AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBMP Director ACB raid ಕಂತೆ ಕಂತೆ ನೋಟು, ಸ್ಟಾಂಪ್, ದುಬಾರಿ ಕಾರುಗಳು, ಮದ್ಯದ ಬಾಟಲಿಗಳು -ಇದು BBMP ಸಹಾಯಕ ನಿರ್ದೇಶಕನ ಕಾರು ಬಾರು

ACB raids BBMP Assistant Director house ಫೆಬ್ರವರಿ 5ರಂದು 20 ಲಕ್ಷ ರೂ. ಲಂಚ ಪಡೆಯುವಾಗ ACB ಬಲೆಗೆ ಬಿದ್ದಿದ್ದ BBMP ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಮನೆ ಮೇಲೆ ದಾಳೆ ನಡೆಸಿದ ಅಧಿಕಾರಿಗಳಿಗೆ ದೊಡ್ಡ ಶಾಕ್​ ಎದುರಾಗಿದೆ. ಬೊಮ್ಮನಹಳ್ಳಿ ವಲಯದ ಸಹಾಯಕ ನಿರ್ದೇಶಕರಾಗಿರುವ ದೇವೇಂದ್ರಪ್ಪ ನಿವಾಸದಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆಯಾಗಿದೆ.

BBMP Director ACB raid ಕಂತೆ ಕಂತೆ ನೋಟು, ಸ್ಟಾಂಪ್, ದುಬಾರಿ ಕಾರುಗಳು, ಮದ್ಯದ ಬಾಟಲಿಗಳು -ಇದು BBMP ಸಹಾಯಕ ನಿರ್ದೇಶಕನ ಕಾರು ಬಾರು
ಕಂತೆ ಕಂತೆ ನೋಟುಗಳು, ಸ್ಟಾಂಪ್​ಗಳು, ದುಬಾರಿ ಕಾರುಗಳು, ಮದ್ಯದ ಬಾಟಲಿಗಳು -ಇದು BBMP ಸಹಾಯಕ ನಿರ್ದೇಶಕನ ಭರ್ಜರಿ ದರ್ಬಾರು
KUSHAL V
|

Updated on:Feb 08, 2021 | 6:18 PM

Share

ಬೆಂಗಳೂರು: ಫೆಬ್ರವರಿ 5ರಂದು 20 ಲಕ್ಷ ರೂ. ಲಂಚ ಪಡೆಯುವಾಗ ACB ಬಲೆಗೆ ಬಿದ್ದಿದ್ದ BBMP ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಮನೆ ಮೇಲೆ ದಾಳೆ ನಡೆಸಿದ ಅಧಿಕಾರಿಗಳಿಗೆ ದೊಡ್ಡ ಶಾಕ್​ ಎದುರಾಗಿದೆ. ಬೊಮ್ಮನಹಳ್ಳಿ ವಲಯದ ಸಹಾಯಕ ನಿರ್ದೇಶಕರಾಗಿರುವ ದೇವೇಂದ್ರಪ್ಪ ನಿವಾಸದಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆಯಾಗಿದೆ. BBMP Assistant Director house ACB raid

BBMP ಕಡತಗಳು

ದೇವೇಂದ್ರಪ್ಪ ಮೇಲೆ ದಾಳಿ ನಡೆಸಿದಾಗ ಅಧಿಕಾರಿಯ ಕಾರಿನಲ್ಲಿ 50ಕ್ಕೂ ಹೆಚ್ಚು ಬಿಬಿಎಂಪಿ‌ ಕಡತಗಳು ಪತ್ತೆಯಾಗಿವೆ. ನಗರ ಯೋಜನೆಗೆ ಸೇರಿದ 480ಕ್ಕೂ ಅಧಿಕ ಕಡತಗಳು ಪತ್ತೆಯಾಗಿವೆ. ಅಷ್ಟೇ ಅಲ್ಲ, ಮೇಲಾಧಿಕಾರಿಗಳ ಹೆಸರಿನಲ್ಲಿರುವ ರಬ್ಬರ್​ ಸ್ಟಾಂಪ್​ಗಳು ಹಾಗೂ ಸೂಕ್ತ ದಾಖಲೆ ಇಲ್ಲದ 7.40 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.

ಅಧಿಕಾರಿ ಮನೆಯಲ್ಲಿ ಪತ್ತೆಯಾದ ಮದ್ಯದ ಬಾಟಲಿಗಳು

ದೇವೇಂದ್ರಪ್ಪ ಅಲ್ಲ ‘ಕುಬೇರ’ಪ್ಪ! ಇದಲ್ಲದೆ, ನಿವಾಸದ ಮೇಲೆ ದಾಳಿ ಮುಂದುವರಿಸಿದ ಅಧಿಕಾರಿಗಳು ಒಟ್ಟು 27 ಲಕ್ಷದ 40 ಸಾವಿರ ವಶಕ್ಕೆ ಪಡೆದರು. ದೇವೇಂದ್ರಪ್ಪ ಮನೆಯಲ್ಲಿ ಕೇವಲ ನಗದು ಮಾತ್ರವಲ್ಲದೆ ದುಬಾರಿ ಕಾರುಗಳು, ಬ್ಯಾಂಕ್ ಖಾತೆಯ ದಾಖಲೆ ಹಾಗೂ ಮದ್ಯದ ಬಾಟಲಿಗಳು ಸಹ ಪತ್ತೆಯಾಗಿದೆ.

ಅಧಿಕಾರಿ ಬಳಿ ಪತ್ತೆಯಾದ ಕಂತೆ ಕಂತೆ ನೋಟುಗಳು

ಈ ನಡುವೆ, ಮನೆಯಲ್ಲಿ ಪತ್ತೆಯಾದ ಮದ್ಯದ ಬಾಟಲಿಗಳ ಬಗ್ಗೆ ಅಬಕಾರಿ ಇಲಾಖೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದೆ. ಸದ್ಯ, BBMP ದಾಖಲೆಗಳ ಕುರಿತು ACB ತನಿಖೆ ಮುಂದುವರಿದಿದೆ.

ಫೆಬ್ರವರಿ 5ರಂದು ದೇವೇಂದ್ರಪ್ಪ ಕಟ್ಟಡಕ್ಕೆ ಸ್ವಾಧೀನ ಪತ್ರ ಕೊಡಲು ರಾಜೇಶ್​ ಎಂಬುವವರ ಬಳಿ ₹40 ಲಕ್ಷ ಲಂಚ ಕೇಳಿದ್ದರು. ಹಾಗಾಗಿ, ರಾಜೇಶ್​ ಎಂಬುವವರು ನೀಡಿದ ದೂರಿನನ್ವಯ ACB ಕಾರ್ಯಾಚರಣೆ ನಡೆಸಿತ್ತು. ಮೆಜೆಸ್ಟಿಕ್​​​ನ ಅಮರ್​ ಹೋಟೆಲ್​ ಬಳಿ ಸಹಾಯಕ ನಿರ್ದೇಶಕ ACB ಬಲೆಗೆ ಬಿದ್ದಿದ್ದರು.

ದುಬಾರಿ ಕಾರುಗಳು

ಹಿರಿಯ ಅಧಿಕಾರಿಗಳ ಸ್ಟಾಂಪ್​ಗಳು

Siddaramaiah cotton shopping spree ಏಯ್​.. ಚೆನ್ನಾಗಿರೋ ಪಂಚೆ ಕೊಡಯ್ಯ.. ಕಲರ್​ ಇಲ್ದೇ ಇರೋದು ಕೊಡಬೇಡ -ಸಿದ್ದರಾಮಯ್ಯ ಖಾದಿ ಶಾಪಿಂಗ್!

Published On - 6:12 pm, Mon, 8 February 21

ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್