ಕೊನೆಗೂ ಶಿವರಾಮಕಾರಂತ ಫಲಾನುಭವಿಗಳಿಗೆ ಬಿಡಿಎನಿಂದ ಗುಡ್ ನ್ಯೂಸ್; ಗಣಪತಿ ಹಬ್ಬದ ಬಳಿಕ ನಿವೇಶನ ಹಂಚಿಕೆ

ಬಿಡಿಎನ ಪ್ರತಿಷ್ಠಿತ ಬಡಾವಣೆ ಅಂತ ಕರೆಸಿಕೊಳ್ತಿರೋ ಶಿವರಾಮಕಾರಂತ ಬಡಾವಣೆಗೆ ಹಿಡಿದಿದ್ದ ಗ್ರಹಣ ಕೊನೆಗೂ ಬಿಟ್ಟಿದೆ. ಕಳೆದ ಮೂರು ವರ್ಷಗಳಿಂದ ಹೋರಾಟದ ಹಾದಿ ಹಿಡಿದಿದ್ದ ರೈತರಿಗೆ ಬಿಡಿಎ ಕೊಟ್ಟ ಸುಳಿವು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಗಣಪತಿ ಹಬ್ಬದ ಬಳಿಕ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡೋ ಸಾಧ್ಯತೆಯಿದೆ.

ಕೊನೆಗೂ ಶಿವರಾಮಕಾರಂತ ಫಲಾನುಭವಿಗಳಿಗೆ ಬಿಡಿಎನಿಂದ ಗುಡ್ ನ್ಯೂಸ್; ಗಣಪತಿ ಹಬ್ಬದ ಬಳಿಕ ನಿವೇಶನ ಹಂಚಿಕೆ
ಬಿಡಿಎ
Follow us
| Updated By: ಆಯೇಷಾ ಬಾನು

Updated on: Sep 16, 2023 | 6:51 AM

ಬೆಂಗಳೂರು, ಸೆ.16: ಸದಾ ಗೊಂದಲದ ಗೂಡಾಗಿದ್ದ ಶಿವರಾಮ ಕಾರಂತ ನಿವಾಸಿಗಳಿಗೆ(Shivaram Karanth Layout) ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಗಣಪತಿ ಹಬ್ಬದ(Ganesh Chaturthi 2023) ಬಳಿಕ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡೋ ಸಾಧ್ಯತೆಯಿದೆ. ಕಳೆದ ಮೂರು ವರ್ಷಗಳಿಂದ ನಿವೇಶನಕ್ಕಾಗಿ ಓಡಾಡ್ತಿದ್ದವ್ರಿಗೆ ಬಿಡಿಎ(BDA) ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಬಿಡಿಎನ ಪ್ರತಿಷ್ಠಿತ ಬಡಾವಣೆ ಅಂತ ಕರೆಸಿಕೊಳ್ತಿರೋ ಶಿವರಾಮಕಾರಂತ ಬಡಾವಣೆಗೆ ಹಿಡಿದಿದ್ದ ಗ್ರಹಣ ಕೊನೆಗೂ ಬಿಟ್ಟಿದೆ. ಕಳೆದ ಮೂರು ವರ್ಷಗಳಿಂದ ಹೋರಾಟದ ಹಾದಿ ಹಿಡಿದಿದ್ದ ರೈತರಿಗೆ ಬಿಡಿಎ ಕೊಟ್ಟ ಸುಳಿವು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಹೌದು 2008 ರಲ್ಲಿ 3456 ಎಕರೆ ಜಮೀನನ್ನ ಬಿಡಿಎ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಂಡಿತ್ತು. ಆದ್ರೆ 2008 ರ ಆಧಾರದ ಮೇಲೆ ಪರಿಹಾರ ನೀಡೋಕೆ ಮಾಡಿದ್ದ ನಿರ್ಧಾರದ ವಿರುದ್ಧ ಭೂಮಿ ನೀಡಿದ ರೈತರು ಅಸಮಧಾನ ವ್ಯಕ್ತಪಡಿಸಿದ್ರು. ಹಾಗೆನೇ ನೊಟಿಫಿಕೇಷನ್‌ಗೂ ಮೊದಲೆ ಕಟ್ಟಡ ನಿರ್ಮಿಸಿದ್ದವ್ರು ಕೋರ್ಟ್ ಮೆಟ್ಟಿಲೇರಿದ್ರು. ಇದನ್ನ ಪರಿಗಣಿಸಿದ ಸುಪ್ರೀಂ ನ್ಯಾ. ಚಂದ್ರಶೇಖರ್ ಸಮಿತಿ ರಚನೆ ಮಾಡಿ ವಿವಾದ ಇತ್ಯರ್ಥ ಪಡಿಸುವಂತೆ ಸೂಚನೆ ಕೊಟ್ಟಿತ್ತು. ಅದರಂತೆ ಸತತ ಮೂರು ವರ್ಷ ಪರಿಶೀಲನೆ ನಡೆಸಿದ ಸಮಿತಿ ಲೇಔಟ್ ವಿಚಾರದಲ್ಲಿ ಎದ್ದಿದ್ದ ಎಲ್ಲಾ ಗೊಂದಲಗಳನ್ನೂ ನಿವಾರಣೆ ಮಾಡಿದೆ.

ಇದನ್ನೂ ಓದಿ: ಶಿವರಾಮ ಕಾರಂತ ಬಿಡಿಎ ಜಾಗದಲ್ಲಿ ಮರಗಳ ಮೇಲೆ ಪ್ರಭಾವಿಗಳ ಕಣ್ಣು, ನೂರಾರು ಮರಗಳನ್ನು ಕ್ಷಣಾರ್ಧದಲ್ಲಿ ಕೊಚ್ಚಿಹಾಕಿದರು

ಇನ್ನು ನ್ಯಾಮೂರ್ತಿ ಚಂದ್ರಶೇಖರ್ ಸಮಿತಿ ರಚನೆಯಾದ ಬಳಿಕ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಇದ್ದ ಎಲ್ಲಾ ಗೊಂದಲಗಳನ್ನ ಬಗೆಹರಿಸಿದೆ. ಈ ಕುರಿತಂತೆ ಮಾಹಿತಿ ನೀಡಿದ ಸಮಿತಿ ಅಧ್ಯಕ್ಷ ನ್ಯಾ. ಚಂದ್ರಶೇಖರ್, 2008 ರಲ್ಲಿ ಶಿವರಾಮಕಾರಂತ ಬಡಾವಣೆಗೆ ನಿರ್ಮಾಣಕ್ಕಾಗಿ 3456 ಅಧಿಸೂಚನೆ ಹೊರಡಿಸಲಾಗಿತ್ತು. 2018 ಕ್ಕೂ ಮೊದಲು ಕಟ್ಟಡಗಳನ್ನ ನಿರ್ಮಾಣ ಮಾಡಿದ್ದವುಗಳನ್ನ ಸಕ್ರಮ ಮಾಡ್ಬೇಕು ಅಂತ ಸೂಚನೆ ಕೊಟ್ಟ ಹಿನ್ನಲೆಯಲ್ಲಿ 7724 ಅರ್ಜಿ ಸಲ್ಲಿಕೆಯಾಗಿದ್ವು, ಇದ್ರಲ್ಲಿ ಅಳೆದು ತೂಗಿದ ಸಮಿತಿ 7714 ಅರ್ಜಿಗಳ ಪೈಕಿ 5171 ಅರ್ಜಿಗಳನ್ನ ಸಕ್ರಮ ಮಾಡಿದೆ. ಉಳಿದ ಅರ್ಜಿಗಳನ್ನ ವಜಾ ಮಾಡಿದ್ದು, ಬಡಾವಣೆ ನಿರ್ಮಾಣಕ್ಕೆ ಇದ್ದ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದೆ. 5171 ಅರ್ಜಿಗಳಷ್ಟೇ ಅಲ್ದೇ ಬಿಡಿಎ ಅನುಮೋದನೆಗೊಳಿಸಿದ 13 ಖಾಸಗಿ ಬಡಾವಣೆಗಳನ್ನೂ ಸಕ್ರಮಗೊಳಿಸಿದೆ. 3456 ಎಕರೆ ವಿಸ್ತೀರ್ಣದಲ್ಲಿ ಸುಮಾರು 34000 ನಿವೇಶನ ನಿರ್ಮಾಣದ ಗುರಿಯನ್ನ ಬಿಡಿಎ ಹೊಂದಿದ್ದು, ಇದ್ರಲ್ಲಿ ಶೇಕಡಾ 15 ರಷ್ಟು ಜಾಗ ಪಾರ್ಕ್ ಉದ್ಯಾನವನ ನಿರ್ಮಾಣಕ್ಕೆ ಮೀಸಲು ಇಡಬೇಕೆಂದೂ ಸಮಿತಿ ಶಿಫಾರಸ್ಸು ಮಾಡಿದೆ.

ಕಳೆದ 15 ವರ್ಷಗಳಿಂದ ವಾದ ವಿವಾದಗಳಿಂದಲೇ ಖ್ಯಾತಿಗಳಿಸಿದ್ದ ಶಿವರಾಮಕಾರಂತ ಬಡಾವಣೆಯ ಗೊಂದಲಕ್ಕೆ ಇದೀಗ ಬ್ರೇಕ್ ಬಿದ್ದಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಗಣಪತಿ ಹಬ್ಬದ ಬಳಿಕ ನಿವೇಶನ ಖರೀದಿ ಮಾಡುವವರಿಗೆ ಗುಡ್ ನ್ಯೂಸ್ ಸಿಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​