AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಬಿಸಿಲ ಬೇಗೆ ಜತೆ ಜನರಿಗೆ ಮತ್ತೊಂದು ಬರೆ: ಜ್ಯೂಸ್, ಎಳನೀರು ಮತ್ತಷ್ಟು ದುಬಾರಿ

ಬೇಸಗೆಯ ಬಿಸಿಲಿನ ಬೇಗೆ ಜತೆಗೆ ಬೆಂಗಳೂರಿನ ಜನತೆಯ ಜೇಬಿಗೆ ಇದೀಗ ದರ ಏರಿಕೆಯ ಬಿಸಿ ಕೂಡ ತಟ್ಟಲಿದೆ. ಬಿಸಿಲಿನ ದಗೆ ತಾಳಲಾರದೆ ಜ್ಯೂಸ್, ಎಳನೀರು ಕುಡಿಯಲು ಹೋದರೆ ಜೇಬು ಸುಡಲಿದೆ! ನಗರದಲ್ಲಿ ತಾಜಾ ಹಣ್ಣಿನ ಜ್ಯೂಸ್ ಹಾಗೂ ಎಳನೀರು ದುಬಾರಿಯಾಗಿದ್ದು, ಯಾವುದರ ದರ ಎಷ್ಟು ಹೆಚ್ಚಾಗಿದೆ ಎಂಬ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಬಿಸಿಲ ಬೇಗೆ ಜತೆ ಜನರಿಗೆ ಮತ್ತೊಂದು ಬರೆ: ಜ್ಯೂಸ್, ಎಳನೀರು ಮತ್ತಷ್ಟು ದುಬಾರಿ
ಸಾಂದರ್ಭಿಕ ಚಿತ್ರ
Poornima Agali Nagaraj
| Edited By: |

Updated on: May 01, 2024 | 8:06 AM

Share

ಬೆಂಗಳೂರು, ಮೇ 1: ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ (Bengaluru Temperature) ಹೆಚ್ಚಳದೊಂದಿಗೆ ನಗರವಾಸಿಗಳು ಹೈರಾಣಾಗಿದ್ದಾರೆ. ನಗರದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದು, ದಗೆ ತಡೆಯಲಾರದೇ ಜನರು ತಂಪು ಪಾನೀಯಗಳತ್ತ (Coll Drinks) ಮುಖ‌ ಮಾಡುತ್ತಿದ್ದಾರೆ.‌ ಮಧ್ಯಾಹ್ನ, ಸಂಜೆಯಾದರೆ ಸಾಕು ಜ್ಯೂಸ್ (Fruit Juce) ಹಾಗೂ ಏಳನೀರಿನ ಅಂಗಡಿಗಳ‌ ಮುಂದೆ ಗ್ರಾಹಕರು ಸರದಿ ನಿಲ್ಲುತ್ತಿದ್ದಾರೆ. ಬೇಡಿಕೆ ಹೆಚ್ಚಾಗಿರುವಂತೆಯೇ ಹಣ್ಣಿನ ಜ್ಯೂಸ್, ಎಳನೀರಿನ ಬೆಲೆ ಗಗನಕ್ಕೆ ಏರಿಕೆಯಾಗಿದೆ.‌ ಕಳೆದ ಎರಡು ಮೂರು ತಿಂಗಳುಗಳಿಗೆ ಹೋಲಿಕೆ ಮಾಡಿದರೆ ಈಗ ಎಳನೀರು ಹಾಗೂ ಜ್ಯೂಸ್ ಬೆಲೆ ಜಾಸ್ತಿಯಾಗಿದೆ.

ಮೊದಲೇ ಹಣ್ಣು – ತರಕಾರಿಗಳ ಬೆಲೆ ಗಗನಕ್ಕೇರಿದೆ. ಬಿಸಿಲ ಬೇಗೆಯ ಕಾರಣ ದಿನದಿಂದ ದಿನಕ್ಕೆ ಗ್ರಾಹಕರು ಎಳನೀರು ಹಾಗೂ ಜ್ಯೂಸ್​​​ಗೆ ಹೆಚ್ಚು ಬೇಡಿಕೆ ಇಡುತ್ತಿರುವುದರಿಂದ ಜ್ಯೂಸ್ ಬೆಲೆ ಜಾಸ್ತಿಯಾಗಿದೆ.

ಕಳೆದ ತಿಂಗಳುಗಳಿಗೆ ಹೋಲಿಕೆ ಮಾಡಿದರೆ ಈಗ ಜ್ಯೂಸ್​​ಗಳ ಬೆಲೆಯಲ್ಲಿ 10 ರಿಂದ 20 ರೂ ರೂ ಏರಿಕೆಯಾಗಿದೆ. ಪ್ರತಿದಿನ ಒಂದೊಂದು ಅಂಗಡಿಗಳಲ್ಲಿಯೂ 500 ರಿಂದ 600 ಗ್ಲಾಸ್ ಜ್ಯೂಸ್ ಮಾರಾಟ ಆಗುತ್ತಿವೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.‌

ಎಷ್ಟಿದೆ ಹಣ್ಣಿನ ಜ್ಯೂಸ್ ಬೆಲೆ?

ಸದ್ಯ ಬೆಂಗಳೂರಿನ ಅಂಗಡಿಗಳಲ್ಲಿ ಆ್ಯಪಲ್ ಜ್ಯೂಸ್ ದರ 60 ರೂ. ಇದ್ದುದು 65ಕ್ಕೆ ಏರಿಕೆಯಾಗಿದೆ. ಪ್ರೊಮೋಗ್ರನೇಟ್ 60 ರೂ. ಇದ್ದುದು 65ಕ್ಕೆ, ಮುಸಂಬಿ ಜ್ಯೂಸ್ 45 ರಿಂದ 50, ಆರೆಂಜ್ 45 ರಿಂದ 55, ಬಾನಾನ ಮಿಲ್ಕ್ ಶೇಕ್ 50 ರಿಂದ 60, ಕ್ಯಾರೆಟ್ ಜ್ಯೂಸ್ 60 ರಿಂದ 65, ವಾಟರ್​ಮೆಲನ್ 45 ರಿಂದ 50, ಫೈನಾಪಲ್ 45 ರಿಂದ 50, ಮಸ್ಕ್ ಮೆಲನ್ 45 ರಿಂದ 50, ಮಿಕ್ಸ್ ಜ್ಯೂಸ್ 45 ರಿಂದ 50, ಡ್ರೈ ಪ್ರೂಟ್ಸ್ ಶೇಕ್ 75 ರಿಂದ 80, ಸಪೋಟ 50 ರಿಂದ 55, ಪಪ್ಪಾಯ ಜ್ಯೂಸ್ 50 ರಿಂದ 55, ಗ್ರೇಫ್ಸ್ ಜ್ಯೂಸ್ 45 ರಿಂದ 50, ಪಲ್ಲಿ ಗ್ರೇಪ್ ಜ್ಯೂಸ್ 40 ರಿಂದ 50, ಕಬ್ಬಿನ ಜ್ಯೂಸ್ 35 ರಿಂದ 40 ಹಾಗೂ ಟೆಂಡರ್ ಕೊಕನಟ್ ಮಿಲ್ಕ್ ಶೇಕ್ 80 ರೂ.ಗೆ ಏರಿಕೆಯಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಏಪ್ರಿಲ್​ ತಿಂಗಳ ಕನಿಷ್ಠ ತಾಪಮಾನ 10 ವರ್ಷಗಳಲ್ಲೇ ಅತ್ಯಧಿಕ!

ಮತ್ತೊಂದೆಡೆ, ನಗರದ ಹಲವು ಕಡೆಗಳಲ್ಲಿ ಎಳನೀರು 50 ರಿಂದ 70 ರೂ. ವರೆಗೂ ಮಾರಾಟವಾಗುತ್ತಿದೆ. ಬೆಲೆ ಏರಿಕೆಯಾದರೂ ಗ್ರಾಹಕರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ ಎನ್ನುತ್ತಿದ್ದಾರೆ ಅಂಗಡಿಗಳ ಮಾಲೀಕರು.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್