AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಟಿ-ಬಿಟಿ ಹಬ್​ಗಳೇ ಕೊವಿಡ್​ಗೆ ಹಾಟ್​ ಬೆಡ್​​ಗಳಾಗಿ ಮಾರ್ಪಾಡು, ಬೆಂಗಳೂರಿನಲ್ಲಿ ಮನೆ ಮಾಡಿದ ಕೊರೊನಾ ಆತಂಕ

ಐಟಿ ಉದ್ಯೋಗಿಗಳು ಹೊರ ರಾಜ್ಯ, ಅಂತರ ರಾಜ್ಯದಿಂದ ಪ್ರಯಾಣದಿಂದಲೇ ಸೋಂಕು ತಗುಲುತ್ತಿದೆ. ಬೆಂಗಳೂರಿನ ಉಳಿದ ಏರಿಯಾಗಳಿಗೂ ಈ ವಯಲದಿಂದಲೇ ಕಂಟಕ ಹೊತ್ತುತರಲಿದೆಯಾ ಎಂಬುದು ಸದ್ಯದ ಆತಂಕಕ್ಕೆ ಕಾರಣವಾಗಿದೆ.

ಐಟಿ-ಬಿಟಿ ಹಬ್​ಗಳೇ ಕೊವಿಡ್​ಗೆ ಹಾಟ್​ ಬೆಡ್​​ಗಳಾಗಿ ಮಾರ್ಪಾಡು, ಬೆಂಗಳೂರಿನಲ್ಲಿ ಮನೆ ಮಾಡಿದ ಕೊರೊನಾ ಆತಂಕ
ಐಟಿ-ಬಿಟಿ ಹಬ್​ಗಳೇ ಕೊವಿಡ್​ಗೆ ಹಾಟ್​ ಬೆಡ್​​ಗಳಾಗಿ ಮಾರ್ಪಾಡು, ಬೆಂಗಳೂರಿನಲ್ಲಿ ಮನೆ ಮಾಡಿದ ಕೊರೊನಾ ಆತಂಕ
TV9 Web
| Edited By: ಸಾಧು ಶ್ರೀನಾಥ್​|

Updated on: Jan 12, 2022 | 7:53 AM

Share

ಬೆಂಗಳೂರು: ಬೆಂಗಳೂರಿನ ಶೇ. 50 ರಷ್ಟು ಕೊವಿಡ್​ ಪ್ರಕರಣಗಳು ಐಟಿ-ಬಿಟಿ ವಯಲದಲ್ಲೇ ಪತ್ತೆಯಾಗಿವೆ! ಐಟಿ-ಬಿಟಿ ಹಬ್​ಗಳೇ ಕೊವಿಡ್​ಗೆ ಹಾಟ್​ಬೆಡ್​​ಗಳಾಗಿ ಮಾರ್ಪಾಡು ಆಯಿತಾ ಎಂಬ ಆತಂಕ ಕಾಡತೊಡಗಿದೆ. ಮಹದೇವಪುರ, ಬೊಮ್ಮನಹಳ್ಳಿ, ಪೂರ್ವ ವಯಲಗಳಲ್ಲಿ ಕೊವಿಡ್ ಕೇಸ್ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದೆ. ಈ ವಲಯಗಳಲ್ಲಿ ಹೊರ ರಾಜ್ಯಗಳ ಕೂಲಿ ಕಾರ್ಮಿಕರು ಹೆಚ್ಚು. ಜೊತೆಗೆ ಹೊರ ದೇಶ ಮತ್ತು ಅಂತರರಾಜ್ಯ ಪ್ರಯಾಣಿಕರೇ (ಪ್ಲೋಟಿಂಗ್ ಪಾಫುಲೇಶನ್) ಇಲ್ಲಿ ಹೆಚ್ಚಾಗಿ ಬೀಡುಬಿಡುವುದು. ಈ ಕಾರಣಕ್ಕಾಗಿ ಈ ವಲಯಗಳಲ್ಲಿ ನಿತ್ಯ ಡಬಲ್ ಕೇಸ್​ಗಳು ದಾಖಲಾಗುತ್ತಿವೆ. ನಿತ್ಯ ಪರೀಕ್ಷೆ ಮಾಡಿದಾಗ ಶೇ. 60 ರಷ್ಟು ಮಂದಿಗೆ ಸೋಂಕು ಪತ್ತೆಯಾಗುತ್ತಿದೆ.

ಈ ವಯಲಗಳಲ್ಲಿ ಕಳೆದ ಒಂದು ವಾರದಿಂದ 27 ಸಾವಿರಕ್ಕೂ ಅಧಿಕ ಕೇಸ್ ಪತ್ತೆಯಾಗಿದೆ. ನಗರಕ್ಕೆ ಸಿಲಿಕಾನ್ ಸಿಟಿ ಎಂದು ಖ್ಯಾತಿ ತಂದು ಕೊಟ್ಟಿರೋ ಭಾಗಗಳಿಂದಲೇ ಕುತ್ತು ಬಂದಿದೆ. ಬೆಂಗಳೂರಿನ ಶೇ. 70 ರಷ್ಟು ಐಟಿ-ಬಿಟಿ ಕಂಪನಿಗಳು ಇದೇ ಭಾಗದಲ್ಲಿವೆ. ಪ್ರತಿಷ್ಠಿತ ಐಟಿ-ಬಿಟಿ ಕಂಪನಿಗಳಿಂದಲೇ ಸಿಟಿಗೆ ಕಂಟಕ ಫಿಕ್ಸ್ ಆಗಿದೆಯಾ ಎಂಬ ಆತಕ ಮನೆಮಾಡಿದೆ.

ಐಟಿ ಉದ್ಯೋಗಿಗಳು ಹೊರ ರಾಜ್ಯ, ಅಂತರ ರಾಜ್ಯದಿಂದ ಪ್ರಯಾಣದಿಂದಲೇ ಸೋಂಕು ತಗುಲುತ್ತಿದೆ. ಬೆಂಗಳೂರಿನ ಉಳಿದ ಏರಿಯಾಗಳಿಗೂ ಈ ವಯಲದಿಂದಲೇ ಕಂಟಕ ಹೊತ್ತುತರಲಿದೆಯಾ ಎಂಬುದು ಸದ್ಯದ ಆತಂಕಕ್ಕೆ ಕಾರಣವಾಗಿದೆ. ಉದ್ಯೋಗ ಅರಸಿ ಬಂದ ಹೊರ ರಾಜ್ಯದ ಕೂಲಿ ಕಾರ್ಮಿಕರಿಂದಲೂ ಹೆಚ್ಚು ಆಪತ್ತು ಒದಗುತ್ತಿದೆ. ಬೆಂಗಳೂರಿನಲ್ಲಿ ಮಹಾದೇವಪುರ ವಿಧಾನಸಭಾ ಕ್ಷೇತ್ರವೇ ಕೋವಿಡ್ ಟಾಪ್ ಒನ್ ಕ್ಷೇತ್ರವಾಗಿ ಮುಂದುವರಿದಿದೆ.

8 ವಲಯದಲ್ಲಿ ಜನವರಿ 11 ಪಾಸಿಟಿವಿಟಿ ರೇಟ್ ಮತ್ತು ಸೋಂಕಿತರ ಸಂಖ್ಯೆ ಹೀಗಿದೆ

ವಲಯ ಕೇಸ್ ಪಾಸಿಟಿವಿಟಿ ರೇಟ್

ಪೂರ್ವ ವಲಯ  – 1257 – 9.51%

ದಕ್ಷಿಣ –  1173 – 9.13%

ಮಹದೇವಪುರ – 1250  – 7.97%

ದಾಸರಹಳ್ಳಿ – 144 – 7.46%

ಆರ್ ಆರ್ ನಗರ  –  517 – 7.75%

ಪಶ್ಚಿಮ – 893 – 7.2%

ಯಲಹಂಕ – 470 – 6.31%

ಬೊಮ್ಮನಹಳ್ಳಿ – 786 – 5.88%

Follow Us
Web contact
Web contact

TV9 Kannada

Read More
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ