AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ ಪರೀಕ್ಷಾ ವರದಿ ಪರಿಶೀಲನೆಗೆ​ ಇಲ್ಲಿದೆ ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್

ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದ ಯುಆರ್​ಎಲ್​ ಬಳಸಿ ನೀವು ನಿಮ್ಮ ಕೊವಿಡ್​ ಪರೀಕ್ಷಾ ವರದಿಯನ್ನು ಮನೆಗಳಲ್ಲಿ ಕುಳಿತೇ ನೋಡಬಹುದು.​ ಪರೀಕ್ಷಾ ವರದಿಯನ್ನು ಡೌನ್​ಲೋಡ್​ ಮಾಡಲು ಕೂಡ ಅವಕಾಶ ಇದೆ.

ಕೊವಿಡ್​ ಪರೀಕ್ಷಾ ವರದಿ ಪರಿಶೀಲನೆಗೆ​ ಇಲ್ಲಿದೆ ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on:Jan 12, 2022 | 11:40 AM

ದೆಹಲಿ: ಭಾರತದಲ್ಲಿ ಕೊರೊನಾ ಮೂರನೇ ಅಲೆ ತೀವ್ರತೆ ಪಡೆಯುತ್ತಿದೆ ಹಾಗೂ ಒಮಿಕ್ರಾನ್ (omicron)​ ರೂಪಾಂತರಿಯ ಅಪಾಯಕಾರಿ ವರ್ತನೆ ಬಗ್ಗೆ ತಜ್ಞರು ಎಚ್ಚರಿಸಿರುವುದರಿಂದ ಲಸಿಕೆ ವಿತರಣೆಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಅಲ್ಲದೇ ಕೊರೊನಾ ಮೂರನೇ ಅಲೆಯ ತೀವ್ರತೆಯನ್ನು ಅರಿತ ರಾಜ್ಯ ಸರ್ಕಾರ ಜನವರಿ 3 ರಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುತ್ತಿದೆ. ಜತೆಗೆ ಮೂರನೇ ಡೋಸ್​ ಅಥವಾ ಬೂಸ್ಟರ್​ ಡೋಸ್ (Booster dose)  ಕೂಡ ಜನವರಿ 10ರಿಂದ ನೀಡಲಾಗುತ್ತಿದೆ. ಇದೀಗ ಕೊವಿಡ್​ ಪರೀಕ್ಷಾ ವರದಿಯನ್ನು ನೋಡಲು ಮತ್ತು ವರದಿಯನ್ನು ಮುದ್ರಿಸಲು ಕರ್ನಾಟಕ ಸರ್ಕಾರ ಅಧಿಕೃತವಾಗಿ ವೆಬ್​ಸೈಟ್​ ಬಿಡುಗಡೆ ಮಾಡಿದೆ.

ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದ ಯುಆರ್​ಎಲ್​ ಬಳಸಿ ನೀವು ನಿಮ್ಮ ಕೊವಿಡ್​ ಪರೀಕ್ಷಾ ವರದಿಯನ್ನು ಮನೆಗಳಲ್ಲಿ ಕುಳಿತೇ ನೋಡಬಹುದು.​ ಪರೀಕ್ಷಾ ವರದಿಯನ್ನು ಡೌನ್​ಲೋಡ್​ ಮಾಡಲು ಕೂಡ ಅವಕಾಶ ಇದೆ.

ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದ ಯುಆರ್​ಎಲ್​:

http://covid.karnataka.gov.in/service1

ಕರ್ನಾಟಕ ರಾಜ್ಯ ಕೊವಿಡ್ ವಾರ್ ರೂಮ್ ಹೆಸರಿನಲ್ಲಿ ಈ ವೆಬ್​ಸೈಟ್​ ಇದ್ದು, ನಿಮ್ಮ ಮೊಬೈಲ್​ ನಂಬರ್, 13 ಡಿಜಿಟ್​ನ ಎಸ್​ಆರ್​ಎಫ್ (SRF)​ ಐಡಿ ಹಾಕಿ. ನಿಮ್ಮನ್ನು ಪರೀಕ್ಷಿಸಿದ ಲ್ಯಾಬ್ ಫಲಿತಾಂಶವನ್ನು ಐಸಿಎಂಆರ್​ ಪೋರ್ಟಲ್‌ಗೆ ಅಪ್‌ಲೋಡ್ ಮಾಡಿದ ನಂತರ ನಿಮ್ಮ ಕೊವಿಡ್​ ಪರೀಕ್ಷಾ ವರದಿಯು ಲಭ್ಯವಾಗುತ್ತದೆ. ಒಂದು ವೇಳೆ ನಿಮ್ಮ ಕೊವಿಡ್​ ಪರೀಕ್ಷಾ ವರದಿಯನ್ನು ತೋರಿಸದಿದ್ದರೆ ನಿಮ್ಮ ಫಲಿತಾಂಶವನ್ನು ಭಾರತ ಸರ್ಕಾರದ ಐಸಿಎಂಆರ್ (ICMR) ಪೋರ್ಟಲ್‌ಗೆ ಅಪ್‌ಲೋಡ್ ಮಾಡಲು ನೀವು ಪರೀಕ್ಷಿಸಿದ ಲ್ಯಾಬ್ ಅನ್ನು ಸಂಪರ್ಕಿಸಬಹುದು.

ಬೂಸ್ಟರ್​ ಡೋಸ್​ ಲಸಿಕೆ ಪಡೆಯುವ ಬಗ್ಗೆ ಗೊಂದಲ ಇದೆಯೇ?

ಜ. 10 ರಿಂದ 60 ವರ್ಷದ ಮೇಲ್ಪಟ್ಟವರಿಗೆ ಬೂಸ್ಟರ್​​ ಡೋಸ್​ ನೀಡಲಾಗುತ್ತದೆ. ಕೊವಿಡ್​ ವಾರಿಯರ್ಸ್, ಹೆಲ್ತ್ ವರ್ಕರ್ಸ್​ಗೆ ಬೂಸ್ಟರ್​ ಡೋಸ್​ ನೀಡಲಾಗುತ್ತಿದೆ. ಹಾಗಿದ್ದರೆ ಬೂಸ್ಟರ್​ ಡೋಸ್​ ಪಡೆಯಲು ನೀವು ಅರ್ಹರಾಗಿದ್ದು, ಈ ಬಗ್ಗೆ ಮಾಹಿತಿ ಕೊರತೆ ಇದ್ದರೆ ಸುಲಭವಾಗಿ ಈ ವೆಬ್​ಸೈಟ್​ ಮೂಲಕ ಬೂಸ್ಟರ್​ ಡೋಸ್​ ಬಗ್ಗೆ ಮಾಹಿತಿ ಪಡೆಯಿರಿ. ಈ ಕೆಳಕಂಡ ಯುಆರ್​ಎಲ್​ಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನೀವು ಬೂಸ್ಟರ್ ಲಸಿಕೆ ಪಡೆಯಲು ಎಷ್ಟು ದಿನಗಳು ಉಳಿದಿವೆ ಎಂಬುದನ್ನು ಕಂಡುಕೊಳ್ಳಿ.

ಬೂಸ್ಟರ್​ ಡೋಸ್​ ಬಗೆಗಿನ ಮಾಹಿತಿಗಾಗಿ ಈ ಯುಆರ್​ಎಲ್​ ಚೆಕ್​ ಮಾಡಿ

https://selfregistration.cowin.gov.in/

ಇದನ್ನೂ ಓದಿ: ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ತಪಾಸಣೆ ಮಾಡುವ ಅಗತ್ಯವಿಲ್ಲ; ಹೊಸ ಮಾರ್ಗಸೂಚಿ ಪ್ರಕಟಿಸಿದ ಐಸಿಎಂಆರ್​

PM Modi: ದೇಶದಲ್ಲಿ ಏರಿಕೆಯಾಗುತ್ತಿರುವ ಕೊರೊನಾ, ಒಮಿಕ್ರಾನ್​; ಜ.13ರಂದು ಎಲ್ಲ ರಾಜ್ಯಗಳ ಸಿಎಂಗಳ ಜತೆ ಪ್ರಧಾನಿ ಮೋದಿ ಸಭೆ

Published On - 11:20 am, Wed, 12 January 22

1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ
ಸಚಿವರ ಬೇಜವಾಬ್ದಾರಿತನಕ್ಕೆ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ
ಸಚಿವರ ಬೇಜವಾಬ್ದಾರಿತನಕ್ಕೆ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ