AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನದೇ ಪೊಲೀಸ್, ನ್ಯಾಯಾಲಯ, ಕಾನೂನು: ಬೆಂಗಳೂರಿನಲ್ಲಿ ಹೀಗೊಂದು ಅಪಾರ್ಟ್​ಮೆಂಟ್ ರಾಜ್ಯ!

ಬೆಂಗಳೂರಿನ ಅಪಾರ್ಟ್​​ಮೆಂಟ್ ಅಸೋಸಿಯೇಷನ್ ಒಂದು ತನ್ನದೇ ಕಾನೂನು, ದಂಡ ವ್ಯವಸ್ಥೆ ಜಾರಿಗೆ ತಂದು ಲಕ್ಷಾಂತರ ರೂ. ವಸೂಲಿ ಮಾಡಿದ್ದು, ಇದೀಗ ಪೊಲೀಸ್ ಕೆಂಗಣ್ಣಿಗೆ ಗುರಿಯಾಗಿದೆ. ಅಕ್ರಮ ವಸ್ತು ಸಾಗಾಟ, ಮಾದಕವಸ್ತು ಸೇವನೆ, ನಿವಾಸಿಗಳ ದುರ್ವರ್ತನೆಗಳಿಗೆ ಅಪಾರ್ಟ್​ಮೆಂಟೇ ಕಾನೂನುಬಾಹಿರವಾಗಿ ದಂಡ ಸಂಗ್ರಹ ಮಾಡಿದೆ. ಸದ್ಯ ಪೊಲೀಸ್ ತನಿಖೆ ಪ್ರಗತಿಯಲ್ಲಿದೆ.

ತನ್ನದೇ ಪೊಲೀಸ್, ನ್ಯಾಯಾಲಯ, ಕಾನೂನು: ಬೆಂಗಳೂರಿನಲ್ಲಿ ಹೀಗೊಂದು ಅಪಾರ್ಟ್​ಮೆಂಟ್ ರಾಜ್ಯ!
ಸಾಂದರ್ಭಿಕ ಚಿತ್ರ
ಗಣಪತಿ ಶರ್ಮಾ
|

Updated on: Dec 18, 2025 | 1:51 PM

Share

ಬೆಂಗಳೂರು, ಡಿಸೆಂಬರ್ 18: ಯಾವುದೇ ಒಂದು ರಾಜ್ಯ, ಸರ್ಕಾರ ಹಾಗೂ ಆಡಳಿತ ಅಂತ ಬಂದಾಗ ಕಾನೂನು, ಪೊಲೀಸರು, ನ್ಯಾಯಾಂಗ ವ್ಯವಸ್ಥೆ ಇತ್ಯಾದಿ ಇರುತ್ತದೆ. ಸಮುದಾಯ, ಸಂಘಟನೆಗಳು, ಪಕ್ಷ ಇತ್ಯಾದಿಗಳಲ್ಲಿ ಆಂತರಿಕ ನಿಯಮಾವಳಿಗಳು ಇರುತ್ತವೆಯಾದರೂ ಅದು ಸರ್ಕಾರ ನಡೆಸುವ ಆಡಳಿತದ ರೀತಿಯಲ್ಲಿ ಇರುವುದಿಲ್ಲಷ್ಟೇ. ಆದರೆ, ಬೆಂಗಳೂರಿನಲ್ಲೊಂದು (Bengaluru) ಅಪಾರ್ಟ್​​ಮಂಟ್ ಮಾತ್ರ ತನ್ನದೇ ಆದ ಕಾನೂನು, ಪೊಲೀಸ್, ನ್ಯಾಯ ವ್ಯವಸ್ಥೆ ಎಲ್ಲವನ್ನೂ ಒಳಗೊಂಡಿದೆ! ಅಷ್ಟೇ ಅಲ್ಲ, ಅಕ್ರಮ ಎಸಗಿದವರಿಂದ ಲಕ್ಷಾಂತರ ರೂಪಾಯಿ ದಂಡವನ್ನೂ ಸಂಗ್ರಹಿಸಿದೆ. ಇದು ಅಚ್ಚರಿಯ ವಿಚಾರ ಆದರೂ ಸತ್ಯ. ಸದ್ಯ ಆ ಅಪಾರ್ಟ್​ಮಂಟ್ ಪೊಲೀಸರ ಕಣ್ಣಿಗೆ ಬಿದ್ದಿದ್ದು, ತನಿಖೆ ಆರಂಭವಾಗಿರುವುದಾಗಿ ವರದಿಯಾಗಿದೆ.

ಸದ್ಯ, ತನ್ನದೇ ಆಡಳಿತ ವ್ಯವಸ್ಥೆ ಮಾಡಿಕೊಂಡು ದಂಡ ಸಂಗ್ರಹ ಮಾಡಿರುವ ‘ಪ್ರಾವಿಡೆಂಟ್ ಸನ್​ವರ್ತ್ ಅಪಾರ್ಟ್​​​ಮೆಂಟ್ ಓನರ್ಸ್ ಅಸೋಸಿಯೇಷನ್​​’ ವಿರುದ್ಧ ವಿಷಲ್ ಬ್ಲೋವರ್ (ಅನಾಮಧೇಯ ದೂರುದಾರ) ನೀಡಿರುವ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

‘ಪ್ರಾವಿಡೆಂಟ್ ಸನ್​ವರ್ತ್ ಅಪಾರ್ಟ್​​​ಮೆಂಟ್ ಓನರ್ಸ್ ಅಸೋಸಿಯೇಷನ್​​’ ಸಂಗ್ರಹಿಸಿರುವ ದಂಡದ ಮೊತ್ತದ ವಿವರ ದೊರೆತಿದ್ದು, ಅದರ ವಿವರವನ್ನೂ ‘ಡೆಕ್ಕನ್ ಹೆರಾಲ್ಡ್’ ಪ್ರಕಟಿಸಿದೆ.

ಅಪಾರ್ಟ್​​ಮೆಂಟ್ ಆಡಳಿತವು ಜುಲೈ 2025 ರಲ್ಲಿ ಅಕ್ರಮ ವಸ್ತುಗಳ ಸಾಗಾಟಕ್ಕಾಗಿ ಏಳು ಮಂದಿ ನಿವಾಸಿಗಳು ಮತ್ತು ಒಬ್ಬ ಸಂದರ್ಶಕರಿಂದ ಪ್ರತ್ಯೇಕವಾಗಿ 30,000 ರೂ., 20,000 ರೂ. ಮತ್ತು 30,000 ರೂ. ದಂಡ ಸಂಗ್ರಹಿಸಿತ್ತು. ಆಗಸ್ಟ್‌ನಲ್ಲಿ, ಮಾದಕವಸ್ತುಗಳನ್ನು ಸೇವಿಸಿದ್ದಕ್ಕಾಗಿ ಅಥವಾ ಅಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಐವರು ನಿವಾಸಿಗಳಿಂದ 30,000 ರೂ., 25,000 ರೂ., 30,000 ರೂ. ಮತ್ತು 30,000 ರೂ. ಸಂಗ್ರಹಿಸಿತ್ತು. ಆಗಸ್ಟ್‌ನಲ್ಲಿ ನ30,000 ರೂ. ದಂಡ ಸಂಗ್ರಹ ಬಾಕಿ ಇದೆ ಎಂದು ಹೇಳಿತ್ತು ಎಂಬುದಾಗಿ ವರದಿ ಉಲ್ಲೇಖಿಸಿದೆ.

ಅಕ್ಟೋಬರ್‌ನಲ್ಲಿ, ಫ್ಲಾಟ್‌ನಲ್ಲಿ ಅಕ್ರಮವಾಗಿ ಮಾದಕ ದ್ರವ್ಯಗಳನ್ನು ಇರಿಸಿಕೊಂಡಿದ್ದಕ್ಕಾಗಿ ಮೂವರು ಸಂದರ್ಶಕರು ಮತ್ತು ಇಬ್ಬರು ನಿವಾಸಿಗಳಿಂದ 50,000 ರೂ, 10,000 ರೂ, 30,000 ರೂ, 25,000 ರೂ ಮತ್ತು 20,000 ರೂ.ಗಳನ್ನು ವಸೂಲಿ ಮಾಡಲಾಗಿತ್ತು.

ಮನೆ ಕೆಲಸದಾಕೆಗೆ ಕಿಸ್ ಮಾಡಿದವನಿಗೆ ಬಿತ್ತು ದಂಡ

ಅಕ್ರಮಗಳಲ್ಲಿ ತೊಡಗಿಕೊಂಡವರಲ್ಲಿ ಹಲವರು ಕಾಲೇಜು ವಿದ್ಯಾರ್ಥಿಗಳಾಗಿದ್ದರು. ಒಬ್ಬ ನಿವಾಸಿ ಮನೆ ಕೆಲಸದಾಕೆಗೆ ಮುತ್ತಿಟ್ಟ ಘಟನೆ ನಡೆದಿತ್ತು. 20,000 ರೂ. ದಂಡ ವಿಧಿಸಿ ಪ್ರಕರಣವನ್ನು ಬಗೆಹರಿಸಿಕೊಳ್ಳಲಾಗಿತ್ತು. ಸದಸ್ಯರ ಮನಸ್ಥಿತಿ ಅಥವಾ ಅಪರಾಧಿಯ ಆರ್ಥಿಕ ಸಾಮರ್ಥ್ಯದ ಆಧಾರದ ಮೇಲೆ ದಂಡ ವಿಧಿಸಲಾಗುತ್ತಿತ್ತು ವಿಷಲ್ ಬ್ಲೋವರ್ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯ್ದೆ (KAOA), 1972 ರ ನಿಬಂಧನೆಗಳು ಮತ್ತು ನಿಯಮಗಳು, 1974 ರ ಅಡಿಯಲ್ಲಿ ಅಪಾರ್ಟ್​​ಮೆಂಟ್ ಬೈಲಾಗಳನ್ನು ಸಿದ್ಧಪಡಿಸಲಾಗಿದೆ. ಆದಾಗ್ಯೂ ಇಂಥ ಚಟುವಟಿಕೆಗಳಿಗೆ ಕಾನೂನು ಪ್ರಕಾರ ಅವಕಾಶವಿಲ್ಲ. ಅಪಾರ್ಟ್​ಮೆಂಟ್ ಬೈಲಾ ಪ್ರಕಾರ, ಆಸ್ತಿಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಓನರ್ಸ್ ಅಸೋಸಿಯೇಷನ್ ಹೊಂದಿದೆ ಮತ್ತು ದಂಡ ವಿಧಿಸುವ ನ್ಯಾಯಾಂಗ ಅಧಿಕಾರ ಹೊಂದಿಲ್ಲ ಎಂದು ವಿಷಲ್ ಬ್ಲೋವರ್ ತಿಳಿಸಿದ್ದಾರೆ.

ಇದನ್ನೂ ಓದಿ: ಹಣ ಇದ್ದವರ ಮನೆಗೆ ಕರೆದು ಚಕ್ಕಂದ, ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್: ಪೊಲೀಸ್ ಹಿಂದೆ ಬಿದ್ದಿದ್ದ ಮಹಿಳೆ ಅಂತಿಂಥವಳಲ್ಲಾ ಗೊತ್ತಾ!

ಸದ್ಯ ಅವರು ನೀಡಿದ ದೂರಿನ ಆಧಾರದಲ್ಲಿ ಎಫ್​ಐಆರ್ ದಾಖಲಿಸಿರುವ ಕುಂಬಳಗೋಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಏನೇ ಅಪರಾಧ ಪ್ರಕರಣಗಳು, ಅಕ್ರಮಗಳು ನಡೆದರೆ ನೇರವಾಗಿ ಪೊಲೀಸರಿಗೆ ತಿಳಿಸಬೇಕೆಂದು ಅಪಾರ್ಟ್​ಮೆಂಟ್ ನಿವಾಸಿಗಳಿಗೆ ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜೈಲಿನಲ್ಲಿ ದರ್ಶನ್ ನೋಡಿ ಖುಷಿಯಿಂದ ವಾಪಸ್ ಹೊರಟ ವಿಜಯಲಕ್ಷ್ಮಿ
ಜೈಲಿನಲ್ಲಿ ದರ್ಶನ್ ನೋಡಿ ಖುಷಿಯಿಂದ ವಾಪಸ್ ಹೊರಟ ವಿಜಯಲಕ್ಷ್ಮಿ
ಸಚಿವ ಸ್ಥಾನಕ್ಕೆ ರಾಜೀನಾಮೆ: ಸ್ಪಷ್ಟನೆ ಕೊಟ್ಟ SS ಮಲ್ಲಿಕಾರ್ಜುನ್
ಸಚಿವ ಸ್ಥಾನಕ್ಕೆ ರಾಜೀನಾಮೆ: ಸ್ಪಷ್ಟನೆ ಕೊಟ್ಟ SS ಮಲ್ಲಿಕಾರ್ಜುನ್
ಸಿದ್ದಾರೂಢರ ಮಹಾರಥೋತ್ಸವದಲ್ಲಿ ಭಕ್ತ ಸಾಗರ: ಎತ್ತ ನೋಡಿದ್ರೂ ಜನವೋ ಜನ
ಸಿದ್ದಾರೂಢರ ಮಹಾರಥೋತ್ಸವದಲ್ಲಿ ಭಕ್ತ ಸಾಗರ: ಎತ್ತ ನೋಡಿದ್ರೂ ಜನವೋ ಜನ
ಜೈಲಿನಲ್ಲೇ ದರ್ಶನ್ ಹುಟ್ಟುಹಬ್ಬ: ವಿಶ್ ಮಾಡಲು ಬಂದ ವಿಜಯಲಕ್ಷ್ಮಿ, ಧನ್ವೀರ್
ಜೈಲಿನಲ್ಲೇ ದರ್ಶನ್ ಹುಟ್ಟುಹಬ್ಬ: ವಿಶ್ ಮಾಡಲು ಬಂದ ವಿಜಯಲಕ್ಷ್ಮಿ, ಧನ್ವೀರ್
ಸಚಿವರ ನೇತೃತ್ವದ ಕೆಡಿಪಿ ಸಭೆಯಲ್ಲಿ ನಿದ್ರೆಗೆ ಜಾರಿದ ಅಧಿಕಾರಿಗಳು
ಸಚಿವರ ನೇತೃತ್ವದ ಕೆಡಿಪಿ ಸಭೆಯಲ್ಲಿ ನಿದ್ರೆಗೆ ಜಾರಿದ ಅಧಿಕಾರಿಗಳು
ಹಂಪಿ ಉತ್ಸವದಲ್ಲಿ ನಟಿ ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ
ಹಂಪಿ ಉತ್ಸವದಲ್ಲಿ ನಟಿ ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ
ರಣಜಿ ಟ್ರೋಫಿ ಸೆಮಿಫೈನಲ್‌; ಸ್ಮರಣೀಯ ಶತಕ ಸಿಡಿಸಿದ ಸ್ಮರಣ್
ರಣಜಿ ಟ್ರೋಫಿ ಸೆಮಿಫೈನಲ್‌; ಸ್ಮರಣೀಯ ಶತಕ ಸಿಡಿಸಿದ ಸ್ಮರಣ್
ಭಾರತದ ವಿರುದ್ಧ ಸೋಲು; ಪಾಕಿಸ್ತಾನದಲ್ಲಿ ಟಿವಿಗಳು ಪುಡಿಪುಡಿ
ಭಾರತದ ವಿರುದ್ಧ ಸೋಲು; ಪಾಕಿಸ್ತಾನದಲ್ಲಿ ಟಿವಿಗಳು ಪುಡಿಪುಡಿ
ಅಪಘಾತಕ್ಕೆ 2 ವರ್ಷದ ಮಗು ಬಲಿ: ರಸ್ತೆ ದುಃಸ್ಥಿತಿ ಖಂಡಿಸಿ ಪ್ರತಿಭಟನೆ
ಅಪಘಾತಕ್ಕೆ 2 ವರ್ಷದ ಮಗು ಬಲಿ: ರಸ್ತೆ ದುಃಸ್ಥಿತಿ ಖಂಡಿಸಿ ಪ್ರತಿಭಟನೆ
ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಮಣಿಶಂಕರ್ ಅಯ್ಯರ್
ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಮಣಿಶಂಕರ್ ಅಯ್ಯರ್