AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಂಕ್​ನ ಡ್ರಾಫ್ಟ್ ಬಾಕ್ಸ್​ನಲ್ಲಿದ್ದ ಚೆಕ್​ಗಳು ಮಂಗಮಾಯ: ಕದ್ದ ಚೆಕ್ ಏನು ಮಾಡ್ತಾರೆ ಗೊತ್ತಾ? ನಿಜಕ್ಕೂ ಶಾಕ್ ​ಆಗ್ತೀರಾ

ಬಿಹಾರ, ಮಹಾರಾಷ್ಟ್ರದಲ್ಲಿ ವರದಿಯಾಗಿದ್ದ ಚೆಕ್​ ಕಳ್ಳತನ ಪ್ರಕರಣ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ನಗರದ ಐಸಿಸಿಐ ಬ್ಯಾಂಕ್‌ನ ಎರಡು ಶಾಖೆಗಳಲ್ಲಿ ಚೆಕ್ ಹಾಕುವ ನೆಪದಲ್ಲಿ ಬಂದು ಗ್ರಾಹಕರ ಸುಮಾರು 50ಕ್ಕೂ ಹೆಚ್ಚು ಚೆಕ್​​ ಕಳ್ಳತನ ಮಾಡಿದ್ದಾರೆ. ಕದ್ದ ಚೆಕ್​ಗಳಿಂದ ಕಳ್ಳರು ಹಣ ಹೇಗೆ ವಿತ್ ಡ್ರಾ ಮಾಡಿಕೊಳ್ಳುತ್ತಾರಾ ಅಂತ ಕೇಳಿದರೆ ದಂಗಾಗುತ್ತೀರಾ.

ಬ್ಯಾಂಕ್​ನ ಡ್ರಾಫ್ಟ್ ಬಾಕ್ಸ್​ನಲ್ಲಿದ್ದ ಚೆಕ್​ಗಳು ಮಂಗಮಾಯ: ಕದ್ದ ಚೆಕ್ ಏನು ಮಾಡ್ತಾರೆ ಗೊತ್ತಾ? ನಿಜಕ್ಕೂ ಶಾಕ್ ​ಆಗ್ತೀರಾ
ಪ್ರಾತಿನಿಧಿಕ ಚಿತ್ರ
ಪ್ರಜ್ವಲ್​ ಕುಮಾರ್ ಎನ್​ ವೈ
| Updated By: ಗಂಗಾಧರ​ ಬ. ಸಾಬೋಜಿ|

Updated on:Jul 04, 2025 | 12:13 PM

Share

ಬೆಂಗಳೂರು, ಜುಲೈ 04: ಬ್ಯಾಂಕ್ ಹೊರಗಡೆಯಿರುವ ಚೆಕ್ (Cheques) ಡೆಪಾಸಿಟ್ ಡ್ರಾಫ್ಟ್ ಬಾಕ್ಸ್​​ನಲ್ಲಿದ್ದ ಚೆಕ್​ಗಳನ್ನು ಖದೀಮರು ​ಕಳ್ಳತನ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆ ಮೂಲಕ ಬೆಂಗಳೂರಿನಲ್ಲಿ ಇದೆ ಮೊದಲ ಬಾರಿಗೆ ಕಳ್ಳರು (thieves) ಚೆಕ್ ಕದಿದ್ದಾರೆ. ಜೂನ್ 28, 29ರಂದು ಎಂಜಿ ರೋಡ್​ ಮತ್ತು ಜಿಬಿ ನಗರ ಐಸಿಐಸಿಐ ಬ್ಯಾಂಕ್​ನ ಎರಡು ಬ್ರಾಂಚ್​ಗಳಲ್ಲಿ ಚೆಕ್ ಹಾಕುವ ನೆಪದಲ್ಲಿ ಬಂದು ಗ್ರಾಹಕರದ ಸುಮಾರು 50ಕ್ಕೂ ಹೆಚ್ಚು ಚೆಕ್​​ಗಳನ್ನು ಕಳ್ಳತನ ಮಾಡಿದ್ದಾರೆ. ಹೀಗೆ ಚೆಕ್ ಕದ್ದ ಬಳಿಕ ಕಳ್ಳರು ಹಣ ಹೇಗೆ ವಿತ್ ಡ್ರಾ ಮಾಡುತ್ತಾರೆ ಅಂತ ಕೇಳಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಿ.

ಬ್ಯಾಂಕ್​ಗೆ ಸಾಲು ಸಾಲು ರಜೆ ಇದ್ದಾಗಲೇ ಪಕ್ಕಾ ಪ್ಲ್ಯಾನ್​ ಮಾಡಿ ಖದೀಮರು ಕಳ್ಳತನ ಮಾಡಿದ್ದಾರೆ. ಘಟನೆ ಹಿನ್ನಲೆ ಈಗಾಗಲೇ ಬ್ರಾಂಚ್ ಮ್ಯಾನೇಜರ್ ದೂರು ನೀಡಿದ್ದು, ಅಶೋಕ್ ನಗರ ಹಾಗೂ ಜೆಬಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೆಕ್ ಕದ್ದು ಏನು ಮಾಡುತ್ತಾರೆ ಗೊತ್ತಾ?

ಕದ್ದ ಚೆಕ್ ಅನ್ನು ಕೆಮಿಕಲ್ ಮೂಲಕ ಇಂಕ್​ನಲ್ಲಿ ಬರೆದಿದ್ದ ಅಕ್ಷರಗಳನ್ನು ಅಳಿಸುತ್ತಾರೆ. ಈ ರೀತಿ ಮಾಡುವುದನ್ನು ಕೆಮಿಕಲ್ ವಾಶಿಂಗ್ ಅಂತ ಕರೆಯುತ್ತಾರೆ. ಕೆಮಿಕಲ್ ಮೂಲಕ ಸಹಿ ಒಂದನ್ನ ಬಿಟ್ಟು ಎಲ್ಲಾ ಅಕ್ಷರ ಅಳಿಸಲಾಗುತ್ತೆ. ಬಳಿಕ ತಮಗೆ ಬೇಕಾದ ಹೆಸರು ಬರೆದು ಹಣ ವಿತ್ ಡ್ರಾ ಮಾಡುತ್ತಾರೆ.

ಇದನ್ನೂ ಓದಿ: ಮಂಗಳೂರು: ಮಕ್ಕಳು ಡ್ರಗ್ ಅಡಿಕ್ಟ್ ಆಗಿದ್ದಾರೆಂದು ಪೋಷಕರಿಂದಲೇ ಪೊಲೀಸರಿಗೆ ದೂರು! ಆಮೇಲೇನಾಯ್ತು?

ಡ್ರಾಫ್ಟ್ ಬಾಕ್ಸ್​ನಲ್ಲಿ ಚೆಕ್ ಹಾಕಿದವನಿಗೆ ಖಾತೆಯಿಂದ ಹಣ ಕಡಿತವಾದರೆ ತಕ್ಷಣ ಗೊತ್ತಾಗಲ್ಲ. ತಾವು ಚೆಕ್​ನಲ್ಲಿ ಬರೆದು ಖಾತೆದಾರರು ಹಣ ಬಂದಿಲ್ಲ ಎಂದು ಹೇಳಿದಾಗಲೇ ವಿಚಾರ ತಿಳಿಯುತ್ತೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲೆಗೆ ವರದಾನವಾದ ಸಚಿವ ಸಂಪುಟ ಸಭೆ: ಸಿಕ್ತು ಭರಪೂರ ಯೋಜನೆಗಳು

ಬ್ಯಾಂಕ್​ಗೆ ಸಾಲು ಸಾಲು ರಜೆ ಇದ್ದಾಗಲೇ ಕಳ್ಳತನ ಮಾಡಲಾಗುತ್ತದೆ. ಏಕೆಂದರೆ ಕದ್ದ ಚೆಕ್ ಅನ್ನು ಕೆಮಿಕಲ್ ಬಳಸಿ ವಾಶ್ ಮಾಡಲು ಸಮಯ ಸಿಗುತ್ತೆ. ಬ್ಯಾಂಕ್ ಓಪನ್ ಆಗುತ್ತಿದ್ದಂತೆ ಬೇರೆ ಕಡೆ ಹೋಗಿ ಹಣ ವಿತ್ ಡ್ರಾ ಮಾಡಿಕೊಳ್ಳುತ್ತಾರೆ. ದೂರು ನೀಡಿ ಬ್ಲಾಕ್ ಮಾಡುವ ಮುನ್ನವೇ ಹಣ ಖದೀಮರ ಕೈ ಸೇರಿರುತ್ತೆ. ಈ ಹಿಂದೆ ಬಿಹಾರ, ಮಹಾರಾಷ್ಟ್ರದಲ್ಲಿ ಇಂತಹ ಪ್ರಕರಣ ವರದಿಯಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:37 am, Fri, 4 July 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ