AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ವಿಂಡ್ಸನ್ ಮ್ಯಾನರ್ ಜಂಕ್ಷನ್‌ ಬಳಿ ಕಾಮಗಾರಿ; ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ

ಬೆಂಗಳೂರಿನ ವಿಂಡ್ಸನ್ ಮ್ಯಾನರ್ ಜಂಕ್ಷನ್‌ ಬಳಿ ರೈಲ್ವೆ ಇಲಾಖೆಯಿಂದ ಹೈಟ್ ಗೇಜ್ ಕಂಬಿ ಅಳವಡಿಕೆ ಕಾಮಗಾರಿ ನಡೆಯುತ್ತಿರು ಹಿನ್ನಲೆ ಮೇ.21 ರ ರಾತ್ರಿ 11 ಗಂಟೆಯಿಂದ ನಾಳೆ(ಮೇ.22) ಮುಂಜಾನೆ 3 ಗಂಟೆಯವರೆಗೆ ಏರ್​​ರ್ಪೋರ್ಟ್ ರಸ್ತೆಯ ಓಲ್ಡ್ ಹೈಗ್ರೌಂಡ್ಸ್ ಜಂಕ್ಷನ್​ನಿಂದ ಪ್ಯಾಲೇಸ್​​ ಗುಟ್ಟಹಳ್ಳಿವರೆಗೆ ವಾಹನ ಸಂಚಾರ ನಿರ್ಬಂಧಿ(Vehicular traffic restriction) ಸಿ ಆದೇಶ ಹೊರಡಿಸಲಾಗಿದೆ. ಬದಲಿ ಮಾರ್ಗದ ವಿವರ ಇಲ್ಲಿದೆ.

ಬೆಂಗಳೂರು: ವಿಂಡ್ಸನ್ ಮ್ಯಾನರ್ ಜಂಕ್ಷನ್‌ ಬಳಿ ಕಾಮಗಾರಿ; ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ
ಬೆಂಗಳೂರು ಟ್ರಾಫಿಕ್​ ರೂಲ್ಸ್​
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: May 21, 2024 | 9:30 PM

Share

ಬೆಂಗಳೂರು, ಮೇ.21: ವಿಂಡ್ಸನ್ ಮ್ಯಾನರ್ ಜಂಕ್ಷನ್‌ ಬಳಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಏರ್​​ರ್ಪೋರ್ಟ್ ರಸ್ತೆಯ ಓಲ್ಡ್ ಹೈಗ್ರೌಂಡ್ಸ್ ಜಂಕ್ಷನ್​ನಿಂದ ಪ್ಯಾಲೇಸ್​​ ಗುಟ್ಟಹಳ್ಳಿವರೆಗೆ ವಾಹನ ಸಂಚಾರ ನಿರ್ಬಂಧಿ(Vehicular traffic restriction) ಸಿ ಆದೇಶ ಹೊರಡಿಸಲಾಗಿದೆ. ಹೌದು, ರೈಲ್ವೆ ಇಲಾಖೆಯಿಂದ ಹೈಟ್ ಗೇಜ್ ಕಂಬಿ ಅಳವಡಿಕೆ ಸಲುವಾಗಿ ಇಂದು(ಮೇ.21) ರಾತ್ರಿ 11ರಿಂದ ನಾಳೆ(ಮೇ.22) ಬೆಳಗಿನ ಜಾವ 3ರವರೆಗೆ ಸಂಚಾರ ನಿರ್ಬಂಧ ಹೊರಡಿಸಲಾಗಿದ್ದು, ಪರ್ಯಾಯ ಮಾರ್ಗ ಬಳಸಲು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.

ಪರ್ಯಾಯ ಮಾರ್ಗ ಬಳಸಲು ಸಂಚಾರಿ ಪೊಲೀಸರಿಂದ ಸೂಚನೆ

ಬಸವೇಶ್ವರ ಜಂಕ್ಷನ್​​ನಿಂದ ಬಳ್ಳಾರಿ ರಸ್ತೆ ಕಡೆ ಹೋಗುವವರು ಬಸವೇಶ್ವರ ಜಂಕ್ಷನ್, ಓಲ್ಡ್ ಹೈ ಗ್ರೌಂಡ್ ಜಂಕ್ಷನ್, ಕಲ್ಪನಾ ಜಂಕ್ಷನ್, ಎಮ್ ಸಿಸಿ ಕಾಲೇಜು, ವಸಂತನಗರ ಕೆಳ ಸೇತುವೆ, ಚಕ್ರವರ್ತಿ ಲೇಔಟ್, ಬಿಡಿಎ ಅಂಡರ್ ಪಾಸ್, ಬಿಎಸ್ ರಾಜು ರಸ್ತೆ, ಜಟಕಾ ಸ್ಟ್ಯಾಂಡ್ ಮೂಲಕ ಬಳ್ಳಾರಿ ರಸ್ತೆ ಪ್ರವೇಶ ಮಾಡಬಹುದು.

ಇದನ್ನೂ ಓದಿ:ಸಂಚಾರಿ ಪೊಲೀಸ್​​ ಕಾನ್ಸ್​​ ಟೇಬಲ್ ಜೊತೆ ಯುವಕನ ಗಲಾಟೆ; ವಿಡಿಯೋ ವೈರಲ್​

ಸಂಚಾರಕ್ಕೆ ಅವಕಾಶ

ಇನ್ನು ಬಸವೇಶ್ವರ ಜಂಕ್ಷನ್, ಕಲ್ಪನಾ ಜಂಕ್ಷನ್, ಚಂದ್ರಿಕಾ ಜಂಕ್ಷನ್, ಓಲ್ಡ್ ಉದಯ ಟಿವಿ ಜಂಕ್ಷನ್, ಕಂಟೋನ್ಮೆಂಟ್ ಅಂಡರ್ ಪಾಸ್, ಜಯಮಹಲ್ ರಸ್ತೆ, ಮೇಖ್ರಿ ಸರ್ಕಲ್ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಭಾರೀ ವಾಹನಗಳಿಗೆ ಪರ್ಯಾಯ ಮಾರ್ಗ

ಬಸವೇಶ್ವರ ಜಂಕ್ಷನ್ ನಿಂದ ಬಳ್ಳಾರಿ ರಸ್ತೆಗೆ ಸಂಚರಿಸಲು ಮಹರಾಣಿ ಅಂಡರ್ ಪಾಸ್, ಮೈಸೂರ್ ಬ್ಯಾಂಕ್ ಸರ್ಕಲ್, ಉಪ್ಪಾರಪೇಟೆ ಠಾಣೆ ಸಿಗ್ನಲ್, ಶಾಂತಲಾ ಶಿಲ್ಕ್ಸ್ ಜಂಕ್ಷನ್, ರೈಲ್ವೇ ನಿಲ್ದಾಣ ರಸ್ತೆ, ಮಂತ್ರಿ ಮಾಲ್,  ಸಂಪಿಗೆ ರಸ್ತೆ, ಸರ್ಕಲ್ ಮಾರಮ್ಮ, ಯಶವಂತಪುರ ಅಂಡರ್ ಪಾಸ್, ಸದಾಶಿವನಗರ ಪೊಲೀಸ್ ಠಾಣೆ, ಮೇಖ್ರಿ ಸರ್ಕಲ್ ಮೂಲಕ ಹೋಗಬಹುದು.

ರಾಜ್ಯದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ