ಅಮಿತ್ ಶಾ
Image Credit source: outlookindia.com
ಮುಖ್ಯಾಂಶಗಳು
- ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಬೆಂಗಳೂರಿನ ಹಲವು ಕಾರ್ಯಕ್ರಮಗಳಲ್ಲಿ ಭಾಗಿ.
- ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ನಗರದ ಹಲವೆಡೆ ರಸ್ತೆ ಸಂಚಾರ ನಿರ್ಬಂಧ.
- ನಿರ್ಬಂಧ ಇರುವ ರಸ್ತೆಗಳು, ಪರ್ಯಾಯ ಮಾರ್ಗದ ವಿವರ ಬಿಡುಗಡೆ ಮಾಡಿದ ಸಂಚಾರ ಪೊಲೀಸರು.
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು (ಮಾರ್ಚ್ 23) ರಾತ್ರಿ ಬೆಂಗಳೂರಿಗೆ (Bengaluru) ಆಗಮಿಸಲಿದ್ದು, ಚುನಾವಣಾ ಪ್ರಚಾರವೂ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಶುಕ್ರವಾರ ಭಾಗವಹಿಸಲಿದ್ದಾರೆ. ಹೀಗಾಗಿ ಕೆಲವು ಮಾರ್ಗಗಳಲ್ಲಿ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ. ಕೆಲವು ಮಾರ್ಗಗಳಲ್ಲಿ ನಿರ್ದಿಷ್ಟ ಅವಧಿಗೆ ವಾನಹ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ವಾಹನ ಸವಾರರು ಹಾಗೂ ಸಾರ್ವಜನಿಕರು ಗಮನ ಹರಿಸುವಂತೆ ಬೆಂಗಳೂರು ನಗರ ಸಂಚಾರ ಪೊಲೀಸರು (Bengaluru Traffic Police) ಪ್ರಕಟಣೆ ಹೊರಡಿಸಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಈ ಕೆಳಗೆ ಉಲ್ಲೇಖಿಸಿರುವ ಮಾರ್ಗಗಳಲ್ಲಿ ಸಂಚರಿಸದಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
- ಹಳೆ ವಿಮಾನ ನಿಲ್ದಾಣ ರಸ್ತೆ
- ಮೈಸೂರು ರಸ್ತೆ
- ಎನ್ಆರ್ ರಸ್ತೆ
- ನೃಪತುಂಗ ರಸ್ತೆ
- ಶೇಷಾದ್ರಿ ರಸ್ತೆ
- ಅರಮನೆ ರಸ್ತೆ
- ರೇಸ್ಕೋರ್ಸ್ ರಸ್ತೆ
- ಕೆಂಗೇರಿಯಿಂದ ಕೊಮ್ಮಘಟ್ಟ ರಸ್ತೆ
ಕೆಲವು ರಸ್ತೆಗಳಲ್ಲಿ ಬೆಳಗ್ಗೆ 6ರಿಂದ ಸಂಜೆ 4ರ ವರೆಗೆ ಸಂಚಾರ ನಿರ್ಬಂಧ
ಇನ್ನು ಕೆಲವು ರಸ್ತೆಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 4ರ ವರೆಗೆ ಲಘು, ಮಧ್ಯಮ ಹಾಗೂ ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ರಸ್ತೆಗಳ ವಿವರ ಹೀಗಿದೆ;
- ಟೌನ್ಹಾಲ್ನಿಂದ ಎನ್ಆರ್ ರಸ್ತೆ, ಮೈಸೂರು ರಸ್ತೆ ಕಡೆಗೆ
- ನಾಯಂಡಹಳ್ಳಿಯಿಂದ ನಗರದ ಕಡೆಗೆ ಮತ್ತು ಕೆಂಗೇರಿ ಕಡೆಗೆ
- ಕುಂಬಳಗೋಡಿನಿಂದ ಕೆಂಗೇರಿ (ನಗರದ ಕಡೆಗೆ)
ಪರ್ಯಾಯ ಮಾರ್ಗಗಳು ಹೀಗಿವೆ
- ಮೈಸೂರು ರಸ್ತೆ ಕಡೆಗೆ ತೆರಳಲು ಸರಕು ಸಾಗಣೆ ವಾಹನಗಳು ಎನ್ಆರ್ ರಸ್ತೆ ಬದಲಾಗಿ ಲಾಲ್ಬಾಗ್ ರಸ್ತೆ ಮೂಲಕ ಹೊಸೂರು ರಸ್ತೆ ನೈಸ್ ರಸ್ತೆ ಮೂಲಕ ಸಂಚರಿಸಲು ಸೂಚಿಸಲಾಗಿದೆ.
- ನಾಯಂಡಹಳ್ಳಿ ಜಂಕ್ಷನ್ನಿಂದ ನಗರದತ್ತ ತೆರಳುವ ಸರಕು ಸಾಗಣೆ ವಾಹನಗಳು ನಾಗರಭಾವಿ ಹಾಗೂ ಸುಮನಹಳ್ಳಿ ರಸ್ತೆ ಮೂಲಕ ಸಾಗುವಂತೆ ಸೂಚಿಸಲಾಗಿದೆ.
- ನಗರದಿಂದ ಕುಂಬಳಗೋಡು ಮತ್ತು ಕೆಂಗೇರಿ ಕಡೆಗೆ ಸಾಗುವ ಸರಕು ಸಾಗಣೆ ವಾಹನಗಳು ನೈಸ್ ರಸ್ತೆ ಮೂಲಕ ಸಂಚರಿಸಬಹುದು ಎಂದು ಸಲಹೆ ನೀಡಲಾಗಿದೆ.
ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಹಲವು ಪ್ರದೇಶಗಳಿಗೆ ಭೇಟಿ ನೀಡಲಿದ್ದು, ಆ ನಂತರ 26ರಂದು ಅಮಿತ್ ಶಾ ಮತ್ತೆ ರಾಜ್ಯಕ್ಕೆ ಬರಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ