ವಿದ್ಯುತ್​​ ದರ ಇಳಿಸುವಂತೆ ಕೋರಿ ಇಂಧನ ಸಚಿವರಿಗೆ ಪತ್ರ ಬರೆದ ಬೆಂಗಳೂರು ಹೋಟೆಲ್​ ಮಾಲೀಕರ ಸಂಘ

ವಿದ್ಯುತ್ ದರ ಹೆಚ್ಚಳ ಹಿನ್ನಲೆ ಬೃಹತ್ ಬೆಂಗಳೂರು ಹೋಟೆಲ್​ ಮಾಲೀಕರ ಸಂಘದಿಂದ ವಿದ್ಯುತ್​​ ದರ ಇಳಿಸುವಂತೆ ಕೋರಿ ಇಂಧನ ಸಚಿವ ಕೆ.ಜೆ ಜಾರ್ಜ್​ಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದು, ಪ್ರಮುಖ 6 ಅಂಶಗಳ ವಿಚಾರ ಸರ್ಕಾರದ ಗಮನಕ್ಕೆ ತಂದಿದ್ದಾರೆ.

ವಿದ್ಯುತ್​​ ದರ ಇಳಿಸುವಂತೆ ಕೋರಿ ಇಂಧನ ಸಚಿವರಿಗೆ ಪತ್ರ ಬರೆದ ಬೆಂಗಳೂರು ಹೋಟೆಲ್​ ಮಾಲೀಕರ ಸಂಘ
ಪ್ರಾತಿನಿಧಿಕ ಚಿತ್ರ
ಕಿರಣ್ ಹನುಮಂತ್​ ಮಾದಾರ್

Updated on: Jun 17, 2023 | 8:47 AM

ಬೆಂಗಳೂರು: ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆ ಜಾರಿಯಾದ ಬೆನ್ನಲ್ಲೇ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗವು (KERC) ವಿದ್ಯುತ್ ಬಳಕೆ ಶುಲ್ಕವನ್ನು ಪ್ರತಿ ಯೂನಿಟ್ ಗೆ 70 ಪೈಸೆಯಂತೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದು, ಅದರಂತೆ ವಿದ್ಯುತ್ ದರ ಹೆಚ್ಚಳ(Electricity Bill Hike) ಹಿನ್ನಲೆ ಬೃಹತ್ ಬೆಂಗಳೂರು ಹೋಟೆಲ್​ ಮಾಲೀಕರ ಸಂಘದಿಂದ ವಿದ್ಯುತ್​​ ದರ ಇಳಿಸುವಂತೆ ಕೋರಿ ಇಂಧನ ಸಚಿವ ಕೆ.ಜೆ ಜಾರ್ಜ್​ಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.

ಪ್ರಮುಖ 6 ಅಂಶಗಳ ವಿಚಾರ ಸರ್ಕಾರದ ಗಮನಕ್ಕೆ ತಂದ ಬೆಂಗಳೂರು ಹೋಟೆಲ್ ಮಾಲೀಕರ ಸಂಘ

ಇನ್ನು ವಿದ್ಯುತ್ ದರ ಇಳಿಕೆಗೆ ಸಂಬಂಧಿಸಿ 6 ಅಂಶಗಳ ಬಗ್ಗೆ ಪತ್ರದಲ್ಲಿ ಉಲ್ಲೇಖ ಮಾಡಲಾಗಿದ್ದು, ಈ ಕೆಳಗಿನಂತಿದೆ.

1) ವಿದ್ಯುತ್ ದರ ಹೆಚ್ಚಳ ಮುಂದಿನ ಒಂದು ವರ್ಷಕ್ಕೆ ಮುಂದೂಡಬೇಕು.

2) ಸದ್ಯಕ್ಕೆ ಇರುವ ವಿದ್ಯುತ್ ತೆರಿಗೆಯನ್ನು 9 ಪರ್ಸೆಂಟ್ ರಿಂದ 3 ಪರ್ಸೆಂಟ್ ಇಳಿಕೆ ಮಾಡಬೇಕು.

3) ಟ್ರಾನ್ಸ್ ಮಿಷನ್ ಮತ್ತು ಡಿಸ್ಟ್ರಿಬ್ಯುಷನ್ ಗಳಲ್ಲಿ ಆಗುವ ಲಾಸ್ ಕಡಿಮೆ ಮಾಡಿ.

4) ರಾಜ್ಯ ಹಾಗೂ ಕೇಂದ್ರ ಸರ್ಕಾರದ ಇಲಾಖೆಗಳು ಪಾವತಿಸಬೇಕಾದ ಬಾಕಿ ಮೊತ್ತ ಬಡ್ಡಿ ಸಹಿತ ಸಂಗ್ರಹಿಸಬೇಕು.

5) ಪ್ರಿಪೈಡ್ ಮೀಟರ್ ಅಳವಡಿಕೆ ಮಾಡಿ ಗ್ರಾಹಕರ ಠೇವಣಿ ಹಣ ಹಿಂದಿರುಗಿಸಬೇಕು.

6) ಅನಗತ್ಯ ಅಡ್ಮಿನಿಸ್ಟ್ರೇಷನ್ ಖರ್ಚು ವೆಚ್ಚಗಳನ್ನು ಹತೋಟಿಗೆ ತರುವುದು.

ಇವೆಲ್ಲವನ್ನೂ ಪರಿಗಣಿಸಿದ್ದಲ್ಲಿ ಉದ್ಯಮಿಗಳಾದ ನಮಗೂ ವಿದ್ಯುತ್ ಇಲಾಖೆಗೂ ಅನೂಕುಲವಾಗಲಿದೆ. ಇಲ್ಲದಿದ್ದಲ್ಲಿ ಹೊಟೇಲ್ ಉದ್ಯಮಕ್ಕೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಗೆ ಪತ್ರದ ಮೂಲಕ ಹೋಟೆಲ್ ಅಸೋಸಿಯೇಶನ್ ಅವರು ಮನವಿ ಸಲ್ಲಿಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us