AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಟಿ-ಬಿಟಿ ಹಬ್​ಗಳೇ ಕೊವಿಡ್​ಗೆ ಹಾಟ್​ ಬೆಡ್​​ಗಳಾಗಿ ಮಾರ್ಪಾಡು, ಬೆಂಗಳೂರಿನಲ್ಲಿ ಮನೆ ಮಾಡಿದ ಕೊರೊನಾ ಆತಂಕ

ಐಟಿ ಉದ್ಯೋಗಿಗಳು ಹೊರ ರಾಜ್ಯ, ಅಂತರ ರಾಜ್ಯದಿಂದ ಪ್ರಯಾಣದಿಂದಲೇ ಸೋಂಕು ತಗುಲುತ್ತಿದೆ. ಬೆಂಗಳೂರಿನ ಉಳಿದ ಏರಿಯಾಗಳಿಗೂ ಈ ವಯಲದಿಂದಲೇ ಕಂಟಕ ಹೊತ್ತುತರಲಿದೆಯಾ ಎಂಬುದು ಸದ್ಯದ ಆತಂಕಕ್ಕೆ ಕಾರಣವಾಗಿದೆ.

ಐಟಿ-ಬಿಟಿ ಹಬ್​ಗಳೇ ಕೊವಿಡ್​ಗೆ ಹಾಟ್​ ಬೆಡ್​​ಗಳಾಗಿ ಮಾರ್ಪಾಡು, ಬೆಂಗಳೂರಿನಲ್ಲಿ ಮನೆ ಮಾಡಿದ ಕೊರೊನಾ ಆತಂಕ
ಐಟಿ-ಬಿಟಿ ಹಬ್​ಗಳೇ ಕೊವಿಡ್​ಗೆ ಹಾಟ್​ ಬೆಡ್​​ಗಳಾಗಿ ಮಾರ್ಪಾಡು, ಬೆಂಗಳೂರಿನಲ್ಲಿ ಮನೆ ಮಾಡಿದ ಕೊರೊನಾ ಆತಂಕ
TV9 Web
| Edited By: ಸಾಧು ಶ್ರೀನಾಥ್​|

Updated on: Jan 12, 2022 | 7:53 AM

Share

ಬೆಂಗಳೂರು: ಬೆಂಗಳೂರಿನ ಶೇ. 50 ರಷ್ಟು ಕೊವಿಡ್​ ಪ್ರಕರಣಗಳು ಐಟಿ-ಬಿಟಿ ವಯಲದಲ್ಲೇ ಪತ್ತೆಯಾಗಿವೆ! ಐಟಿ-ಬಿಟಿ ಹಬ್​ಗಳೇ ಕೊವಿಡ್​ಗೆ ಹಾಟ್​ಬೆಡ್​​ಗಳಾಗಿ ಮಾರ್ಪಾಡು ಆಯಿತಾ ಎಂಬ ಆತಂಕ ಕಾಡತೊಡಗಿದೆ. ಮಹದೇವಪುರ, ಬೊಮ್ಮನಹಳ್ಳಿ, ಪೂರ್ವ ವಯಲಗಳಲ್ಲಿ ಕೊವಿಡ್ ಕೇಸ್ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದೆ. ಈ ವಲಯಗಳಲ್ಲಿ ಹೊರ ರಾಜ್ಯಗಳ ಕೂಲಿ ಕಾರ್ಮಿಕರು ಹೆಚ್ಚು. ಜೊತೆಗೆ ಹೊರ ದೇಶ ಮತ್ತು ಅಂತರರಾಜ್ಯ ಪ್ರಯಾಣಿಕರೇ (ಪ್ಲೋಟಿಂಗ್ ಪಾಫುಲೇಶನ್) ಇಲ್ಲಿ ಹೆಚ್ಚಾಗಿ ಬೀಡುಬಿಡುವುದು. ಈ ಕಾರಣಕ್ಕಾಗಿ ಈ ವಲಯಗಳಲ್ಲಿ ನಿತ್ಯ ಡಬಲ್ ಕೇಸ್​ಗಳು ದಾಖಲಾಗುತ್ತಿವೆ. ನಿತ್ಯ ಪರೀಕ್ಷೆ ಮಾಡಿದಾಗ ಶೇ. 60 ರಷ್ಟು ಮಂದಿಗೆ ಸೋಂಕು ಪತ್ತೆಯಾಗುತ್ತಿದೆ.

ಈ ವಯಲಗಳಲ್ಲಿ ಕಳೆದ ಒಂದು ವಾರದಿಂದ 27 ಸಾವಿರಕ್ಕೂ ಅಧಿಕ ಕೇಸ್ ಪತ್ತೆಯಾಗಿದೆ. ನಗರಕ್ಕೆ ಸಿಲಿಕಾನ್ ಸಿಟಿ ಎಂದು ಖ್ಯಾತಿ ತಂದು ಕೊಟ್ಟಿರೋ ಭಾಗಗಳಿಂದಲೇ ಕುತ್ತು ಬಂದಿದೆ. ಬೆಂಗಳೂರಿನ ಶೇ. 70 ರಷ್ಟು ಐಟಿ-ಬಿಟಿ ಕಂಪನಿಗಳು ಇದೇ ಭಾಗದಲ್ಲಿವೆ. ಪ್ರತಿಷ್ಠಿತ ಐಟಿ-ಬಿಟಿ ಕಂಪನಿಗಳಿಂದಲೇ ಸಿಟಿಗೆ ಕಂಟಕ ಫಿಕ್ಸ್ ಆಗಿದೆಯಾ ಎಂಬ ಆತಕ ಮನೆಮಾಡಿದೆ.

ಐಟಿ ಉದ್ಯೋಗಿಗಳು ಹೊರ ರಾಜ್ಯ, ಅಂತರ ರಾಜ್ಯದಿಂದ ಪ್ರಯಾಣದಿಂದಲೇ ಸೋಂಕು ತಗುಲುತ್ತಿದೆ. ಬೆಂಗಳೂರಿನ ಉಳಿದ ಏರಿಯಾಗಳಿಗೂ ಈ ವಯಲದಿಂದಲೇ ಕಂಟಕ ಹೊತ್ತುತರಲಿದೆಯಾ ಎಂಬುದು ಸದ್ಯದ ಆತಂಕಕ್ಕೆ ಕಾರಣವಾಗಿದೆ. ಉದ್ಯೋಗ ಅರಸಿ ಬಂದ ಹೊರ ರಾಜ್ಯದ ಕೂಲಿ ಕಾರ್ಮಿಕರಿಂದಲೂ ಹೆಚ್ಚು ಆಪತ್ತು ಒದಗುತ್ತಿದೆ. ಬೆಂಗಳೂರಿನಲ್ಲಿ ಮಹಾದೇವಪುರ ವಿಧಾನಸಭಾ ಕ್ಷೇತ್ರವೇ ಕೋವಿಡ್ ಟಾಪ್ ಒನ್ ಕ್ಷೇತ್ರವಾಗಿ ಮುಂದುವರಿದಿದೆ.

8 ವಲಯದಲ್ಲಿ ಜನವರಿ 11 ಪಾಸಿಟಿವಿಟಿ ರೇಟ್ ಮತ್ತು ಸೋಂಕಿತರ ಸಂಖ್ಯೆ ಹೀಗಿದೆ

ವಲಯ ಕೇಸ್ ಪಾಸಿಟಿವಿಟಿ ರೇಟ್

ಪೂರ್ವ ವಲಯ  – 1257 – 9.51%

ದಕ್ಷಿಣ –  1173 – 9.13%

ಮಹದೇವಪುರ – 1250  – 7.97%

ದಾಸರಹಳ್ಳಿ – 144 – 7.46%

ಆರ್ ಆರ್ ನಗರ  –  517 – 7.75%

ಪಶ್ಚಿಮ – 893 – 7.2%

ಯಲಹಂಕ – 470 – 6.31%

ಬೊಮ್ಮನಹಳ್ಳಿ – 786 – 5.88%

Follow Us
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು