ಬೆಂಗಳೂರಲ್ಲಿ ಐವರು ಶಂಕಿತ ಉಗ್ರರ ಬಂಧನ ಪ್ರಕರಣ: ನಜಿರ್​​ಗೆ ಹಣ ತಲುಪಿಸುತ್ತಿದ್ದವ ಜನರಲ್ ಸ್ಟೋರ್ ಮಾಲೀಕ‌‌ !

ರಾಜ್ಯ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಬಂಧಿತ ಐವರು ಶಂಕಿತ ಉಗ್ರರು ವಿಚಾರಣೆ ವೇಳೆ ಮತ್ತಷ್ಟು ಸ್ಫೋಟಕ ವಿಷಯ ಬಾಯಿಬಿಟ್ಟಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಎಲ್‌ಇಟಿ ಉಗ್ರ ನಜೀರ್ ಅಲಿಯಾಸ್ ಉಮ್ಮರ್ ಹಾಜಿಗೆ ಹಣದ ನೆರವು ನೀಡುತ್ತಿದ್ದವನ ಬಗ್ಗೆ ಮಾಹಿತಿ ದೊರೆತಿದೆ.

ಬೆಂಗಳೂರಲ್ಲಿ ಐವರು ಶಂಕಿತ ಉಗ್ರರ ಬಂಧನ ಪ್ರಕರಣ: ನಜಿರ್​​ಗೆ ಹಣ ತಲುಪಿಸುತ್ತಿದ್ದವ ಜನರಲ್ ಸ್ಟೋರ್ ಮಾಲೀಕ‌‌ !
ಸಿಸಿಬಿ ಕಚೇರಿ
Edited By:

Updated on: Aug 13, 2023 | 9:18 AM

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bengaluru) ಮಹಾನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಬಂಧಿತ ಐವರು ಶಂಕಿತ ಉಗ್ರರು (Suspected Terrorists) ವಿಚಾರಣೆ ವೇಳೆ ಮತ್ತಷ್ಟು ಸ್ಫೋಟಕ ವಿಷಯ ಬಾಯಿಬಿಟ್ಟಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಎಲ್‌ಇಟಿ ಉಗ್ರ ನಜೀರ್ ಅಲಿಯಾಸ್ ಉಮ್ಮರ್ ಹಾಜಿಗೆ ಹಣದ ನೆರವು ನೀಡುತ್ತಿದ್ದವನ ಬಗ್ಗೆ ಮಾಹಿತಿ ದೊರೆತಿದೆ. ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿನ ಎಸ್​​ಎಲ್​ವಿ ಜನರಲ್ ಸ್ಟೋರ್ (General Store) ಮಾಲೀಕ ನಜೀರ್​​​ಗೆ ಹಣ ತಲುಪಿಸುತ್ತಿದ್ದನು.

ಎಸ್​​ಎಲ್​ವಿ ಜನರಲ್ ಸ್ಟೋರ್ ಮಾಲೀಕನಿಗೆ ಕಳೆದ ಎಂಟು ತಿಂಗಳಿಂದ ಬಂಧಿತ ಐವರು ಶಂಕಿತರು ಹಣ ನೀಡುತ್ತಿದ್ದರು. ಹೀಗೆ ಶಂಕಿತ ಉಗ್ರರು ನೀಡಿದ ಲಕ್ಷಾಂತರ ಹಣವನ್ನು ಅಧಿಕಾರಿಗಳ ಮುಖಾಂತರ ಸ್ಟೋರ್​ ಮಾಲಿಕ ನಜೀರ್​​​ಗೆ ತಲುಪಿಸುತ್ತಿದ್ದನು. ಎಷ್ಟು‌ ಲಕ್ಷ ಹಣ ನೀಡಿದ್ದಾರೆ ಎನ್ನುವುದರ ಬಗ್ಗೆ ತಿಳಿಯಲು ಸಿಸಿಬಿ ಅಧಿಕಾರಿಗಳು ಜನರಲ್ ಸ್ಟೋರ್ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಜುನೈದ್ ನೀಡಿದ ಹಣವನ್ನು ಶಂಕಿತ ಉ್ರಗರು ಜನರಲ್ ಸ್ಟೋರ್ ಮಾಲೀಕನಿಗೆ ನೀಡಿ ನಾಸೀರ್​ ಎಂದು ಹೆಸರು ಹೇಳುತ್ತಿದ್ದರಂತೆ. ಬಳಿಕ ಜನರಲ್ ಸ್ಟೋರ್ ಮಾಲೀಕನ ಶೇ 20 ರಷ್ಟು ಕಮೀಷನ್ ತಾನು ಇಟ್ಟುಕೊಂಡು ಉಳಿದ ಹಣವನ್ನು ನಜೀರ್​ಗೆ ಕೊಡುತ್ತಿದ್ದನು. ಸಿಸಿಬಿ ವಿಚಾರಣೆ ವೇಳೆ ಜನರಲ್ ಸ್ಟೋರ್ ಮಾಲೀಕನ ಈ ವಿಚಾರ ಬಾಯಿಬಿಟ್ಟಿದ್ದಾನೆ. ಸದ್ಯ ಸಿಸಿಬಿ ಅಧಿಕಾರಿಗಳು ಜನರಲ್ ಸ್ಟೋರ್ ಮಾಲೀಕನಿಂದ ನ್ಯಾಯಾಲಯದ 164 ಅಡಿಯಲ್ಲಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಿಚಾರಣೆ ವೇಳೆ ಸಿಸಿಬಿ ಮುಂದೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಶಂಕಿತ ಉಗ್ರರು

ಇನ್ನು ಜುನೈದ್ ಈಗಲೂ ದುಬೈನಲ್ಲಿ ಇರೋದರ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಜುನೈಲ್ ಜೊತೆಯಲ್ಲೇ ಸಲ್ಮಾನ್ ಕೂಡ ಇದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶಂಕಿತ ಉಗ್ರ ಸಲ್ಮಾನ್ ಗ್ರನೇಡ್ ತಂದು ಶಂಕಿತರಿಗೆ ಕೊಟ್ಟಿದನು. ಅಲ್ಲದೇ ಗ್ರನೇಡ್ ಅನ್ನ ಹೇಗೆ ಬಳಸೋದ್ರ ಬಗ್ಗೆ ಮಾಹಿತಿ ನೀಡಿದ್ದನಂತೆ.
ಇತ್ತ ಯಾವಾಗ ಶಂಕಿತರು ಬಂಧಿತರಾದು ಆ ದಿನವೇ ದುಬೈಗೆ ತೆರಳಿದ್ದಾನೆ. ಈ ಬಗ್ಗೆ ಮಾಹಿತಿ ಕಲೆಹಾಕಿದ್ದು, ಜುನೈದ್ ಹಾಗೂ ಸಲ್ಮಾನ್ ಪತ್ತೆಗೆ ಪೊಲೀಸರು ರಾಷ್ಟ್ರೀಯ ತನಿಖಾ ಸಂಸ್ಥೆಗಳ ಸಹಾಯ ಪಡೆಯಲು ಚಿಂತಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:18 am, Sun, 13 August 23