
ಬೆಂಗಳೂರು, ಫೆ,11: ನಗರದಲ್ಲಿ ಕ್ಯಾಬ್, ಬಸ್ ಚಾಲಕರ ಪ್ರಾಮಾಣಿಕತೆ ಮೆರೆದ ಸುದ್ದಿಗಳು ಆಗ್ಗಾಗೆ ವೈರಲ್ ಆಗುತ್ತ ಇರುತ್ತದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ (Bangalore cab driver) ಇಂತಹದೇ ಘಟನೆಯೊಂದು ವೈರಲ್ ಆಗಿದೆ. ಬೆಂಗಳೂರಿನ ಕ್ಯಾಬ್ ಚಾಲಕ ಉತ್ತಮ್ ಅವರ ಪ್ರಾಮಾಣಿಕತೆಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಕಂಪನಿಯೊಂದರ ಮಾನ್ಯೇಜರ್ ಗ್ಲೆನ್ ಇವಾನ್ ಎಂಬುವವರು ತಮ್ಮ ಪಾಸ್ಪೋರ್ಟ್ ಮತ್ತು ಪಿಆರ್ ಕಾರ್ಡ್ ಇರುವ ಬ್ಯಾಗ್ನ್ನು ಕ್ಯಾಬ್ನಲ್ಲೇ ಮರೆತು ಹೋಗಿದ್ದರು. ಇದನ್ನು ನೋಡಿದ ಕ್ಯಾಬ್ ಚಾಲಕ ಉತ್ತಮ್, ಈ ಬ್ಯಾಗಿನ ಮಾಲೀಕರನ್ನು ಹುಡುಕಲು ಆರಂಭಿಸಿದ್ದಾರೆ. ಪಾಸ್ಪೋರ್ಟ್ ನಲ್ಲಿರುವ ವಿಳಾಸ ಮೂಲಕ ಗ್ಲೆನ್ ಇವಾನ್ ಅವರ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿರುವ ಸ್ಥಳೀಯರ ಬಳಿಯೂ ಕೇಳಿದ್ರು ಕೂಡ ಯಾರೂ ಕೂಡ ಸರಿಯಾಗಿ ಉತ್ತರಿಸಿಲ್ಲ. ಕೊನೆಗೆ ಗ್ಲೆನ್ ಇವಾನ್ ಅವರ ತಂದೆಯ ಅದೇ ರಸ್ತೆಯಲ್ಲಿ ಸಿಕ್ಕಿದ್ದಾರೆ. ಅವರ ಜತೆಗೆ ಹೋಗಿ ಉತ್ತಮ್ ಬ್ಯಾಗ್ ನೀಡಿದ್ದಾರೆ. ಈ ಬಗ್ಗೆ ಗ್ಲೆನ್ಲಿಂಗ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಬೆಂಗಳೂರಿನ ನಿಜವಾದ ಹೀರೋ ಉತ್ತಮ್, ನಾನು ಮಧ್ಯರಾತ್ರಿ 2.30ರ ವೇಳೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಮನೆಗೆ ಕ್ಯಾಬ್ ಒಂದರಲ್ಲಿ ಬಂದೆ. ತುಂಬಾ ನಿದ್ರೆ ಬರುತ್ತಿದ್ದ ಕಾರಣ, ಕಾರಿನಲ್ಲಿ ಗಾಢವಾಗಿ ನಿದ್ದೆಗೆ ಜಾರಿದೆ. ಈ ವೇಳೆ, ನಿದ್ದೆ ಕಣ್ಣಿನಲ್ಲೇ ಕ್ಯಾಬ್ನಿಂದ ಇಳಿದು ಮನೆಗೆ ಬಂದೆ, ಈ ವೇಳೆ ನನ್ನ ಪಾಸ್ಪೋರ್ಟ್ ಮತ್ತು ಪಿಆರ್ ಕಾರ್ಡ್ ಕಾರಿನಲ್ಲೇ ಮರೆತು ಬಂದಿದ್ದೇನೆ. ಬೆಳಿಗ್ಗೆ 10:30 ರ ವೇಳೆ ಅಪ್ಪ, ನಿನ್ನ ಪಾಸ್ಪೋರ್ಟ್ ಮತ್ತು ಪಿಆರ್ ಕಾರ್ಡ್ ಬ್ಯಾಗ್ ಕಳೆದುಕೊಂಡಿದ್ದೀಯಾ ಎಂದು ಕೇಳಿದ್ದಾರೆ. ಅಲ್ಲಿಯವರೆಗೆ ನನಗೆ ಈ ಬ್ಯಾಗ್ ಕಳೆದು ಹೋಗಿದೆ ಎಂಬುದು ಗೊತ್ತೇ ಇರಲಿಲ್ಲ ಎಂದು ಗ್ಲೆನ್ ಇವಾನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಉತ್ತಮ್ ಅವರು ಪಾಸ್ಪೋರ್ಟ್ ನಲ್ಲಿ ವಿಳಾಸ ಇದ್ದ ಕಾರಣ ಮನೆಯ ಹತ್ತಿರ ಬಂದಿದ್ದಾರೆ. ಆದರೆ ನಮ್ಮ ಮನೆ ಯಾವುದು ಎಂದು ಅವರಿಗೆ ಗೊತ್ತಾಗಿಲ್ಲ. ಅಕ್ಕಪಕ್ಕದ ಮನೆಯವರ ಬಾಗಿಲು ಬಡಿದು, ನಮ್ಮ ಮನೆಯ ವಿಳಾಸ ಕೇಳಿದ್ದಾರೆ. ಅದೃಷ್ಟವಶಾತ್ ಅದೇ ಬೀದಿಯಲ್ಲಿ ನನ್ನ ತಂದೆಯನ್ನು ಭೇಟಿಯಾಗಿದ್ದಾರೆ. ನಂತರ ನಮ್ಮ ಮನೆಗೆ ಬಂದು ನನ್ನ ದಾಖಲೆಗಳನ್ನು ನೀಡಿದ್ದಾರೆ. ಆ ಬ್ಯಾಗ್ನಲ್ಲಿ ಮೌಲ್ಯಯುತವಾದ ದಾಖಲೆಗಳು ಹಾಗೂ ವಸ್ತುಗಳು ಇತ್ತು. ಉತ್ತಮ್ ಅವರ ಪ್ರಾಮಾಣಿಕತೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಗ್ಲೆನ್ ಇವಾನ್ ಹೇಳಿದ್ದಾರೆ.
ಇದನ್ನೂ ಓದಿ: ವ್ಯಾಲೆಂಟೈನ್ಸ್ ಡೇಗೆ ಬೆಂಗಳೂರಿನ ಮಹಿಳೆಯರಿಗೆ ಗುಡ್ ನ್ಯೂಸ್: ನಿಮ್ಮ ಸುರಕ್ಷತೆಗೆ ಬರಲಿದೆ ‘ಸಖಿ ಆಟೋ’
ಈ ಪೋಸ್ಟ್ ಹಂಚಿಕೊಂಡ ನಂತರ ಇನ್ಸ್ಟಾಗ್ರಾಮ್ನಲ್ಲಿ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ಯಾಕ್ ಚಾಲಕನ ಪ್ರಾಮಾಣಿಕತೆಗೆ ಶಬ್ಬಾಷ್ ಎಂದು ಹೇಳಿದ್ದಾರೆ. ಉತ್ತಮ್ – ಪ್ರಾಮಾಣಿಕ ಮತ್ತು ಒಳ್ಳೆಯ ವ್ಯಕ್ತಿಯಂತೆ ಕಾಣಿಸುತ್ತಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಎಂತಹ ಅದ್ಭುತ ಮನುಷ್ಯ. ನಿಮ್ಮ ಪಾಸ್ಪೋರ್ಟ್ ಮತ್ತು ಪಿಆರ್ ಕಾರ್ಡ್ ಕಳೆದುಕೊಂಡರೆ ಎಷ್ಟು ನೋವಾಗುತ್ತಿತ್ತು, ಅಷ್ಟೆ, ನಿಮ್ಮ ಎಲ್ಲಾ ವಸ್ತುಗಳು ಮರಳಿ ನೀಡಿದು ಕೂಡ ಸಂತೋಷವಾಗಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ