ಬೆಂಗಳೂರು ವಿಶಾಖಪಟ್ಟಣ ವಿಶೇಷ ರೈಲು ಅವಧಿ ವಿಸ್ತರಣೆ: ಇನ್ಮುಂದೆ ನಾಯಂಡಹಳ್ಳಿಯಲ್ಲಿ ಈ 4 ರೈಲುಗಳಿಗೆ ಇರುತ್ತೆ ನಿಲುಗಡೆ

ಎಸ್​​ಎಂವಿಟಿ ಬೆಂಗಳೂರು ಹಾಗೂ ವಿಶಾಖಪಟ್ಟಣ ವಿಶೇಷ ರೈಲು ಸಂಚಾರವನ್ನು ಹೋಳಿಹಬ್ಬದ ಕಾರಣ ಮಾರ್ಚ್​​ 30 ರ ವರೆಗೆ ವಿಸ್ತರಣೆ ಮಾಡಲಾಗಿದೆ. ಮತ್ತೊಂದೆಡೆ, ಇಂದಿನಿಂದ ಜಾರಿಗೆ ಬರುವಂತೆ ಬೆಂಗಳೂರಿನ ನಾಯಂಡಹಳ್ಳಿ ನಿಲ್ದಾಣದಲ್ಲಿ ಪ್ರಮುಖ ನಾಲ್ಕು ರೈಲುಗಳಿಗೆ ನಿಲುಗಡೆ ಕಲ್ಪಿಸಲಾಗಿದೆ. ಆ ರೈಲುಗಳು ಯಾವುವೆಲ್ಲ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು ವಿಶಾಖಪಟ್ಟಣ ವಿಶೇಷ ರೈಲು ಅವಧಿ ವಿಸ್ತರಣೆ: ಇನ್ಮುಂದೆ ನಾಯಂಡಹಳ್ಳಿಯಲ್ಲಿ ಈ 4 ರೈಲುಗಳಿಗೆ ಇರುತ್ತೆ ನಿಲುಗಡೆ
ಸಾಂದರ್ಭಿಕ ಚಿತ್ರ

Updated on: Feb 16, 2026 | 7:44 AM

ಬೆಂಗಳೂರು, ಫೆಬ್ರವರಿ 16: ಹೋಳಿ ಹಬ್ಬದ (Holi Festival) ಹಿನ್ನೆಲೆ ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿವಾರಣೆಗೆ ಭಾರತೀಯ ರೈಲ್ವೆ (Indian Railways) ಮಹತ್ವದ ಕ್ರಮ ಕೈಗೊಂಡಿದೆ. ವಿಶಾಖಪಟ್ಟಣ ಮತ್ತು ಎಸ್​ಎಂವಿಟಿ ಬೆಂಗಳೂರು ನಡುವೆ ಸಂಚರಿಸುವ ವಿಶೇಷ ರೈಲು ಸೇವೆಯ ಅವಧಿಯನ್ನು ವಿಸ್ತರಿಸಿದೆ. ರೈಲು ಸಂಖ್ಯೆ 08581 ಬೆಂಗಳೂರು ಕಡೆಗೆ ಬರುವ ವಿಶಾಖಪಟ್ಟಣಂ–ಎಸ್‌ಎಂವಿಟಿ ಬೆಂಗಳೂರು ವಾರಾಂತ್ಯ ಎಕ್ಸ್‌ಪ್ರೆಸ್‌ (ಭಾನುವಾರ ಸಂಚಾರ) ಅನ್ನು ಮಾರ್ಚ್ 29ರವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ ರೈಲು ಸಂಖ್ಯೆ 08582 ಎಸ್‌ಎಂವಿಟಿ ಬೆಂಗಳೂರು–ವಿಶಾಖಪಟ್ಟಣಂ ವಾರಾಂತ್ಯ ಎಕ್ಸ್‌ಪ್ರೆಸ್‌ (ಸೋಮವಾರ ಸಂಚಾರ) ಮಾರ್ಚ್ 30ರವರೆಗೆ ಓಡಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ನಾಲ್ಕು ರೈಲುಗಳಿಗೆ ಇನ್ಮುಂದೆ ನಾಯಂಡಹಳ್ಳಿಯಲ್ಲಿ ನಿಲುಗಡೆ

ಇಂದಿನಿಂದ ಜಾರಿಗೆ ಬರುವಂತೆ ಬೆಂಗಳೂರಿನ ನಾಯಂಡಹಳ್ಳಿ ನಿಲ್ದಾಣದಲ್ಲಿ ನಾಲ್ಕು ರೈಲುಗಳಿಗೆ ಪ್ರಯೋಗಾತ್ಮಕವಾಗಿ ಒಂದು ನಿಮಿಷದ ನಿಲುಗಡೆ ನೀಡಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ನಾಯಂಡಹಳ್ಳಿಯಲ್ಲಿ ನಿಲುಗಡೆ ಇರುವ ರೈಲುಗಳು

  • ರೈಲು ಸಂಖ್ಯೆ 16215 ಮೈಸೂರು-ಕೆಎಸ್‌ಆರ್ ಬೆಂಗಳೂರು ಚಾಮುಂಡಿ ಎಕ್ಸ್‌ಪ್ರೆಸ್ ಬೆಳಿಗ್ಗೆ 8.45ಕ್ಕೆ ಆಗಮಿಸುತ್ತದೆ.
  • ರೈಲು ಸಂಖ್ಯೆ 16216 ಕೆಎಸ್‌ಆರ್ ಬೆಂಗಳೂರು–ಮೈಸೂರು ಚಾಮುಂಡಿ ಎಕ್ಸ್‌ಪ್ರೆಸ್ ಸಂಜೆ 6.39ಕ್ಕೆ ಆಗಮಿಸುತ್ತದೆ.
  • ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ ಮಧ್ಯಾಹ್ನ 3.16ಕ್ಕೆ ಆಗಮಿಸುತ್ತದೆ.
  • ರೈಲು ಸಂಖ್ಯೆ 17308 ಬಾಗಲಕೋಟೆ-ಮೈಸೂರು ಬಸವ ಎಕ್ಸ್‌ಪ್ರೆಸ್ ಬೆಳಿಗ್ಗೆ 8.19ಕ್ಕೆ ಆಗಮಿಸುತ್ತದೆ.
  • ರೈಲು ಸಂಖ್ಯೆ 16235 ಟುಟಿಕೋರಿನ್-ಮೈಸೂರು ಎಕ್ಸ್‌ಪ್ರೆಸ್ ಬೆಳಿಗ್ಗೆ 6.49ಕ್ಕೆ ಆಗಮಿಸುತ್ತದೆ.
  • ರೈಲು ಸಂಖ್ಯೆ 16236 ಮೈಸೂರು-ಟುಟಿಕೋರಿನ್ ಎಕ್ಸ್‌ಪ್ರೆಸ್ ರಾತ್ರಿ 8.14ಕ್ಕೆ ಆಗಮಿಸುತ್ತದೆ.
  • ರೈಲು ಸಂಖ್ಯೆ 16535 ಮೈಸೂರು-ಫಂಡರಾಪುರ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ಸಂಜೆ 5.40ಕ್ಕೆ ಆಗಮಿಸುತ್ತದೆ.
  • ರೈಲು ಸಂಖ್ಯೆ 16536 ಫಂಡರಾಪುರ–ಮೈಸೂರು ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ಬೆಳಿಗ್ಗೆ 7.44ಕ್ಕೆ ಆಗಮಿಸುತ್ತದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಈ ನಿಲುಗಡೆಗಳನ್ನು ಪ್ರಾಯೋಗಿಲಕವಾಗಿ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ