳು ಒಟ್ಟು 27 ಲಕ್ಷದ 40 ಸಾವಿರ ವಶಕ್ಕೆ ಪಡೆದರು. ದೇವೇಂದ್ರಪ್ಪ ಮನೆಯಲ್ಲಿ ಕೇವಲ ನಗದು ಮಾತ್ರವಲ್ಲದೆ ದುಬಾರಿ ಕಾರುಗಳು, ಬ್ಯಾಂಕ್ ಖಾತೆಯ ದಾಖಲೆ ಹಾಗೂ ಮದ್ಯದ ಬಾಟಲಿಗಳು ಸಹ ಪತ್ತೆಯಾಗಿದೆ.

ಅಧಿಕಾರಿ ಬಳಿ ಪತ್ತೆಯಾದ ಕಂತೆ ಕಂತೆ ನೋಟುಗಳು

ಈ ನಡುವೆ, ಮನೆಯಲ್ಲಿ ಪತ್ತೆಯಾದ ಮದ್ಯದ ಬಾಟಲಿಗಳ ಬಗ್ಗೆ ಅಬಕಾರಿ ಇಲಾಖೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದೆ. ಸದ್ಯ, BBMP ದಾಖಲೆಗಳ ಕುರಿತು ACB ತನಿಖೆ ಮುಂದುವರಿದಿದೆ.

ಫೆಬ್ರವರಿ 5ರಂದು ದೇವೇಂದ್ರಪ್ಪ ಕಟ್ಟಡಕ್ಕೆ ಸ್ವಾಧೀನ ಪತ್ರ ಕೊಡಲು ರಾಜೇಶ್​ ಎಂಬುವವರ ಬಳಿ ₹40 ಲಕ್ಷ ಲಂಚ ಕೇಳಿದ್ದರು. ಹಾಗಾಗಿ, ರಾಜೇಶ್​ ಎಂಬುವವರು ನೀಡಿದ ದೂರಿನನ್ವಯ ACB ಕಾರ್ಯಾಚರಣೆ ನಡೆಸಿತ್ತು. ಮೆಜೆಸ್ಟಿಕ್​​​ನ ಅಮರ್​ ಹೋಟೆಲ್​ ಬಳಿ ಸಹಾಯಕ ನಿರ್ದೇಶಕ ACB ಬಲೆಗೆ ಬಿದ್ದಿದ್ದರು.

ದುಬಾರಿ ಕಾರುಗಳು

ಹಿರಿಯ ಅಧಿಕಾರಿಗಳ ಸ್ಟಾಂಪ್​ಗಳು

Siddaramaiah cotton shopping spree ಏಯ್​.. ಚೆನ್ನಾಗಿರೋ ಪಂಚೆ ಕೊಡಯ್ಯ.. ಕಲರ್​ ಇಲ್ದೇ ಇರೋದು ಕೊಡಬೇಡ -ಸಿದ್ದರಾಮಯ್ಯ ಖಾದಿ ಶಾಪಿಂಗ್!

Published On - 6:12 pm, Mon, 8 February 21

Follow Us
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ
ಕಾಂಗ್ರೆಸ್‌ಗೆ ತಟ್ಟಿದ ಬಂಡಾಯದ ಬಿಸಿ: ದಾವಣಗೆರೆ ಅಖಾಡಕ್ಕಿಳಿದ ಪೈಲ್ವಾನ್!
ಕಾಂಗ್ರೆಸ್‌ಗೆ ತಟ್ಟಿದ ಬಂಡಾಯದ ಬಿಸಿ: ದಾವಣಗೆರೆ ಅಖಾಡಕ್ಕಿಳಿದ ಪೈಲ್ವಾನ್!
ಎಸ್‌ಪಿ ಅಸ್ಲಾಂ ಸಾವಿನ ದೃಶ್ಯದ ಹಿಂದೆ ಅಡಗಿದೆ 2014ರ ಭೀಕರ ನೈಜ ಘಟನೆ!
ಎಸ್‌ಪಿ ಅಸ್ಲಾಂ ಸಾವಿನ ದೃಶ್ಯದ ಹಿಂದೆ ಅಡಗಿದೆ 2014ರ ಭೀಕರ ನೈಜ ಘಟನೆ!